<p>`ಅಕಾಡೆಮಿ ಫಾರ್ ಸಿವಿಯರ್ ಹ್ಯಾಂಡಿಕ್ಯಾಪ್ಸ್ ಅಂಡ್ ಆಟಿಸಂ~ (ಆಶಾ) ವಿಶೇಷ ಮಕ್ಕಳಿಗೆ ತರಬೇತಿ ಹಾಗೂ ಶಿಕ್ಷಣ ನೀಡುವ ಸಂಸ್ಥೆ. ಇದು ಆಟಿಸಂ ಮಕ್ಕಳ ಶಿಕ್ಷಣ ಹಾಗೂ ಪ್ರಗತಿಗೆ ಶ್ರಮಿಸುತ್ತಿದೆ.<br /> <br /> ಈ ಮಕ್ಕಳೂ ಇತರೆ ಮಕ್ಕಳಂತೆ ಚಟುವಟಿಕೆಯಿಂದ ಇರಬಲ್ಲರು ಎಂಬುದನ್ನು ತೋರಿಸಿಕೊಡುವ ಸಲುವಾಗಿ ಅವರಿಗೆ ಭರತನಾಟ್ಯ ತರಬೇತಿ ನೀಡಿದೆ. `ಆಶಾ~ ಸಂಸ್ಥೆಯಲ್ಲಿರುವ ವಿಶೇಷ ಮಕ್ಕಳು ಗುರುವಾರ ಭರತ ನಾಟ್ಯ ಪ್ರದರ್ಶನ ನೀಡಲಿದ್ದಾರೆ. <br /> <br /> ಕಾರ್ಯಕ್ರಮದ ಹೆಸರು `ನಾಟ್ಯೋಲ್ಲಾಸ~. ವಿಶೇಷ ಮಕ್ಕಳು ನಡೆಸಿಕೊಡುವ ಕಾರ್ಯಕ್ರಮ ಇದಾಗಿರುವುದರಿಂದ ಈ ಭರತನಾಟ್ಯ ಪ್ರದರ್ಶನ ಕೂಡ ಒಂದು ವಿಶೇಷವಾದುದು. ಇದೊಂದು ವಿಭಿನ್ನ ಪ್ರಯತ್ನ.<br /> <br /> ಈ ಮಕ್ಕಳಿಗೆ ಭರತನಾಟ್ಯ ಕಲಿಸಿ ಅವರನ್ನು ತರಬೇತುಗೊಳಿಸಿದ್ದು ಆತ್ಮಾಲಯ ಸಂಸ್ಥೆಯ ಡಾ. ಪದ್ಮಜಾ ಸುರೇಶ್. ಜತೆಗೆ ಕೊರಿಯೋಗ್ರಫಿ ಮಾಡಿ ನಿರ್ದೇಶಿಸಿದ್ದಾರೆ. ಆತ್ಮಾಲಯ ಸಂಸ್ಥೆಯ ವಿದ್ಯಾರ್ಥಿಗಳ ಜತೆಗೂಡಿ ಆಶಾ ಸಂಸ್ಥೆಯ 120 ಮಕ್ಕಳು ಕಾರ್ಯಕ್ರಮ ನೀಡಲಿದ್ದಾರೆ.<br /> <br /> ಆಟಿಸಂ ಮಕ್ಕಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ. ಅಂದಹಾಗೆ ಆಟಿಸಂ ಮಕ್ಕಳು ನೀಡುತ್ತಿರುವ ಪ್ರಪ್ರಥಮ ಕಾರ್ಯಕ್ರಮ ಇದಾಗಿದೆ. ಶಿಕ್ಷಕರು ಹಾಗೂ ನೃತ್ಯ ನಿರ್ದೇಶಕರು ಸಾಕಷ್ಟು ಪರಿಶ್ರಮ ವಹಿಸಿ ಹಾಗೂ ಆಸ್ಥೆಯಿಂದ ನಿರ್ಮಿಸಿರುವ ಕಾರ್ಯಕ್ರಮ ಇದು.<br /> <br /> <strong>ಸ್ಥಳ: </strong>ಕಿಂಚಾ ಸಭಾಂಗಣ, ಭಾರತೀಯ ವಿದ್ಯಾ ಭವನ, ರೇಸ್ ಕೋರ್ಸ್ ರಸ್ತೆ. ಸಂಜೆ 6.30.