<p><strong>ಮಂಗಳೂರು:</strong> ರಾಜ್ಯ ಸರ್ಕಾರ ಕಳೆದ ಬಜೆಟ್ನಲ್ಲಿ ಪ್ರಕಟಿಸಿದ `ನನ್ನ ಮನೆ-ನನ್ನ ಸ್ವತ್ತು~ ಯೋಜನೆಯನ್ನು ಅನುಷ್ಠಾನ ಪ್ರಕ್ರಿಯೆಯಲ್ಲಿ ಆಶ್ರಯ ಸಹಿತ ಇತರೆ ಎಲ್ಲಾ ವಸತಿ ಯೋಜನೆಗಳ ಫಲಾನುಭವಿಗಳು ಸಾಲವನ್ನು ಒಂದೇ ಕಂತಿನಲ್ಲಿ ಪಾವತಿಸಿದರೆ ಬಡ್ಡಿಯನ್ನು ಪೂರ್ಣ ಮನ್ನಾ ಮಾಡುವ `ಹೊಸ ಆದೇಶ~ ಹೊರಬಿದ್ದಿದೆ. ತದನಂತರದಲ್ಲಿ ಮನೆಯೂ ಸರ್ಕಾರದ ಅಡಮಾನದಿಂದ ಮುಕ್ತಗೊಂಡು ಫಲಾನುಭವಿಗೆ ಅವರ ಮನೆ `ಸ್ವಂತ ಸ್ವತ್ತು~ ಆಗಲಿದೆ.<br /> <br /> ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್.ಎಸ್.ವಾಸುದೇವ ಪ್ರಸಾದ್ ಅವರು ಈ ಸಂಬಂಧ ಎಲ್ಲಾ ಜಿಲ್ಲಾಧಿಕಾರಿ, ಜಿ.ಪಂ. ಸಿಇಒಗಳಿಗೆ ಆದೇಶ ಹೊರಡಿಸಿದ್ದಾರೆ. 2012ರ ಮಾರ್ಚ್ 31ರೊಳಗೆ ಸಾಲವನ್ನು ಪೂರ್ಣ ಪಾವತಿಸುವವರಿಗೆ `ಸಂಪೂರ್ಣ ಬಡ್ಡಿ ಮನ್ನಾ~ ಸೌಲಭ್ಯ ದೊರೆಯಲಿದೆ. <br /> <br /> ಉಳಿದವರಿಗೆ ಮುಂದಿನ ಏಪ್ರಿಲ್ನಿಂದ ಈಗಿರುವ ಶೇ 11ರ ಬಡ್ಡಿಯೇ ಮುಂದುವರಿಯಲಿದೆ.<br /> ಜನತಾ ಮನೆಗಳು, ಭಾಗ್ಯ ಮಂದಿರ, ನೆರಳಿನ ಭಾಗ್ಯ, ಗ್ರಾಮೀಣ ಆಶ್ರಯ, ನಗರ ಆಶ್ರಯ, ನಗರ ಅಂಬೇಡ್ಕರ್, ಇಂದಿರಾ ಆವಾಸ್, ಪಿಎಂಜಿವೈ, ಸಾಲ-ಸಹಾಯಧನ ಯೋಜನೆ, ವಿಶೇಷ ವರ್ಗದ ಯೋಜನೆಗಳ ಅಡಿಯಲ್ಲಿ ನಿವೇಶನ ಖರೀದಿಸಲು ಮತ್ತು ಮನೆ ನಿರ್ಮಿಸಿಕೊಳ್ಳಲು ಸಾಲ-ಸಹಾಯಧನ ಪಡೆದ ಫಲಾನುಭವಿಗಳಿಗೆ ಈ ಬಡ್ಡಿ ಮನ್ನಾ ಸೌಲಭ್ಯ ಅನ್ವಯವಾಗಲಿದೆ. <br /> <br /> ಯೋಜನೆಯಂತೆ ಸಂಪೂರ್ಣ ಸಾಲ ಅಥವಾ ಭಾಗಶಃ ಸಾಲ ಮತ್ತು ಸಹಾಯಧನ ಪಡೆದು ಮನೆ ನಿರ್ಮಿಸಿಕೊಂಡವರು ಸಾಲವನ್ನು 2012ರ ಮಾರ್ಚ್ 31ರೊಳಗೆ ಒಂದೇ ಕಂತಿನಲ್ಲಿ ಕಟ್ಟಿದರೆ ಬಡ್ಡಿ ಪೂರ್ಣ ಮನ್ನಾ. ಅವಧಿಗೆ ಮೊದಲೇ `ಮನೆಯನ್ನು ಸ್ವಂತ ಸ್ವತ್ತು~ ಎಂದಾಗಿಸಿಕೊಳ್ಳಲು ಬಯಸಿದವರಿಂದ ಮನೆ ನಿರ್ಮಾಣ ವೆಚ್ಚದ ಶೇ. 3ರಷ್ಟು ಶುಲ್ಕ ಮಾತ್ರ ಕಟ್ಟಿಸಿಕೊಂಡು ಅಡಮಾನದಿಂದ ಮುಕ್ತಗೊಳಿಸಲಾಗುತ್ತದೆ.<br /> <br /> ಕೆಲವು ಫಲಾನುಭವಿಗಳು ಮನೆಯ ನಿವೇಶನ ಖರೀದಿಗೂ ಸಾಲ/ಸಹಾಯಧನ ಪಡೆದಿದ್ದು, ಅಂತಹವರು ನಿವೇಶನವನ್ನು ಅವಧಿಗೆ ಮೊದಲೇ ಅಡಮಾನದಿಂದ ಮುಕ್ತಗೊಳಿಸಿಕೊಳ್ಳಲು ಬಯಸಿದರೆ ಗ್ರಾಮೀಣ ಮತ್ತು ಪ.ಪಂ. ವ್ಯಾಪ್ತಿಯಲ್ಲಾದರೆ ರೂ. 3 ಸಾವಿರ, ಪುರಸಭೆ ವ್ಯಾಪ್ತಿ ರೂ. 5 ಸಾವಿರ, ನಗರಸಭೆ ವ್ಯಾಪ್ತಿ ರೂ. 10 ಸಾವಿರ ಹಾಗೂ ಮಹಾನಗರ ವ್ಯಾಪ್ತಿಯಲ್ಲಾದರೆ ರೂ. 15 ಸಾವಿರ ಪಾವತಿಸಿ ಅಡಮಾನದಲ್ಲಿರುವ ಮನೆಯನ್ನು ಮುಕ್ತಿಗೊಳಿಸಿಕೊಳ್ಳಬಹುದು.<br /> <br /> ಕೆಲವು ಸಂದರ್ಭದಲ್ಲಿ ನಗರ ಆಶ್ರಯ ಯೋಜನೆಯನ್ನು ಗ್ರಾಮೀಣ ಭಾಗದಲ್ಲೂ ಅನುಷ್ಠಾನಗೊಳಿಸಲಾಗಿದ್ದು, ಅಂಥ ಸಂದರ್ಭದಲ್ಲಿ ನಗರ ಆಶ್ರಯ ಯೋಜನೆಯಡಿ ನಿವೇಶನಕ್ಕೆ ನಿಗದಿಪಡಿಸಿದ ಶುಲ್ಕ ಕಟ್ಟಬೇಕಾಗುತ್ತದೆ.<br /> <br /> <strong>ಪ್ರೋತ್ಸಾಹ ಧನ: </strong>ಈವರೆಗೆ ಸಾಲ ವಸೂಲಿ ಮಾಡುವ ಗ್ರಾ.ಪಂ. ಅಥವಾ ಸ್ಥಳೀಯ ಸಂಸ್ಥೆಗೆ ಶೇ. 25ರಷ್ಟು ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಅದನ್ನು ಹಿಂದಕ್ಕೆ ಪಡೆಯಲಾಗಿದ್ದು, ವಸೂಲಿಯ ಶೇ. 10ರಷ್ಟು ಪ್ರೋತ್ಸಾಹಧನ ನೀಡಲು ಸರ್ಕಾರ ಈಗ ನಿರ್ಧರಿಸಿದೆ. ಇತರೆ ಸಂಘ-ಸಂಸ್ಥೆಗಳೂ ಸಾಲ ವಸೂಲಿ ಮಾಡಬಹುದಾಗಿದ್ದು, ಗ್ರಾ.ಪಂ.ಗಳು ತಮಗೆ ಲಭಿಸುವ ಪ್ರೊತ್ಸಾಹಧನವನ್ನು ಇದಕ್ಕೆ ಬಳಸಿಕೊಳ್ಳಲು ಸಹ ಸೂಕ್ತ ಮಾರ್ಗದರ್ಶನ ನೀಡಲಾಗಿದೆ. <br /> <br /> <strong>ಮೊದಲಿಗರಿಗೆ ನಷ್ಟ: </strong>ಈಗಾಗಲೇ ಸಾಲ-ಬಡ್ಡಿ ಪಾವತಿಸಿದ ಫಲಾನುಭವಿಗಳಿಗೆ ಬಡ್ಡಿ ಹಣ ಹಿಂದಿರುಗಿಸಲು ಅವಕಾಶ ಇಲ್ಲ ಎಂದು ತಿಳಿಸಲಾಗಿದೆ.<br /> <br /> ವಸತಿಹೀನರಿಗೆ ಆಸರೆ ನೀಡುವುದು ಸರ್ಕಾರದ ಉದ್ದೇಶ. ಈಗಾಗಲೇ ಆಸರೆ ಪಡೆದುಕೊಂಡವರು ಶೀಘ್ರ ಸಾಲ ಮರುಪಾವತಿ ಮಾಡಿದ್ದೇ ಆದರೆ ಇನ್ನಷ್ಟು ಫಲಾನುಭವಿಗಳಿಗೆ ಸೂರಿನ ಭಾಗ್ಯ ದೊಡ್ಡ ಪ್ರಮಾಣದಲ್ಲಿ ನೀಡಲು ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಅದಕ್ಕಾಗಿ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ ಎಂದು ದ.ಕ. ಜಿ.ಪಂ. ಮೂಲಗಳು ತಿಳಿಸಿವೆ.<br /> <br /> <strong>ದ.ಕ. 20 ಸಾವಿರ ಮಂದಿಗೆ ಲಾಭ<br /> ಮಂಗಳೂರು: </strong>ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1993-94ರಿಂದ 2008-09ನೇ ಸಾಲಿನವರೆಗೆ ವಿವಿಧ ವಸತಿ ಯೋಜನೆಗಳಡಿ 43,548 ಮಂದಿ ಫಲಾನುಭವಿಗಳಾಗಿದ್ದಾರೆ. ಇವರಲ್ಲಿ ಶೇ. 50ರಷ್ಟು ಪರಿಶಿಷ್ಟ ಜಾತಿ-ಪಂಗಡದವರು. <br /> <br /> ಇವರು ಸಾಲ ಮರುಪಾವತಿಸುವಂತಿಲ್ಲ. ಉಳಿದ ಶೇ. 50ರಷ್ಟು ಮಂದಿಯನ್ನು ಗಣನೆಗೆ ತೆಗೆದಕೊಂಡರೆ ಹಾಗೂ ಸಾಲವನ್ನು ಪೂರ್ಣವಾಗಿ ಈವರೆಗೂ ಅವರು ಪಾವತಿಸಿಲ್ಲವಾದರೆ ಸರ್ಕಾರದ ಈ `ಬಡ್ಡಿ ಮನ್ನಾ~ ಯೋಜನೆಯ ಅನುಕೂಲ ಸುಮಾರು 20 ಸಾವಿರ ಮಂದಿಗೆ ದೊರೆಯಲಿದೆ ಎಂದು ಅಂದಾಜು ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಗಳೂರು:</strong> ರಾಜ್ಯ ಸರ್ಕಾರ ಕಳೆದ ಬಜೆಟ್ನಲ್ಲಿ ಪ್ರಕಟಿಸಿದ `ನನ್ನ ಮನೆ-ನನ್ನ ಸ್ವತ್ತು~ ಯೋಜನೆಯನ್ನು ಅನುಷ್ಠಾನ ಪ್ರಕ್ರಿಯೆಯಲ್ಲಿ ಆಶ್ರಯ ಸಹಿತ ಇತರೆ ಎಲ್ಲಾ ವಸತಿ ಯೋಜನೆಗಳ ಫಲಾನುಭವಿಗಳು ಸಾಲವನ್ನು ಒಂದೇ ಕಂತಿನಲ್ಲಿ ಪಾವತಿಸಿದರೆ ಬಡ್ಡಿಯನ್ನು ಪೂರ್ಣ ಮನ್ನಾ ಮಾಡುವ `ಹೊಸ ಆದೇಶ~ ಹೊರಬಿದ್ದಿದೆ. ತದನಂತರದಲ್ಲಿ ಮನೆಯೂ ಸರ್ಕಾರದ ಅಡಮಾನದಿಂದ ಮುಕ್ತಗೊಂಡು ಫಲಾನುಭವಿಗೆ ಅವರ ಮನೆ `ಸ್ವಂತ ಸ್ವತ್ತು~ ಆಗಲಿದೆ.<br /> <br /> ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್.ಎಸ್.ವಾಸುದೇವ ಪ್ರಸಾದ್ ಅವರು ಈ ಸಂಬಂಧ ಎಲ್ಲಾ ಜಿಲ್ಲಾಧಿಕಾರಿ, ಜಿ.ಪಂ. ಸಿಇಒಗಳಿಗೆ ಆದೇಶ ಹೊರಡಿಸಿದ್ದಾರೆ. 2012ರ ಮಾರ್ಚ್ 31ರೊಳಗೆ ಸಾಲವನ್ನು ಪೂರ್ಣ ಪಾವತಿಸುವವರಿಗೆ `ಸಂಪೂರ್ಣ ಬಡ್ಡಿ ಮನ್ನಾ~ ಸೌಲಭ್ಯ ದೊರೆಯಲಿದೆ. <br /> <br /> ಉಳಿದವರಿಗೆ ಮುಂದಿನ ಏಪ್ರಿಲ್ನಿಂದ ಈಗಿರುವ ಶೇ 11ರ ಬಡ್ಡಿಯೇ ಮುಂದುವರಿಯಲಿದೆ.<br /> ಜನತಾ ಮನೆಗಳು, ಭಾಗ್ಯ ಮಂದಿರ, ನೆರಳಿನ ಭಾಗ್ಯ, ಗ್ರಾಮೀಣ ಆಶ್ರಯ, ನಗರ ಆಶ್ರಯ, ನಗರ ಅಂಬೇಡ್ಕರ್, ಇಂದಿರಾ ಆವಾಸ್, ಪಿಎಂಜಿವೈ, ಸಾಲ-ಸಹಾಯಧನ ಯೋಜನೆ, ವಿಶೇಷ ವರ್ಗದ ಯೋಜನೆಗಳ ಅಡಿಯಲ್ಲಿ ನಿವೇಶನ ಖರೀದಿಸಲು ಮತ್ತು ಮನೆ ನಿರ್ಮಿಸಿಕೊಳ್ಳಲು ಸಾಲ-ಸಹಾಯಧನ ಪಡೆದ ಫಲಾನುಭವಿಗಳಿಗೆ ಈ ಬಡ್ಡಿ ಮನ್ನಾ ಸೌಲಭ್ಯ ಅನ್ವಯವಾಗಲಿದೆ. <br /> <br /> ಯೋಜನೆಯಂತೆ ಸಂಪೂರ್ಣ ಸಾಲ ಅಥವಾ ಭಾಗಶಃ ಸಾಲ ಮತ್ತು ಸಹಾಯಧನ ಪಡೆದು ಮನೆ ನಿರ್ಮಿಸಿಕೊಂಡವರು ಸಾಲವನ್ನು 2012ರ ಮಾರ್ಚ್ 31ರೊಳಗೆ ಒಂದೇ ಕಂತಿನಲ್ಲಿ ಕಟ್ಟಿದರೆ ಬಡ್ಡಿ ಪೂರ್ಣ ಮನ್ನಾ. ಅವಧಿಗೆ ಮೊದಲೇ `ಮನೆಯನ್ನು ಸ್ವಂತ ಸ್ವತ್ತು~ ಎಂದಾಗಿಸಿಕೊಳ್ಳಲು ಬಯಸಿದವರಿಂದ ಮನೆ ನಿರ್ಮಾಣ ವೆಚ್ಚದ ಶೇ. 