<p>ಬಾಗಲಕೋಟೆ: ಪಕ್ಷೇತರರಾಗಿ ಕಣದಲ್ಲಿರುವ ಇನ್ನೊಬ್ಬ ಅಭ್ಯರ್ಥಿ ನಾಗಪ್ಪ ಫಕೀರಪ್ಪ ಶಿರಗುಪ್ಪಿ, ನಾಮಪತ್ರ ಹಿಂಪಡೆಯಲು ಇಟ್ಟ ಬೇಡಿಕೆ ₨ 1 ಲಕ್ಷ!<br /> <br /> ಹೌದು, ಚುನಾವಣಾಧಿಕಾರಿ ಕಚೇರಿ ಸಮೀಪದಲ್ಲೇ, ಅದರಲ್ಲೂ ಮಾಧ್ಯಮ ಪ್ರತಿನಿಧಿಗಳು, ಪೊಲೀಸರ ಎದುರಲ್ಲೇ ನಾಗಪ್ಪ ಅವರನ್ನು ನಾಮಪತ್ರ ಹಿಂಪಡೆಯುವಂತೆ ರಾಷ್ಟ್ರೀಯ ಪಕ್ಷವೊಂದರ ಜಿಲ್ಲಾ ಘಟಕದ ಅಧ್ಯಕ್ಷರು ಮನವಿ ಮಾಡಿದರು.<br /> <br /> ‘ಚುನಾವಣೆಗಾಗಿ ನಾನು ಈಗಾಗಲೇ ₨ 80 ಸಾವಿರ ಖರ್ಚು ಮಾಡಿದ್ದೇನೆ, ₨ 1 ಲಕ್ಷ ಹಣ ನೀಡುವುದಾದರೇ ಮಾತ್ರ ನಾಮಪತ್ರ ಹಿಂಪಡೆಯುತ್ತೇನೆ’ ಎಂದು ಅವರು ಬೇಡಿಕೆ ಇಟ್ಟರು. ಇದಕ್ಕೆ ಒಪ್ಪದ ರಾಷ್ಟ್ರೀಯ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರು, ‘₨ 40 ಸಾವಿರ ನೀಡುತ್ತೇನೆ. ಇದಕ್ಕೂ ಹೆಚ್ಚು ನೀಡಲು ಸಾಧ್ಯವಿಲ್ಲ, ಒಪ್ಪಿಕೊಂಡು ನಾಮಪತ್ರ ಹಿಂದಕ್ಕೆ ತೆಗೆದುಕೊಳ್ಳಿ’ ಎಂದು ಪಕ್ಷದ ಶಾಲನ್ನು ಪಕ್ಷೇತರ ಅಭ್ಯರ್ಥಿಯ ಕೊರಳಿಗೆ ಹಾಕಲು ಮುಂದಾದರು.<br /> <br /> ಇದಕ್ಕೆ ಒಪ್ಪದ ಅವರು ಸಾಧ್ಯವಿಲ್ಲ ಎಂದು ಹೊರಬಂದರು. ಅಷ್ಟೊತ್ತಿಗಾಗಲೇ ನಾಮಪತ್ರ ಹಿಂಪಡೆಯವ ಸಮಯ ಮುಕ್ತಾಯವಾದ ಸುದ್ದಿ ತಿಳಿದ ನಾಗಪ್ಪ, ಗುಪ್ತಚರ ಪೊಲೀಸರ ಬಳಿಗೆ ಬಂದು, ‘ಚುನಾವಣಾಧಿಕಾರಿಗಳು ಪಾರ್ಟಿ ಫಂಡ್ ಎಷ್ಟು ಕೊಡುತ್ತಾರೆ’ ಎಂದು ಪ್ರಶ್ನಿಸಿದರು!<br /> <br /> ದಿಗಿಲುಗೊಂಡ ಗುಪ್ತಚರ ಪೊಲೀಸರು, ‘ಮೊದಲು ಚುನಾವಣೆಯಲ್ಲಿ ಗೆಲ್ಲು, ಆಮೇಲೆ ನಿನ್ನ ಬಳಿಗೆ ಕೋಟಿ ಕೋಟಿ ಹಣ ಬರುತ್ತೆ’ ಎಂದು ತಮಾಷೆ ಮಾಡಿದರು. ಆದರೆ, ಪೊಲೀಸರ ಮಾತು ನಿಜವೆಂದು ಭಾವಿಸಿದ ಆ ಅಭ್ಯರ್ಥಿಯ ಖುಷಿ ಹೇಳತೀರದಾಯಿತು. ‘ಅಷ್ಟೊಂದು ಹಣ ಬರುವುದಾದರೇ ನಾನು ಯಾವುದೇ ಕಾರಣಕ್ಕೂ ನಾಮಪತ್ರ ಹಿಂಪಡೆಯುವುದಿಲ್ಲ’ ಎಂದು ಘೋಷಿಸಿ ಹೊರನಡೆದರು.ಕೊನೆಗೂ ಕಣದಲ್ಲೇ ಉಳಿದ ಈ ಅಭ್ಯರ್ಥಿಗೆ ಚುನಾವಣಾ ಆಯೋಗ ನೀಡಿರುವ ಚಿಹ್ನೆ ಬಕೆಟ್!