<p>ಹುಮನಾಬಾದ್: ತಾಲ್ಲೂಕಿನ ದುಬಲಗುಂಡಿ ಗ್ರಾಮದಲ್ಲಿ ರಸ್ತೆ ವಿಸ್ತರಣೆ ಕಾರ್ಯ ಕೈಗೆತ್ತಿಕೊಳ್ಳಲು ಸೋಮವಾರ ನಡೆದ ವಿಶೇಷ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ ವಿ.ನಾತೆ ಅಧ್ಯಕ್ಷತೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. <br /> <br /> ಕ್ಷೇತ್ರದ ಶಾಸಕ ರಾಜಶೇಖರ ಪಾಟೀಲ ಅವರು ಈಚೆಗೆ ಗ್ರಾಮಕ್ಕೆ ಭೇಟಿ ನೀಡಿ, ಪಂಚಾಯಿತಿ ಎಲ್ಲಾ ಸದಸ್ಯರು ವಿಸ್ತರಣೆ ಕುರಿತು ಒಮ್ಮತದ ತೀರ್ಮಾನ ಕೈಗೊಂಡಲ್ಲಿ ಅನುದಾನ ನೀಡುವುದಾಗಿ ಭರವಸೆ ನೀಡಿದ್ದರು. <br /> <br /> ಸೋಮವಾರ ವಿಶೇಷ ಸಾಮಾನ್ಯ ಸಭೆ ನಡೆಸಿ, ಈ ತೀರ್ಮಾನ ಕೈಗೊಂಡಿದ್ದು ಅಭಿವೃದ್ಧಿ ಕಾರ್ಯಕ್ಕೆ ಗ್ರಾಮಸ್ಥರು ಸಹಕರಿಸಬೇಕು ಎಂದು ನಾತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.<br /> <br /> ರಸ್ತೆ ವಿಸ್ತರಣೆ ಕುರಿತು ಅಂದು ಹಿರಿಯ ಅಧಿಕಾರಗಳ ಆದೇಶದ ಮೇರೆಗೆ 1979ರಲ್ಲಿ ಪಟ್ಟಣ ಯೋಜನಾ ಅಧಿಕಾರಿ ಅವರು ಕೈಗೊಂಡ ಸರ್ವೆ ಪ್ರಕಾರವೇ ಈಗ ರಸ್ತೆ ವಿಸ್ತರಣೆ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. <br /> <br /> ಏನಿದೆ ಸರ್ವೆನಲ್ಲಿ ? : ಈ ಮೇಲೆ ಸೂಚಿಸಿದಂತೆ 1979ರ ಸರ್ವೆ ಪ್ರಕಾರ ಗ್ರಾಮದ ಯಾವ ಯಾವ ರಸ್ತೆಗಳಲ್ಲಿ ವಿಸ್ತರಣೆ ಕಾರ್ಯ ನಡೆಯುತ್ತದೆ ? ಎಷ್ಟು ವಿಸ್ತರಣೆ ಆಗುತ್ತದೆ ? ಎಂಬ ಇತ್ಯಾದಿ ಪ್ರಶ್ನೆಗೆ ಇಲ್ಲಿದೆ ಉತ್ತರ- ಪಂಚಾಯಿತಿ ಕಚೇರಿಯಿಂದ ಹುಸೇನ್ ಚೌಕ್- 9ಮೀಟರ್, ಹುಸೇನ್ ಚೌಕ್ನಿಂದ ಬಸವಣ್ಣ ಕಟ್ಟೆ- 9ಮೀಟರ್, ಬಸವಣ್ಣ ಕಟ್ಟೆಯಿಂದ ಬಸವೇಶ್ವರ ದೇವಸ್ಥಾನ- 15ಮೀಟರ್, ಬಸವಣ್ಣ ಕಟ್ಟೆಯಿಂದ ಎಡ ಮತ್ತು ಬಲ ಭಾಗದ ರಸ್ತೆ- 5ಮೀಟರ್, ಬಸವಣ್ಣ ಗುಡಿಯಿಂದ ಧ್ವಜಕಟ್ಟೆವರೆಗೆ - 11ಮೀಟರ್, ಬಸವೇಶ್ವರ ದೇವಸ್ಥಾನದಿಂದ ಬಸವೇಶ್ವರ ವೃತ್ತದ(ಹುಮನಾಬಾದ್- ಭಾಲ್ಕಿ ರಸ್ತೆ) ವರೆಗೆ 10ಮೀಟರ್, ಇನ್ನೂ ಗ್ರಾಮ ಮಧ್ಯದ ಧ್ವಜಕಟ್ಟೆಯಿಂದ ಅಗಸಿ ವರೆಗೆ- 9ಮೀಟರ್, ಧ್ವಜ ಕಟ್ಟೆಯಿಂದ ಹಳೆಯ ಅಂಚೆ ಕಚೇರಿ, ಖಾದಿ ಭಂಡಾರ ವರೆಗೆ 10ಮೀಟರ್ ವಿಸ್ತರಣೆ ನಡೆಯಲಿದೆ.