<p><strong>ದಾವಣಗೆರೆ:</strong> ನೀರಿನ ತೊಟ್ಟಿ (ಸಂಪ್) ಯಲ್ಲಿ 12 ನಾಗರಹಾವಿನ ಮರಿಗಳು ಪತ್ತೆಯಾದ ಘಟನೆ ನಗರದ ಎಸ್ಎಸ್ ಲೇಔಟ್ `ಎ~ ಬ್ಲಾಕ್, 6ನೇ ಕ್ರಾಸ್ನ ಮನೆಯೊಂದರಲ್ಲಿ ಶುಕ್ರವಾರ ನಡೆದಿದೆ.<br /> <br /> ಇಲ್ಲಿನ ವಿದ್ಯುತ್ ಗುತ್ತಿಗೆದಾರ ನಟರಾಜ್ ಎಂಬುವರ ಮನೆಯಲ್ಲಿ ಮರಿಗಳು ಪತ್ತೆಯಾಗಿವೆ. ಅವರ ಪತ್ನಿ ವಿಜಯಲಕ್ಷ್ಮೀ ಅವರು ತೊಟ್ಟಿಯಲ್ಲಿ ನೀರು ಪರಿಶೀಲಿಸಲು ಮುಚ್ಚಳ ತೆರೆದಾಗ ಖಾಲಿ ತೊಟ್ಟಿಯಲ್ಲಿ ಮರಿಗಳು ಪತ್ತೆಯಾಗಿವೆ. ಮರಿಗಳು ಮುಕ್ಕಾಲು ಅಡಿ ಹಾಗೂ 1 ಅಡಿ ಗಾತ್ರದಲ್ಲಿ ಇದ್ದವು. ಗಾಬರಿಗೊಂಡ ಅವರು, ಹಾವು ಹಿಡಿಯುವ ಪರಿಣತ, ಸಮಾಜ ಸೇವಕ ಪ್ರದೀಪ್ ಅವರಿಗೆ ಕರೆ ಮಾಡಿದರು.<br /> <br /> ಸ್ಥಳಕ್ಕೆ ಆಗಮಿಸಿದ ಪ್ರದೀಪ್ ಅವರ ಪುತ್ರ, ಎಂಜಿನಿಯರಿಂಗ್ ವಿದ್ಯಾರ್ಥಿ ಪವನ್ಕುಮಾರ್ ಹಾವಿನಮರಿಗಳನ್ನು ಹಿಡಿದು ಡಬ್ಬಿಯೊಂದರಲ್ಲಿ ಹಾಕಿ ಕುಂದುವಾಡ ಕೆರೆ ಸಮೀಪ ಹುತ್ತಕ್ಕೆ ಬಿಟ್ಟರು. ಒಂದು ಮರಿ ಮೊದಲೇ ಮೃತಪಟ್ಟಿತ್ತು. <br /> <br /> ತೊಟ್ಟಿಯ ಹೆಚ್ಚುವರಿ ನೀರು ಹೊರಹೋಗುವ ಪೈಪ್ ಮೂಲಕ ಈ ಮರಿಗಳು ಬಂದಿರಬಹುದು ಎಂದು ಶಂಕಿಸಲಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ನೀರಿನ ತೊಟ್ಟಿ (ಸಂಪ್) ಯಲ್ಲಿ 12 ನಾಗರಹಾವಿನ ಮರಿಗಳು ಪತ್ತೆಯಾದ ಘಟನೆ ನಗರದ ಎಸ್ಎಸ್ ಲೇಔಟ್ `ಎ~ ಬ್ಲಾಕ್, 6ನೇ ಕ್ರಾಸ್ನ ಮನೆಯೊಂದರಲ್ಲಿ ಶುಕ್ರವಾರ ನಡೆದಿದೆ.<br /> <br /> ಇಲ್ಲಿನ ವಿದ್ಯುತ್ ಗುತ್ತಿಗೆದಾರ ನಟರಾಜ್ ಎಂಬುವರ ಮನೆಯಲ್ಲಿ ಮರಿಗಳು ಪತ್ತೆಯಾಗಿವೆ. ಅವರ ಪತ್ನಿ ವಿಜಯಲಕ್ಷ್ಮೀ ಅವರು ತೊಟ್ಟಿಯಲ್ಲಿ ನೀರು ಪರಿಶೀಲಿಸಲು ಮುಚ್ಚಳ ತೆರೆದಾಗ ಖಾಲಿ ತೊಟ್ಟಿಯಲ್ಲಿ ಮರಿಗಳು ಪತ್ತೆಯಾಗಿವೆ. ಮರಿಗಳು ಮುಕ್ಕಾಲು ಅಡಿ ಹಾಗೂ 1 ಅಡಿ ಗಾತ್ರದಲ್ಲಿ ಇದ್ದವು. ಗಾಬರಿಗೊಂಡ ಅವರು, ಹಾವು ಹಿಡಿಯುವ ಪರಿಣತ, ಸಮಾಜ ಸೇವಕ ಪ್ರದೀಪ್ ಅವರಿಗೆ ಕರೆ ಮಾಡಿದರು.<br /> <br /> ಸ್ಥಳಕ್ಕೆ ಆಗಮಿಸಿದ ಪ್ರದೀಪ್ ಅವರ ಪುತ್ರ, ಎಂಜಿನಿಯರಿಂಗ್ ವಿದ್ಯಾರ್ಥಿ ಪವನ್ಕುಮಾರ್ ಹಾವಿನಮರಿಗಳನ್ನು ಹಿಡಿದು ಡಬ್ಬಿಯೊಂದರಲ್ಲಿ ಹಾಕಿ ಕುಂದುವಾಡ ಕೆರೆ ಸಮೀಪ ಹುತ್ತಕ್ಕೆ ಬಿಟ್ಟರು. ಒಂದು ಮರಿ ಮೊದಲೇ ಮೃತಪಟ್ಟಿತ್ತು. <br /> <br /> ತೊಟ್ಟಿಯ ಹೆಚ್ಚುವರಿ ನೀರು ಹೊರಹೋಗುವ ಪೈಪ್ ಮೂಲಕ ಈ ಮರಿಗಳು ಬಂದಿರಬಹುದು ಎಂದು ಶಂಕಿಸಲಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>