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಾಗಲಕೋಟೆ: ಪಕ್ಷೇತರರಾಗಿ ಕಣದಲ್ಲಿರುವ ಇನ್ನೊಬ್ಬ ಅಭ್ಯರ್ಥಿ ನಾಗಪ್ಪ ಫಕೀರಪ್ಪ ಶಿರಗುಪ್ಪಿ, ನಾಮಪತ್ರ ಹಿಂಪಡೆಯಲು ಇಟ್ಟ ಬೇಡಿಕೆ ₨ 1 ಲಕ್ಷ!<br /> <br /> ಹೌದು, ಚುನಾವಣಾಧಿಕಾರಿ ಕಚೇರಿ ಸಮೀಪದಲ್ಲೇ, ಅದರಲ್ಲೂ ಮಾಧ್ಯಮ ಪ್ರತಿನಿಧಿಗಳು, ಪೊಲೀಸರ ಎದುರಲ್ಲೇ ನಾಗಪ್ಪ ಅವರನ್ನು ನಾಮಪತ್ರ ಹಿಂಪಡೆಯುವಂತೆ ರಾಷ್ಟ್ರೀಯ ಪಕ್ಷವೊಂದರ ಜಿಲ್ಲಾ ಘಟಕದ ಅಧ್ಯಕ್ಷರು ಮನವಿ ಮಾಡಿದರು.<br /> <br /> ‘ಚುನಾವಣೆಗಾಗಿ ನಾನು ಈಗಾಗಲೇ ₨ 80 ಸಾವಿರ ಖರ್ಚು ಮಾಡಿದ್ದೇನೆ, ₨ 1 ಲಕ್ಷ ಹಣ ನೀಡುವುದಾದರೇ ಮಾತ್ರ ನಾಮಪತ್ರ ಹಿಂಪಡೆಯುತ್ತೇನೆ’ ಎಂದು ಅವರು ಬೇಡಿಕೆ ಇಟ್ಟರು. ಇದಕ್ಕೆ ಒಪ್ಪದ ರಾಷ್ಟ್ರೀಯ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರು, ‘₨ 40 ಸಾವಿರ ನೀಡುತ್ತೇನೆ. ಇದಕ್ಕೂ ಹೆಚ್ಚು ನೀಡಲು ಸಾಧ್ಯವಿಲ್ಲ, ಒಪ್ಪಿಕೊಂಡು ನಾಮಪತ್ರ ಹಿಂದಕ್ಕೆ ತೆಗೆದುಕೊಳ್ಳಿ’ ಎಂದು ಪಕ್ಷದ ಶಾಲನ್ನು ಪಕ್ಷೇತರ ಅಭ್ಯರ್ಥಿಯ ಕೊರಳಿಗೆ ಹಾಕಲು ಮುಂದಾದರು.<br /> <br /> ಇದಕ್ಕೆ ಒಪ್ಪದ ಅವರು ಸಾಧ್ಯವಿಲ್ಲ ಎಂದು ಹೊರಬಂದರು. ಅಷ್ಟೊತ್ತಿಗಾಗಲೇ ನಾಮಪತ್ರ ಹಿಂಪಡೆಯವ ಸಮಯ ಮುಕ್ತಾಯವಾದ ಸುದ್ದಿ ತಿಳಿದ ನಾಗಪ್ಪ, ಗುಪ್ತಚರ ಪೊಲೀಸರ ಬಳಿಗೆ ಬಂದು, ‘ಚುನಾವಣಾಧಿಕಾರಿಗಳು ಪಾರ್ಟಿ ಫಂಡ್ ಎಷ್ಟು ಕೊಡುತ್ತಾರೆ’ ಎಂದು ಪ್ರಶ್ನಿಸಿದರು!<br /> <br /> ದಿಗಿಲುಗೊಂಡ ಗುಪ್ತಚರ ಪೊಲೀಸರು, ‘ಮೊದಲು ಚುನಾವಣೆಯಲ್ಲಿ ಗೆಲ್ಲು, ಆಮೇಲೆ ನಿನ್ನ ಬಳಿಗೆ ಕೋಟಿ ಕೋಟಿ ಹಣ ಬರುತ್ತೆ’ ಎಂದು ತಮಾಷೆ ಮಾಡಿದರು. ಆದರೆ, ಪೊಲೀಸರ ಮಾತು ನಿಜವೆಂದು ಭಾವಿಸಿದ ಆ ಅಭ್ಯರ್ಥಿಯ ಖುಷಿ ಹೇಳತೀರದಾಯಿತು. ‘ಅಷ್ಟೊಂದು ಹಣ ಬರುವುದಾದರೇ ನಾನು ಯಾವುದೇ ಕಾರಣಕ್ಕೂ ನಾಮಪತ್ರ ಹಿಂಪಡೆಯುವುದಿಲ್ಲ’ ಎಂದು ಘೋಷಿಸಿ ಹೊರನಡೆದರು.ಕೊನೆಗೂ ಕಣದಲ್ಲೇ ಉಳಿದ ಈ ಅಭ್ಯರ್ಥಿಗೆ ಚುನಾವಣಾ ಆಯೋಗ ನೀಡಿರುವ ಚಿಹ್ನೆ ಬಕೆಟ್!</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>