<p><strong>ರಾಯಪುರ (ಪಿಟಿಐ):</strong> ಛತ್ತೀಸಗಡದ ಧಾಂತಾರಿ ಜಿಲ್ಲೆಯಲ್ಲಿ ಕೇಂದ್ರ ಮೀಸಲು ಪಡೆಯವರು ನಕ್ಸಲರ ಶೋಧನೆ ನಡೆಸುತ್ತಿದ್ದಾಗ ನಡೆದ ಗುಂಡಿನ ಚಕಮಕಿಯಲ್ಲಿ ಯೋಧರೊಬ್ಬರು ಮೃತಪಟ್ಟ ಘಟನೆ ಶನಿವಾರ ನಡೆದಿದೆ.<br /> <br /> ಎಸ್.ಕೆ.ದಾಸ್ ಮೃತರು. ಇವರು ಸಿಆರ್ಪಿಎಫ್ 211ನೇ ಬೆಟಾಲಿಯನ್ನಲ್ಲಿ ಸಹಾಯಕ ಕಮಾಂಡರ್ ಆಗಿದ್ದರು. ಇಲ್ಲಿನ ಖಲ್ಲಾರಿ ಗ್ರಾಮದ ಬಳಿಯ ಅರಣ್ಯದಲ್ಲಿ ಈ ಗುಂಡಿನ ಚಕಮಕಿ ನಡೆದಿದೆ. ನಂತರ ನಕ್ಸಲರೆಲ್ಲರು ಪರಾರಿಯಾದರು ಎಂದು ಅಧಿಕಾರಿಗಳು ತಿಳಿಸಿದರು.<br /> <br /> <strong>ಭದ್ರತಾ ಅಧಿಕಾರಿ ಸಾವು</strong><br /> ಛತ್ತೀಸಗಡದ ಬಸ್ತರ್ ವಲಯದಲ್ಲಿ ಕಳೆದ ವಾರ ಮಾವೊವಾದಿಗಳು ನಡೆಸಿದ ದಾಳಿಯಲ್ಲಿ ಗಾಯಗೊಂಡಿದ್ದ ಭದ್ರತಾ ಅಧಿಕಾರಿ ಇಲ್ಲಿನ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದಾರೆ. ಇದರಿಂದ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 28ಕ್ಕೆ ಏರಿದೆ.<br /> <br /> ಸಿಯಾರಾಂ ಸಿಂಗ್ ಮೃತರು. ಇವರು ದಾಳಿಯಲ್ಲಿ ಹತ್ಯೆಯಾದ ಕಾಂಗ್ರೆಸ್ನ ಮುಖಂಡ ಮಹೇಂದ್ರ ಕರ್ಮ ಅವರ ಭದ್ರತಾ ಅಧಿಕಾರಿಯಾಗಿದ್ದರು. ಬಿಹಾರ ಮೂಲದ ಸಿಯಾರಾಂ ಅರೆಸೇನಾ ಪಡೆಯ ಯೋಧರಾಗಿದ್ದರು.<br /> <br /> <strong>ಶುಕ್ಲಾ ಆರೋಗ್ಯ ಸ್ಥಿರ</strong><br /> <strong>ಗುಡಗಾಂವ್ (ಐಎಎನ್ಎಸ್):</strong>`ಮಾವೊವಾದಿಗಳ ದಾಳಿಯಿಂದ ಗಾಯಗೊಂಡ ಕಾಂಗ್ರೆಸ್ ಮುಖಂಡ ವಿ.ಸಿ. ಶುಕ್ಲಾ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆಯಾದರೂ, ಅವರು ಇನ್ನೂ ವಿಷಮಾವಸ್ಥೆಯಲ್ಲೇ ಇದ್ದಾರೆ' ಎಂದು ವೈದ್ಯರು ತಿಳಿಸಿದ್ದಾರೆ.</p>.<p><strong>ಯೋಧ ಆತ್ಮಹತ್ಯೆ<br /> ಮಲ್ಕಾನ್ಗಿರಿ, ಒಡಿಶಾ (ಪಿಟಿಐ):</strong> ಒಡಿಶಾದ ನಕ್ಸಲ್ ನಿಗ್ರಹ ಪಡೆಯ ವಿಶೇಷ ಕಾರ್ಯಾಚರಣೆ ತಂಡದ (ಎಸ್ಒಜಿ) ಯೋಧರೊಬ್ಬರು ಭದ್ರತಾ ಶಿಬಿರದಲ್ಲಿ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.<br /> <br /> ಕಂಧಮಾಲ್ ಜಿಲ್ಲೆಯ ಸೂರ್ಯನಾರಾಯಣ್ ಸಾಹು (27) ಮೃತರು. ಕಾಳಿಮೇಲಾ ಪ್ರದೇಶದ ಪೊಟೆರು ಶಿಬಿರದಲ್ಲಿದ್ದ ಸಾಹು ತಮ್ಮ ಸೇವಾ ಬಂದೂಕಿನಿಂದ ಗುಂಡು ಹಾರಿಸಿಕೊಂಡಿದ್ದಾರೆ.ಆತ್ಮಹತ್ಯೆಗೆ ಕಾರಣ ತಿಳಿದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಪುರ (ಪಿಟಿಐ):</strong> ಛತ್ತೀಸಗಡದ ಧಾಂತಾರಿ ಜಿಲ್ಲೆಯಲ್ಲಿ ಕೇಂದ್ರ ಮೀಸಲು ಪಡೆಯವರು ನಕ್ಸಲರ ಶೋಧನೆ ನಡೆಸುತ್ತಿದ್ದಾಗ ನಡೆದ ಗುಂಡಿನ ಚಕಮಕಿಯಲ್ಲಿ ಯೋಧರೊಬ್ಬರು ಮೃತಪಟ್ಟ ಘಟನೆ ಶನಿವಾರ ನಡೆದಿದೆ.<br /> <br /> ಎಸ್.ಕೆ.ದಾಸ್ ಮೃತರು. ಇವರು ಸಿಆರ್ಪಿಎಫ್ 211ನೇ ಬೆಟಾಲಿಯನ್ನಲ್ಲಿ ಸಹಾಯಕ ಕಮಾಂಡರ್ ಆಗಿದ್ದರು. ಇಲ್ಲಿನ ಖಲ್ಲಾರಿ ಗ್ರಾಮದ ಬಳಿಯ ಅರಣ್ಯದಲ್ಲಿ ಈ ಗುಂಡಿನ ಚಕಮಕಿ ನಡೆದಿದೆ. ನಂತರ ನಕ್ಸಲರೆಲ್ಲರು ಪರಾರಿಯಾದರು ಎಂದು ಅಧಿಕಾರಿಗಳು ತಿಳಿಸಿದರು.<br /> <br /> <strong>ಭದ್ರತಾ ಅಧಿಕಾರಿ ಸಾವು</strong><br /> ಛತ್ತೀಸಗಡದ ಬಸ್ತರ್ ವಲಯದಲ್ಲಿ ಕಳೆದ ವಾರ ಮಾವೊವಾದಿಗಳು ನಡೆಸಿದ ದಾಳಿಯಲ್ಲಿ ಗಾಯಗೊಂಡಿದ್ದ ಭದ್ರತಾ ಅಧಿಕಾರಿ ಇಲ್ಲಿನ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದಾರೆ. ಇದರಿಂದ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 28ಕ್ಕೆ ಏರಿದೆ.<br /> <br /> ಸಿಯಾರಾಂ ಸಿಂಗ್ ಮೃತರು. ಇವರು ದಾಳಿಯಲ್ಲಿ ಹತ್ಯೆಯಾದ ಕಾಂಗ್ರೆಸ್ನ ಮುಖಂಡ ಮಹೇಂದ್ರ ಕರ್ಮ ಅವರ ಭದ್ರತಾ ಅಧಿಕಾರಿಯಾಗಿದ್ದರು. ಬಿಹಾರ ಮೂಲದ ಸಿಯಾರಾಂ ಅರೆಸೇನಾ ಪಡೆಯ ಯೋಧರಾಗಿದ್ದರು.<br /> <br /> <strong>ಶುಕ್ಲಾ ಆರೋಗ್ಯ ಸ್ಥಿರ</strong><br /> <strong>ಗುಡಗಾಂವ್ (ಐಎಎನ್ಎಸ್):</strong>`ಮಾವೊವಾದಿಗಳ ದಾಳಿಯಿಂದ ಗಾಯಗೊಂಡ ಕಾಂಗ್ರೆಸ್ ಮುಖಂಡ ವಿ.ಸಿ. ಶುಕ್ಲಾ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆಯಾದರೂ, ಅವರು ಇನ್ನೂ ವಿಷಮಾವಸ್ಥೆಯಲ್ಲೇ ಇದ್ದಾರೆ' ಎಂದು ವೈದ್ಯರು ತಿಳಿಸಿದ್ದಾರೆ.</p>.<p><strong>ಯೋಧ ಆತ್ಮಹತ್ಯೆ<br /> ಮಲ್ಕಾನ್ಗಿರಿ, ಒಡಿಶಾ (ಪಿಟಿಐ):</strong> ಒಡಿಶಾದ ನಕ್ಸಲ್ ನಿಗ್ರಹ ಪಡೆಯ ವಿಶೇಷ ಕಾರ್ಯಾಚರಣೆ ತಂಡದ (ಎಸ್ಒಜಿ) ಯೋಧರೊಬ್ಬರು ಭದ್ರತಾ ಶಿಬಿರದಲ್ಲಿ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.<br /> <br /> ಕಂಧಮಾಲ್ ಜಿಲ್ಲೆಯ ಸೂರ್ಯನಾರಾಯಣ್ ಸಾಹು (27) ಮೃತರು. ಕಾಳಿಮೇಲಾ ಪ್ರದೇಶದ ಪೊಟೆರು ಶಿಬಿರದಲ್ಲಿದ್ದ ಸಾಹು ತಮ್ಮ ಸೇವಾ ಬಂದೂಕಿನಿಂದ ಗುಂಡು ಹಾರಿಸಿಕೊಂಡಿದ್ದಾರೆ.ಆತ್ಮಹತ್ಯೆಗೆ ಕಾರಣ ತಿಳಿದಿಲ್ಲ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>