<p><strong>ನವದೆಹಲಿ: `</strong>ಎ.ಕೆ. ರಾಮಾನುಜನ್ ನನಗೆ ತಿಳಿದಂತೆ ಅತ್ಯಂತ ನೈಜ ಚಿಂತಕರಲ್ಲಿ ಒಬ್ಬರಾಗಿದ್ದರು. ಅವರು ಬದುಕಿದ್ದಿದ್ದರೇ ತಮ್ಮ ಪ್ರಬಂಧವೊಂದು ಇಷ್ಟೊಂದು ವಿವಾದಕ್ಕೆ ಕಾರಣವಾಗಿದ್ದು ಅವರ ಅಚ್ಚರಿಗೆ ಕಾರಣವಾಗುತ್ತಿತ್ತು. ಇದಕ್ಕಿಂತ ಗಂಭೀರವಾದ ಹಲವು ಪ್ರಬಂಧಗಳನ್ನು ಅವರು ಮಂಡಿಸಿದ್ದರು~ ಎಂದು ಖ್ಯಾತ ನಾಟಕಕಾರ ಗಿರೀಶ್ ಕಾರ್ನಾಡ್ ಅಭಿಪ್ರಾಯ ಪಟ್ಟಿದ್ದಾರೆ. <br /> <br /> ಬುಧವಾರ ದೆಹಲಿಯ ರಾಮ್ಜಾಸ್ ಕಾಲೇಜಿನ ಇತಿಹಾಸ ಸೊಸೈಟಿಯಲ್ಲಿ ಏರ್ಪಡಿಸಿದ್ದ ರಾಮಾನುಜನ್ ಸ್ಮಾರಕ ಉಪನ್ಯಾಸದಲ್ಲಿ ಮಾತನಾಡಿದ ಕಾರ್ನಾಡ್, ರಾಮಾನುಜನ್ ಅವರ `ತ್ರಿ ಹಂಡ್ರಂಡ್ ರಾಮಾಯಣಾಸ್~ ಪ್ರಬಂಧ ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.<br /> <br /> ರಾಮಾನುಜನ್ ಅವರ `ತ್ರಿ ಹಂಡ್ರೆಡ್ ರಾಮಾಯಣಾಸ್~ ಪ್ರಬಂಧದಲ್ಲಿ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ವಿಚಾರಗಳಿವೆ ಎಂದು ದೆಹಲಿ ವಿಶ್ವವಿದ್ಯಾಲಯ ಅದನ್ನು ಪದವಿ ತರಗತಿಯ ಇತಿಹಾಸ ಪಠ್ಯದಿಂದ ತೆಗೆದುಹಾಕಲು ಮಂಗಳವಾರವಷ್ಟೇ ನಿರ್ಧಾರ ತೆಗೆದುಕೊಂಡಿದೆ.<br /> <br /> ಉಪನ್ಯಾಸದ ಉದ್ದಕ್ಕೂ ರಾಮಾನುಜನ್ ಅವರನ್ನು ಪ್ರೀತಿಯಿಂದ ನೆನಪಿಸಿಕೊಂಡ ಕಾರ್ನಾಡ್, ಅವರೊಬ್ಬ ಅದ್ಭುತ ಕಥನಗಾರ. ಅತ್ಯುತ್ತಮ ಅನುವಾದಕ. ಜಾನಪದ ಕಣಜ ಎಂದು ಶ್ಲಾಘಿಸಿದರು.<br /> <br /> ಆದರೆ, ತಮ್ಮ ಮಾತುಗಳಲ್ಲಿ ವಿವಾದಾತ್ಮಕ ಪ್ರಬಂಧದ ಕುರಿತು ಹೆಚ್ಚೇನೂ ಹೇಳದ ಕಾರ್ನಾಡ್, `ರಾಮಾಯಣದ ಹಿಂದಿ ಅವತರಣಿಕೆ `ರಾಮಚರಿತ ಮಾನಸ~ವನ್ನು ಹೆಚ್ಚಾಗಿ ಓದಿಕೊಂಡ ಜನರಿರುವ ಪ್ರದೇಶದಲ್ಲಿ ವಾಲ್ಮೀಕಿಯ ಸಂಸ್ಕೃತ ರಾಮಾಯಣದಿಂದ ಉದ್ಧರಿಸಲಾದ ಕೆಲ ಸಾಲುಗಳು ಸಮಸ್ಯೆಗೆ ಕಾರಣವಾಗಿರುವುದು ಹಾಗೂ ಆ ಕೃತಿಯ ನಿಷೇಧಕ್ಕೆ ಕಾರಣವಾಗಿರುವುದು ಅಚ್ಚರಿ ಹುಟ್ಟಿಸುವಂತಿದೆ~ ಎಂದರು.<br /> <br /> ರಾಮಾನುಜನ್ ಅವರ ಅನುವಾದ ಸಾಮರ್ಥ್ಯದ ಬಗ್ಗೆ ಹೊಗಳಿದ ಗಿರೀಶ್, `ಅವರೊಬ್ಬ ಕವಿಯಾಗಿದ್ದರಿಂದ ಕಾವ್ಯಾತ್ಮಕವಾಗಿ ಅನುವಾದ ಮಾಡುತ್ತಿದ್ದರು. ತಮಿಳಿನ `ಸಂಗಂ~ ಕಾವ್ಯ ಅವರಿಂದಾಗಿ ನಮಗೆ ದಕ್ಕಿದೆ. ವಚನ ಸಾಹಿತ್ಯವನ್ನು ಇಂಗ್ಲಿಷ್ಗೆ ಅನುವಾದಿಸುವ ಮೂಲಕ ಅದರ ಮಹತ್ವ ಸಾರಿದರು~ ಎಂದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: `</strong>ಎ.