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ಅಕಾಡೆಮಿ ಫಾರ್ ಸಿವಿಯರ್ ಹ್ಯಾಂಡಿಕ್ಯಾಪ್ಸ್ ಅಂಡ್ ಆಟಿಸಂ~ (ಆಶಾ) ವಿಶೇಷ ಮಕ್ಕಳಿಗೆ ತರಬೇತಿ ಹಾಗೂ ಶಿಕ್ಷಣ ನೀಡುವ ಸಂಸ್ಥೆ. ಇದು ಆಟಿಸಂ ಮಕ್ಕಳ ಶಿಕ್ಷಣ ಹಾಗೂ ಪ್ರಗತಿಗೆ ಶ್ರಮಿಸುತ್ತಿದೆ.<br /> <br /> ಈ ಮಕ್ಕಳೂ ಇತರೆ ಮಕ್ಕಳಂತೆ ಚಟುವಟಿಕೆಯಿಂದ ಇರಬಲ್ಲರು ಎಂಬುದನ್ನು ತೋರಿಸಿಕೊಡುವ ಸಲುವಾಗಿ ಅವರಿಗೆ ಭರತನಾಟ್ಯ ತರಬೇತಿ ನೀಡಿದೆ. `ಆಶಾ~ ಸಂಸ್ಥೆಯಲ್ಲಿರುವ ವಿಶೇಷ ಮಕ್ಕಳು ಗುರುವಾರ ಭರತ ನಾಟ್ಯ ಪ್ರದರ್ಶನ ನೀಡಲಿದ್ದಾರೆ. <br /> <br /> ಕಾರ್ಯಕ್ರಮದ ಹೆಸರು `ನಾಟ್ಯೋಲ್ಲಾಸ~. ವಿಶೇಷ ಮಕ್ಕಳು ನಡೆಸಿಕೊಡುವ ಕಾರ್ಯಕ್ರಮ ಇದಾಗಿರುವುದರಿಂದ ಈ ಭರತನಾಟ್ಯ ಪ್ರದರ್ಶನ ಕೂಡ ಒಂದು ವಿಶೇಷವಾದುದು. ಇದೊಂದು ವಿಭಿನ್ನ ಪ್ರಯತ್ನ.<br /> <br /> ಈ ಮಕ್ಕಳಿಗೆ ಭರತನಾಟ್ಯ ಕಲಿಸಿ ಅವರನ್ನು ತರಬೇತುಗೊಳಿಸಿದ್ದು ಆತ್ಮಾಲಯ ಸಂಸ್ಥೆಯ ಡಾ. ಪದ್ಮಜಾ ಸುರೇಶ್. ಜತೆಗೆ ಕೊರಿಯೋಗ್ರಫಿ ಮಾಡಿ ನಿರ್ದೇಶಿಸಿದ್ದಾರೆ. ಆತ್ಮಾಲಯ ಸಂಸ್ಥೆಯ ವಿದ್ಯಾರ್ಥಿಗಳ ಜತೆಗೂಡಿ ಆಶಾ ಸಂಸ್ಥೆಯ 120 ಮಕ್ಕಳು ಕಾರ್ಯಕ್ರಮ ನೀಡಲಿದ್ದಾರೆ.<br /> <br /> ಆಟಿಸಂ ಮಕ್ಕಳ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಉದ್ದೇಶ. ಅಂದಹಾಗೆ ಆಟಿಸಂ ಮಕ್ಕಳು ನೀಡುತ್ತಿರುವ ಪ್ರಪ್ರಥಮ ಕಾರ್ಯಕ್ರಮ ಇದಾಗಿದೆ. ಶಿಕ್ಷಕರು ಹಾಗೂ ನೃತ್ಯ ನಿರ್ದೇಶಕರು ಸಾಕಷ್ಟು ಪರಿಶ್ರಮ ವಹಿಸಿ ಹಾಗೂ ಆಸ್ಥೆಯಿಂದ ನಿರ್ಮಿಸಿರುವ ಕಾರ್ಯಕ್ರಮ ಇದು.<br /> <br /> <strong>ಸ್ಥಳ: </strong>ಕಿಂಚಾ ಸಭಾಂಗಣ, ಭಾರತೀಯ ವಿದ್ಯಾ ಭವನ, ರೇಸ್ ಕೋರ್ಸ್ ರಸ್ತೆ. ಸಂಜೆ 6.30.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>