<p>ಬಾಗಲಕೋಟೆ: ಜಿಲ್ಲೆಯ ವಿವಿಧೆಡೆ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಮೂರು ಜನ ಮೃತಪಟ್ಟಿದ್ದಾರೆ.<br /> <br /> ಸೋಮವಾರ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ನೇತ್ರಗಳನ್ನು ಅವರ ಕುಟುಂಬದವರು ದಾನ ಮಾಡುವ ಮೂಲಕ ಸಾವಿನಲ್ಲೂ ಮಾನವೀಯತೆ ಮೆರೆದಿದೆ.<br /> <br /> ಹುನಗುಂದ ತಾಲ್ಲೂಕಿನ ಅಮೀನಗಡ ಬಸ್ ನಿಲ್ದಾಣ ಸಮೀಪ ಆಟೋ ಉರುಳಿಬಿದ್ದು ಜಾನಕ್ಕ ಮಲ್ಲಪ್ಪ ಬಂಡೇರಿ (30) ಸ್ಥಳದಲ್ಲೇ ಮೃತಪಟ್ಟರು.<br /> <br /> ಈ ಸಂದರ್ಭದಲ್ಲಿ ಅಮೀನಗಡ ವೈದ್ಯಾಧಿಕಾರಿ ಎಚ್.ಡಿ. ಚೇತನಾ ಮತ್ತು ಸಿಬ್ಬಂದಿ ಜಾನಕ್ಕಳ ಕುಟುಂಬ ದವರನ್ನು ಸಂಪರ್ಕಿಸಿ ನೇತ್ರದಾನದ ಮಾಡುವಂತೆ ಮನವೊಲಿಸಿದರು. ಇದಕ್ಕೆ ಸ್ಪಂದಿಸಿದ ಕುಟುಂಬ ವರ್ಗ ಜಾನಕ್ಕಳ ನೇತ್ರದಾನಕ್ಕೆ ಸಮ್ಮತಿಸಿದರು.<br /> <br /> ಬಳಿಕ ಸ್ಥಳಕ್ಕೆ ಆಗಮಿಸಿದ ಬಾಗಲಕೋಟೆ ನಗರದ ಎಸ್. ನಿಜಲಿಂಗಪ್ಪ ಆಸ್ಪತ್ರೆಯ ಸಿಬ್ಬಂದಿ ಜಾನಕ್ಕಳ ನೇತ್ರವನ್ನು ಪಡೆದುಕೊಂಡರು.<br /> <br /> ಘಟನೆ: ಅತಿವೇಗವಾಗಿ ಹೋಗುತ್ತಿದ್ದ ಆಟೋ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಉರುಳಿಬಿದ್ದ ಪರಿಣಾಮ ಜಾನಕ್ಕ ಮೃತಪಟ್ಟಿದ್ದು, ಆಕೆಯ ಮಗಳು ಶಶಿಕಲಾ ಬಂಡೇರಿ (10) ಸೇರಿದಂತೆ ಎಂಟು ಜನರು ಗಾಯಗೊಂಡಿದ್ದಾರೆ.<br /> <br /> ಗಾಯಾಳುಗಳು ಅಮೀನಗಡ ಮತ್ತು ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಟೋ ಚಾಲಕ ಹುಲಗಿನಾಳ ಗ್ರಾಮದ ಉಮೇಶ ಬಸಪ್ಪ ಇಟಗಿ ಪರಾರಿಯಾಗಿದ್ದಾನೆ. ಈ ಸಂಬಂಧ ಅಮೀನಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.<br /> <br /> <strong>ಬೈಕ್ ಸವಾರರಿಬ್ಬರ ಸಾವು</strong><br /> ಮುಧೋಳ ತಾಲ್ಲೂಕಿನ ಲೋಕಾಪುರ ಸಮೀಪ ಬೆಳಗಾವಿ ರಸ್ತೆಯಲ್ಲಿ ಸೋಮವಾರ ರಾತ್ರಿ ಬೈಕ್ ಮತ್ತು ಕಾಕು ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.