<p><strong>ಬಳ್ಳಾರಿ: </strong>ಮಳೆ ಸುರಿಯದೆ ಹಿಂಗಾರು ಬೆಳೆಯೂ ಹಾಳಾಗುವುದೆಂಬ ಭಯ, ಬೇಸರದಲ್ಲಿದ್ದ ಜನರ ಮುಖದಲ್ಲಿ ಮಂದಹಾಸ ಮೂಡಿಸಲು ಬಂದ ವರುಣದೇವ ಮಂಗಳವಾರವಿಡೀ ಧರೆಗಿಳಿದು, ದೀಪಗಳ ಹಬ್ಬದ ಸಂಭ್ರಮ, ಸಡಗರಕ್ಕೆ ಇಂಬು ನೀಡಿದ.<br /> <br /> ನರಕ ಚತುರ್ದಶಿಯ ಮಂಗಳವಾರವೇ ನಗರವೂ ಒಳಗೊಂಡಂತೆ ಜಿಲ್ಲೆಯ ಕೆಲವೆಡೆ ಮಳೆ ಸುರಿದ ಹಿನ್ನೆಲೆಯಲ್ಲಿ ಹಿಂಗಾರು ಬೆಳೆಯ ನಿರೀಕ್ಷೆಯಲ್ಲಿರುವ ರೈತ ಸಮೂಹದಲ್ಲಿ ಭರವಸೆಯ ಬೆಳಕು ಮೂಡುವಂತಾಯಿತು.<br /> <br /> ಮುಂಗಾರು ಮುದುರಿಹೋಗಿ, ಬರಗಾಲದ ಛಾಯೆ ಆವರಿಸಿದ್ದರಿಂದ ಕಂಗಾಲಾಗಿದ್ದ ಕೃಷಿಕರ ಬದುಕಿನಲ್ಲಿ ಆವರಿಸಿದ್ದ ನಿರಾಸೆಯ ಕಾರ್ಮೋಡ, ದೀಪಾವಳಿಯ ಸಂದರ್ಭ ದೂರ ಸರಿಯಿತಲ್ಲದೆ, ನಿರೀಕ್ಷೆಗೆ ತಕ್ಕಂತೆ ಮಳೆ ಸುರಿಯಿತು. ಹೀಗೆ ಸುರಿದ ಮಳೆ ದೀಪಾಲಂಕಾರದ ಸಡಗರಕ್ಕೂ ಇಂಬು ನೀಡಿತು.<br /> <br /> ನಗರದ ಕೆಲವು ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಎದುರಾಯಿತು.<br /> ಮಂಗಳವಾರ ಮಧ್ಯಾಹ್ನ ಎರಡು ಗಂಟೆಯಿಂದ ಸಂಜೆ ಏಳರವರೆಗೂ ಆಗಾಗ ಬಿರುಸಾಗಿಯೇ ಸುರಿದ ಮಳೆ, ಹಬ್ಬದ ಖರೀದಿಯ ಭರದಲ್ಲಿದ್ದ ಜನರಿಗೆ ಕೊಂಚ ಅಡಚಣೆ ಉಂಟುಮಾಡಿತು. ಆದರೂ, ಮಳೆ ಸುರಿದಿದ್ದರಿಂದ ಜನರನ್ನು ಹರ್ಷಚಿತ್ತರನ್ನಾಗಿಸಿ ಖರೀದಿಯ ಭರಾಟೆ ಹೆಚ್ಚುವಂತೆ ಮಾಡಿತು.