<p><strong>ಬೆಳಗಾವಿ: `</strong>ಮುಸ್ಲಿಂ ವೋಟ್ಬ್ಯಾಂಕ್ ರಾಜಕಾರಣ ನಡೆಸುತ್ತಿರುವ ನಾಯಕರಿಗೆ ಸಾಮಾಜಿಕ ಬಹಿಷ್ಕಾರ ಹಾಕಿರಿ~ ಎಂದು ವಿಶ್ವ ಹಿಂದೂ ಪರಿಷತ್ನ ಅಂತರರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ ತೊಗಾಡಿಯಾ ಸಲಹೆ ನೀಡಿದರು. <br /> ನಗರದ ಗುಜರಾತ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ `ಧರ್ಮ ರಕ್ಷಾ ನಿಧಿ ಕಾರ್ಯಕ್ರಮ~ದಲ್ಲಿ ಮುಖ್ಯ ಭಾಷಣ ಮಾಡಿದ ಅವರು, `ಮುಸ್ಲಿಂ ವೋಟ್ಬ್ಯಾಂಕ್ ರಾಜಕಾರಣಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿರುವ ವಿವಿಧ ಪಕ್ಷಗಳ ನಾಯಕರು ಹಿಂದೂ ವಿರೋಧಿ ಕಾನೂನು ರೂಪಿಸುತ್ತಿದ್ದಾರೆ.<br /> <br /> ಭಾರತದಲ್ಲಿ ಹಿಂದೂಗಳು ಉಳಿಯದಿದ್ದರೆ ನಮ್ಮ ಸಂಸ್ಕೃತಿ, ಜಾತಿಯೂ ಉಳಿಯುವುದಿಲ್ಲ. ಹೀಗಾಗಿ ವೋಟ್ಬ್ಯಾಂಕ್ ರಾಜಕಾರಣ ನಡೆಸುವ ನಾಯಕರು ನಮ್ಮ ಜಾತಿಯವರು, ಧರ್ಮದವರಾಗಿದ್ದರೂ ಸಾಮಾಜಿಕ ಬಹಿಷ್ಕಾರ ಹಾಕುವ ಮೂಲಕ ಹಿಂದೂ ಸಂಸ್ಕೃತಿಯನ್ನು ಉಳಿಸಬೇಕು~ ಎಂದು ಹೇಳಿದರು. <br /> <br /> `ಮುಸ್ಲಿಮರು ಜನಸಂಖ್ಯಾ ಧರ್ಮಯುದ್ಧ (ಪೊಪ್ಯುಲೇಶನ್ ಜಿಹಾದ್) ಆರಂಭಿಸಿದ್ದಾರೆ. ದೇಶದಲ್ಲಿ ಕ್ರಮೇಣ ತಮ್ಮ ಜನಸಂಖ್ಯೆ ಹೆಚ್ಚಸಿಕೊಳ್ಳುವ ಮೂಲಕ ಹೋರಾಟ ನಡೆಸದೇ ಭಾರತವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಯೋಜನೆ ರೂಪಿಸಿದ್ದಾರೆ. ಮಲೇಷಿಯಾದಲ್ಲೂ ಹೀಗೆ ಮಾಡಿ ಸಂವಿಧಾನವನ್ನು ಬದಲಾಯಿಸಿದ್ದಾರೆ~ ಎಂದು ತೊಗಾಡಿಯಾ ಆರೋಪಿಸಿದರು. <br /> <br /> `ಹಿಂದೂಗಳೆಲ್ಲ ಸಂಘಟನೆ ಹೊಂದುವ ಮೂಲಕ ಧ್ವನಿ ಎತ್ತಬೇಕು. ಸಂವಿಧಾನವನ್ನು ಬದಲಾಯಿಸಿ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಬೇಕು. ಹಿಂದೂಯೇತರ ಜನವರಿಗೆ ಅಧಿಕಾರದಲ್ಲಿ ಇರಲು ಅವಕಾಶ ಕಲ್ಪಿಸಬಾರದು~ ಎಂದ ತೊಗಾಡಿಯಾ, `ಸದ್ಯ ಜಾತ್ಯತೀತತೆ ಏಕ ಮುಖವಾಗಿರುವುದರಿಂದಲೇ ಹಿಂದೂಗಳಿಗೆ ಈ ದುಸ್ಥಿತಿ ಒದಗಿಬಂದಿದೆ~ ಎಂದರು. <br /> <br /> ಪ್ರತಿ ಹಳ್ಳಿಗಳಲ್ಲೂ ವಿಶ್ವ ಹಿಂದೂ ಪರಿಷತ್ ಸಂಘಟನೆಯನ್ನು ಬಲಪಡಿಸಬೇಕು. ಯಾವುದೋ ಒಂದು ಹಳ್ಳಿಯಲ್ಲಿ ಹಿಂದೂ ಮೇಲೆ ದಾಳಿ ನಡೆದರೆ, ದೇಶದ 6 ಲಕ್ಷ ಹಳ್ಳಿಗಳಲ್ಲಿ ಉತ್ತರ ನೀಡುವಂತಾಗಬೇಕು. ಧರ್ಮ ರಕ್ಷಣೆ ಮಾಡುತ್ತಿರುವ ವಿಎಚ್ಪಿಗೆ ಹಿಂದೂಗಳು ಉದಾರವಾಗಿ ದೇಣಿಗೆ ನೀಡಬೇಕು ಎಂದು ಮನವಿ ಮಾಡಿದರು. <br /> <br /> ಹಿಂದೂಗಳ ಸಮಸ್ಯೆಗಳಿಗೆ ಸ್ಪಂದಿಸಲು `ಹಿಂದೂ ಹೆಲ್ಪ್ಲೈನ್~ (ದೂ: 020- 66103300) ಆರಂಭಿಸಲಾಗಿದೆ. ದೇಶದಾದ್ಯಂತ 25 ಸಾವಿರ ವಿಎಚ್ಪಿ ಕಾರ್ಯಕರ್ತರು ಸೇವೆ ಸಲ್ಲಿಸುತ್ತಿದ್ದಾರೆ. ಮತಾಂತರಗೊಂಡಿದ್ದ 5 ಲಕ್ಷ ಕ್ರಿಶ್ಚನ್ನರು ಹಾಗೂ 1.5 ಲಕ್ಷ ಮುಸ್ಲಿಮರು ವಿಎಚ್ಪಿ ಸಂಘಟನೆಯ ಕಾರ್ಯದಿಂದ ಪ್ರೇರಣೆಗೊಂಡು ಪುನಃ ಹಿಂದೂ ಧರ್ಮಕ್ಕೆ ವಾಪಸ್ಸಾಗಿದ್ದಾರೆ ಎಂದು ಹೇಳಿದರು. <br /> <br /> ಎಸ್.ಎಂ. ಕುಲಕರ್ಣಿ ಮಾತನಾಡಿ, `ಹಿಂದೂ ಸಮಾಜ ಉಳಿದಾಗ ವಿಶ್ವವೇ ಉಳಿಯುತ್ತದೆ. ಹೀಗಾಗಿ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಹಾಗೂ ಧರ್ಮ ರಕ್ಷಣೆ ಮಾಡಲು ಕಾಣಿಕೆ ನೀಡಬೇಕು~ ಎಂದು ಕೋರಿದರು. <br /> ಸಮಾರಂಭದ ಅಧ್ಯಕ್ಷತೆಯನ್ನು ಉದ್ಯಮಿ ಸುರೇಶ ಹುಂದರೆ ವಹಿಸಿದ್ದರು. ವಿಎಚ್ಪಿ ನಗರ ಘಟಕದ ಅಧ್ಯಕ್ಷ ವಿಠ್ಠಲ ನಾರ್ವೆಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಜನಿ ಪ್ರಾರ್ಥನೆ ಗೀತೆ ಹಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ: `</strong>ಮುಸ್ಲಿಂ ವೋಟ್ಬ್ಯಾಂಕ್ ರಾಜಕಾರಣ ನಡೆಸುತ್ತಿರುವ ನಾಯಕರಿಗೆ ಸಾಮಾಜಿಕ ಬಹಿಷ್ಕಾರ ಹಾಕಿರಿ~ ಎಂದು ವಿಶ್ವ ಹಿಂದೂ ಪರಿಷತ್ನ ಅಂತರರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ ತೊಗಾಡಿಯಾ ಸಲಹೆ ನೀಡಿದರು. <br /> ನಗರದ ಗುಜರಾತ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ `ಧರ್ಮ ರಕ್ಷಾ ನಿಧಿ ಕಾರ್ಯಕ್ರಮ~ದಲ್ಲಿ ಮುಖ್ಯ ಭಾಷಣ ಮಾಡಿದ ಅವರು, `ಮುಸ್ಲಿಂ ವೋಟ್ಬ್ಯಾಂಕ್ ರಾಜಕಾರಣಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿರುವ ವಿವಿಧ ಪಕ್ಷಗಳ ನಾಯಕರು ಹಿಂದೂ ವಿರೋಧಿ ಕಾನೂನು ರೂಪಿಸುತ್ತಿದ್ದಾರೆ.<br /> <br /> ಭಾರತದಲ್ಲಿ ಹಿಂದೂಗಳು ಉಳಿಯದಿದ್ದರೆ ನಮ್ಮ ಸಂಸ್ಕೃತಿ, ಜಾತಿಯೂ ಉಳಿಯುವುದಿಲ್ಲ. ಹೀಗಾಗಿ ವೋಟ್ಬ್ಯಾಂಕ್ ರಾಜಕಾರಣ ನಡೆಸುವ ನಾಯಕರು ನಮ್ಮ ಜಾತಿಯವರು, ಧರ್ಮದವರಾಗಿದ್ದರೂ ಸಾಮಾಜಿಕ ಬಹಿಷ್ಕಾರ ಹಾಕುವ ಮೂಲಕ ಹಿಂದೂ ಸಂಸ್ಕೃತಿಯನ್ನು ಉಳಿಸಬೇಕು~ ಎಂದು ಹೇಳಿದರು. <br /> <br /> `ಮುಸ್ಲಿಮರು ಜನಸಂಖ್ಯಾ ಧರ್ಮಯುದ್ಧ (ಪೊಪ್ಯುಲೇಶನ್ ಜಿಹಾದ್) ಆರಂಭಿಸಿದ್ದಾರೆ. ದೇಶದಲ್ಲಿ ಕ್ರಮೇಣ ತಮ್ಮ ಜನಸಂಖ್ಯೆ ಹೆಚ್ಚಸಿಕೊಳ್ಳುವ ಮೂಲಕ ಹೋರಾಟ ನಡೆಸದೇ ಭಾರತವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳಲು ಯೋಜನೆ ರೂಪಿಸಿದ್ದಾರೆ. ಮಲೇಷಿಯಾದಲ್ಲೂ ಹೀಗೆ ಮಾಡಿ ಸಂವಿಧಾನವನ್ನು ಬದಲಾಯಿಸಿದ್ದಾರೆ~ ಎಂದು ತೊಗಾಡಿಯಾ ಆರೋಪಿಸಿದರು. <br /> <br /> `ಹಿಂದೂಗಳೆಲ್ಲ ಸಂಘಟನೆ ಹೊಂದುವ ಮೂಲಕ ಧ್ವನಿ ಎತ್ತಬೇಕು. ಸಂವಿಧಾನವನ್ನು ಬದಲಾಯಿಸಿ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಬೇಕು. ಹಿಂದೂಯೇತರ ಜನವರಿಗೆ ಅಧಿಕಾರದಲ್ಲಿ ಇರಲು ಅವಕಾಶ ಕಲ್ಪಿಸಬಾರದು~ ಎಂದ ತೊಗಾಡಿಯಾ, `ಸದ್ಯ ಜಾತ್ಯತೀತತೆ ಏಕ ಮುಖವಾಗಿರುವುದರಿಂದಲೇ ಹಿಂದೂಗಳಿಗೆ ಈ ದುಸ್ಥಿತಿ ಒದಗಿಬಂದಿದೆ~ ಎಂದರು. <br /> <br /> ಪ್ರತಿ ಹಳ್ಳಿಗಳಲ್ಲೂ ವಿಶ್ವ ಹಿಂದೂ ಪರಿಷತ್ ಸಂಘಟನೆಯನ್ನು ಬಲಪಡಿಸಬೇಕು. ಯಾವುದೋ ಒಂದು ಹಳ್ಳಿಯಲ್ಲಿ ಹಿಂದೂ ಮೇಲೆ ದಾಳಿ ನಡೆದರೆ, ದೇಶದ 6 ಲಕ್ಷ ಹಳ್ಳಿಗಳಲ್ಲಿ ಉತ್ತರ ನೀಡುವಂತಾಗಬೇಕು. ಧರ್ಮ ರಕ್ಷಣೆ ಮಾಡುತ್ತಿರುವ ವಿಎಚ್ಪಿಗೆ ಹಿಂದೂಗಳು ಉದಾರವಾಗಿ ದೇಣಿಗೆ ನೀಡಬೇಕು ಎಂದು ಮನವಿ ಮಾಡಿದರು. <br /> <br /> ಹಿಂದೂಗಳ ಸಮಸ್ಯೆಗಳಿಗೆ ಸ್ಪಂದಿಸಲು `ಹಿಂದೂ ಹೆಲ್ಪ್ಲೈನ್~ (ದೂ: 020- 66103300) ಆರಂಭಿಸಲಾಗಿದೆ. ದೇಶದಾದ್ಯಂತ 25 ಸಾವಿರ ವಿಎಚ್ಪಿ ಕಾರ್ಯಕರ್ತರು ಸೇವೆ ಸಲ್ಲಿಸುತ್ತಿದ್ದಾರೆ. ಮತಾಂತರಗೊಂಡಿದ್ದ 5 ಲಕ್ಷ ಕ್ರಿಶ್ಚನ್ನರು ಹಾಗೂ 1.5 ಲಕ್ಷ ಮುಸ್ಲಿಮರು ವಿಎಚ್ಪಿ ಸಂಘಟನೆಯ ಕಾರ್ಯದಿಂದ ಪ್ರೇರಣೆಗೊಂಡು ಪುನಃ ಹಿಂದೂ ಧರ್ಮಕ್ಕೆ ವಾಪಸ್ಸಾಗಿದ್ದಾರೆ ಎಂದು ಹೇಳಿದರು. <br /> <br /> ಎಸ್.ಎಂ. ಕುಲಕರ್ಣಿ ಮಾತನಾಡಿ, `ಹಿಂದೂ ಸಮಾಜ ಉಳಿದಾಗ ವಿಶ್ವವೇ ಉಳಿಯುತ್ತದೆ. ಹೀಗಾಗಿ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ಹಾಗೂ ಧರ್ಮ ರಕ್ಷಣೆ ಮಾಡಲು ಕಾಣಿಕೆ ನೀಡಬೇಕು~ ಎಂದು ಕೋರಿದರು. <br /> ಸಮಾರಂಭದ ಅಧ್ಯಕ್ಷತೆಯನ್ನು ಉದ್ಯಮಿ ಸುರೇಶ ಹುಂದರೆ ವಹಿಸಿದ್ದರು. ವಿಎಚ್ಪಿ ನಗರ ಘಟಕದ ಅಧ್ಯಕ್ಷ ವಿಠ್ಠಲ ನಾರ್ವೆಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಜನಿ ಪ್ರಾರ್ಥನೆ ಗೀತೆ ಹಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>