<p><strong>ದುರ್ಗದಕೇರಿ (ತಾ.ಧಾರವಾಡ): </strong>ಕಲುಷಿತ ನೀರು ಸೇವಿಸಿ ದುರ್ಗದಕೇರಿ ಹಾಗೂ ಹಳೆ ತೇಗೂರಿನ 26ಕ್ಕೂ ಅಧಿಕ ಜನರು ವಾಂತಿ-ಭೇದಿಯಿಂದಾಗಿ ಅಸ್ವಸ್ಥರಾಗಿದ್ದಾರೆ. ಘಟನೆಗೆ ನೀರು ಸಂಗ್ರಹಾಗಾರ ಹಾಗೂ ಬೋರ್ವೆಲ್ಗಳಿಂದ ಗ್ರಾಮಗಳಿಗೆ ನೀರು ಪೂರೈಕೆ ಮಾಡುವ ಪೈಪ್ಲೈನ್ ಒಡೆದು, ಕಲುಷಿತ ನೀರು ಸೇವಿಸಿದ್ದೇ ಕಾರಣ ಎಂದು ತಿಳಿದು ಬಂದಿದೆ. ಜಿಲ್ಲಾ ಆರೋಗ್ಯಾಧಿಕಾರಿಗಳ ಸೂಚನೆ ಮೇರೆಗೆ ಈ ಗ್ರಾಮಗಳಲ್ಲಿ ವೈದ್ಯಕೀಯ ಸಿಬ್ಬಂದಿ ಬೀಡು ಬಿಟ್ಟಿದ್ದು, ಅಗತ್ಯ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. <br /> <br /> ಏತನ್ಮಧ್ಯೆ ದುರ್ಗದಕೇರಿಯ ನೀರು ಸೇವಿಸಲು ಅಯೋಗ್ಯವಾಗಿದ್ದರಿಂದ ತೇಗೂರು ಗ್ರಾಮ ಪಂಚಾಯಿತಿಯು ಟ್ಯಾಂಕರ್ ಮೂಲಕ ಗುರುವಾರ ನೀರು ಪೂರೈಕೆ ಮಾಡಿತು. ಗುರುವಾರ ಮಧ್ಯಾಹ್ನವಷ್ಟೇ ಟ್ಯಾಂಕರ್ ನೀರು ಪೂರೈಕೆಯಾಗಿದ್ದು, ಅಲ್ಲಿಯವರೆಗೂ ಆ ಗ್ರಾಮಸ್ಥರು ಅದೇ ಕಲುಷಿತ ನೀರನ್ನೇ ಕಾಯಿಸಿ ಕುಡಿಯುತ್ತಿದ್ದರು! <br /> <br /> ಟ್ಯಾಂಕರ್ ನೀರು ಸಹ ಎಲ್ಲರಿಗೂ ದೊರೆಯಲಿಲ್ಲ. ಕೆಲವರು ಹೊಲಗಳಿಗೆ ಹೋಗಿದ್ದರಿಂದ ಕೆಲವರಷ್ಟೇ ನೀರು ತುಂಬಿಕೊಳ್ಳಲು ಸಾಧ್ಯವಾಯಿತು. ತೇಗೂರಿನ ಓಣಿಯೊಂದರಲ್ಲೇ 20 ವಾಂತಿ-ಭೇದಿ ಪ್ರಕರಣಗಳು ಕಳೆದ ವಾರದ ಹಿಂದೆಯೇ ದಾಖಲಾಗಿದ್ದವು. ಕೆಲವರನ್ನು ಜಿಲ್ಲಾ ಆಸ್ಪತ್ರೆಗೆ ಹಾಗೂ ಕೆಲವರನ್ನು ಗ್ರಾಮದಲ್ಲೇ ಗರಗ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ. ದುರ್ಗದಕೇರಿಯಲ್ಲಿಯೂ ಆರು ಜನರಿಗೆ ವಾಂತಿ-ಭೇದಿ ಉಂಟಾಗಿದ್ದು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರಲ್ಲಿ ಆಶಾ ಕಾರ್ಯಕರ್ತೆ ಹಾಗೂ ಗ್ರಾಮದ ನರ್ಸ್ಗೇ ವಾಂತಿ-ಭೇದಿ ಉಂಟಾಗಿತ್ತು. ಮೂರು