<p>ಮೀರತ್: `ಆರಂಭದಲ್ಲಿಯೇ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕಾರಣ ಕ್ರೀಸ್ಗೆ ಅಂಟಿಕೊಂಡು ನಿಲ್ಲುವ ಅಗತ್ಯವಿತ್ತು. ಆದ್ದರಿಂದ ಆರಂಭದಲ್ಲಿ ರನ್ ಗಳಿಸಲು ಅವಸರ ಮಾಡಲಿಲ್ಲ. ನಂತರ ನಿಧಾನವಾಗಿ ಶತಕದತ್ತ ಹೆಜ್ಜೆ ಹಾಕಿದೆ~ ಎಂದು ಉತ್ತರಪ್ರದೇಶ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಪರ್ವಿಂದರ್ ಸಿಂಗ್ ಹೇಳಿದರು.<br /> <br /> ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಒಟ್ಟು ಎಂಟು ಶತಕ ಗಳಿಸಿರುವ ಈ ಬ್ಯಾಟ್ಸ್ಮನ್, ರಣಜಿಯಲ್ಲಿ ಏಳು ಶತಕ ಕಲೆ ಹಾಕಿದ್ದಾರೆ. ದುಲೀಪ್ ಟ್ರೋಫಿಯ ಪಂದ್ಯದಲ್ಲಿಯೂ ಒಂದು ಶತಕ ಗಳಿಸಿದ್ದಾರೆ. ಸೋಮವಾರದ ದಿನದಾಟದ ನಂತರ ಪತ್ರಕರ್ತರ ಜೊತೆ ಮಾತನಾಡಿದ ಪರ್ವಿಂದರ್, `ಅನುಭವಿ ಮಹಮ್ಮದ್ ಕೈಫ್ ಮೊದಲ ಅವಧಿಯಲ್ಲಿಯೇ ವಿಕೆಟ್ ಒಪ್ಪಿಸಿದರು. ತಂಡಕ್ಕೆ ರನ್ ಗಳಿಸುವುದು ಮುಖ್ಯವಾಗಿರಲಿಲ್ಲ.<br /> <br /> ವಿಕೆಟ್ ಕಳೆದುಕೊಳ್ಳದಂತೆ ಎಚ್ಚರಿಕೆ ವಹಿಸಿದರೆ ಸಾಕಿತ್ತು. ಈ ಕುರಿತು ದಿನದಾಟ ಆರಂಭಕ್ಕೆ ಮುನ್ನವೇ ಡ್ರೆಸ್ಸಿಂಗ್ ಕೊಠಡಿಯಲ್ಲಿ ಮಾತನಾಡಿಕೊಂಡಿದ್ದೆವು. ಅದಕ್ಕಾಗಿ ಹೆಚ್ಚು ಹೊತ್ತು ಕ್ರೀಸ್ನಲ್ಲಿದ್ದೆ~ ಎಂದು ನುಡಿದರು.<br /> <br /> `ಸ್ಪಿನ್ನರ್ ಕೆ.ಪಿ. ಅಪ್ಪಣ್ಣ ಉತ್ತಮವಾಗಿ ಬೌಲಿಂಗ್ ಮಾಡಿದರು. ಅವರ ಓವರ್ನಲ್ಲಿ ಎಚ್ಚರಿಕೆಯಿಂದ ಆಡುತ್ತಿದ್ದೆ. ನಂತರ ಅವಕಾಶ ಸಿಕ್ಕಾಗಲೆಲ್ಲಾ ಬೌಂಡರಿ ಬಾರಿಸುತ್ತಿದ್ದೆ. ಜೊತೆಗೂಡಿ ಆಡಿದ ಭುವನೇಶ್ವರ್ ಕುಮಾರ್ ಸಹ ಉತ್ತಮ ನೆರವು ನೀಡಿದರು. ಇಲ್ಲವಾದರೆ ದ್ವಿಶತಕದ ಜೊತೆಯಾಟ ಸಾಧ್ಯವಾಗುತ್ತಿರಲಿಲ್ಲ~ ಎಂದು ಅವರು ಅಭಿಪ್ರಾಯ ಪಟ್ಟರು.<br /> <br /> ಬೆಳಿಗ್ಗೆ ಡಿಕ್ಲೇರ್: `ನಮ್ಮ ತಂಡದವರು ಉತ್ತಮವಾಗಿ ರನ್ ಕಲೆ ಹಾಕಿದ್ದಾರೆ. 300 ರನ್ ಗಳಿಸಿದ ನಂತರ ಡಿಕ್ಲೇರ್ ಮಾಡಿಕೊಳ್ಳಬೇಕು ಎಂದುಕೊಂಡಿದ್ದೆವು. ವಿನಾಕಾರಣ ಅಪಾಯಕ್ಕೆ ಅವಕಾಶ ನೀಡುವುದು ಬೇಡ ಎನ್ನುವ ಕಾರಣಕ್ಕೆ ಮೂರನೇ ದಿನ ಪೂರ್ತಿ ಬ್ಯಾಟಿಂಗ್ ಮಾಡಲು ನಿರ್ಧರಿಸಲಾಯಿತು~ ಎಂದು ಉತ್ತರಪ್ರದೇಶ ತಂಡದ ತರಬೇತುದಾರ ಕನ್ನಡಿಗ ವೆಂಕಟೇಶ್ ಪ್ರಸಾದ್ ಹೇಳಿದರು. ಈ ತಂಡ ಮಂಗಳವಾರ ಮೊದಲ ಅವಧಿಯ ಪೂರ್ವದಲ್ಲಿಯೇ ಡಿಕ್ಲೇರ್ ಮಾಡಿಕೊಳ್ಳಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೀರತ್: `ಆರಂಭದಲ್ಲಿಯೇ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕಾರಣ ಕ್ರೀಸ್ಗೆ ಅಂಟಿಕೊಂಡು ನಿಲ್ಲುವ ಅಗತ್ಯವಿತ್ತು. ಆದ್ದರಿಂದ ಆರಂಭದಲ್ಲಿ ರನ್ ಗಳಿಸಲು ಅವಸರ ಮಾಡಲಿಲ್ಲ. ನಂತರ ನಿಧಾನವಾಗಿ ಶತಕದತ್ತ ಹೆಜ್ಜೆ ಹಾಕಿದೆ~ ಎಂದು ಉತ್ತರಪ್ರದೇಶ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಪರ್ವಿಂದರ್ ಸಿಂಗ್ ಹೇಳಿದರು.<br /> <br /> ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಒಟ್ಟು ಎಂಟು ಶತಕ ಗಳಿಸಿರುವ ಈ ಬ್ಯಾಟ್ಸ್ಮನ್, ರಣಜಿಯಲ್ಲಿ ಏಳು ಶತಕ ಕಲೆ ಹಾಕಿದ್ದಾರೆ. ದುಲೀಪ್ ಟ್ರೋಫಿಯ ಪಂದ್ಯದಲ್ಲಿಯೂ ಒಂದು ಶತಕ ಗಳಿಸಿದ್ದಾರೆ. ಸೋಮವಾರದ ದಿನದಾಟದ ನಂತರ ಪತ್ರಕರ್ತರ ಜೊತೆ ಮಾತನಾಡಿದ ಪರ್ವಿಂದರ್, `ಅನುಭವಿ ಮಹಮ್ಮದ್ ಕೈಫ್ ಮೊದಲ ಅವಧಿಯಲ್ಲಿಯೇ ವಿಕೆಟ್ ಒಪ್ಪಿಸಿದರು. ತಂಡಕ್ಕೆ ರನ್ ಗಳಿಸುವುದು ಮುಖ್ಯವಾಗಿರಲಿಲ್ಲ.<br /> <br /> ವಿಕೆಟ್ ಕಳೆದುಕೊಳ್ಳದಂತೆ ಎಚ್ಚರಿಕೆ ವಹಿಸಿದರೆ ಸಾಕಿತ್ತು. ಈ ಕುರಿತು ದಿನದಾಟ ಆರಂಭಕ್ಕೆ ಮುನ್ನವೇ ಡ್ರೆಸ್ಸಿಂಗ್ ಕೊಠಡಿಯಲ್ಲಿ ಮಾತನಾಡಿಕೊಂಡಿದ್ದೆವು. ಅದಕ್ಕಾಗಿ ಹೆಚ್ಚು ಹೊತ್ತು ಕ್ರೀಸ್ನಲ್ಲಿದ್ದೆ~ ಎಂದು ನುಡಿದರು.<br /> <br /> `ಸ್ಪಿನ್ನರ್ ಕೆ.ಪಿ. ಅಪ್ಪಣ್ಣ ಉತ್ತಮವಾಗಿ ಬೌಲಿಂಗ್ ಮಾಡಿದರು. ಅವರ ಓವರ್ನಲ್ಲಿ ಎಚ್ಚರಿಕೆಯಿಂದ ಆಡುತ್ತಿದ್ದೆ. ನಂತರ ಅವಕಾಶ ಸಿಕ್ಕಾಗಲೆಲ್ಲಾ ಬೌಂಡರಿ ಬಾರಿಸುತ್ತಿದ್ದೆ. ಜೊತೆಗೂಡಿ ಆಡಿದ ಭುವನೇಶ್ವರ್ ಕುಮಾರ್ ಸಹ ಉತ್ತಮ ನೆರವು ನೀಡಿದರು. ಇಲ್ಲವಾದರೆ ದ್ವಿಶತಕದ ಜೊತೆಯಾಟ ಸಾಧ್ಯವಾಗುತ್ತಿರಲಿಲ್ಲ~ ಎಂದು ಅವರು ಅಭಿಪ್ರಾಯ ಪಟ್ಟರು.<br /> <br /> ಬೆಳಿಗ್ಗೆ ಡಿಕ್ಲೇರ್: `ನಮ್ಮ ತಂಡದವರು ಉತ್ತಮವಾಗಿ ರನ್ ಕಲೆ ಹಾಕಿದ್ದಾರೆ. 300 ರನ್ ಗಳಿಸಿದ ನಂತರ ಡಿಕ್ಲೇರ್ ಮಾಡಿಕೊಳ್ಳಬೇಕು ಎಂದುಕೊಂಡಿದ್ದೆವು. ವಿನಾಕಾರಣ ಅಪಾಯಕ್ಕೆ ಅವಕಾಶ ನೀಡುವುದು ಬೇಡ ಎನ್ನುವ ಕಾರಣಕ್ಕೆ ಮೂರನೇ ದಿನ ಪೂರ್ತಿ ಬ್ಯಾಟಿಂಗ್ ಮಾಡಲು ನಿರ್ಧರಿಸಲಾಯಿತು~ ಎಂದು ಉತ್ತರಪ್ರದೇಶ ತಂಡದ ತರಬೇತುದಾರ ಕನ್ನಡಿಗ ವೆಂಕಟೇಶ್ ಪ್ರಸಾದ್ ಹೇಳಿದರು. ಈ ತಂಡ ಮಂಗಳವಾರ ಮೊದಲ ಅವಧಿಯ ಪೂರ್ವದಲ್ಲಿಯೇ ಡಿಕ್ಲೇರ್ ಮಾಡಿಕೊಳ್ಳಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>