<p>`ಅಯ್ಯ್ ಬಂತಲ್ಲಪ್ಪ ದೀಪಾವಳಿ.. ನಾನು ಎಲ್ಲಾದ್ರೂ ಗುಳೆ ಹೋಗ್ತೀನಪ್ಪ~ ಎಂದರು ನಿನ್ನೆ ಗಾಂಧಿಬಜಾರಿನಲ್ಲಿ ಸಿಕ್ಕ ಹಿರಿಯ ಮಿತ್ರರು. ಬೆಳಕಿನ ಹಬ್ಬ ಹೀಗೆ ಅವರನ್ನು ಕಂಗೆಡಿಸುವುದರಲ್ಲಿ ಅತಿಶಯವೇನಿಲ್ಲ.<br /> <br /> ಬರುಬರುತ್ತ ಹಬ್ಬಗಳ ಆಶಯಗಳು ಅಯೋಮಯವಾಗುತ್ತಿವೆ. ಆಡಂಬರ, ಅಬ್ಬರ, ಗೌಜು, ಶ್ರೀಮಂತಿಕೆ ತೋರಿಕೆ, ದುಂದುಗಾರಿಕೆಗಳ ಮೆರವಣಿಗೆಯೇ ಹಬ್ಬವೆನ್ನಿಸಿದೆ. ನಮ್ಮ ಲಂಗುಲಗಾಮಿಲ್ಲದ ಸಡಗರಗಳು ವ್ಯಾಪಾರಿಗಳಲ್ಲಿ ಲಾಭಕೋರತನವನ್ನು ಸೃಷ್ಟಿಸದೆ ಇನ್ನೇನು. ಅಗತ್ಯ ವಸ್ತುಗಳು ಗಗನಮುಖಿ. <br /> <br /> ಮದುವೆ ಮಾಡಿದ ಮನೆಯಲ್ಲಿ ಆರು ತಿಂಗಳು ಬರಗಾಲವಂತೆ! ಈ ನಡುವೆ ಮೌಢ್ಯಕ್ಕೂ ನಾವು ಬೆಲೆ ತೆರುತ್ತೇವೆ. ಸ್ವಾದಿಷ್ಟ ಕುಂಬಳಕಾಯಿ, ನಿಂಬೆ, ತೆಂಗಿನಕಾಯಿ ನಿವಾಳಿಸಿ ಅಕ್ಷರಶಃ ಒಗೆಯುತ್ತೇವೆ. <br /> <br /> ಸಾಂಕೇತಿಕವಾಗಿ ಒಂದು ತುಣಕನ್ನು ನಿವಾಳಿಸಿ ಮಿಕ್ಕಿದ್ದನ್ನು ಸೇವಿಸಬಹುದಲ್ಲ? ಬಡಬಗ್ಗರಿಗೆ ನೀಡಿದರೆ ಮತ್ತೂ ಚಲೋ. ದುಬಾರಿ ಬೆಲೆ ತೆತ್ತು ತಂದ ಹಣ್ಣು ಹಂಪಲು ಮರುದಿನ ಕಸವಾಗುವುದು ಸರಿಯೆ? ಇದು ದಿಟವಾಗಿ ರಾಷ್ಟ್ರೀಯ ನಷ್ಟ.<br /> <br /> ಇನ್ನು ದೀಪಾವಳಿಯೋ.. ಅದು ಜ್ಞಾನದ ಸಂಕೇತವೆನ್ನುವುದು ಮೂಲೆಗುಂಪಾಗಿ ಕಿವಿಗಡಚಿಕ್ಕುವ ಅಸಹನೀಯ ಸದ್ದಿನ, ಆಘಾತಕಾರಿ ಸ್ಫೋಟ ಮತ್ತು ಹೊಗೆಯ ಚೆಲ್ಲಾಟವಾಗಿದೆ. <br /> <br /> ಒಂದರ್ಥದಲ್ಲಿ ಕತ್ತಲೆಯನ್ನು ನಾವೇ ಕೈಯಾರೆ ಆಹ್ವಾನಿಸಿಕೊಂಡಂತಾಗಿದೆ. ದೀಪಾವಳಿ ಹಾವಳಿ ಘೋರವಾಗುತ್ತಿದೆ. ವರ್ಷೇ ವರ್ಷ ಪಟಾಕಿಯಿಂದ ಕಣ್ಣು ಕಳೆದುಕೊಳ್ಳುತ್ತಿರುವವರ, ಸುಟ್ಟಗಾಯಗಳಿಂದ ಪರಿತಪಿಸುವವರ ಸಂಖ್ಯೆ ಏರುತ್ತಲೇ ಇದೆ. <br /> <br /> ಪಟಾಕಿ ಹಚ್ಚುವವರಿಗಿಂತಲೂ ಇತರರಿಗೇ ಅಪಾಯವೊದಗುವ ಸಾಧ್ಯತೆ ಹೆಚ್ಚು. ಅದರಲ್ಲೂ ರಸ್ತೆಯಲ್ಲಿ ಓಡಾಡುವವರು, ವಾಹನ ಸವಾರರು ಅವಘಡಕ್ಕೆ ಗುರಿಯಾಗುತ್ತಾರೆ. ಪ್ರಾಣಿ, ಪಕ್ಷಿಗಳು ದಿಕ್ಕೆಡುತ್ತವೆ. ಎಳೆ ಮಕ್ಕಳು, ಗರ್ಭಿಣಿಯರು, ಬಾಣಂತಿಯರು ವೃದ್ಧರು ತೀವ್ರತರ ಯಾತನೆ ಪಡುತ್ತಾರೆ.<br /> <br /> ರೋಗಿಗಳ ಪಾಡನ್ನು ಬಣ್ಣಿಸಲು ಪದಗಳಿಲ್ಲ. ಹಿಂದಿದ್ದ ಪರಿಸ್ಥಿತಿಯೇ ಬೇರೆ. ಇಂದಿನದೇ ಬೇರೆ. ಇಂದು ಒತ್ತೊತ್ತಾದ ಮನೆಗಳು. ಗಗನಕ್ಕೆ ಚಿಮ್ಮಿರುವ ಕಟ್ಟಡಗಳು. ಜನದಟ್ಟಣೆ, ವಾಹನ ದಟ್ಟಣೆ. ಸೂಕ್ತವಾಗಿ ನಾವು ಆಚರಣೆ ಪರಿಷ್ಕರಿಸಿಕೊಳ್ಳದಿದ್ದರೆ ಅನರ್ಥ ಕಟ್ಟಿಟ್ಟ ಬುತ್ತಿ. <br /> <br /> ಯಾವುದೇ ಬಗೆಯ ಪಟಾಕಿ ಸಿಡಿಸಿದ ಹಲವು ವಾರಗಳ ನಂತರವೂ ವಾತಾವರಣದಲ್ಲಿ ಮೆಗ್ನೀಶಿಯಂ, ಗಂಧಕದ ನೈಟ್ರೇಟ್, ಸಾರಜನಕದ ಡೈ ಆಕ್ಸೈಡ್ ಮುಂತಾದ ನಂಜಿನ ವಸ್ತುಗಳು ಕ್ಷೀಣಿಸಿರುವುದಿಲ್ಲ. ಉಸಿರಾಟ ತೊಂದರೆ, ಕಣ್ಣುರಿ, ಗಂಟಲು ಬೇನೆಗೆ ಅವು ಕಾರಣವಾಗುತ್ತವೆ. <br /> <br /> ದೀಪಾವಳಿ ಮರುದಿನ ರಾಶಿ ರಾಶಿ ಕಸದ್ದೆೀ ಕಾರುಬಾರು. ಕಾಗದ ಚಿಂದಿ, ಅರೆಸುಟ್ಟ ರಾಸಾಯನಿಕಗಳು, ಕುಡಿಕೆ ಚೂರು, ಲೋಹದ ಕಡ್ಡಿಗಳು, ತಂತಿಗಳು ವಗೈರೆ ಟನ್ನುಗಟ್ಟಲೆ. ಇದರ ವಿಲೇವಾರಿ ಆಡಳಿತಕ್ಕೆ ಸವಾಲು. ಪರಿಸರದ ಮೇಲೆ ಪ್ರಹಾರ.