<p><strong>ಚಿಕ್ಕಬಳ್ಳಾಪುರ:</strong> ‘ಗಡಿ ಜಿಲ್ಲೆಯಾದ ಚಿಕ್ಕಬಳ್ಳಾಪುರದಲ್ಲಿ ಕನ್ನಡದ ಕಾರ್ಯ ನಿರಂತರವಾಗಿ ನಡೆಯಲು ಸ್ಥಳೀಯರು ಆಸಕ್ತಿ ತೋರಬೇಕು. ನಾಡು- ನುಡಿಪರ ಸೌಕರ್ಯ ಅನುಷ್ಠಾನಕ್ಕೆ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಹೀಗಾದಲ್ಲಿ ಮಾತ್ರ ಕನ್ನಡ ಅಭಿವೃದ್ಧಿಯಾಗುತ್ತದೆ. ಶಾಶ್ವತವಾಗಿ ಉಳಿಯುತ್ತದೆ’.<br /> <br /> ಹೀಗೆ ಅಭಿಪ್ರಾಯ ವ್ಯಕ್ತಪಡಿಸಿದವರು ಹಿರಿಯ ಸಾಹಿತಿ ‘ಕೈಪು’ ಲಕ್ಷ್ಮಿನರಸಿಂಹ ಶಾಸ್ತ್ರಿ. ಮೇ 4, 5ರಂದು ನಡೆಯುವ ಜಿಲ್ಲಾ ದ್ವಿತೀಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ಅವರು ಹಲವು ದಶಕಗಳಿಂದ ನಾಡು- ನುಡಿ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.<br /> <br /> ಸಮ್ಮೇಳನದ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು ನಾಡು- ನುಡಿಯ ಕುರಿತು ವಿವಿಧ ವಿಷಯಗಳನ್ನು ಹಂಚಿಕೊಂಡಿದ್ದಾರೆ.<br /> <br /> <strong>* ಜಿಲ್ಲಾ ದ್ವಿತೀಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ನಿಮಗೆ ಹೇಗೆ ಅನ್ನಿಸುತ್ತದೆ?<br /> </strong>ತುಂಬ ಸಂತೋಷವಾಗಿದೆ. ಕನ್ನಡದ ಉಪನ್ಯಾಸಕನಾಗಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ನನಗೆ ಇಂಥ ಒಂದು ಅವಕಾಶ ಪ್ರಥಮ ಬಾರಿ ಸಿಕ್ಕಿದೆ. ಸಮ್ಮೇಳನದ ಅಧ್ಯಕ್ಷನಾಗಿ ನನ್ನ ವಿಚಾರಗಳನ್ನು ಹಂಚಿಕೊಳ್ಳಲು ಮತ್ತು ನಾಡು- ನುಡಿಗೆ ಸಂಬಂಧಿಸಿದಂತೆ ಆಗಬೇಕಿರುವ ಕಾರ್ಯಗಳ ಬಗ್ಗೆ ಹೇಳಲು ಈ ಸಂದರ್ಭವನ್ನು ಸದ್ಬಳಕೆ ಮಾಡಿಕೊಳ್ಳುತ್ತೇನೆ. ತೆಲುಗು ಮತ್ತು ಇತರ ಭಾಷೆಗಳ ಪ್ರಭಾವ ಇರುವ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಉತ್ತಮ ಸಂಗತಿ.</p>.<p><br /> <strong>* ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಜಿಲ್ಲೆಯ ವಿಶೇಷ ಕೊಡುಗೆ ಏನು?