<p>ಸಂವಿಧಾನದ ಪೀಠಿಕೆಯಲ್ಲಿಯೇ `ಜಾತ್ಯತೀತ~ ಎಂಬ ಪದವನ್ನು ಹೊಂದಿರುವುದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವ ವಿಷಯ. ಆದರೆ ಭಾರತದಲ್ಲಿ ನಿಜವಾಗಿಯೂ ಆ ಪರಿಸ್ಥಿತಿ ಇದೆಯೇ ಎಂಬುದನ್ನು ಪರಾಮರ್ಶಿಸಿಕೊಳ್ಳುವ ಅಗತ್ಯವಿದೆ.<br /> <br /> ಸ್ವಾತಂತ್ರ್ಯಾನಂತರ ದೇಶವನ್ನು ಆಳಿದ, ಆಳುತ್ತಿರುವ ಮತ್ತು ಭವಿಷ್ಯದಲ್ಲಿ ಆಳುವ ಪ್ರತಿಯೊಂದು ರಾಜಕೀಯ ಪಕ್ಷ ಜಾತಿ ಆಧಾರಿತವಾಗಿಯೇ ಹುಟ್ಟಿವೆ, ಬೆಳೆದಿವೆ ಮತ್ತು ತನ್ನ ಯೋಜನೆಗಳನ್ನು ಹಾಕಿಕೊಂಡಿವೆ. ಪ್ರತಿಯೊಂದು ಪಕ್ಷವೂ ಜಾತಿ ಆಧಾರದಲ್ಲಿಯೇ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸುತ್ತದೆ ಮತ್ತು ಜಾತಿ ಆಧಾರದಲ್ಲಿ ಮತ ಯಾಚಿಸುತ್ತದೆ.<br /> <br /> ನಮ್ಮ ಕರ್ನಾಟಕದಲ್ಲಂತೂ ಜಾತಿವಾದದ ನಗ್ನ ನರ್ತನ ಎಗ್ಗಿಲ್ಲದೆ ನಡೆಯುತ್ತಿದೆ. ಸಮಾಜ ಸುಧಾರಕರಾಗ ಬೇಕಾಗಿದ್ದ ಮಠಾಧೀಶರು ರಾಜಕಾರಣಿಗಳೊಂದಿಗೆ ಸೇರಿ ಅತ್ಯಂತ ಕೆಟ್ಟ ಜಾತಿವಾದಿಗಳಾಗಿದ್ದಾರೆ.<br /> <br /> ಜಾತಿಗಳನ್ನು ಓಲೈಸುವ ರಾಜಕಾರಣ ಮಿತಿಮೀರಿದೆ. ಇದು ಹೀಗೇ ಮುಂದುವರಿದರೆ ಪ್ರಮುಖ ಜಾತಿಗಳ ವಿರುದ್ಧ ಇತರ ಎಲ್ಲ ಜಾತಿಗಳು ಒಂದಾಗುವ ಪರಿಸ್ಥಿತಿ ನಿರ್ಮಾಣವಾದೀತು. ಅದರ ಪರಿಣಾಮ ನೆನಸಿಕೊಂಡರೆ ಭಯವಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಂವಿಧಾನದ ಪೀಠಿಕೆಯಲ್ಲಿಯೇ `ಜಾತ್ಯತೀತ~ ಎಂಬ ಪದವನ್ನು ಹೊಂದಿರುವುದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವ ವಿಷಯ. ಆದರೆ ಭಾರತದಲ್ಲಿ ನಿಜವಾಗಿಯೂ ಆ ಪರಿಸ್ಥಿತಿ ಇದೆಯೇ ಎಂಬುದನ್ನು ಪರಾಮರ್ಶಿಸಿಕೊಳ್ಳುವ ಅಗತ್ಯವಿದೆ.<br /> <br /> ಸ್ವಾತಂತ್ರ್ಯಾನಂತರ ದೇಶವನ್ನು ಆಳಿದ, ಆಳುತ್ತಿರುವ ಮತ್ತು ಭವಿಷ್ಯದಲ್ಲಿ ಆಳುವ ಪ್ರತಿಯೊಂದು ರಾಜಕೀಯ ಪಕ್ಷ ಜಾತಿ ಆಧಾರಿತವಾಗಿಯೇ ಹುಟ್ಟಿವೆ, ಬೆಳೆದಿವೆ ಮತ್ತು ತನ್ನ ಯೋಜನೆಗಳನ್ನು ಹಾಕಿಕೊಂಡಿವೆ. ಪ್ರತಿಯೊಂದು ಪಕ್ಷವೂ ಜಾತಿ ಆಧಾರದಲ್ಲಿಯೇ ಅಭ್ಯರ್ಥಿಗಳನ್ನು ಚುನಾವಣೆಗೆ ನಿಲ್ಲಿಸುತ್ತದೆ ಮತ್ತು ಜಾತಿ ಆಧಾರದಲ್ಲಿ ಮತ ಯಾಚಿಸುತ್ತದೆ.<br /> <br /> ನಮ್ಮ ಕರ್ನಾಟಕದಲ್ಲಂತೂ ಜಾತಿವಾದದ ನಗ್ನ ನರ್ತನ ಎಗ್ಗಿಲ್ಲದೆ ನಡೆಯುತ್ತಿದೆ. ಸಮಾಜ ಸುಧಾರಕರಾಗ ಬೇಕಾಗಿದ್ದ ಮಠಾಧೀಶರು ರಾಜಕಾರಣಿಗಳೊಂದಿಗೆ ಸೇರಿ ಅತ್ಯಂತ ಕೆಟ್ಟ ಜಾತಿವಾದಿಗಳಾಗಿದ್ದಾರೆ.<br /> <br /> ಜಾತಿಗಳನ್ನು ಓಲೈಸುವ ರಾಜಕಾರಣ ಮಿತಿಮೀರಿದೆ. ಇದು ಹೀಗೇ ಮುಂದುವರಿದರೆ ಪ್ರಮುಖ ಜಾತಿಗಳ ವಿರುದ್ಧ ಇತರ ಎಲ್ಲ ಜಾತಿಗಳು ಒಂದಾಗುವ ಪರಿಸ್ಥಿತಿ ನಿರ್ಮಾಣವಾದೀತು. ಅದರ ಪರಿಣಾಮ ನೆನಸಿಕೊಂಡರೆ ಭಯವಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>