<p><strong>ಚಿಕ್ಕಬಳ್ಳಾಪುರ: </strong>ಕಳೆದ ಎರಡು ವಾರಗಳಿಂದ ಜಿಲ್ಲೆಯ ಹವಾಮಾನದಲ್ಲಿ ಬದಲಾವಣೆಯಾಗಿದ್ದು, ಕಂಗಾಲಾಗಿದ್ದ ರೈತರ ಮೊಗದಲ್ಲಿ ಈಗ ಜೀವ ಕಳೆ ಚಿಗುರುತೊಡಗಿದೆ. ಸುಡುತ್ತಿದ್ದ ಸೂರ್ಯನ ಪ್ರಕೋಪ ನಿತ್ಯ ಅನುಭವಿಸುತ್ತಿದ್ದ ರೈತರ ಬಾಳು ಹಸನಾಗುವ ಲಕ್ಷಣ ಕಾಣತೊಡಗಿದೆ. <br /> <br /> `ನಮ್ಮೂರಿಗೆ ಬರಾಗಲ ಬಂದಿದೆ. ನಮಗೆ ಸಹಾಯ ಮಾಡಿ~ ಎಂದು ಕೆಲ ದಿನಗಳ ಹಿಂದೆ ಪ್ರತಿಭಟನೆ ಮಾಡಿದ್ದ ಅನ್ನದಾತರು ಈಗ ಮತ್ತೆ ಕೃಷಿ ಚಟುವಟಿಕೆಗಳತ್ತ ಮುಖ ಮಾಡಿದ್ದಾರೆ.<br /> <br /> ಇಷ್ಟೆಲ್ಲ ಬದಲಾವಣೆಗೆ ಕಾರಣವಾಗಿರುವುದು, ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆ. <br /> `ದೀಪಾವಳಿಯಲ್ಲಿ ದೀಪ ಹಿಡಿದುಕೊಂಡು ಪ್ರಾರ್ಥಿಸಿದರೂ ಮಳೆ ಬರಲ್ಲ~ ಎಂದು ನಿರಾಶೆಯಿಂದ ಮತನಾಡುತ್ತಿದ್ದ ಕೃಷಿಕರು ಈಗ ಆಶಾಜೀವಿಗಳಾಗಿದ್ದಾರೆ.</p>.<p>ಮಳೆಯಿಲ್ಲದೇ ಅಲ್ಪಸ್ವಲ್ಪ ಬೆಳೆ ನಷ್ಟವಾಗಿರಬಹುದು, ಆದರೆ ಈಗ ವರುಣ ಕೃಪೆ ತೋರಿರುವುದು ಮತ್ತೆ ಜೀವನೋತ್ಸಾಹ ಮೂಡಿಸಿದೆ. ಹೊಲದಲ್ಲಿ ತೆನೆ ಬಂದು, ಕಾಳು ಕಟ್ಟಿದರೆ ಅದಕ್ಕಿಂತ ಸಂತೋಷ ಇನ್ನೇನೂ ಬೇಕು ಎಂದು ರೈತರು ಹೇಳುತ್ತಿದ್ದಾರೆ.<br /> <br /> ಕಳೆದ ಕೆಲ ದಿನಗಳಿಂದ ಮಳೆ ಬಾರದಿರುವುದು ಕಂಡು ಕಂಗಾಲಾಗಿದ್ದ ರೈತರು ಜಿಲ್ಲಾ ಕೇಂದ್ರ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ಕೈಗೊಂಡು ಇಡೀ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಪಟ್ಟು ಹಿಡಿದಿದ್ದರು.</p>.<p>ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರವು ಚಿಕ್ಕಬಳ್ಳಾಪುರ, ಚಿಂತಾಮಣಿ ಮತ್ತು ಗೌರಿಬಿದನೂರು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದಾಗ, `ಬಾಗೇಪಲ್ಲಿ, ಗುಡಿಬಂಡೆ ಮತ್ತು ಶಿಡ್ಲಘಟ್ಟ ತಾಲ್ಲೂಕುಗಳನ್ನು ಸಹ ಬರಪೀಡಿತವೆಂದು ಘೋಷಿಸಬೇಕು~ ಎಂದು ಒತ್ತಾಯಿಸಲಾಗಿತ್ತು.