<br /> <br /> `ಆಟಂ ಬಾಂಬ್~, `ರಾಕೆಟ್~ ಪ್ರಯೋಗಿಸಿ ಅದರ (ಕರ್ಣ ಕಠೋರ) ಶಬ್ದಕ್ಕೆ ಕುಣಿದು ಕುಪ್ಪಳಿಸುವವರಿಗೆ ಅದು ನಮ್ಮದೇ ಏಕೈಕ ಪರಿಸರವೆಂಬ ಅರಿವಿರಬೇಕಲ್ಲವೇ? ಕೆಲವು ವರ್ಷಗಳ ಹಿಂದೆ ಸುರಕ್ಷತೆ ದೃಷ್ಟಿಯಿಂದ ವಿಶಾಲ ಮೈದಾನಗಳಲ್ಲಿ ಮಾತ್ರವೆ ಪಟಾಕಿ ಮಾರಾಟ ಜಾರಿಗೆ ಬಂದಿತು. <br /> <br /> ಈಗ ಇನ್ನೊಂದು ಹೆಜ್ಜೆ ಮುಂದಿಟ್ಟರಾಯಿತು. ಆಯಾ ಬಡಾವಣೆಗಳಲ್ಲಿನ ಮೈದಾನಗಳಲ್ಲೇ ಸಾರ್ವತ್ರಿಕವಾಗಿ ಪಟಾಕಿ ಸಿಡಿಸುವುದು. ಗಾಳಿಪಟ ಹಾರಿಸಿ ಸಂಭ್ರಮಿಸುವ ಹಾಗೆ. ಕೆರೆಯಂಗಳವಾದರೆ ಇನ್ನೂ ಚೆಂದ. ಇದರಿಂದ ಎಲ್ಲರೂ ಒಟ್ಟಾಗಿ ಬಾಣ, ಬಿರಸು, ಮತಾಪು ಹಚ್ಚುವ ಉಲ್ಲಾಸ. ಅಷ್ಟರಮಟ್ಟಿಗೆ ಪಟಾಕಿ ಸಿಡಿತದ ಅಪಾಯ ಕಡಿಮೆ. <br /> <br /> ಅಮೆರಿಕ, ಸಿಂಗಪುರದಲ್ಲಿ ಈ ಏರ್ಪಾಡು ಉಂಟು. ತ್ಯಾಜ್ಯವೆಲ್ಲ ಒಂದೇ ಕಡೆ ಬೀಳುವುದರಿಂದ ಅದರ ವಿಲೇವಾರಿಯೂ ಸರಾಗ. ಗಮನಿಸಲೇ ಬೇಕಾದ್ದೆಂದರೆ ವಿವಿಧ ಪಟಾಕಿಗಳ ತಯಾರಿಕಾ ಘಟಕಗಳಲ್ಲಿ ಬಾಲಕಾರ್ಮಿಕರೆ ಬಹಳ. ಜೀವದ ಹಂಗು ತೊರೆದು ಅವರ ದುಡಿಮೆ.<br /> <br /> ಮನೆ ಮನೆಗಳ ಮುಂದೆ ಪಟಾಕಿ ಹಚ್ಚಿದರೇನೆ ದೀಪಾವಳಿ ಎಂಬ ಭ್ರಮೆಯಿಂದ ನಾವು ಹೊರಬರಬೇಕು. ಹಣತೆಗಳ ಸಾಲಿಟ್ಟು ಪಡುವ ಸಂಭ್ರಮಕ್ಕೆ ಸಾಟಿಯಿಲ್ಲ. ಮೋಂಬತ್ತಿ ಬೆಳಗಿ ಹಬ್ಬದ ಅರ್ಥವನ್ನು ಸಾಕಾರಗೊಳಿಸಬಹುದು. ಬೆಳಕೇ ಮೌಲಿಕ. ಸದ್ದಲ್ಲ. <br /> <br /> ಮನಸ್ಸಿದ್ದರೆ ಮಾರ್ಗ. ನಾವು ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯನ್ನಾಗಿಸಿದ್ದೇವೆ. ರಾಸಾಯನಿಕಯುಕ್ತ ಬಣ್ಣ ಲೇಪಿತ ಮೂರ್ತಿಗಳನ್ನು ಕೆರೆ, ಸರೋವರ, ನದಿ, ಸಮುದ್ರಗಳಲ್ಲಿ ವಿಸರ್ಜಿಸಿದರೆ ಜಲ ಮಲಿನಗೊಳ್ಳುವುದೆಂಬ ಅರಿವು ಮೂಡಿದೆ. ಅದಕ್ಕಾಗಿ ಟ್ಯಾಂಕರ್, ಬಕೆಟ್ ಬಳಸುವಷ್ಟು ಜಾಗೃತಿ ನಮ್ಮದಾಗಿದೆ. <br /> <br /> ಜಲಸಂಪನ್ಮೂಲಗಳಲ್ಲಿ ಹೂಳು, ಕಸ ಕಡ್ಡಿ ಬೀಳದ ಹಾಗೆ ಎಚ್ಚರ ವಹಿಸಿದ್ದೆೀವೆ. ಕರ್ಕಶ ಢಂ... ಢಮಾರ್ ಸದ್ದಿಲ್ಲದ, ಹೊಗೆರಹಿತ, ಹಣತೆಯ ತಂಪು ಬೆಳಕಿನ ಪರಿಸರ ಸ್ನೇಹಿ ದೀಪಾವಳಿಗೆ ಅಣಿಯಾಗೋಣ..</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ಅಯ್ಯ್ ಬಂತಲ್ಲಪ್ಪ ದೀಪಾವಳಿ.. ನಾನು ಎಲ್ಲಾದ್ರೂ ಗುಳೆ ಹೋಗ್ತೀನಪ್ಪ~ ಎಂದರು ನಿನ್ನೆ ಗಾಂಧಿಬಜಾರಿನಲ್ಲಿ ಸಿಕ್ಕ ಹಿರಿಯ ಮಿತ್ರರು. ಬೆಳಕಿನ ಹಬ್ಬ ಹೀಗೆ ಅವರನ್ನು ಕಂಗೆಡಿಸುವುದರಲ್ಲಿ ಅತಿಶಯವೇನಿಲ್ಲ.<br /> <br /> ಬರುಬರುತ್ತ ಹಬ್ಬಗಳ ಆಶಯಗಳು ಅಯೋಮಯವಾಗುತ್ತಿವೆ. ಆಡಂಬರ, ಅಬ್ಬರ, ಗೌಜು, ಶ್ರೀಮಂತಿಕೆ ತೋರಿಕೆ, ದುಂದುಗಾರಿಕೆಗಳ ಮೆರವಣಿಗೆಯೇ ಹಬ್ಬವೆನ್ನಿಸಿದೆ. ನಮ್ಮ ಲಂಗುಲಗಾಮಿಲ್ಲದ ಸಡಗರಗಳು ವ್ಯಾಪಾರಿಗಳಲ್ಲಿ ಲಾಭಕೋರತನವನ್ನು ಸೃಷ್ಟಿಸದೆ ಇನ್ನೇನು. ಅಗತ್ಯ ವಸ್ತುಗಳು ಗಗನಮುಖಿ. <br /> <br /> ಮದುವೆ ಮಾಡಿದ ಮನೆಯಲ್ಲಿ ಆರು ತಿಂಗಳು ಬರಗಾಲವಂತೆ! ಈ ನಡುವೆ ಮೌಢ್ಯಕ್ಕೂ ನಾವು ಬೆಲೆ ತೆರುತ್ತೇವೆ. ಸ್ವಾದಿಷ್ಟ ಕುಂಬಳಕಾಯಿ, ನಿಂಬೆ, ತೆಂಗಿನಕಾಯಿ ನಿವಾಳಿಸಿ ಅಕ್ಷರಶಃ ಒಗೆಯುತ್ತೇವೆ. <br /> <br /> ಸಾಂಕೇತಿಕವಾಗಿ ಒಂದು ತುಣಕನ್ನು ನಿವಾಳಿಸಿ ಮಿಕ್ಕಿದ್ದನ್ನು ಸೇವಿಸಬಹುದಲ್ಲ? ಬಡಬಗ್ಗರಿಗೆ ನೀಡಿದರೆ ಮತ್ತೂ ಚಲೋ. ದುಬಾರಿ ಬೆಲೆ ತೆತ್ತು ತಂದ ಹಣ್ಣು ಹಂಪಲು ಮರುದಿನ ಕಸವಾಗುವುದು ಸರಿಯೆ? ಇದು ದಿಟವಾಗಿ ರಾಷ್ಟ್ರೀಯ ನಷ್ಟ.<br /> <br /> ಇನ್ನು ದೀಪಾವಳಿಯೋ.. ಅದು ಜ್ಞಾನದ ಸಂಕೇತವೆನ್ನುವುದು ಮೂಲೆಗುಂಪಾಗಿ ಕಿವಿಗಡಚಿಕ್ಕುವ ಅಸಹನೀಯ ಸದ್ದಿನ, ಆಘಾತಕಾರಿ ಸ್ಫೋಟ ಮತ್ತು ಹೊಗೆಯ ಚೆಲ್ಲಾಟವಾಗಿದೆ. <br /> <br /> ಒಂದರ್ಥದಲ್ಲಿ ಕತ್ತಲೆಯನ್ನು ನಾವೇ ಕೈಯಾರೆ ಆಹ್ವಾನಿಸಿಕೊಂಡಂತಾಗಿದೆ. ದೀಪಾವಳಿ ಹಾವಳಿ ಘೋರವಾಗುತ್ತಿದೆ. ವರ್ಷೇ ವರ್ಷ ಪಟಾಕಿಯಿಂದ ಕಣ್ಣು ಕಳೆದುಕೊಳ್ಳುತ್ತಿರುವವರ, ಸುಟ್ಟಗಾಯಗಳಿಂದ ಪರಿತಪಿಸುವವರ ಸಂಖ್ಯೆ ಏರುತ್ತಲೇ ಇದೆ. <br /> <br /> ಪಟಾಕಿ ಹಚ್ಚುವವರಿಗಿಂತಲೂ ಇತರರಿಗೇ ಅಪಾಯವೊದಗುವ ಸಾಧ್ಯತೆ ಹೆಚ್ಚು. ಅದರಲ್ಲೂ ರಸ್ತೆಯಲ್ಲಿ ಓಡಾಡುವವರು, ವಾಹನ ಸವಾರರು ಅವಘಡಕ್ಕೆ ಗುರಿಯಾಗುತ್ತಾರೆ. ಪ್ರಾಣಿ, ಪಕ್ಷಿಗಳು ದಿಕ್ಕೆಡುತ್ತವೆ. ಎಳೆ ಮಕ್ಕಳು, ಗರ್ಭಿಣಿಯರು, ಬಾಣಂತಿಯರು ವೃದ್ಧರು ತೀವ್ರತರ ಯಾತನೆ ಪಡುತ್ತಾರೆ.