<p><strong>ನವದೆಹಲಿ:</strong> ಅವೈಜ್ಞಾನಿಕ ವಿಧಾನಗಳಿಂದ ಕಳಪೆ ಕಾಮಗಾರಿ ಕಟ್ಟಡಗಳನ್ನು ನಿರ್ಮಿಸಿದ ಖಾಸಗಿ ಗುತ್ತಿಗೆದಾರರಿಂದಾಗಿ ಉತ್ತರಾಖಂಡದಲ್ಲಿ ನೂರಾರು ಜನ ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಬೇಕಾಯಿತು ಎಂದು ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.<br /> <br /> ಪ್ರವಾಸಿಗರನ್ನು ಆಕರ್ಷಿಸಲು ಉತ್ತರಾಖಂಡದ ಅಲಕನಂದ ಹಾಗೂ ಮಂದಾಕಿನಿ ನದಿ ಕಣಿವೆಗುಂಟ ನಿರ್ಮಿಸಲಾದ ವಸತಿಗೃಹಗಳು, ಬಹುಮಹಡಿ ಹೋಟೆಲ್ಗಳ ಕಟ್ಟಡಗಳು ಗುಣಮಟ್ಟದಿಂದ ಕೂಡಿಲ್ಲ ಮೇಲಾಗಿ ಇವುಗಳಿಗೆ ಹಾಕಲಾದ ತಳಪಾಯವೂ ವೈಜ್ಞಾನಿಕವಾಗಿಲ್ಲ . ಹೀಗಾಗಿ ಇವುಗಳೆಲ್ಲ ಪ್ರವಾಹದಲ್ಲಿ ಸುಲಭವಾಗಿ ಕುಸಿದುಬಿದ್ದ ಪರಿಣಾಮ ನೂರಾರು ಜನ ಕೊಚ್ಚಿಕೊಂಡು ಹೋಗುವಂತಾಯಿತು ಎಂದು ರೂರ್ರ್ಕಿಯಲ್ಲಿರುವ ಕೇಂದ್ರಿಯ ಕಟ್ಟಡ ಸಂಶೋಧನಾ ಸಂಸ್ಥೆಯ ನಿರ್ದೇಶಕ ಎಸ್.ಕೆ. ಭಟ್ಟಾಚಾರ್ಯ `ಪ್ರಜಾವಾಣಿ'ಗೆ ತಿಳಿಸಿದರು.<br /> <br /> ಸಮರ್ಪಕ ತಳಪಾಯ ಹಾಕದೆ, ಮಣ್ಣು ಪರೀಕ್ಷೆಯನ್ನು ಕೈಗೊಳ್ಳದೆಯೇ ಇಲ್ಲಿ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಲಾಗಿದ್ದು ಇವುಗಳಲ್ಲಿ ಬಹುತೇಕ ನದಿ ತಟದಲ್ಲಿವೆ.<br /> <br /> `ಕಟ್ಟಡದ ಆಯುಷ್ಯ ಅಳೆಯಲು ಅಲ್ಲಿಯ ಮಣ್ಣನ್ನು ಅವರು ಪರೀಕ್ಷೆ ನಡೆಸಿದ್ದಾರೆಯೇ. ಇದನ್ನೆಲ್ಲ ಈ ಖಾಸಗಿ ಗುತ್ತಿಗೆದಾರರು ತಲೆಕೆಡಿಸಿಕೊಳ್ಳದೆ ಪ್ರವಾಸಿಗರನ್ನು ಆಕರ್ಷಿಸಲು ಬರಿ ಮಹಡಿ ಮೇಲೆ ಮತ್ತೊಂದು ಮಹಡಿ ನಿರ್ಮಿಸಿದ್ದಾರೆ ಅಷ್ಟೆ' ಎಂದು ಭಟ್ಟಾಚಾರ್ಯ ಟೀಕಿಸಿದರು.