<br /> <strong><br /> ದರ ದುಬಾರಿ: </strong>ದೀಪಾವಳಿ ಪೂಜೆಗೆ ಅಗತ್ಯವಾಗಿರುವ ಹೂ, ಹಣ್ಣು, ಕಾಯಿ, ಕರ್ಪೂರ, ತಳಿರು- ತೋರಣ, ಸಿಹಿತಿಂಡಿ, ಬೆಲ್ಲ, ಬೇಳೆ, ಪಟಾಕಿ ಖರೀದಿಸಲು ಬಂದ ಗ್ರಾಹಕರಿಗೆ ದುಬಾರಿ ದರ ಬಿಸಿ ಮುಟ್ಟಿಸಿದರೂ ಖರೀದಿಸುವವರ ಉತ್ಸಾಹ ಕುಂದಲಿಲ್ಲ.<br /> <br /> ಒಂದು ಮೊಳ ಮಲ್ಲಿಗೆ ಹೂವು ರೂ 20ಕ್ಕೆ ಮಾರಾಟವಾದರೆ, ಮಾರು ಸೇವಂತಿಗೆ ರೂ 40 ಎಂಬುದನ್ನು ಕೇಳಿಯೇ ಗ್ರಾಹಕರು ಮಾರುದ್ದ ದೂರ ಸರಿಯುವಂತಾಯಿತು.<br /> <br /> ಬುಧವಾರದ ಅಮಾವಾಸ್ಯೆ ಪೂಜೆಗಾಗಿ ಮಂಗಳವಾರ ಸಂಜೆಯ ವೇಳೆ ಚೌಕಾಶಿ ಮಾಡಿ ಕೊಂಚ ಕಡಿಮೆ ದರಕ್ಕೆ ಹೂ, ಹಣ್ಣು, ಕಬ್ಬು,ಬಾಳೆ ದಿಂಡು ಖರೀದಿಸಿದ ಜನ ರಾತ್ರಿ 10ರವರೆಗೂ ಮಾರುಕಟ್ಟೆಯಿಂದ ಮನೆಯತ್ತ ತೆರಳುತ್ತಿದ್ದುದು ಕಂಡುಬಂದರೆ, ಗುರುವಾರದ ಪಾಢ್ಯದ ಪೂಜೆಗಾಗಿ ಬುಧವಾರ ಈ ಎಲ್ಲ ಸಾಮಗ್ರಿ ಖರೀದಿಸುತ್ತಿರುವವರ ದಂಡು ಮಾರುಕಟ್ಟೆಯಲ್ಲಿ ಇದ್ದುದು ವಿಶೇಷವಾಗಿತ್ತು.<br /> <br /> ಅಮಾವಾಸ್ಯೆಯ ದಿನವೇ ಬಹುತೇಕ ವ್ಯಾಪಾರಿ ಕೇಂದ್ರಗಳಾದ ಅಂಗಡಿ, ಹೋಟೆಲ್, ಪೆಟ್ಟಿಗೆ ಅಂಗಡಿಗಳಲ್ಲಿ ವಿಶೇಷ ದೀಪಾಲಂಕಾರ ಕಾಣಿಸಿತಲ್ಲದೆ, ಹಬ್ಬದ ಪೂಜೆಗೆ ಹೊಸ ಬಟ್ಟೆ ಧರಿಸಿ ಅನೇಕರು ಆಗಮಿಸಿದ್ದರಿಂದ ನಗರದ ಪ್ರಮುಖ ರಸ್ತೆಗಳೆಲ್ಲ ಕಿಕ್ಕಿರಿದು ತುಂಬಿದ್ದವು.<br /> <br /> ಹಬ್ಬದ ಖರೀದಿಗೆ ಆಗಮಿಸಿದವರಿಂದಲೂ ರಸ್ತೆಗಳು ತುಂಬಿ ತುಳುಕುತ್ತಿದ್ದವು. ಬುಧವಾರವೂ ಮೋಡ ಕವಿದಿತ್ತಾದರೂ ಮಳೆರಾಯ ಹಬ್ಬದ ಆಚರಣೆಯಲ್ಲಿದ್ದವರಿಗೆ ಅಡ್ಡಿಪಡಿಸುವ ಗೋಜಿಗೆ ಹೋಗಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ: </strong>ಮಳೆ ಸುರಿಯದೆ ಹಿಂಗಾರು ಬೆಳೆಯೂ ಹಾಳಾಗುವುದೆಂಬ ಭಯ, ಬೇಸರದಲ್ಲಿದ್ದ ಜನರ ಮುಖದಲ್ಲಿ ಮಂದಹಾಸ ಮೂಡಿಸಲು ಬಂದ ವರುಣದೇವ ಮಂಗಳವಾರವಿಡೀ ಧರೆಗಿಳಿದು, ದೀಪಗಳ ಹಬ್ಬದ ಸಂಭ್ರಮ, ಸಡಗರಕ್ಕೆ ಇಂಬು ನೀಡಿದ.<br /> <br /> ನರಕ ಚತುರ್ದಶಿಯ ಮಂಗಳವಾರವೇ ನಗರವೂ ಒಳಗೊಂಡಂತೆ ಜಿಲ್ಲೆಯ ಕೆಲವೆಡೆ ಮಳೆ ಸುರಿದ ಹಿನ್ನೆಲೆಯಲ್ಲಿ ಹಿಂಗಾರು ಬೆಳೆಯ ನಿರೀಕ್ಷೆಯಲ್ಲಿರುವ ರೈತ ಸಮೂಹದಲ್ಲಿ ಭರವಸೆಯ ಬೆಳಕು ಮೂಡುವಂತಾಯಿತು.<br /> <br /> ಮುಂಗಾರು ಮುದುರಿಹೋಗಿ, ಬರಗಾಲದ ಛಾಯೆ ಆವರಿಸಿದ್ದರಿಂದ ಕಂಗಾಲಾಗಿದ್ದ ಕೃಷಿಕರ ಬದುಕಿನಲ್ಲಿ ಆವರಿಸಿದ್ದ ನಿರಾಸೆಯ ಕಾರ್ಮೋಡ, ದೀಪಾವಳಿಯ ಸಂದರ್ಭ ದೂರ ಸರಿಯಿತಲ್ಲದೆ, ನಿರೀಕ್ಷೆಗೆ ತಕ್ಕಂತೆ ಮಳೆ ಸುರಿಯಿತು. ಹೀಗೆ ಸುರಿದ ಮಳೆ ದೀಪಾಲಂಕಾರದ ಸಡಗರಕ್ಕೂ ಇಂಬು ನೀಡಿತು.<br /> <br /> ನಗರದ ಕೆಲವು ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ್ದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಎದುರಾಯಿತು.<br /> ಮಂಗಳವಾರ ಮಧ್ಯಾಹ್ನ ಎರಡು ಗಂಟೆಯಿಂದ ಸಂಜೆ ಏಳರವರೆಗೂ ಆಗಾಗ ಬಿರುಸಾಗಿಯೇ ಸುರಿದ ಮಳೆ, ಹಬ್ಬದ ಖರೀದಿಯ ಭರದಲ್ಲಿದ್ದ ಜನರಿಗೆ ಕೊಂಚ ಅಡಚಣೆ ಉಂಟುಮಾಡಿತು. ಆದರೂ, ಮಳೆ ಸುರಿದಿದ್ದರಿಂದ ಜನರನ್ನು ಹರ್ಷಚಿತ್ತರನ್ನಾಗಿಸಿ ಖರೀದಿಯ ಭರಾಟೆ ಹೆಚ್ಚುವಂತೆ ಮಾಡಿತು.