<br /> <br /> ಪ್ರತಿಭಟನೆ, ನಿರಾಶೆ, ವಿದ್ಯುತ್ ಸಮಸ್ಯೆ, ರಸಗೊಬ್ಬರಗಳ ಬೆಲೆ ಏರಿಕೆ, ಬೆಳೆಗಳ ಒಣಗುವಿಕೆ ಮುಂತಾದವುಗಳ ನಡುವೆಯೇ ಮಳೆಯಾಗುತ್ತಿರುವುದು ಕೃಷಿಕರಲ್ಲಿ ಕೊಂಚ ಸಂತಸ ಮೂಡಿಸಿದೆ. `ನಾವು ಬೆಳೆದಿದ್ದ ದ್ರಾಕ್ಷಿ, ರಾಗಿ ಬೆಳೆಗಳು ಮುಂತಾದವು ಭಾಗಶಃ ಒಣಗಿದ್ದವು. ಆದರೆ ಕೆಲ ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ಹೊಲದಲ್ಲಿ ತೆನೆ ಬರತೊಡಗಿದೆ.</p>.<p>ಇನ್ನೂ ಮೂರು ದಿನ ಇದೇ ರೀತಿಯಲ್ಲಿ ಮಳೆಯಾದರೆ, ಜಮೀನು ತೇವಗೊಳ್ಳುವುದಲ್ಲದೇ ಕಾಳು ಕಟ್ಟಲು ಕೂಡ ಸಾಧ್ಯವಾಗುತ್ತದೆ~ ಎಂದು ರೈತರು ಹೇಳುತ್ತಾರೆ.<br /> <br /> `ದೀಪಾವಳಿ ಸಂದರ್ಭದಲ್ಲಿ ನಾವು ಎಂದಿಗೂ ಮಳೆಯನ್ನು ನಿರೀಕ್ಷಿಸಿರಲಿಲ್ಲ. ವಿದ್ಯುತ್ ಪೂರೈಕೆ ಸಮರ್ಪಕವಾಗಿಲ್ಲದ ಕಾರಣ ನಿರಾಶೆಗೊಂಡಿದ್ದೆವು. ಒಂದರ್ಥದಲ್ಲಿ ಕೃಷಿ ಚಟುವಟಿಕೆಯನ್ನು ಸ್ಥಗಿತಗೊಳಿಸಿದ್ದೆವು. <br /> <br /> ಎರಡು ವಾರಗಳಿಂದ ಮಳೆ ಸುರಿಯುವ ಸರಿಯಾದ ಸಮಯಕ್ಕೆ ರಸಗೊಬ್ಬರ ಪೂರೈಕೆಯಾಗುತ್ತಿರುವುದು ಸಂತಸ ತಂದಿತು. ರಸಗೊಬ್ಬರಗಳ ಬೆಲೆ ಏರಿಕೆಯಾಗಿದ್ದರೂ ಕೊಳ್ಳದೇ ಬೇರೆ ಮಾರ್ಗವಿಲ್ಲ. ಮಳೆರಾಯ ಇದೇ ರೀತಿಯಲ್ಲಿ ಇನ್ನೂ ಕೆಲವು ದಿನ ಕೃಪೆ ತೋರಿದರೆ, ಕೃಷಿ ಚಟುವಟಿಕೆಗೆ ಸಹಕಾರಿಯಾಗುತ್ತದೆ~ ಎಂದು ರೈತ ಮುನಿರಾಜು ತಿಳಿಸಿದರು.<br /> <br /> ಚಿಕ್ಕಬಳ್ಳಾಪುರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಬುಧವಾರವೂ ಸಹ ಮಳೆಯಾಗಿದ್ದು, ನಗರಪ್ರದೇಶದ ನಿವಾಸಿಗಳು ಸ್ವಲ್ಪ ತೊಂದರೆ ಎದುರಿಸಬೇಕಾಯಿತು. ಎಂ.ಜಿ.ರಸ್ತೆ, ಬಿ.ಬಿ.ರಸ್ತೆ, ಹಳೆಯ ಬಸ್ ನಿಲ್ದಾಣ, ಬಜಾರ್ ರಸ್ತೆ, ಸಂತೆಮಾರುಕಟ್ಟೆ ಬೀದಿ ಮುಂತಾದ ಕಡೆ ರಸ್ತೆಯಲ್ಲಿ ನೀರು ನಿಂತ ಕಾರಣ ಪಾದಚಾರಿಗಳು ನಡೆದಾಡಲು ಪ್ರಯಾಸಪಡಬೇಕಾಯಿತು.</p>.