<br /> <br /> ಪ್ರವಾಹದ ಒತ್ತಡವನ್ನು ಎದುರಿಸಿ ಗಟ್ಟಿಯಾಗಿ ನಿಲ್ಲುವ ತಾಂತ್ರಿಕತೆ ಇಲ್ಲಿಯ ಕಟ್ಟಡಗಳಿಗೆ ಅಗತ್ಯವಾಗಿದೆ. ಆದರೆ ದುರದೃಷ್ಟವಶಾತ್ ಇದನ್ನೆಲ್ಲ ಇಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿಲ್ಲ. ಬಹುಕಾಲ ಬಾಳುವ ಕಟ್ಟಡಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕಾಗಿದೆ' ಎಂದರು.<br /> <br /> ವಾಸದ ಕಟ್ಟಡ, ವಾಣಿಜ್ಯ ಹಾಗೂ ಔದ್ಯೋಗಿಕ ಸಂಕೀರ್ಣಗಳು ಪ್ರವಾಹ ಸಂದರ್ಭದಲ್ಲಿ ನೀರು ಸರಾಗವಾಗಿ ಹರಿದುಹೋಗಲು ಅಡ್ಡವಾಗಿವೆ ಎಂದು ಭೂವಿಜ್ಞಾನಿ ಕೆ.ಎಸ್. ವಲ್ದಿಯ ವಲ್ಡಿಯ ಅಭಿಪ್ರಾಯಪಡುತ್ತಾರೆ. ಈ ಭಾಗದಲ್ಲಿ ತೀವ್ರಗತಿಯಲ್ಲಿ ಸಾಗುತ್ತಿರುವ ಭೂಪರಿವರ್ತನೆ ಪ್ರಕ್ರಿಯೆಯೂ ದುರಂತಕ್ಕೆ ಕೊಡುಗೆ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಅವೈಜ್ಞಾನಿಕ ವಿಧಾನಗಳಿಂದ ಕಳಪೆ ಕಾಮಗಾರಿ ಕಟ್ಟಡಗಳನ್ನು ನಿರ್ಮಿಸಿದ ಖಾಸಗಿ ಗುತ್ತಿಗೆದಾರರಿಂದಾಗಿ ಉತ್ತರಾಖಂಡದಲ್ಲಿ ನೂರಾರು ಜನ ಪ್ರವಾಹಕ್ಕೆ ಸಿಲುಕಿ ಸಾವನ್ನಪ್ಪಬೇಕಾಯಿತು ಎಂದು ಎಂಬ ಅಂಶ ಇದೀಗ ಬೆಳಕಿಗೆ ಬಂದಿದೆ.<br /> <br /> ಪ್ರವಾಸಿಗರನ್ನು ಆಕರ್ಷಿಸಲು ಉತ್ತರಾಖಂಡದ ಅಲಕನಂದ ಹಾಗೂ ಮಂದಾಕಿನಿ ನದಿ ಕಣಿವೆಗುಂಟ ನಿರ್ಮಿಸಲಾದ ವಸತಿಗೃಹಗಳು, ಬಹುಮಹಡಿ ಹೋಟೆಲ್ಗಳ ಕಟ್ಟಡಗಳು ಗುಣಮಟ್ಟದಿಂದ ಕೂಡಿಲ್ಲ ಮೇಲಾಗಿ ಇವುಗಳಿಗೆ ಹಾಕಲಾದ ತಳಪಾಯವೂ ವೈಜ್ಞಾನಿಕವಾಗಿಲ್ಲ . ಹೀಗಾಗಿ ಇವುಗಳೆಲ್ಲ ಪ್ರವಾಹದಲ್ಲಿ ಸುಲಭವಾಗಿ ಕುಸಿದುಬಿದ್ದ ಪರಿಣಾಮ ನೂರಾರು ಜನ ಕೊಚ್ಚಿಕೊಂಡು ಹೋಗುವಂತಾಯಿತು ಎಂದು ರೂರ್ರ್ಕಿಯಲ್ಲಿರುವ ಕೇಂದ್ರಿಯ ಕಟ್ಟಡ ಸಂಶೋಧನಾ ಸಂಸ್ಥೆಯ ನಿರ್ದೇಶಕ ಎಸ್.