<p>ಬೆಂಗಳೂರು: `ಸಮಾನತೆಯ ಬಗ್ಗೆ ಎಷ್ಟೆಲ್ಲಾ ಮಾತನಾಡಿದರೂ ನಮ್ಮ ದೇಶದಲ್ಲಿ ಇಂದಿಗೂ ಪರಿಶಿಷ್ಟರು ದೇವಾಲಯ ಪ್ರವೇಶಿಸಲು ಮುಕ್ತ ವಾತಾವರಣ ಇಲ್ಲದಿರುವುದು ಸಾಮಾಜಿಕ ಅಸಮತೋಲನವನ್ನು ಎತ್ತಿತೋರುತ್ತಿದೆ~ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ವಿಷಾದಿಸಿದರು.<br /> <br /> ನಗರದಲ್ಲಿ ಬುಧವಾರ ನಡೆದ ಚಾಮರಾಜಪೇಟೆಯ ಯಾಜ್ಞವಲ್ಕ್ಯಾಶ್ರಮದ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.<br /> <br /> `ಶೋಷಣೆ, ಅಸಮಾನತೆಗಳು ನಿವಾರಣೆಯಾಗಿ ದೇಶದಲ್ಲಿ ಬಡತನ ನಿರ್ಮೂಲನೆಯಾಗಬೇಕು ಎಂಬುದು ಮಹಾತ್ಮ ಗಾಂಧಿ ಅವರ ಕನಸಾಗಿತ್ತು. ಆದರೆ ಆ ಕನಸು ಇಂದಿಗೂ ಸಾಕಾರಗೊಂಡಿಲ್ಲ. <br /> <br /> ಶೋಷಣೆ, ಅಸಮಾನತೆ, ಬಡತನ ಸೇರಿದಂತೆ ಹಲವು ಸಮಸ್ಯೆಗಳು ಇಂದಿಗೂ ದೇಶದಲ್ಲಿ ಉಳಿದುಕೊಂಡಿವೆ. ಈ ಸಮಸ್ಯೆಗಳನ್ನು ಪರಿಹರಿಸಲು ದೇಶದ ಎಲ್ಲ ನಾಗರಿಕರೂ ಮನಸ್ಸು ಮಾಡಬೇಕು~ ಎಂದು ಅವರು ನುಡಿದರು.<br /> <br /> `ಸಂಸ್ಕೃತ, ಪ್ರಾಕೃತಗಳಂತಹ ಪ್ರಾಚೀನ ಭಾಷೆಗಳ ಅಗತ್ಯವೇ ಇಲ್ಲ ಎಂಬಂತೆ ಇಂದಿನ ಯುವ ಜನರು ಅವುಗಳಿಂದ ದೂರವಾಗುತ್ತಿದ್ದಾರೆ. ನಮ್ಮ ನೆಲದ ಮೂಲ ಜ್ಞಾನವಾದ ವೇದಗಳನ್ನು ಅರಿತುಕೊಳ್ಳಲು ಸಂಸ್ಕೃತವನ್ನು ಮತ್ತು ವೇದಗಳ ವ್ಯಾಖ್ಯಾನಕ್ಕಾಗಿ ಪ್ರಾಕೃತವನ್ನೂ ಕಲಿಯಬೇಕಾದ್ದು ಅಗತ್ಯ. <br /> <br /> ನಮ್ಮ ದೇಶದಲ್ಲಿ ಬದುಕಿದ್ದ ಸಾವಿರಾರು ಋಷಿ ಮುನಿಗಳ ಜ್ಞಾನದಿಂದ ವೇದ ವೇದಾಂಗಗಳು ಸಮೃದ್ಧವಾಗಿವೆ. ನಿಜವಾದ ಭಾತರವನ್ನು ಅರಿಯಲು ನಮ್ಮ ಇತಿಹಾಸವನ್ನು ಅರಿಯಬೇಕು ಎಂಬ ದಯಾನಂದ ಸರಸ್ವತಿ ಅವರ ಮಾತನ್ನು ಕಾರ್ಯರೂಪಕ್ಕೆ ತರಲು ವೇದಗಳ ಅಧ್ಯಯನಕ್ಕೆ ಹಿಂದಿರುಗಬೇಕು~ ಎಂದು ಅವರು ಕರೆ ನೀಡಿದರು.<br /> <br /> ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಂ ಮಾತನಾಡಿ, `ಜಗತ್ತಿಗೆ ಬೃಹದಾರಣ್ಯಕವನ್ನು ಕೊಟ್ಟ ಯಾಜ್ಞವಲ್ಕ್ಯರ ಕೊಡುಗೆ ಹಿರಿದು. <br /> <br /> ಜಗತ್ತಿನ ಎಲ್ಲವೂ ಭಗವಂತನೇ ಎಂದು ಸಾರಿದ ಅವರ ಲೋಕ ಚಿಂತೆನೆಯನ್ನು ತಿಳಿಯುವ ಪ್ರಯತ್ನವಾಗಬೇಕು~ ಎಂದರು.<br /> <br /> ಸಮಾರಂಭದಲ್ಲಿ ಕೂಡಲಿ ಕ್ಷೇತ್ರದ ವಿದ್ಯಾರಣ್ಯ ಭಾರತಿ ಸ್ವಾಮೀಜಿ, ಬೆಂಗಳೂರು ದೂರದರ್ಶನ ಕೇಂದ್ರದ ಉಪ ಮಹಾ ನಿರ್ದೇಶಕ ಡಾ.