</strong><br /> ವಿಚಾರವಾದಿ ಎಚ್.ನರಸಿಂಹಯ್ಯ, ಕವಿ ಮಂಡಿಕಲ್ ರಾಮಾಶಾಸ್ತ್ರಿ, ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಸೇರಿದಂತೆ ಹಲವರು ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ವಿಶೇಷ ಕೊಡುಗೆಗಳನ್ನು ನೀಡಿದ್ದಾರೆ. ಆದರೆ ಈ ಅಂಶ ಬೆಳಕಿಗೆ ಬಂದಿಲ್ಲ. ಚಿಕ್ಕಬಳ್ಳಾಪುರ ಎಂದ ಕೂಡಲೇ ಬರಪೀಡಿತ ಬಯಲುಸೀಮೆ ಜಿಲ್ಲೆಯೆಂದೇ ಗುರುತಿಸಲಾಗುತ್ತದೆ ಹೊರತು ಇಲ್ಲಿನ ಸಾಂಸ್ಕೃತಿಕ ಸೊಗಡು ಯಾರೂ ಗಮನಿಸುವುದಿಲ್ಲ. ಜಿಲ್ಲೆಯ ಸಾಹಿತಿಗಳು, ಕವಿಗಳು, ಕಲಾವಿದರು ಹಲವು ಸಾಧನೆಗಳನ್ನು ಮಾಡಿದ್ದರೂ ಮಾನ್ಯತೆ ಸಿಕ್ಕಿಲ್ಲ.<br /> <br /> <strong>* ಗಡಿ ಜಿಲ್ಲೆಗಳಲ್ಲಿ ಕನ್ನಡ ಭಾಷೆಗೆ ಧಕ್ಕೆಯಾಗುವ ಸಾಧ್ಯತೆ ಇದೆಯೇ? ಇದ್ದರೆ, ಅಪಾಯದಿಂದ ಪಾರಾಗಲು ಅನುಸರಿಸಬೇಕಾದ ಮಾರ್ಗಗಳೇನು?</strong><br /> ತಮ್ಮ ಮಾತೃಭಾಷೆಯ ಮೇಲೆ ಕನ್ನಡಿಗರಿಗೆ ಪ್ರೀತಿ ಮತ್ತು ಅಭಿಮಾನ ಇರುವವರೆಗೆ ಕನ್ನಡಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆಯಾಗುವುದಿಲ್ಲ. ತೆಲುಗು, ತಮಿಳು ಸೇರಿದಂತೆ ಇತರ ಭಾಷೆಗಳ ಪ್ರಭಾವವಿದ್ದರೂ ಕನ್ನಡಿಗರು ಹೆಚ್ಚು ಹೆಚ್ಚು ಕನ್ನಡ ಮಾತನಾಡುವ ಮೂಲಕ ಭಾಷೆ ರಕ್ಷಿಸಬಹುದು. <br /> ಇತರ ಭಾಷೆ ಬಗ್ಗೆ ಗೌರವವಿರಬೇಕು. ಆದರೆ ಕನ್ನಡದ ಬಗ್ಗೆ ಪ್ರೀತಿ ಮತ್ತು ಅಭಿಮಾನ ಇರಬೇಕು. <br /> ಜನಸಾಮಾನ್ಯರ ಮತ್ತು ದೈನಂದಿನ ಭಾಷೆಯಾಗಿ ಇರುವಷ್ಟು ದಿನ ಕನ್ನಡಕ್ಕೆ ಯಾವುದೇ ರೀತಿಯಲ್ಲೂ ಅಪಾಯವಿಲ್ಲ.<br /> <strong><br /> * ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕನ್ನಡದ ಕಾರ್ಯಗಳು ಆಗುತ್ತಿವೆಯೇ ? ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎದುರಾಗುತ್ತಿರುವ ತೊಡಕುಗಳೇನು?