3ರಷ್ಟು ಶುಲ್ಕ ಮಾತ್ರ ಕಟ್ಟಿಸಿಕೊಂಡು ಅಡಮಾನದಿಂದ ಮುಕ್ತಗೊಳಿಸಲಾಗುತ್ತದೆ.<br /> <br /> ಕೆಲವು ಫಲಾನುಭವಿಗಳು ಮನೆಯ ನಿವೇಶನ ಖರೀದಿಗೂ ಸಾಲ/ಸಹಾಯಧನ ಪಡೆದಿದ್ದು, ಅಂತಹವರು ನಿವೇಶನವನ್ನು ಅವಧಿಗೆ ಮೊದಲೇ ಅಡಮಾನದಿಂದ ಮುಕ್ತಗೊಳಿಸಿಕೊಳ್ಳಲು ಬಯಸಿದರೆ ಗ್ರಾಮೀಣ ಮತ್ತು ಪ.ಪಂ. ವ್ಯಾಪ್ತಿಯಲ್ಲಾದರೆ ರೂ. 3 ಸಾವಿರ, ಪುರಸಭೆ ವ್ಯಾಪ್ತಿ ರೂ. 5 ಸಾವಿರ, ನಗರಸಭೆ ವ್ಯಾಪ್ತಿ ರೂ. 10 ಸಾವಿರ ಹಾಗೂ ಮಹಾನಗರ ವ್ಯಾಪ್ತಿಯಲ್ಲಾದರೆ ರೂ. 15 ಸಾವಿರ ಪಾವತಿಸಿ ಅಡಮಾನದಲ್ಲಿರುವ ಮನೆಯನ್ನು ಮುಕ್ತಿಗೊಳಿಸಿಕೊಳ್ಳಬಹುದು.<br /> <br /> ಕೆಲವು ಸಂದರ್ಭದಲ್ಲಿ ನಗರ ಆಶ್ರಯ ಯೋಜನೆಯನ್ನು ಗ್ರಾಮೀಣ ಭಾಗದಲ್ಲೂ ಅನುಷ್ಠಾನಗೊಳಿಸಲಾಗಿದ್ದು, ಅಂಥ ಸಂದರ್ಭದಲ್ಲಿ ನಗರ ಆಶ್ರಯ ಯೋಜನೆಯಡಿ ನಿವೇಶನಕ್ಕೆ ನಿಗದಿಪಡಿಸಿದ ಶುಲ್ಕ ಕಟ್ಟಬೇಕಾಗುತ್ತದೆ.<br /> <br /> <strong>ಪ್ರೋತ್ಸಾಹ ಧನ: </strong>ಈವರೆಗೆ ಸಾಲ ವಸೂಲಿ ಮಾಡುವ ಗ್ರಾ.ಪಂ. ಅಥವಾ ಸ್ಥಳೀಯ ಸಂಸ್ಥೆಗೆ ಶೇ. 25ರಷ್ಟು ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಅದನ್ನು ಹಿಂದಕ್ಕೆ ಪಡೆಯಲಾಗಿದ್ದು, ವಸೂಲಿಯ ಶೇ. 10ರಷ್ಟು ಪ್ರೋತ್ಸಾಹಧನ ನೀಡಲು ಸರ್ಕಾರ ಈಗ ನಿರ್ಧರಿಸಿದೆ. ಇತರೆ ಸಂಘ-ಸಂಸ್ಥೆಗಳೂ ಸಾಲ ವಸೂಲಿ ಮಾಡಬಹುದಾಗಿದ್ದು, ಗ್ರಾ.ಪಂ.