ಮಹೇಶ್ ಜೋಷಿ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: `ಸಮಾನತೆಯ ಬಗ್ಗೆ ಎಷ್ಟೆಲ್ಲಾ ಮಾತನಾಡಿದರೂ ನಮ್ಮ ದೇಶದಲ್ಲಿ ಇಂದಿಗೂ ಪರಿಶಿಷ್ಟರು ದೇವಾಲಯ ಪ್ರವೇಶಿಸಲು ಮುಕ್ತ ವಾತಾವರಣ ಇಲ್ಲದಿರುವುದು ಸಾಮಾಜಿಕ ಅಸಮತೋಲನವನ್ನು ಎತ್ತಿತೋರುತ್ತಿದೆ~ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ವಿಷಾದಿಸಿದರು.<br /> <br /> ನಗರದಲ್ಲಿ ಬುಧವಾರ ನಡೆದ ಚಾಮರಾಜಪೇಟೆಯ ಯಾಜ್ಞವಲ್ಕ್ಯಾಶ್ರಮದ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.<br /> <br /> `ಶೋಷಣೆ, ಅಸಮಾನತೆಗಳು ನಿವಾರಣೆಯಾಗಿ ದೇಶದಲ್ಲಿ ಬಡತನ ನಿರ್ಮೂಲನೆಯಾಗಬೇಕು ಎಂಬುದು ಮಹಾತ್ಮ ಗಾಂಧಿ ಅವರ ಕನಸಾಗಿತ್ತು. ಆದರೆ ಆ ಕನಸು ಇಂದಿಗೂ ಸಾಕಾರಗೊಂಡಿಲ್ಲ. <br /> <br /> ಶೋಷಣೆ, ಅಸಮಾನತೆ, ಬಡತನ ಸೇರಿದಂತೆ ಹಲವು ಸಮಸ್ಯೆಗಳು ಇಂದಿಗೂ ದೇಶದಲ್ಲಿ ಉಳಿದುಕೊಂಡಿವೆ. ಈ ಸಮಸ್ಯೆಗಳನ್ನು ಪರಿಹರಿಸಲು ದೇಶದ ಎಲ್ಲ ನಾಗರಿಕರೂ ಮನಸ್ಸು ಮಾಡಬೇಕು~ ಎಂದು ಅವರು ನುಡಿದರು.<br /> <br /> `ಸಂಸ್ಕೃತ, ಪ್ರಾಕೃತಗಳಂತಹ ಪ್ರಾಚೀನ ಭಾಷೆಗಳ ಅಗತ್ಯವೇ ಇಲ್ಲ ಎಂಬಂತೆ ಇಂದಿನ ಯುವ ಜನರು ಅವುಗಳಿಂದ ದೂರವಾಗುತ್ತಿದ್ದಾರೆ. ನಮ್ಮ ನೆಲದ ಮೂಲ ಜ್ಞಾನವಾದ ವೇದಗಳನ್ನು ಅರಿತುಕೊಳ್ಳಲು ಸಂಸ್ಕೃತವನ್ನು ಮತ್ತು ವೇದಗಳ ವ್ಯಾಖ್ಯಾನಕ್ಕಾಗಿ ಪ್ರಾಕೃತವನ್ನೂ ಕಲಿಯಬೇಕಾದ್ದು ಅಗತ್ಯ. <br /> <br /> ನಮ್ಮ ದೇಶದಲ್ಲಿ ಬದುಕಿದ್ದ ಸಾವಿರಾರು ಋಷಿ ಮುನಿಗಳ ಜ್ಞಾನದಿಂದ ವೇದ ವೇದಾಂಗಗಳು ಸಮೃದ್ಧವಾಗಿವೆ. ನಿಜವಾದ ಭಾತರವನ್ನು ಅರಿಯಲು ನಮ್ಮ ಇತಿಹಾಸವನ್ನು ಅರಿಯಬೇಕು ಎಂಬ ದಯಾನಂದ ಸರಸ್ವತಿ ಅವರ ಮಾತನ್ನು ಕಾರ್ಯರೂಪಕ್ಕೆ ತರಲು ವೇದಗಳ ಅಧ್ಯಯನಕ್ಕೆ ಹಿಂದಿರುಗಬೇಕು~ ಎಂದು ಅವರು ಕರೆ ನೀಡಿದರು.<br /> <br /> ಕಿರುತೆರೆ ನಿರ್ದೇಶಕ ಟಿ.ಎನ್.ಸೀತಾರಾಂ ಮಾತನಾಡಿ, `ಜಗತ್ತಿಗೆ ಬೃಹದಾರಣ್ಯಕವನ್ನು ಕೊಟ್ಟ ಯಾಜ್ಞವಲ್ಕ್ಯರ ಕೊಡುಗೆ ಹಿರಿದು. <br /> <br /> ಜಗತ್ತಿನ ಎಲ್ಲವೂ ಭಗವಂತನೇ ಎಂದು ಸಾರಿದ ಅವರ ಲೋಕ ಚಿಂತೆನೆಯನ್ನು ತಿಳಿಯುವ ಪ್ರಯತ್ನವಾಗಬೇಕು~ ಎಂದರು.<br /> <br /> ಸಮಾರಂಭದಲ್ಲಿ ಕೂಡಲಿ ಕ್ಷೇತ್ರದ ವಿದ್ಯಾರಣ್ಯ ಭಾರತಿ ಸ್ವಾಮೀಜಿ, ಬೆಂಗಳೂರು ದೂರದರ್ಶನ ಕೇಂದ್ರದ ಉಪ ಮಹಾ ನಿರ್ದೇಶಕ ಡಾ.ಮಹೇಶ್ ಜೋಷಿ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>