ಕೆ. ಭಟ್ಟಾಚಾರ್ಯ `ಪ್ರಜಾವಾಣಿ'ಗೆ ತಿಳಿಸಿದರು.<br /> <br /> ಸಮರ್ಪಕ ತಳಪಾಯ ಹಾಕದೆ, ಮಣ್ಣು ಪರೀಕ್ಷೆಯನ್ನು ಕೈಗೊಳ್ಳದೆಯೇ ಇಲ್ಲಿ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಲಾಗಿದ್ದು ಇವುಗಳಲ್ಲಿ ಬಹುತೇಕ ನದಿ ತಟದಲ್ಲಿವೆ.<br /> <br /> `ಕಟ್ಟಡದ ಆಯುಷ್ಯ ಅಳೆಯಲು ಅಲ್ಲಿಯ ಮಣ್ಣನ್ನು ಅವರು ಪರೀಕ್ಷೆ ನಡೆಸಿದ್ದಾರೆಯೇ. ಇದನ್ನೆಲ್ಲ ಈ ಖಾಸಗಿ ಗುತ್ತಿಗೆದಾರರು ತಲೆಕೆಡಿಸಿಕೊಳ್ಳದೆ ಪ್ರವಾಸಿಗರನ್ನು ಆಕರ್ಷಿಸಲು ಬರಿ ಮಹಡಿ ಮೇಲೆ ಮತ್ತೊಂದು ಮಹಡಿ ನಿರ್ಮಿಸಿದ್ದಾರೆ ಅಷ್ಟೆ' ಎಂದು ಭಟ್ಟಾಚಾರ್ಯ ಟೀಕಿಸಿದರು.<br /> <br /> ಪ್ರವಾಹದ ಒತ್ತಡವನ್ನು ಎದುರಿಸಿ ಗಟ್ಟಿಯಾಗಿ ನಿಲ್ಲುವ ತಾಂತ್ರಿಕತೆ ಇಲ್ಲಿಯ ಕಟ್ಟಡಗಳಿಗೆ ಅಗತ್ಯವಾಗಿದೆ. ಆದರೆ ದುರದೃಷ್ಟವಶಾತ್ ಇದನ್ನೆಲ್ಲ ಇಲ್ಲಿ ಅನುಷ್ಠಾನಕ್ಕೆ ತರಲಾಗುತ್ತಿಲ್ಲ. ಬಹುಕಾಲ ಬಾಳುವ ಕಟ್ಟಡಗಳ ನಿರ್ಮಾಣಕ್ಕೆ ಆದ್ಯತೆ ನೀಡಬೇಕಾಗಿದೆ' ಎಂದರು.<br /> <br /> ವಾಸದ ಕಟ್ಟಡ, ವಾಣಿಜ್ಯ ಹಾಗೂ ಔದ್ಯೋಗಿಕ ಸಂಕೀರ್ಣಗಳು ಪ್ರವಾಹ ಸಂದರ್ಭದಲ್ಲಿ ನೀರು ಸರಾಗವಾಗಿ ಹರಿದುಹೋಗಲು ಅಡ್ಡವಾಗಿವೆ ಎಂದು ಭೂವಿಜ್ಞಾನಿ ಕೆ.ಎಸ್. ವಲ್ದಿಯ ವಲ್ಡಿಯ ಅಭಿಪ್ರಾಯಪಡುತ್ತಾರೆ. ಈ ಭಾಗದಲ್ಲಿ ತೀವ್ರಗತಿಯಲ್ಲಿ ಸಾಗುತ್ತಿರುವ ಭೂಪರಿವರ್ತನೆ ಪ್ರಕ್ರಿಯೆಯೂ ದುರಂತಕ್ಕೆ ಕೊಡುಗೆ ನೀಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>