<p><strong>ಬೆಂಗಳೂರು: </strong>ಹೆಣ್ಣೆಂಬ ಕಾರಣಕ್ಕೆ ತಂದೆಯೇ ಮಗಳನ್ನು ಕೊಲ್ಲುವ ಪ್ರಕರಣಗಳಿಂದ ಮಹಿಳಾ ವಿಮೋಚನೆ ಮತ್ತು ಮಹಿಳಾ ಸಬಲೀಕರಣವೆಂಬುದು ಪ್ರಾಯೋಗಿಕವಾಗಿ ದೂರವೇ ಉಳಿದಿದೆ ಎಂಬುದು ವೇದ್ಯವಾಗುತ್ತದೆ ಎಂದು ಸಾಹಿತಿ ಭಾಗ್ಯಲಕ್ಷ್ಮಿ ಮಗ್ಗೆ ಅಭಿಪ್ರಾಯಪಟ್ಟರು.<br /> <br /> ಕನ್ನಡ ಯುವಜನ ಸಂಘವು ನಗರದಲ್ಲಿ ಗುರುವಾರ ಆಯೋಜಿಸಿದ್ದ `ಮಹಿಳಾ ವಿಮೋಚನೆ ಬಗ್ಗೆ ಒಂದು ಚಿಂತನೆ~ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮೀಸಲಾತಿ ಬಯಸುವ ಸ್ತ್ರೀಸಂಕುಲವು ಕುಟುಂಬ ಮತ್ತು ಉದ್ಯೋಗ ನಿರ್ವಹಣೆಯಲ್ಲಿ ಬದ್ಧತೆಯನ್ನು ಪ್ರದರ್ಶಿಸಬೇಕು. ಸಮಾಜದಲ್ಲಿನ ವಿಚ್ಛೇದಿತ, ಅವಿವಾಹಿತೆ ಹಾಗೂ ವಿಧವೆಯರ ಅಭಿವೃದ್ಧಿಗಾಗಿ ಮಹಿಳಾ ಸಂಘಟನೆಗಳು ಒಂದುಗೂಡಿ ಹೋರಾಡಬೇಕು~ ಎಂದರು.<br /> <br /> `ಹೆಣ್ಣಿಗೆ ಪೂಜ್ಯನೀಯ ಸ್ಥಾನ ನೀಡುವ ಬದಲು ಆಕೆಯನ್ನು ಗಂಡಿನ ಸರಿಸಮವೆಂದು ಪರಿಗಣಿಸಿ ಗೌರವಿಸಬೇಕಾಗಿರುವುದು ಸಮಾಜದ ಆದ್ಯ ಕರ್ತವ್ಯ. ಅಶಿಕ್ಷಿತ ಮಹಿಳೆಯರು ಮಾತ್ರವಲ್ಲ, ಶಿಕ್ಷಿತರು ಪ್ರಸ್ತುತ ಎದುರಿಸುತ್ತಿರುವ ಹೊಸ ಬಗೆಯ ದೌರ್ಜನ್ಯಗಳನ್ನು ಸಮರ್ಥವಾಗಿ ಎದುರಿಸುವ ಜಾಣ್ಮೆ ಬೆಳೆಸಿಕೊಳ್ಳಬೇಕು~ ಎಂದು ಸಲಹೆ ನೀಡಿದರು.<br /> <br /> `ಮಹಿಳಾ ಸಮಸ್ಯೆಗಳನ್ನು ದೇಶ, ಕಾಲ ಮತ್ತು ಪರಿಸ್ಥಿತಿಯನ್ನು ಗಮನಿಸಿ ವ್ಯಾಖ್ಯಾನಿಸಬೇಕೇ ಹೊರತು ಮೇಲ್ವರ್ಗದ ಮಹಿಳೆಯರನ್ನೇ ಗಮನದಲ್ಲಿಟ್ಟುಕೊಂಡು ಮಹಿಳೆಯರೆಲ್ಲರೂ ಸಬಲರಾಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಹೆಣ್ಣೆಂಬ ಕಾರಣಕ್ಕೆ ತಂದೆಯೇ ಮಗಳನ್ನು ಕೊಲ್ಲುವ ಪ್ರಕರಣಗಳಿಂದ ಮಹಿಳಾ ವಿಮೋಚನೆ ಮತ್ತು ಮಹಿಳಾ ಸಬಲೀಕರಣವೆಂಬುದು ಪ್ರಾಯೋಗಿಕವಾಗಿ ದೂರವೇ ಉಳಿದಿದೆ ಎಂಬುದು ವೇದ್ಯವಾಗುತ್ತದೆ ಎಂದು ಸಾಹಿತಿ ಭಾಗ್ಯಲಕ್ಷ್ಮಿ ಮಗ್ಗೆ ಅಭಿಪ್ರಾಯಪಟ್ಟರು.<br /> <br /> ಕನ್ನಡ ಯುವಜನ ಸಂಘವು ನಗರದಲ್ಲಿ ಗುರುವಾರ ಆಯೋಜಿಸಿದ್ದ `ಮಹಿಳಾ ವಿಮೋಚನೆ ಬಗ್ಗೆ ಒಂದು ಚಿಂತನೆ~ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಮೀಸಲಾತಿ ಬಯಸುವ ಸ್ತ್ರೀಸಂಕುಲವು ಕುಟುಂಬ ಮತ್ತು ಉದ್ಯೋಗ ನಿರ್ವಹಣೆಯಲ್ಲಿ ಬದ್ಧತೆಯನ್ನು ಪ್ರದರ್ಶಿಸಬೇಕು. ಸಮಾಜದಲ್ಲಿನ ವಿಚ್ಛೇದಿತ, ಅವಿವಾಹಿತೆ ಹಾಗೂ ವಿಧವೆಯರ ಅಭಿವೃದ್ಧಿಗಾಗಿ ಮಹಿಳಾ ಸಂಘಟನೆಗಳು ಒಂದುಗೂಡಿ ಹೋರಾಡಬೇಕು~ ಎಂದರು.<br /> <br /> `ಹೆಣ್ಣಿಗೆ ಪೂಜ್ಯನೀಯ ಸ್ಥಾನ ನೀಡುವ ಬದಲು ಆಕೆಯನ್ನು ಗಂಡಿನ ಸರಿಸಮವೆಂದು ಪರಿಗಣಿಸಿ ಗೌರವಿಸಬೇಕಾಗಿರುವುದು ಸಮಾಜದ ಆದ್ಯ ಕರ್ತವ್ಯ. ಅಶಿಕ್ಷಿತ ಮಹಿಳೆಯರು ಮಾತ್ರವಲ್ಲ, ಶಿಕ್ಷಿತರು ಪ್ರಸ್ತುತ ಎದುರಿಸುತ್ತಿರುವ ಹೊಸ ಬಗೆಯ ದೌರ್ಜನ್ಯಗಳನ್ನು ಸಮರ್ಥವಾಗಿ ಎದುರಿಸುವ ಜಾಣ್ಮೆ ಬೆಳೆಸಿಕೊಳ್ಳಬೇಕು~ ಎಂದು ಸಲಹೆ ನೀಡಿದರು.<br /> <br /> `ಮಹಿಳಾ ಸಮಸ್ಯೆಗಳನ್ನು ದೇಶ, ಕಾಲ ಮತ್ತು ಪರಿಸ್ಥಿತಿಯನ್ನು ಗಮನಿಸಿ ವ್ಯಾಖ್ಯಾನಿಸಬೇಕೇ ಹೊರತು ಮೇಲ್ವರ್ಗದ ಮಹಿಳೆಯರನ್ನೇ ಗಮನದಲ್ಲಿಟ್ಟುಕೊಂಡು ಮಹಿಳೆಯರೆಲ್ಲರೂ ಸಬಲರಾಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>