<br /> <br /> ಈ ಯೋಜನೆ ಪ್ರಕಾರ ರಸ್ತೆ ವಿಸ್ತರಣೆ ಸಂಬಂಧ ಹಿಂದಿನ ಜಿಲ್ಲಾಧಿಕಾರಿ ಹರ್ಷಗುಪ್ತಾ ಹಾಗೂ ಹಾಲಿ ಜಿಲ್ಲಾಧಿಕಾರಿ ಅವರು ಗ್ರಾಮಸ್ಥರ ಜೊತೆಗೆ ಚರ್ಚಿಸಿದ್ದರು. ಗ್ರಾಮಸ್ಥರು ಒಮ್ಮತದಿಂದ ನಿರ್ಣಯ ತೆಗೆದುಕೊಂಡ ಬಳಿಕ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗುವುದಾಗಿ ತಿಳಿಸಿದ್ದರು.<br /> <br /> ಈ ಮಧ್ಯೆ ಕ್ಷೇತ್ರದ ಶಾಸಕ ರಾಜಶೇಖರ ಪಾಟೀಲ ಅವರು ಜುಲೈ 14ರಂದು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಿಸ್ತರಣೆ ಕುರಿತಾಗಿ ಪಂಚಾಯಿತಿ ತೀರ್ಮಾನ ಕೈಗೊಂಡಲ್ಲಿ ಅಭಿವೃದ್ಧಿ ಅನುದಾನ ನೀಡುವುದಾಗಿ ಸುದ್ದಿಗಾರರ ಸಮ್ಮುಖದಲ್ಲೇ ತಿಳಿಸಿದ್ದನ್ನು ಈಗ ಸ್ಮರಿಸಬಹುದು.<br /> <br /> ಗ್ರಾಮ ಪಂಚಾಯಿತಿ ಚುನಾಯಿತಿ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಾಧ್ಯವದಷ್ಟು ಶೀಘ್ರ ತೆರವು ಕಾರ್ಯ ಪೂರ್ಣಗೊಳಿಸುವ ಮೂಲಕ ಶಾಸಕ ರಾಜಶೇಖರ ಪಾಟೀಲ ಅವರು ನೀಡುವ ಅನುದಾನ ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಮನಾಬಾದ್: ತಾಲ್ಲೂಕಿನ ದುಬಲಗುಂಡಿ ಗ್ರಾಮದಲ್ಲಿ ರಸ್ತೆ ವಿಸ್ತರಣೆ ಕಾರ್ಯ ಕೈಗೆತ್ತಿಕೊಳ್ಳಲು ಸೋಮವಾರ ನಡೆದ ವಿಶೇಷ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ ವಿ.ನಾತೆ ಅಧ್ಯಕ್ಷತೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. <br /> <br /> ಕ್ಷೇತ್ರದ ಶಾಸಕ ರಾಜಶೇಖರ ಪಾಟೀಲ ಅವರು ಈಚೆಗೆ ಗ್ರಾಮಕ್ಕೆ ಭೇಟಿ ನೀಡಿ, ಪಂಚಾಯಿತಿ ಎಲ್ಲಾ ಸದಸ್ಯರು ವಿಸ್ತರಣೆ ಕುರಿತು ಒಮ್ಮತದ ತೀರ್ಮಾನ ಕೈಗೊಂಡಲ್ಲಿ ಅನುದಾನ ನೀಡುವುದಾಗಿ ಭರವಸೆ ನೀಡಿದ್ದರು. <br /> <br /> ಸೋಮವಾರ ವಿಶೇಷ ಸಾಮಾನ್ಯ ಸಭೆ ನಡೆಸಿ, ಈ ತೀರ್ಮಾನ ಕೈಗೊಂಡಿದ್ದು ಅಭಿವೃದ್ಧಿ ಕಾರ್ಯಕ್ಕೆ ಗ್ರಾಮಸ್ಥರು ಸಹಕರಿಸಬೇಕು ಎಂದು ನಾತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.