ಮಂದಿ ಗರಗ ಆರೋಗ್ಯ ಕೇಂದ್ರದಿಂದ ದುರ್ಗದಕೇರಿಗೆ ಬಂದಿದ್ದ ನರ್ಸ್ಗಳು ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದ ವಾಂತಿ-ಭೇದಿ ಶಂಕಿತರ ತಪಾಸಣೆ ನಡೆಸಿ ಮಾತ್ರೆಗಳನ್ನು ನೀಡಿದರು. <br /> <br /> ಗ್ರಾಮಕ್ಕೆ ಭೇಟಿ ನೀಡಿದ `ಪ್ರಜಾವಾಣಿ~ ಪ್ರತಿನಿಧಿಯೊಂದಿಗೆ ಮಾತನಾಡಿದ ಗ್ರಾಮಸ್ಥೆ ಅನಸೂಯಾ ಅಂಬಲಬಾವಿ, `ಕಳೆದ ಒಂದು ವಾರದಿಂದ ಕುಡಿಯುವ ನೀರಿನಲ್ಲಿ ಕೆಂಪು ಮಣ್ಣು ಬರುತ್ತಿತ್ತು. ಅದನ್ನು ಕುಡಿದಿದ್ದರಿಂದಲೇ ನಮಗೆ ವಾಂತಿ ಮತ್ತು ಸಂಡಾಸ ಶುರು ಆಗೈತಿ. ಮನೆಗೆ ಒಬ್ಬಿಬ್ಬರಂತೆ ದಿನಾಲೂ ದವಾಖಾನಿಗೆ ಹೋಗಬೇಕಾಗ್ಯದ. ಅವತ್ತಿಂದ ಅದ ನೀರನ್ನು ಕಾಯಿಸಿ ಆರಿಸಿ ಕುಡಿಲಾಕತ್ತೀವ್ರಿ~ ಎಂದರು. <br /> <br /> ಜಿಲ್ಲಾ ವೈದ್ಯಾಧಿಕಾರಿ ಡಾ.ಎನ್.ಎಂ.ಅಂಗಡಿ ಮಾತನಾಡಿ, `ಬುಧವಾರವಷ್ಟೇ ಧಾರವಾಡ ದಿಂದಲೇ ನಾಲ್ಕು ಜನ ವೈದ್ಯಕೀಯ ಸಿಬ್ಬಂದಿ ಯನ್ನು ದುರ್ಗದಕೇರಿಗೆ ಕಳುಹಿಸ ಲಾಗಿತ್ತು. ಅಲ್ಲಿ ಅಗತ್ಯ ಚಿಕಿತ್ಸೆ ನೀಡುತ್ತಿದ್ದಾರೆ. ಪರಿಸ್ಥಿತಿ ಇದೀಗ ಸಂಪೂರ್ಣ ನಿಯಂತ್ರಣದಲ್ಲಿದೆ~ ಎಂದರು.</p>.<p><strong>ಹೊಸ ಬೋರ್ವೆಲ್ </strong><br /> ಕಲುಷಿತ ನೀರು ಪೂರೈಕೆಯಾಗಿ ವಾಂತಿ-ಭೇದಿ ಉಂಟಾದ ಹಿನ್ನೆಲೆಯಲ್ಲಿ ಆ ಬೋರ್ವೆಲ್ ಅನ್ನು ಸಂಪೂರ್ಣ ಸ್ವಚ್ಛಗೊಳಿಸಲು ನಿರ್ದೇಶನ ನೀಡಲಾಗಿದೆ. ಅಲ್ಲಿಯವರೆಗೆ ಗ್ರಾಮಸ್ಥರಿಗೆ ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತದೆ.<br /> <br /> ಅಗತ್ಯ ಬಿದ್ದರೆ ಕೂಡಲೇ ಒಂದು ಬೋರ್ವೆಲ್ ಕೊರೆಸಿ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಎ.ಮೇಘಣ್ಣವರ `ಪ್ರಜಾವಾಣಿ~ಗೆ ತಿಳಿಸಿದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದುರ್ಗದಕೇರಿ (ತಾ.ಧಾರವಾಡ): </strong>ಕಲುಷಿತ ನೀರು ಸೇವಿಸಿ ದುರ್ಗದಕೇರಿ ಹಾಗೂ ಹಳೆ ತೇಗೂರಿನ 26ಕ್ಕೂ ಅಧಿಕ ಜನರು ವಾಂತಿ-ಭೇದಿಯಿಂದಾಗಿ ಅಸ್ವಸ್ಥರಾಗಿದ್ದಾರೆ. ಘಟನೆಗೆ ನೀರು ಸಂಗ್ರಹಾಗಾರ ಹಾಗೂ ಬೋರ್ವೆಲ್ಗಳಿಂದ ಗ್ರಾಮಗಳಿಗೆ ನೀರು ಪೂರೈಕೆ ಮಾಡುವ ಪೈಪ್ಲೈನ್ ಒಡೆದು, ಕಲುಷಿತ ನೀರು ಸೇವಿಸಿದ್ದೇ ಕಾರಣ ಎಂದು ತಿಳಿದು ಬಂದಿದೆ. ಜಿಲ್ಲಾ ಆರೋಗ್ಯಾಧಿಕಾರಿಗಳ ಸೂಚನೆ ಮೇರೆಗೆ ಈ ಗ್ರಾಮಗಳಲ್ಲಿ ವೈದ್ಯಕೀಯ ಸಿಬ್ಬಂದಿ ಬೀಡು ಬಿಟ್ಟಿದ್ದು, ಅಗತ್ಯ ಚಿಕಿತ್ಸೆಯನ್ನು ನೀಡುತ್ತಿದ್ದಾರೆ. <br /> <br /> ಏತನ್ಮಧ್ಯೆ ದುರ್ಗದಕೇರಿಯ ನೀರು ಸೇವಿಸಲು ಅಯೋಗ್ಯವಾಗಿದ್ದರಿಂದ ತೇಗೂರು ಗ್ರಾಮ ಪಂಚಾಯಿತಿಯು ಟ್ಯಾಂಕರ್ ಮೂಲಕ ಗುರುವಾರ ನೀರು ಪೂರೈಕೆ ಮಾಡಿತು. ಗುರುವಾರ ಮಧ್ಯಾಹ್ನವಷ್ಟೇ ಟ್ಯಾಂಕರ್ ನೀರು ಪೂರೈಕೆಯಾಗಿದ್ದು, ಅಲ್ಲಿಯವರೆಗೂ ಆ ಗ್ರಾಮಸ್ಥರು ಅದೇ ಕಲುಷಿತ ನೀರನ್ನೇ ಕಾಯಿಸಿ ಕುಡಿಯುತ್ತಿದ್ದರು! <br /> <br /> ಟ್ಯಾಂಕರ್ ನೀರು ಸಹ ಎಲ್ಲರಿಗೂ ದೊರೆಯಲಿಲ್ಲ. ಕೆಲವರು ಹೊಲಗಳಿಗೆ ಹೋಗಿದ್ದರಿಂದ ಕೆಲವರಷ್ಟೇ ನೀರು ತುಂಬಿಕೊಳ್ಳಲು ಸಾಧ್ಯವಾಯಿತು. ತೇಗೂರಿನ ಓಣಿಯೊಂದರಲ್ಲೇ 20 ವಾಂತಿ-ಭೇದಿ ಪ್ರಕರಣಗಳು ಕಳೆದ ವಾರದ ಹಿಂದೆಯೇ ದಾಖಲಾಗಿದ್ದವು. ಕೆಲವರನ್ನು ಜಿಲ್ಲಾ ಆಸ್ಪತ್ರೆಗೆ ಹಾಗೂ ಕೆಲವರನ್ನು ಗ್ರಾಮದಲ್ಲೇ ಗರಗ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ. ದುರ್ಗದಕೇರಿಯಲ್ಲಿಯೂ ಆರು ಜನರಿಗೆ ವಾಂತಿ-ಭೇದಿ ಉಂಟಾಗಿದ್ದು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರಲ್ಲಿ ಆಶಾ ಕಾರ್ಯಕರ್ತೆ ಹಾಗೂ ಗ್ರಾಮದ ನರ್ಸ್ಗೇ ವಾಂತಿ-ಭೇದಿ ಉಂಟಾಗಿತ್ತು. ಮೂರು ಮಂದಿ ಗರಗ ಆರೋಗ್ಯ ಕೇಂದ್ರದಿಂದ ದುರ್ಗದಕೇರಿಗೆ ಬಂದಿದ್ದ ನರ್ಸ್ಗಳು ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದ ವಾಂತಿ-ಭೇದಿ ಶಂಕಿತರ ತಪಾಸಣೆ ನಡೆಸಿ ಮಾತ್ರೆಗಳನ್ನು ನೀಡಿದರು. <br /> <br /> ಗ್ರಾಮಕ್ಕೆ ಭೇಟಿ ನೀಡಿದ `ಪ್ರಜಾವಾಣಿ~ ಪ್ರತಿನಿಧಿಯೊಂದಿಗೆ ಮಾತನಾಡಿದ ಗ್ರಾಮಸ್ಥೆ ಅನಸೂಯಾ ಅಂಬಲಬಾವಿ, `ಕಳೆದ ಒಂದು ವಾರದಿಂದ ಕುಡಿಯುವ ನೀರಿನಲ್ಲಿ ಕೆಂಪು ಮಣ್ಣು ಬರುತ್ತಿತ್ತು. ಅದನ್ನು ಕುಡಿದಿದ್ದರಿಂದಲೇ ನಮಗೆ ವಾಂತಿ ಮತ್ತು ಸಂಡಾಸ ಶುರು ಆಗೈತಿ. ಮನೆಗೆ ಒಬ್ಬಿಬ್ಬರಂತೆ ದಿನಾಲೂ ದವಾಖಾನಿಗೆ ಹೋಗಬೇಕಾಗ್ಯದ. ಅವತ್ತಿಂದ ಅದ ನೀರನ್ನು ಕಾಯಿಸಿ ಆರಿಸಿ ಕುಡಿಲಾಕತ್ತೀವ್ರಿ~ ಎಂದರು. <br /> <br /> ಜಿಲ್ಲಾ ವೈದ್ಯಾಧಿಕಾರಿ ಡಾ.ಎನ್.ಎಂ.ಅಂಗಡಿ ಮಾತನಾಡಿ, `ಬುಧವಾರವಷ್ಟೇ ಧಾರವಾಡ ದಿಂದಲೇ ನಾಲ್ಕು ಜನ ವೈದ್ಯಕೀಯ ಸಿಬ್ಬಂದಿ ಯನ್ನು ದುರ್ಗದಕೇರಿಗೆ ಕಳುಹಿಸ ಲಾಗಿತ್ತು. ಅಲ್ಲಿ ಅಗತ್ಯ ಚಿಕಿತ್ಸೆ ನೀಡುತ್ತಿದ್ದಾರೆ. ಪರಿಸ್ಥಿತಿ ಇದೀಗ ಸಂಪೂರ್ಣ ನಿಯಂತ್ರಣದಲ್ಲಿದೆ~ ಎಂದರು.</p>.<p><strong>ಹೊಸ ಬೋರ್ವೆಲ್ </strong><br /> ಕಲುಷಿತ ನೀರು ಪೂರೈಕೆಯಾಗಿ ವಾಂತಿ-ಭೇದಿ ಉಂಟಾದ ಹಿನ್ನೆಲೆಯಲ್ಲಿ ಆ ಬೋರ್ವೆಲ್ ಅನ್ನು ಸಂಪೂರ್ಣ ಸ್ವಚ್ಛಗೊಳಿಸಲು ನಿರ್ದೇಶನ ನೀಡಲಾಗಿದೆ. ಅಲ್ಲಿಯವರೆಗೆ ಗ್ರಾಮಸ್ಥರಿಗೆ ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತದೆ.<br /> <br /> ಅಗತ್ಯ ಬಿದ್ದರೆ ಕೂಡಲೇ ಒಂದು ಬೋರ್ವೆಲ್ ಕೊರೆಸಿ ಶುದ್ಧ ಕುಡಿಯುವ ನೀರು ಪೂರೈಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಎ.ಮೇಘಣ್ಣವರ `ಪ್ರಜಾವಾಣಿ~ಗೆ ತಿಳಿಸಿದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>