<br /> <br /> ರೋಗಿಗಳ ಪಾಡನ್ನು ಬಣ್ಣಿಸಲು ಪದಗಳಿಲ್ಲ. ಹಿಂದಿದ್ದ ಪರಿಸ್ಥಿತಿಯೇ ಬೇರೆ. ಇಂದಿನದೇ ಬೇರೆ. ಇಂದು ಒತ್ತೊತ್ತಾದ ಮನೆಗಳು. ಗಗನಕ್ಕೆ ಚಿಮ್ಮಿರುವ ಕಟ್ಟಡಗಳು. ಜನದಟ್ಟಣೆ, ವಾಹನ ದಟ್ಟಣೆ. ಸೂಕ್ತವಾಗಿ ನಾವು ಆಚರಣೆ ಪರಿಷ್ಕರಿಸಿಕೊಳ್ಳದಿದ್ದರೆ ಅನರ್ಥ ಕಟ್ಟಿಟ್ಟ ಬುತ್ತಿ. <br /> <br /> ಯಾವುದೇ ಬಗೆಯ ಪಟಾಕಿ ಸಿಡಿಸಿದ ಹಲವು ವಾರಗಳ ನಂತರವೂ ವಾತಾವರಣದಲ್ಲಿ ಮೆಗ್ನೀಶಿಯಂ, ಗಂಧಕದ ನೈಟ್ರೇಟ್, ಸಾರಜನಕದ ಡೈ ಆಕ್ಸೈಡ್ ಮುಂತಾದ ನಂಜಿನ ವಸ್ತುಗಳು ಕ್ಷೀಣಿಸಿರುವುದಿಲ್ಲ. ಉಸಿರಾಟ ತೊಂದರೆ, ಕಣ್ಣುರಿ, ಗಂಟಲು ಬೇನೆಗೆ ಅವು ಕಾರಣವಾಗುತ್ತವೆ. <br /> <br /> ದೀಪಾವಳಿ ಮರುದಿನ ರಾಶಿ ರಾಶಿ ಕಸದ್ದೆೀ ಕಾರುಬಾರು. ಕಾಗದ ಚಿಂದಿ, ಅರೆಸುಟ್ಟ ರಾಸಾಯನಿಕಗಳು, ಕುಡಿಕೆ ಚೂರು, ಲೋಹದ ಕಡ್ಡಿಗಳು, ತಂತಿಗಳು ವಗೈರೆ ಟನ್ನುಗಟ್ಟಲೆ. ಇದರ ವಿಲೇವಾರಿ ಆಡಳಿತಕ್ಕೆ ಸವಾಲು. ಪರಿಸರದ ಮೇಲೆ ಪ್ರಹಾರ.<br /> <br /> `ಆಟಂ ಬಾಂಬ್~, `ರಾಕೆಟ್~ ಪ್ರಯೋಗಿಸಿ ಅದರ (ಕರ್ಣ ಕಠೋರ) ಶಬ್ದಕ್ಕೆ ಕುಣಿದು ಕುಪ್ಪಳಿಸುವವರಿಗೆ ಅದು ನಮ್ಮದೇ ಏಕೈಕ ಪರಿಸರವೆಂಬ ಅರಿವಿರಬೇಕಲ್ಲವೇ? ಕೆಲವು ವರ್ಷಗಳ ಹಿಂದೆ ಸುರಕ್ಷತೆ ದೃಷ್ಟಿಯಿಂದ ವಿಶಾಲ ಮೈದಾನಗಳಲ್ಲಿ ಮಾತ್ರವೆ ಪಟಾಕಿ ಮಾರಾಟ ಜಾರಿಗೆ ಬಂದಿತು. <br /> <br /> ಈಗ ಇನ್ನೊಂದು ಹೆಜ್ಜೆ ಮುಂದಿಟ್ಟರಾಯಿತು. ಆಯಾ ಬಡಾವಣೆಗಳಲ್ಲಿನ ಮೈದಾನಗಳಲ್ಲೇ ಸಾರ್ವತ್ರಿಕವಾಗಿ ಪಟಾಕಿ ಸಿಡಿಸುವುದು. ಗಾಳಿಪಟ ಹಾರಿಸಿ ಸಂಭ್ರಮಿಸುವ ಹಾಗೆ. ಕೆರೆಯಂಗಳವಾದರೆ ಇನ್ನೂ ಚೆಂದ. ಇದರಿಂದ ಎಲ್ಲರೂ ಒಟ್ಟಾಗಿ ಬಾಣ, ಬಿರಸು, ಮತಾಪು ಹಚ್ಚುವ ಉಲ್ಲಾಸ. ಅಷ್ಟರಮಟ್ಟಿಗೆ ಪಟಾಕಿ ಸಿಡಿತದ ಅಪಾಯ ಕಡಿಮೆ. <br /> <br /> ಅಮೆರಿಕ, ಸಿಂಗಪುರದಲ್ಲಿ ಈ ಏರ್ಪಾಡು ಉಂಟು. ತ್ಯಾಜ್ಯವೆಲ್ಲ ಒಂದೇ ಕಡೆ ಬೀಳುವುದರಿಂದ ಅದರ ವಿಲೇವಾರಿಯೂ ಸರಾಗ. ಗಮನಿಸಲೇ ಬೇಕಾದ್ದೆಂದರೆ ವಿವಿಧ ಪಟಾಕಿಗಳ ತಯಾರಿಕಾ ಘಟಕಗಳಲ್ಲಿ ಬಾಲಕಾರ್ಮಿಕರೆ ಬಹಳ. ಜೀವದ ಹಂಗು ತೊರೆದು ಅವರ ದುಡಿಮೆ.<br /> <br /> ಮನೆ ಮನೆಗಳ ಮುಂದೆ ಪಟಾಕಿ ಹಚ್ಚಿದರೇನೆ ದೀಪಾವಳಿ ಎಂಬ ಭ್ರಮೆಯಿಂದ ನಾವು ಹೊರಬರಬೇಕು. ಹಣತೆಗಳ ಸಾಲಿಟ್ಟು ಪಡುವ ಸಂಭ್ರಮಕ್ಕೆ ಸಾಟಿಯಿಲ್ಲ. ಮೋಂಬತ್ತಿ ಬೆಳಗಿ ಹಬ್ಬದ ಅರ್ಥವನ್ನು ಸಾಕಾರಗೊಳಿಸಬಹುದು. ಬೆಳಕೇ ಮೌಲಿಕ. ಸದ್ದಲ್ಲ. <br /> <br /> ಮನಸ್ಸಿದ್ದರೆ ಮಾರ್ಗ. ನಾವು ಗಣೇಶ ಚತುರ್ಥಿಯನ್ನು ಪರಿಸರ ಸ್ನೇಹಿಯನ್ನಾಗಿಸಿದ್ದೇವೆ. ರಾಸಾಯನಿಕಯುಕ್ತ ಬಣ್ಣ ಲೇಪಿತ ಮೂರ್ತಿಗಳನ್ನು ಕೆರೆ, ಸರೋವರ, ನದಿ, ಸಮುದ್ರಗಳಲ್ಲಿ ವಿಸರ್ಜಿಸಿದರೆ ಜಲ ಮಲಿನಗೊಳ್ಳುವುದೆಂಬ ಅರಿವು ಮೂಡಿದೆ. ಅದಕ್ಕಾಗಿ ಟ್ಯಾಂಕರ್, ಬಕೆಟ್ ಬಳಸುವಷ್ಟು ಜಾಗೃತಿ ನಮ್ಮದಾಗಿದೆ. <br /> <br /> ಜಲಸಂಪನ್ಮೂಲಗಳಲ್ಲಿ ಹೂಳು, ಕಸ ಕಡ್ಡಿ ಬೀಳದ ಹಾಗೆ ಎಚ್ಚರ ವಹಿಸಿದ್ದೆೀವೆ. ಕರ್ಕಶ ಢಂ... ಢಮಾರ್ ಸದ್ದಿಲ್ಲದ, ಹೊಗೆರಹಿತ, ಹಣತೆಯ ತಂಪು ಬೆಳಕಿನ ಪರಿಸರ ಸ್ನೇಹಿ ದೀಪಾವಳಿಗೆ ಅಣಿಯಾಗೋಣ..</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>