<br /> <br /> ರಸ್ತೆ ವಿಸ್ತರಣೆ ಕುರಿತು ಅಂದು ಹಿರಿಯ ಅಧಿಕಾರಗಳ ಆದೇಶದ ಮೇರೆಗೆ 1979ರಲ್ಲಿ ಪಟ್ಟಣ ಯೋಜನಾ ಅಧಿಕಾರಿ ಅವರು ಕೈಗೊಂಡ ಸರ್ವೆ ಪ್ರಕಾರವೇ ಈಗ ರಸ್ತೆ ವಿಸ್ತರಣೆ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. <br /> <br /> ಏನಿದೆ ಸರ್ವೆನಲ್ಲಿ ? : ಈ ಮೇಲೆ ಸೂಚಿಸಿದಂತೆ 1979ರ ಸರ್ವೆ ಪ್ರಕಾರ ಗ್ರಾಮದ ಯಾವ ಯಾವ ರಸ್ತೆಗಳಲ್ಲಿ ವಿಸ್ತರಣೆ ಕಾರ್ಯ ನಡೆಯುತ್ತದೆ ? ಎಷ್ಟು ವಿಸ್ತರಣೆ ಆಗುತ್ತದೆ ? ಎಂಬ ಇತ್ಯಾದಿ ಪ್ರಶ್ನೆಗೆ ಇಲ್ಲಿದೆ ಉತ್ತರ- ಪಂಚಾಯಿತಿ ಕಚೇರಿಯಿಂದ ಹುಸೇನ್ ಚೌಕ್- 9ಮೀಟರ್, ಹುಸೇನ್ ಚೌಕ್ನಿಂದ ಬಸವಣ್ಣ ಕಟ್ಟೆ- 9ಮೀಟರ್, ಬಸವಣ್ಣ ಕಟ್ಟೆಯಿಂದ ಬಸವೇಶ್ವರ ದೇವಸ್ಥಾನ- 15ಮೀಟರ್, ಬಸವಣ್ಣ ಕಟ್ಟೆಯಿಂದ ಎಡ ಮತ್ತು ಬಲ ಭಾಗದ ರಸ್ತೆ- 5ಮೀಟರ್, ಬಸವಣ್ಣ ಗುಡಿಯಿಂದ ಧ್ವಜಕಟ್ಟೆವರೆಗೆ - 11ಮೀಟರ್, ಬಸವೇಶ್ವರ ದೇವಸ್ಥಾನದಿಂದ ಬಸವೇಶ್ವರ ವೃತ್ತದ(ಹುಮನಾಬಾದ್- ಭಾಲ್ಕಿ ರಸ್ತೆ) ವರೆಗೆ 10ಮೀಟರ್, ಇನ್ನೂ ಗ್ರಾಮ ಮಧ್ಯದ ಧ್ವಜಕಟ್ಟೆಯಿಂದ ಅಗಸಿ ವರೆಗೆ- 9ಮೀಟರ್, ಧ್ವಜ ಕಟ್ಟೆಯಿಂದ ಹಳೆಯ ಅಂಚೆ ಕಚೇರಿ, ಖಾದಿ ಭಂಡಾರ ವರೆಗೆ 10ಮೀಟರ್ ವಿಸ್ತರಣೆ ನಡೆಯಲಿದೆ.<br /> <br /> ಈ ಯೋಜನೆ ಪ್ರಕಾರ ರಸ್ತೆ ವಿಸ್ತರಣೆ ಸಂಬಂಧ ಹಿಂದಿನ ಜಿಲ್ಲಾಧಿಕಾರಿ ಹರ್ಷಗುಪ್ತಾ ಹಾಗೂ ಹಾಲಿ ಜಿಲ್ಲಾಧಿಕಾರಿ ಅವರು ಗ್ರಾಮಸ್ಥರ ಜೊತೆಗೆ ಚರ್ಚಿಸಿದ್ದರು. ಗ್ರಾಮಸ್ಥರು ಒಮ್ಮತದಿಂದ ನಿರ್ಣಯ ತೆಗೆದುಕೊಂಡ ಬಳಿಕ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗುವುದಾಗಿ ತಿಳಿಸಿದ್ದರು.<br /> <br /> ಈ ಮಧ್ಯೆ ಕ್ಷೇತ್ರದ ಶಾಸಕ ರಾಜಶೇಖರ ಪಾಟೀಲ ಅವರು ಜುಲೈ 14ರಂದು ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವಿಸ್ತರಣೆ ಕುರಿತಾಗಿ ಪಂಚಾಯಿತಿ ತೀರ್ಮಾನ ಕೈಗೊಂಡಲ್ಲಿ ಅಭಿವೃದ್ಧಿ ಅನುದಾನ ನೀಡುವುದಾಗಿ ಸುದ್ದಿಗಾರರ ಸಮ್ಮುಖದಲ್ಲೇ ತಿಳಿಸಿದ್ದನ್ನು ಈಗ ಸ್ಮರಿಸಬಹುದು.<br /> <br /> ಗ್ರಾಮ ಪಂಚಾಯಿತಿ ಚುನಾಯಿತಿ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸಾಧ್ಯವದಷ್ಟು ಶೀಘ್ರ ತೆರವು ಕಾರ್ಯ ಪೂರ್ಣಗೊಳಿಸುವ ಮೂಲಕ ಶಾಸಕ ರಾಜಶೇಖರ ಪಾಟೀಲ ಅವರು ನೀಡುವ ಅನುದಾನ ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>