</strong><br /> ಕೋಲಾರದಿಂದ ಬೇರ್ಪಟು ನಾಲ್ಕು ವರ್ಷಗಳ ಹಿಂದೆಯಷ್ಟೇ ಚಿಕ್ಕಬಳ್ಳಾಪುರ ಜಿಲ್ಲೆಯು ಅಸ್ತಿತ್ವಕ್ಕೆ ಬಂದಿದೆ. ಸಾಹಿತ್ಯ- ಸಾಂಸ್ಕೃತಿಕ ಕಾರ್ಯಕ್ರಮಳಿಗಾಗಿ ಪ್ರತ್ಯೇಕ ಸಭಾಂಗಣಗಳಿಲ್ಲ, ಕನ್ನಡ ಭವನಗಳಿಲ್ಲ. ಕಾರ್ಯಕ್ರಮಗಳನ್ನು ಆಯೋಜಿಸಲು ಮತ್ತು ವೀಕ್ಷಿಸಲು ಸೂಕ್ತ ರೀತಿಯ ವೇದಿಕೆ ಮತ್ತು ವ್ಯವಸ್ಥೆಯಿಲ್ಲ.<br /> ಕನ್ನಡದ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲು ಅವಕಾಶಗಳಿಲ್ಲ. ಈ ಎಲ್ಲ ಸಮಸ್ಯೆ ಮತ್ತು ಕೊರತೆಗಳ ಬಗ್ಗೆ ಕನ್ನಡಪರ ಸಂಘಟನೆಗಳು, ಜನಪ್ರತಿನಿಧಿಗಳು, ಕನ್ನಡಪ್ರೇಮಿಗಳು ಸರ್ಕಾರದ ಗಮನಕ್ಕೆ ತರಬೇಕು. ಸಮಸ್ಯೆ ನಿವಾರಣೆಗೆ ಸರ್ಕಾರದ ಮೇಲೆ ಒತ್ತಡ ಹೇರಬೇಕು.<br /> <br /> <strong>* ಕನ್ನಡ ಭಾಷೆ ಉಳಿಸಿ, ಬೆಳೆಸಲು ಏನಾಗಬೇಕು?</strong><br /> ಕನ್ನಡಿಗರು ತಾವು ಮಾತನಾಡುವುದರ ಜೊತೆಗೆ ಪರಭಾಷಿಕರಿಗೂ ಕನ್ನಡ ಕಲಿಸಬೇಕು. ಕನ್ನಡ ಕಲಿಕೆ ಅನಿವಾರ್ಯ ಎಂಬ ವಾತಾವರಣ ಸೃಷ್ಟಿಸಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ:</strong> ‘ಗಡಿ ಜಿಲ್ಲೆಯಾದ ಚಿಕ್ಕಬಳ್ಳಾಪುರದಲ್ಲಿ ಕನ್ನಡದ ಕಾರ್ಯ ನಿರಂತರವಾಗಿ ನಡೆಯಲು ಸ್ಥಳೀಯರು ಆಸಕ್ತಿ ತೋರಬೇಕು. ನಾಡು- ನುಡಿಪರ ಸೌಕರ್ಯ ಅನುಷ್ಠಾನಕ್ಕೆ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಹೀಗಾದಲ್ಲಿ ಮಾತ್ರ ಕನ್ನಡ ಅಭಿವೃದ್ಧಿಯಾಗುತ್ತದೆ. ಶಾಶ್ವತವಾಗಿ ಉಳಿಯುತ್ತದೆ’.<br /> <br /> ಹೀಗೆ ಅಭಿಪ್ರಾಯ ವ್ಯಕ್ತಪಡಿಸಿದವರು ಹಿರಿಯ ಸಾಹಿತಿ ‘ಕೈಪು’ ಲಕ್ಷ್ಮಿನರಸಿಂಹ ಶಾಸ್ತ್ರಿ. ಮೇ 4, 5ರಂದು ನಡೆಯುವ ಜಿಲ್ಲಾ ದ್ವಿತೀಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿರುವ ಅವರು ಹಲವು ದಶಕಗಳಿಂದ ನಾಡು- ನುಡಿ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.<br /> <br /> ಸಮ್ಮೇಳನದ ಹಿನ್ನೆಲೆಯಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು ನಾಡು- ನುಡಿಯ ಕುರಿತು ವಿವಿಧ ವಿಷಯಗಳನ್ನು ಹಂಚಿಕೊಂಡಿದ್ದಾರೆ.<br /> <br /> <strong>* ಜಿಲ್ಲಾ ದ್ವಿತೀಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ನಿಮಗೆ ಹೇಗೆ ಅನ್ನಿಸುತ್ತದೆ?<br /> </strong>ತುಂಬ ಸಂತೋಷವಾಗಿದೆ. ಕನ್ನಡದ ಉಪನ್ಯಾಸಕನಾಗಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ನನಗೆ ಇಂಥ ಒಂದು ಅವಕಾಶ ಪ್ರಥಮ ಬಾರಿ ಸಿಕ್ಕಿದೆ. ಸಮ್ಮೇಳನದ ಅಧ್ಯಕ್ಷನಾಗಿ ನನ್ನ ವಿಚಾರಗಳನ್ನು ಹಂಚಿಕೊಳ್ಳಲು ಮತ್ತು ನಾಡು- ನುಡಿಗೆ ಸಂಬಂಧಿಸಿದಂತೆ ಆಗಬೇಕಿರುವ ಕಾರ್ಯಗಳ ಬಗ್ಗೆ ಹೇಳಲು ಈ ಸಂದರ್ಭವನ್ನು ಸದ್ಬಳಕೆ ಮಾಡಿಕೊಳ್ಳುತ್ತೇನೆ. ತೆಲುಗು ಮತ್ತು ಇತರ ಭಾಷೆಗಳ ಪ್ರಭಾವ ಇರುವ ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಉತ್ತಮ ಸಂಗತಿ.</p>.<p><br /> <strong>* ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಜಿಲ್ಲೆಯ ವಿಶೇಷ ಕೊಡುಗೆ ಏನು?</strong><br /> ವಿಚಾರವಾದಿ ಎಚ್.ನರಸಿಂಹಯ್ಯ, ಕವಿ ಮಂಡಿಕಲ್ ರಾಮಾಶಾಸ್ತ್ರಿ, ಕಲಾವಿದ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪ ಸೇರಿದಂತೆ ಹಲವರು ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ವಿಶೇಷ ಕೊಡುಗೆಗಳನ್ನು ನೀಡಿದ್ದಾರೆ. ಆದರೆ ಈ ಅಂಶ ಬೆಳಕಿಗೆ ಬಂದಿಲ್ಲ. ಚಿಕ್ಕಬಳ್ಳಾಪುರ ಎಂದ ಕೂಡಲೇ ಬರಪೀಡಿತ ಬಯಲುಸೀಮೆ ಜಿಲ್ಲೆಯೆಂದೇ ಗುರುತಿಸಲಾಗುತ್ತದೆ ಹೊರತು ಇಲ್ಲಿನ ಸಾಂಸ್ಕೃತಿಕ ಸೊಗಡು ಯಾರೂ ಗಮನಿಸುವುದಿಲ್ಲ. ಜಿಲ್ಲೆಯ ಸಾಹಿತಿಗಳು, ಕವಿಗಳು, ಕಲಾವಿದರು ಹಲವು ಸಾಧನೆಗಳನ್ನು ಮಾಡಿದ್ದರೂ ಮಾನ್ಯತೆ ಸಿಕ್ಕಿಲ್ಲ.<br /> <br /> <strong>* ಗಡಿ ಜಿಲ್ಲೆಗಳಲ್ಲಿ ಕನ್ನಡ ಭಾಷೆಗೆ ಧಕ್ಕೆಯಾಗುವ ಸಾಧ್ಯತೆ ಇದೆಯೇ? ಇದ್ದರೆ, ಅಪಾಯದಿಂದ ಪಾರಾಗಲು ಅನುಸರಿಸಬೇಕಾದ ಮಾರ್ಗಗಳೇನು?