ಕೆ. ರಾಮಾನುಜನ್ ನನಗೆ ತಿಳಿದಂತೆ ಅತ್ಯಂತ ನೈಜ ಚಿಂತಕರಲ್ಲಿ ಒಬ್ಬರಾಗಿದ್ದರು. ಅವರು ಬದುಕಿದ್ದಿದ್ದರೇ ತಮ್ಮ ಪ್ರಬಂಧವೊಂದು ಇಷ್ಟೊಂದು ವಿವಾದಕ್ಕೆ ಕಾರಣವಾಗಿದ್ದು ಅವರ ಅಚ್ಚರಿಗೆ ಕಾರಣವಾಗುತ್ತಿತ್ತು. ಇದಕ್ಕಿಂತ ಗಂಭೀರವಾದ ಹಲವು ಪ್ರಬಂಧಗಳನ್ನು ಅವರು ಮಂಡಿಸಿದ್ದರು~ ಎಂದು ಖ್ಯಾತ ನಾಟಕಕಾರ ಗಿರೀಶ್ ಕಾರ್ನಾಡ್ ಅಭಿಪ್ರಾಯ ಪಟ್ಟಿದ್ದಾರೆ. <br /> <br /> ಬುಧವಾರ ದೆಹಲಿಯ ರಾಮ್ಜಾಸ್ ಕಾಲೇಜಿನ ಇತಿಹಾಸ ಸೊಸೈಟಿಯಲ್ಲಿ ಏರ್ಪಡಿಸಿದ್ದ ರಾಮಾನುಜನ್ ಸ್ಮಾರಕ ಉಪನ್ಯಾಸದಲ್ಲಿ ಮಾತನಾಡಿದ ಕಾರ್ನಾಡ್, ರಾಮಾನುಜನ್ ಅವರ `ತ್ರಿ ಹಂಡ್ರಂಡ್ ರಾಮಾಯಣಾಸ್~ ಪ್ರಬಂಧ ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದರು.<br /> <br /> ರಾಮಾನುಜನ್ ಅವರ `ತ್ರಿ ಹಂಡ್ರೆಡ್ ರಾಮಾಯಣಾಸ್~ ಪ್ರಬಂಧದಲ್ಲಿ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ವಿಚಾರಗಳಿವೆ ಎಂದು ದೆಹಲಿ ವಿಶ್ವವಿದ್ಯಾಲಯ ಅದನ್ನು ಪದವಿ ತರಗತಿಯ ಇತಿಹಾಸ ಪಠ್ಯದಿಂದ ತೆಗೆದುಹಾಕಲು ಮಂಗಳವಾರವಷ್ಟೇ ನಿರ್ಧಾರ ತೆಗೆದುಕೊಂಡಿದೆ.<br /> <br /> ಉಪನ್ಯಾಸದ ಉದ್ದಕ್ಕೂ ರಾಮಾನುಜನ್ ಅವರನ್ನು ಪ್ರೀತಿಯಿಂದ ನೆನಪಿಸಿಕೊಂಡ ಕಾರ್ನಾಡ್, ಅವರೊಬ್ಬ ಅದ್ಭುತ ಕಥನಗಾರ. ಅತ್ಯುತ್ತಮ ಅನುವಾದಕ. ಜಾನಪದ ಕಣಜ ಎಂದು ಶ್ಲಾಘಿಸಿದರು.<br /> <br /> ಆದರೆ, ತಮ್ಮ ಮಾತುಗಳಲ್ಲಿ ವಿವಾದಾತ್ಮಕ ಪ್ರಬಂಧದ ಕುರಿತು ಹೆಚ್ಚೇನೂ ಹೇಳದ ಕಾರ್ನಾಡ್, `ರಾಮಾಯಣದ ಹಿಂದಿ ಅವತರಣಿಕೆ `ರಾಮಚರಿತ ಮಾನಸ~ವನ್ನು ಹೆಚ್ಚಾಗಿ ಓದಿಕೊಂಡ ಜನರಿರುವ ಪ್ರದೇಶದಲ್ಲಿ ವಾಲ್ಮೀಕಿಯ ಸಂಸ್ಕೃತ ರಾಮಾಯಣದಿಂದ ಉದ್ಧರಿಸಲಾದ ಕೆಲ ಸಾಲುಗಳು ಸಮಸ್ಯೆಗೆ ಕಾರಣವಾಗಿರುವುದು ಹಾಗೂ ಆ ಕೃತಿಯ ನಿಷೇಧಕ್ಕೆ ಕಾರಣವಾಗಿರುವುದು ಅಚ್ಚರಿ ಹುಟ್ಟಿಸುವಂತಿದೆ~ ಎಂದರು.<br /> <br /> ರಾಮಾನುಜನ್ ಅವರ ಅನುವಾದ ಸಾಮರ್ಥ್ಯದ ಬಗ್ಗೆ ಹೊಗಳಿದ ಗಿರೀಶ್, `ಅವರೊಬ್ಬ ಕವಿಯಾಗಿದ್ದರಿಂದ ಕಾವ್ಯಾತ್ಮಕವಾಗಿ ಅನುವಾದ ಮಾಡುತ್ತಿದ್ದರು. ತಮಿಳಿನ `ಸಂಗಂ~ ಕಾವ್ಯ ಅವರಿಂದಾಗಿ ನಮಗೆ ದಕ್ಕಿದೆ. ವಚನ ಸಾಹಿತ್ಯವನ್ನು ಇಂಗ್ಲಿಷ್ಗೆ ಅನುವಾದಿಸುವ ಮೂಲಕ ಅದರ ಮಹತ್ವ ಸಾರಿದರು~ ಎಂದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>