<br /> <strong><br /> ದರ ದುಬಾರಿ: </strong>ದೀಪಾವಳಿ ಪೂಜೆಗೆ ಅಗತ್ಯವಾಗಿರುವ ಹೂ, ಹಣ್ಣು, ಕಾಯಿ, ಕರ್ಪೂರ, ತಳಿರು- ತೋರಣ, ಸಿಹಿತಿಂಡಿ, ಬೆಲ್ಲ, ಬೇಳೆ, ಪಟಾಕಿ ಖರೀದಿಸಲು ಬಂದ ಗ್ರಾಹಕರಿಗೆ ದುಬಾರಿ ದರ ಬಿಸಿ ಮುಟ್ಟಿಸಿದರೂ ಖರೀದಿಸುವವರ ಉತ್ಸಾಹ ಕುಂದಲಿಲ್ಲ.<br /> <br /> ಒಂದು ಮೊಳ ಮಲ್ಲಿಗೆ ಹೂವು ರೂ 20ಕ್ಕೆ ಮಾರಾಟವಾದರೆ, ಮಾರು ಸೇವಂತಿಗೆ ರೂ 40 ಎಂಬುದನ್ನು ಕೇಳಿಯೇ ಗ್ರಾಹಕರು ಮಾರುದ್ದ ದೂರ ಸರಿಯುವಂತಾಯಿತು.<br /> <br /> ಬುಧವಾರದ ಅಮಾವಾಸ್ಯೆ ಪೂಜೆಗಾಗಿ ಮಂಗಳವಾರ ಸಂಜೆಯ ವೇಳೆ ಚೌಕಾಶಿ ಮಾಡಿ ಕೊಂಚ ಕಡಿಮೆ ದರಕ್ಕೆ ಹೂ, ಹಣ್ಣು, ಕಬ್ಬು,ಬಾಳೆ ದಿಂಡು ಖರೀದಿಸಿದ ಜನ ರಾತ್ರಿ 10ರವರೆಗೂ ಮಾರುಕಟ್ಟೆಯಿಂದ ಮನೆಯತ್ತ ತೆರಳುತ್ತಿದ್ದುದು ಕಂಡುಬಂದರೆ, ಗುರುವಾರದ ಪಾಢ್ಯದ ಪೂಜೆಗಾಗಿ ಬುಧವಾರ ಈ ಎಲ್ಲ ಸಾಮಗ್ರಿ ಖರೀದಿಸುತ್ತಿರುವವರ ದಂಡು ಮಾರುಕಟ್ಟೆಯಲ್ಲಿ ಇದ್ದುದು ವಿಶೇಷವಾಗಿತ್ತು.<br /> <br /> ಅಮಾವಾಸ್ಯೆಯ ದಿನವೇ ಬಹುತೇಕ ವ್ಯಾಪಾರಿ ಕೇಂದ್ರಗಳಾದ ಅಂಗಡಿ, ಹೋಟೆಲ್, ಪೆಟ್ಟಿಗೆ ಅಂಗಡಿಗಳಲ್ಲಿ ವಿಶೇಷ ದೀಪಾಲಂಕಾರ ಕಾಣಿಸಿತಲ್ಲದೆ, ಹಬ್ಬದ ಪೂಜೆಗೆ ಹೊಸ ಬಟ್ಟೆ ಧರಿಸಿ ಅನೇಕರು ಆಗಮಿಸಿದ್ದರಿಂದ ನಗರದ ಪ್ರಮುಖ ರಸ್ತೆಗಳೆಲ್ಲ ಕಿಕ್ಕಿರಿದು ತುಂಬಿದ್ದವು.<br /> <br /> ಹಬ್ಬದ ಖರೀದಿಗೆ ಆಗಮಿಸಿದವರಿಂದಲೂ ರಸ್ತೆಗಳು ತುಂಬಿ ತುಳುಕುತ್ತಿದ್ದವು. ಬುಧವಾರವೂ ಮೋಡ ಕವಿದಿತ್ತಾದರೂ ಮಳೆರಾಯ ಹಬ್ಬದ ಆಚರಣೆಯಲ್ಲಿದ್ದವರಿಗೆ ಅಡ್ಡಿಪಡಿಸುವ ಗೋಜಿಗೆ ಹೋಗಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>