</strong><br /> ತಮ್ಮ ಮಾತೃಭಾಷೆಯ ಮೇಲೆ ಕನ್ನಡಿಗರಿಗೆ ಪ್ರೀತಿ ಮತ್ತು ಅಭಿಮಾನ ಇರುವವರೆಗೆ ಕನ್ನಡಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆಯಾಗುವುದಿಲ್ಲ. ತೆಲುಗು, ತಮಿಳು ಸೇರಿದಂತೆ ಇತರ ಭಾಷೆಗಳ ಪ್ರಭಾವವಿದ್ದರೂ ಕನ್ನಡಿಗರು ಹೆಚ್ಚು ಹೆಚ್ಚು ಕನ್ನಡ ಮಾತನಾಡುವ ಮೂಲಕ ಭಾಷೆ ರಕ್ಷಿಸಬಹುದು. <br /> ಇತರ ಭಾಷೆ ಬಗ್ಗೆ ಗೌರವವಿರಬೇಕು. ಆದರೆ ಕನ್ನಡದ ಬಗ್ಗೆ ಪ್ರೀತಿ ಮತ್ತು ಅಭಿಮಾನ ಇರಬೇಕು. <br /> ಜನಸಾಮಾನ್ಯರ ಮತ್ತು ದೈನಂದಿನ ಭಾಷೆಯಾಗಿ ಇರುವಷ್ಟು ದಿನ ಕನ್ನಡಕ್ಕೆ ಯಾವುದೇ ರೀತಿಯಲ್ಲೂ ಅಪಾಯವಿಲ್ಲ.<br /> <strong><br /> * ಜಿಲ್ಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಕನ್ನಡದ ಕಾರ್ಯಗಳು ಆಗುತ್ತಿವೆಯೇ ? ಸಾಹಿತ್ಯ-ಸಾಂಸ್ಕೃತಿಕ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಎದುರಾಗುತ್ತಿರುವ ತೊಡಕುಗಳೇನು?</strong><br /> ಕೋಲಾರದಿಂದ ಬೇರ್ಪಟು ನಾಲ್ಕು ವರ್ಷಗಳ ಹಿಂದೆಯಷ್ಟೇ ಚಿಕ್ಕಬಳ್ಳಾಪುರ ಜಿಲ್ಲೆಯು ಅಸ್ತಿತ್ವಕ್ಕೆ ಬಂದಿದೆ. ಸಾಹಿತ್ಯ- ಸಾಂಸ್ಕೃತಿಕ ಕಾರ್ಯಕ್ರಮಳಿಗಾಗಿ ಪ್ರತ್ಯೇಕ ಸಭಾಂಗಣಗಳಿಲ್ಲ, ಕನ್ನಡ ಭವನಗಳಿಲ್ಲ. ಕಾರ್ಯಕ್ರಮಗಳನ್ನು ಆಯೋಜಿಸಲು ಮತ್ತು ವೀಕ್ಷಿಸಲು ಸೂಕ್ತ ರೀತಿಯ ವೇದಿಕೆ ಮತ್ತು ವ್ಯವಸ್ಥೆಯಿಲ್ಲ.<br /> ಕನ್ನಡದ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲು ಅವಕಾಶಗಳಿಲ್ಲ. ಈ ಎಲ್ಲ ಸಮಸ್ಯೆ ಮತ್ತು ಕೊರತೆಗಳ ಬಗ್ಗೆ ಕನ್ನಡಪರ ಸಂಘಟನೆಗಳು, ಜನಪ್ರತಿನಿಧಿಗಳು, ಕನ್ನಡಪ್ರೇಮಿಗಳು ಸರ್ಕಾರದ ಗಮನಕ್ಕೆ ತರಬೇಕು. ಸಮಸ್ಯೆ ನಿವಾರಣೆಗೆ ಸರ್ಕಾರದ ಮೇಲೆ ಒತ್ತಡ ಹೇರಬೇಕು.<br /> <br /> <strong>* ಕನ್ನಡ ಭಾಷೆ ಉಳಿಸಿ, ಬೆಳೆಸಲು ಏನಾಗಬೇಕು?</strong><br /> ಕನ್ನಡಿಗರು ತಾವು ಮಾತನಾಡುವುದರ ಜೊತೆಗೆ ಪರಭಾಷಿಕರಿಗೂ ಕನ್ನಡ ಕಲಿಸಬೇಕು. ಕನ್ನಡ ಕಲಿಕೆ ಅನಿವಾರ್ಯ ಎಂಬ ವಾತಾವರಣ ಸೃಷ್ಟಿಸಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>