<p><strong>ಲಂಡನ್ (ಪಿಟಿಐ): </strong>ಇಲ್ಲಿನ ಭಾರತದ ರಾಯಭಾರಿ ಕಚೇರಿಯನ್ನು `ನಿಯಂತ್ರಣವಿಲ್ಲದ~ ಕಚೇರಿ ಹಾಗೂ ಭಾರತದಲ್ಲಿ ಭ್ರಷ್ಟಾಚಾರ ಕೊನೆಗೊಳಿಸುವ ಕ್ರಮ ಕೈಗೊಳ್ಳಲು ಕಾಂಗ್ರೆಸ್ ಪಕ್ಷ `ನಿರಾಕರಿಸುತ್ತಿದೆ~ ಎಂದೂ ಸಂಸತ್ತಿನಲ್ಲಿ ಲೇಬರ್ ಪಕ್ಷದ ಸಂಸದ ಬೆರ್ರಿ ಗಾರ್ಡಿನರ್ ಆರೋಪಿಸಿದ್ದಾರೆ.<br /> <br /> ಇಂಗ್ಲೆಂಡ್- ಭಾರತ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದಂತೆ ಇರುವ ಸರ್ವ ಪಕ್ಷಗಳ ತಂಡದ ಅಧ್ಯಕ್ಷರೂ ಆಗಿರುವ ಗಾರ್ಡಿನರ್, ಭ್ರಷ್ಟಾಚಾರ ವಿರೋಧಿಸಿ ಚಳವಳಿ ನಡೆಸುತ್ತಿರುವ ಅಣ್ಣಾ ಹಜಾರೆ ಮತ್ತು ಅವರ ಬೆಂಬಲಿಗರ ಮೇಲೆ `ಉದ್ದೇಶಪೂರ್ವಕವಾಗಿ ಹತಾಶೆಯಿಂದ ದಾಳಿ ನಡೆಸಲಾಗಿದೆ ಮತ್ತು ಹೋರಾಟ ದುರ್ಬಲಗೊಳಿಸಲಾಗಿದೆ~ ಎಂದೂ ದೂರಿದ್ದಾರೆ.<br /> <br /> `ಭಾಷಣದಲ್ಲಿ ನಾನು, ಭಾರತವು ತನ್ನ ಅರ್ಥವ್ಯವಸ್ಥೆ ಸುಧಾರಣೆಗೆ ವಿಫಲವಾಗಿರುವುದನ್ನು ಪ್ರಶ್ನಿಸಿದ್ದೇನೆ ಮತ್ತು ಭಾರತದ ರಾಯಭಾರ ಕಚೇರಿಯನ್ನು ನಿಯಂತ್ರಣವಿಲ್ಲದ ಕಚೇರಿ ಎಂದು ಬಣ್ಣಿಸಿದ್ದೇನೆ~ ಎಂದು ಪತ್ರಿಕಾ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.<br /> <br /> `ಜಾಗತಿಕ ವ್ಯಾಪಾರ ಪಾಲುದಾರಿಕೆಯಲ್ಲಿ ಭಾರತವು ಇಂಗ್ಲೆಂಡ್ನ ಸ್ಥಾನವನ್ನು ತಗ್ಗಿಸಿದೆ. ಬುಧವಾರ ಬೆಳಗಿನ ಚರ್ಚೆಯಲ್ಲಿ ಭಾರತದ ರಾಯಭಾರಿ ಕಚೇರಿಯ ಪ್ರತಿನಿಧಿ ಗೈರು ಹಾಜರಾಗಿರುವುದರಿಂದ ಇದು ಸ್ಪಷ್ಟವಾಗಿದೆ~ ಎಂದಿದ್ದಾರೆ.<br /> <br /> `ಭಾರತದ ನೈಜ ಮಿತ್ರ~ ಎಂದು ತಮ್ಮನ್ನು ಕರೆದುಕೊಂಡಿರುವ ಅವರು, ಆರ್ಥಿಕ ಬೆಳವಣಿಗೆಗೆ ತನ್ನ ಸಾಮರ್ಥ್ಯವನ್ನು ಪೂರ್ಣ ಬಳಸಿಕೊಳ್ಳಲು ಭಾರತ ವಿಫಲವಾಗಿದೆ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಂಡನ್ (ಪಿಟಿಐ): </strong>ಇಲ್ಲಿನ ಭಾರತದ ರಾಯಭಾರಿ ಕಚೇರಿಯನ್ನು `ನಿಯಂತ್ರಣವಿಲ್ಲದ~ ಕಚೇರಿ ಹಾಗೂ ಭಾರತದಲ್ಲಿ ಭ್ರಷ್ಟಾಚಾರ ಕೊನೆಗೊಳಿಸುವ ಕ್ರಮ ಕೈಗೊಳ್ಳಲು ಕಾಂಗ್ರೆಸ್ ಪಕ್ಷ `ನಿರಾಕರಿಸುತ್ತಿದೆ~ ಎಂದೂ ಸಂಸತ್ತಿನಲ್ಲಿ ಲೇಬರ್ ಪಕ್ಷದ ಸಂಸದ ಬೆರ್ರಿ ಗಾರ್ಡಿನರ್ ಆರೋಪಿಸಿದ್ದಾರೆ.<br /> <br /> ಇಂಗ್ಲೆಂಡ್- ಭಾರತ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದಂತೆ ಇರುವ ಸರ್ವ ಪಕ್ಷಗಳ ತಂಡದ ಅಧ್ಯಕ್ಷರೂ ಆಗಿರುವ ಗಾರ್ಡಿನರ್, ಭ್ರಷ್ಟಾಚಾರ ವಿರೋಧಿಸಿ ಚಳವಳಿ ನಡೆಸುತ್ತಿರುವ ಅಣ್ಣಾ ಹಜಾರೆ ಮತ್ತು ಅವರ ಬೆಂಬಲಿಗರ ಮೇಲೆ `ಉದ್ದೇಶಪೂರ್ವಕವಾಗಿ ಹತಾಶೆಯಿಂದ ದಾಳಿ ನಡೆಸಲಾಗಿದೆ ಮತ್ತು ಹೋರಾಟ ದುರ್ಬಲಗೊಳಿಸಲಾಗಿದೆ~ ಎಂದೂ ದೂರಿದ್ದಾರೆ.<br /> <br /> `ಭಾಷಣದಲ್ಲಿ ನಾನು, ಭಾರತವು ತನ್ನ ಅರ್ಥವ್ಯವಸ್ಥೆ ಸುಧಾರಣೆಗೆ ವಿಫಲವಾಗಿರುವುದನ್ನು ಪ್ರಶ್ನಿಸಿದ್ದೇನೆ ಮತ್ತು ಭಾರತದ ರಾಯಭಾರ ಕಚೇರಿಯನ್ನು ನಿಯಂತ್ರಣವಿಲ್ಲದ ಕಚೇರಿ ಎಂದು ಬಣ್ಣಿಸಿದ್ದೇನೆ~ ಎಂದು ಪತ್ರಿಕಾ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.<br /> <br /> `ಜಾಗತಿಕ ವ್ಯಾಪಾರ ಪಾಲುದಾರಿಕೆಯಲ್ಲಿ ಭಾರತವು ಇಂಗ್ಲೆಂಡ್ನ ಸ್ಥಾನವನ್ನು ತಗ್ಗಿಸಿದೆ. ಬುಧವಾರ ಬೆಳಗಿನ ಚರ್ಚೆಯಲ್ಲಿ ಭಾರತದ ರಾಯಭಾರಿ ಕಚೇರಿಯ ಪ್ರತಿನಿಧಿ ಗೈರು ಹಾಜರಾಗಿರುವುದರಿಂದ ಇದು ಸ್ಪಷ್ಟವಾಗಿದೆ~ ಎಂದಿದ್ದಾರೆ.<br /> <br /> `ಭಾರತದ ನೈಜ ಮಿತ್ರ~ ಎಂದು ತಮ್ಮನ್ನು ಕರೆದುಕೊಂಡಿರುವ ಅವರು, ಆರ್ಥಿಕ ಬೆಳವಣಿಗೆಗೆ ತನ್ನ ಸಾಮರ್ಥ್ಯವನ್ನು ಪೂರ್ಣ ಬಳಸಿಕೊಳ್ಳಲು ಭಾರತ ವಿಫಲವಾಗಿದೆ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>