<p>ಹೊಸ ಬಸ್ ನಿಲ್ದಾಣ ಬಡಾವಣೆ, ಕೆಳಗಿನತೋಟ ಬಡಾವಣೆ ಸೇರಿದಂತೆ ತಗ್ಗುಪ್ರದೇಶಗಳಲ್ಲಿರುವ ಇತರ ಬಡಾವಣೆಗಳಲ್ಲಿನ ಮನೆಗಳಲ್ಲಿ ಮಳೆ ನೀರು ನುಗ್ಗಿದ ಕಾರಣ ನಿವಾಸಿಗಳು ಸಂಕಷ್ಟ ಎದುರಿಸಬೇಕಾಯಿತು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ: </strong>ಕಳೆದ ಎರಡು ವಾರಗಳಿಂದ ಜಿಲ್ಲೆಯ ಹವಾಮಾನದಲ್ಲಿ ಬದಲಾವಣೆಯಾಗಿದ್ದು, ಕಂಗಾಲಾಗಿದ್ದ ರೈತರ ಮೊಗದಲ್ಲಿ ಈಗ ಜೀವ ಕಳೆ ಚಿಗುರುತೊಡಗಿದೆ. ಸುಡುತ್ತಿದ್ದ ಸೂರ್ಯನ ಪ್ರಕೋಪ ನಿತ್ಯ ಅನುಭವಿಸುತ್ತಿದ್ದ ರೈತರ ಬಾಳು ಹಸನಾಗುವ ಲಕ್ಷಣ ಕಾಣತೊಡಗಿದೆ. <br /> <br /> `ನಮ್ಮೂರಿಗೆ ಬರಾಗಲ ಬಂದಿದೆ. ನಮಗೆ ಸಹಾಯ ಮಾಡಿ~ ಎಂದು ಕೆಲ ದಿನಗಳ ಹಿಂದೆ ಪ್ರತಿಭಟನೆ ಮಾಡಿದ್ದ ಅನ್ನದಾತರು ಈಗ ಮತ್ತೆ ಕೃಷಿ ಚಟುವಟಿಕೆಗಳತ್ತ ಮುಖ ಮಾಡಿದ್ದಾರೆ.<br /> <br /> ಇಷ್ಟೆಲ್ಲ ಬದಲಾವಣೆಗೆ ಕಾರಣವಾಗಿರುವುದು, ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆ. <br /> `ದೀಪಾವಳಿಯಲ್ಲಿ ದೀಪ ಹಿಡಿದುಕೊಂಡು ಪ್ರಾರ್ಥಿಸಿದರೂ ಮಳೆ ಬರಲ್ಲ~ ಎಂದು ನಿರಾಶೆಯಿಂದ ಮತನಾಡುತ್ತಿದ್ದ ಕೃಷಿಕರು ಈಗ ಆಶಾಜೀವಿಗಳಾಗಿದ್ದಾರೆ.</p>.<p>ಮಳೆಯಿಲ್ಲದೇ ಅಲ್ಪಸ್ವಲ್ಪ ಬೆಳೆ ನಷ್ಟವಾಗಿರಬಹುದು, ಆದರೆ ಈಗ ವರುಣ ಕೃಪೆ ತೋರಿರುವುದು ಮತ್ತೆ ಜೀವನೋತ್ಸಾಹ ಮೂಡಿಸಿದೆ. ಹೊಲದಲ್ಲಿ ತೆನೆ ಬಂದು, ಕಾಳು ಕಟ್ಟಿದರೆ ಅದಕ್ಕಿಂತ ಸಂತೋಷ ಇನ್ನೇನೂ ಬೇಕು ಎಂದು ರೈತರು ಹೇಳುತ್ತಿದ್ದಾರೆ.<br /> <br /> ಕಳೆದ ಕೆಲ ದಿನಗಳಿಂದ ಮಳೆ ಬಾರದಿರುವುದು ಕಂಡು ಕಂಗಾಲಾಗಿದ್ದ ರೈತರು ಜಿಲ್ಲಾ ಕೇಂದ್ರ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ಕೈಗೊಂಡು ಇಡೀ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಬೇಕು ಎಂದು ಪಟ್ಟು ಹಿಡಿದಿದ್ದರು.</p>.<p>ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರವು ಚಿಕ್ಕಬಳ್ಳಾಪುರ, ಚಿಂತಾಮಣಿ ಮತ್ತು ಗೌರಿಬಿದನೂರು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದಾಗ, `ಬಾಗೇಪಲ್ಲಿ, ಗುಡಿಬಂಡೆ ಮತ್ತು ಶಿಡ್ಲಘಟ್ಟ ತಾಲ್ಲೂಕುಗಳನ್ನು ಸಹ ಬರಪೀಡಿತವೆಂದು ಘೋಷಿಸಬೇಕು~ ಎಂದು ಒತ್ತಾಯಿಸಲಾಗಿತ್ತು.