ಗಳು ತಮಗೆ ಲಭಿಸುವ ಪ್ರೊತ್ಸಾಹಧನವನ್ನು ಇದಕ್ಕೆ ಬಳಸಿಕೊಳ್ಳಲು ಸಹ ಸೂಕ್ತ ಮಾರ್ಗದರ್ಶನ ನೀಡಲಾಗಿದೆ. <br /> <br /> <strong>ಮೊದಲಿಗರಿಗೆ ನಷ್ಟ: </strong>ಈಗಾಗಲೇ ಸಾಲ-ಬಡ್ಡಿ ಪಾವತಿಸಿದ ಫಲಾನುಭವಿಗಳಿಗೆ ಬಡ್ಡಿ ಹಣ ಹಿಂದಿರುಗಿಸಲು ಅವಕಾಶ ಇಲ್ಲ ಎಂದು ತಿಳಿಸಲಾಗಿದೆ.<br /> <br /> ವಸತಿಹೀನರಿಗೆ ಆಸರೆ ನೀಡುವುದು ಸರ್ಕಾರದ ಉದ್ದೇಶ. ಈಗಾಗಲೇ ಆಸರೆ ಪಡೆದುಕೊಂಡವರು ಶೀಘ್ರ ಸಾಲ ಮರುಪಾವತಿ ಮಾಡಿದ್ದೇ ಆದರೆ ಇನ್ನಷ್ಟು ಫಲಾನುಭವಿಗಳಿಗೆ ಸೂರಿನ ಭಾಗ್ಯ ದೊಡ್ಡ ಪ್ರಮಾಣದಲ್ಲಿ ನೀಡಲು ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ. ಅದಕ್ಕಾಗಿ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ ಎಂದು ದ.ಕ. ಜಿ.ಪಂ. ಮೂಲಗಳು ತಿಳಿಸಿವೆ.<br /> <br /> <strong>ದ.ಕ. 20 ಸಾವಿರ ಮಂದಿಗೆ ಲಾಭ<br /> ಮಂಗಳೂರು: </strong>ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1993-94ರಿಂದ 2008-09ನೇ ಸಾಲಿನವರೆಗೆ ವಿವಿಧ ವಸತಿ ಯೋಜನೆಗಳಡಿ 43,548 ಮಂದಿ ಫಲಾನುಭವಿಗಳಾಗಿದ್ದಾರೆ. ಇವರಲ್ಲಿ ಶೇ. 50ರಷ್ಟು ಪರಿಶಿಷ್ಟ ಜಾತಿ-ಪಂಗಡದವರು. <br /> <br /> ಇವರು ಸಾಲ ಮರುಪಾವತಿಸುವಂತಿಲ್ಲ. ಉಳಿದ ಶೇ. 50ರಷ್ಟು ಮಂದಿಯನ್ನು ಗಣನೆಗೆ ತೆಗೆದಕೊಂಡರೆ ಹಾಗೂ ಸಾಲವನ್ನು ಪೂರ್ಣವಾಗಿ ಈವರೆಗೂ ಅವರು ಪಾವತಿಸಿಲ್ಲವಾದರೆ ಸರ್ಕಾರದ ಈ `ಬಡ್ಡಿ ಮನ್ನಾ~ ಯೋಜನೆಯ ಅನುಕೂಲ ಸುಮಾರು 20 ಸಾವಿರ ಮಂದಿಗೆ ದೊರೆಯಲಿದೆ ಎಂದು ಅಂದಾಜು ಮಾಡಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>