<br /> <br /> ಪ್ರತಿಭಟನೆ, ನಿರಾಶೆ, ವಿದ್ಯುತ್ ಸಮಸ್ಯೆ, ರಸಗೊಬ್ಬರಗಳ ಬೆಲೆ ಏರಿಕೆ, ಬೆಳೆಗಳ ಒಣಗುವಿಕೆ ಮುಂತಾದವುಗಳ ನಡುವೆಯೇ ಮಳೆಯಾಗುತ್ತಿರುವುದು ಕೃಷಿಕರಲ್ಲಿ ಕೊಂಚ ಸಂತಸ ಮೂಡಿಸಿದೆ. `ನಾವು ಬೆಳೆದಿದ್ದ ದ್ರಾಕ್ಷಿ, ರಾಗಿ ಬೆಳೆಗಳು ಮುಂತಾದವು ಭಾಗಶಃ ಒಣಗಿದ್ದವು. ಆದರೆ ಕೆಲ ದಿನಗಳಿಂದ ಮಳೆ ಸುರಿಯುತ್ತಿರುವುದರಿಂದ ಹೊಲದಲ್ಲಿ ತೆನೆ ಬರತೊಡಗಿದೆ.</p>.<p>ಇನ್ನೂ ಮೂರು ದಿನ ಇದೇ ರೀತಿಯಲ್ಲಿ ಮಳೆಯಾದರೆ, ಜಮೀನು ತೇವಗೊಳ್ಳುವುದಲ್ಲದೇ ಕಾಳು ಕಟ್ಟಲು ಕೂಡ ಸಾಧ್ಯವಾಗುತ್ತದೆ~ ಎಂದು ರೈತರು ಹೇಳುತ್ತಾರೆ.<br /> <br /> `ದೀಪಾವಳಿ ಸಂದರ್ಭದಲ್ಲಿ ನಾವು ಎಂದಿಗೂ ಮಳೆಯನ್ನು ನಿರೀಕ್ಷಿಸಿರಲಿಲ್ಲ. ವಿದ್ಯುತ್ ಪೂರೈಕೆ ಸಮರ್ಪಕವಾಗಿಲ್ಲದ ಕಾರಣ ನಿರಾಶೆಗೊಂಡಿದ್ದೆವು. ಒಂದರ್ಥದಲ್ಲಿ ಕೃಷಿ ಚಟುವಟಿಕೆಯನ್ನು ಸ್ಥಗಿತಗೊಳಿಸಿದ್ದೆವು. <br /> <br /> ಎರಡು ವಾರಗಳಿಂದ ಮಳೆ ಸುರಿಯುವ ಸರಿಯಾದ ಸಮಯಕ್ಕೆ ರಸಗೊಬ್ಬರ ಪೂರೈಕೆಯಾಗುತ್ತಿರುವುದು ಸಂತಸ ತಂದಿತು. ರಸಗೊಬ್ಬರಗಳ ಬೆಲೆ ಏರಿಕೆಯಾಗಿದ್ದರೂ ಕೊಳ್ಳದೇ ಬೇರೆ ಮಾರ್ಗವಿಲ್ಲ. ಮಳೆರಾಯ ಇದೇ ರೀತಿಯಲ್ಲಿ ಇನ್ನೂ ಕೆಲವು ದಿನ ಕೃಪೆ ತೋರಿದರೆ, ಕೃಷಿ ಚಟುವಟಿಕೆಗೆ ಸಹಕಾರಿಯಾಗುತ್ತದೆ~ ಎಂದು ರೈತ ಮುನಿರಾಜು ತಿಳಿಸಿದರು.<br /> <br /> ಚಿಕ್ಕಬಳ್ಳಾಪುರ ಮತ್ತು ಸುತ್ತಮುತ್ತಲ ಪ್ರದೇಶದಲ್ಲಿ ಬುಧವಾರವೂ ಸಹ ಮಳೆಯಾಗಿದ್ದು, ನಗರಪ್ರದೇಶದ ನಿವಾಸಿಗಳು ಸ್ವಲ್ಪ ತೊಂದರೆ ಎದುರಿಸಬೇಕಾಯಿತು. ಎಂ.ಜಿ.ರಸ್ತೆ, ಬಿ.ಬಿ.ರಸ್ತೆ, ಹಳೆಯ ಬಸ್ ನಿಲ್ದಾಣ, ಬಜಾರ್ ರಸ್ತೆ, ಸಂತೆಮಾರುಕಟ್ಟೆ ಬೀದಿ ಮುಂತಾದ ಕಡೆ ರಸ್ತೆಯಲ್ಲಿ ನೀರು ನಿಂತ ಕಾರಣ ಪಾದಚಾರಿಗಳು ನಡೆದಾಡಲು ಪ್ರಯಾಸಪಡಬೇಕಾಯಿತು.</p>.<p>ಹೊಸ ಬಸ್ ನಿಲ್ದಾಣ ಬಡಾವಣೆ, ಕೆಳಗಿನತೋಟ ಬಡಾವಣೆ ಸೇರಿದಂತೆ ತಗ್ಗುಪ್ರದೇಶಗಳಲ್ಲಿರುವ ಇತರ ಬಡಾವಣೆಗಳಲ್ಲಿನ ಮನೆಗಳಲ್ಲಿ ಮಳೆ ನೀರು ನುಗ್ಗಿದ ಕಾರಣ ನಿವಾಸಿಗಳು ಸಂಕಷ್ಟ ಎದುರಿಸಬೇಕಾಯಿತು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>