<br /> <br /> ಮುಗಳಖೋಡದ ವಿವೇಕಾನಂದ ಗುರುವ (30), ಮುಧೋಳದ ಮಹಾಲಿಂಗ ಹಿಪ್ಪರಗಿ (32) ಮೃತಪಟ್ಟಿರುವ ಬೈಕ್ ಸವಾರರಾಗಿದ್ದಾರೆ. <br /> <br /> ಬೆಳಗಾವಿಯಿಂದ ಬೈಕ್ನಲ್ಲಿ ಬರುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದೆ.<br /> ಈ ಸಂಬಂಧ ಲೋಕಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬಾಗಲಕೋಟೆ: ಜಿಲ್ಲೆಯ ವಿವಿಧೆಡೆ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಮೂರು ಜನ ಮೃತಪಟ್ಟಿದ್ದಾರೆ.<br /> <br /> ಸೋಮವಾರ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಮಹಿಳೆಯ ನೇತ್ರಗಳನ್ನು ಅವರ ಕುಟುಂಬದವರು ದಾನ ಮಾಡುವ ಮೂಲಕ ಸಾವಿನಲ್ಲೂ ಮಾನವೀಯತೆ ಮೆರೆದಿದೆ.<br /> <br /> ಹುನಗುಂದ ತಾಲ್ಲೂಕಿನ ಅಮೀನಗಡ ಬಸ್ ನಿಲ್ದಾಣ ಸಮೀಪ ಆಟೋ ಉರುಳಿಬಿದ್ದು ಜಾನಕ್ಕ ಮಲ್ಲಪ್ಪ ಬಂಡೇರಿ (30) ಸ್ಥಳದಲ್ಲೇ ಮೃತಪಟ್ಟರು.<br /> <br /> ಈ ಸಂದರ್ಭದಲ್ಲಿ ಅಮೀನಗಡ ವೈದ್ಯಾಧಿಕಾರಿ ಎಚ್.ಡಿ. ಚೇತನಾ ಮತ್ತು ಸಿಬ್ಬಂದಿ ಜಾನಕ್ಕಳ ಕುಟುಂಬ ದವರನ್ನು ಸಂಪರ್ಕಿಸಿ ನೇತ್ರದಾನದ ಮಾಡುವಂತೆ ಮನವೊಲಿಸಿದರು. ಇದಕ್ಕೆ ಸ್ಪಂದಿಸಿದ ಕುಟುಂಬ ವರ್ಗ ಜಾನಕ್ಕಳ ನೇತ್ರದಾನಕ್ಕೆ ಸಮ್ಮತಿಸಿದರು.<br /> <br /> ಬಳಿಕ ಸ್ಥಳಕ್ಕೆ ಆಗಮಿಸಿದ ಬಾಗಲಕೋಟೆ ನಗರದ ಎಸ್. ನಿಜಲಿಂಗಪ್ಪ ಆಸ್ಪತ್ರೆಯ ಸಿಬ್ಬಂದಿ ಜಾನಕ್ಕಳ ನೇತ್ರವನ್ನು ಪಡೆದುಕೊಂಡರು.<br /> <br /> ಘಟನೆ: ಅತಿವೇಗವಾಗಿ ಹೋಗುತ್ತಿದ್ದ ಆಟೋ ಎದುರಿನಿಂದ ಬರುತ್ತಿದ್ದ ವಾಹನಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಉರುಳಿಬಿದ್ದ ಪರಿಣಾಮ ಜಾನಕ್ಕ ಮೃತಪಟ್ಟಿದ್ದು, ಆಕೆಯ ಮಗಳು ಶಶಿಕಲಾ ಬಂಡೇರಿ (10) ಸೇರಿದಂತೆ ಎಂಟು ಜನರು ಗಾಯಗೊಂಡಿದ್ದಾರೆ.<br /> <br /> ಗಾಯಾಳುಗಳು ಅಮೀನಗಡ ಮತ್ತು ಬಾಗಲಕೋಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಟೋ ಚಾಲಕ ಹುಲಗಿನಾಳ ಗ್ರಾಮದ ಉಮೇಶ ಬಸಪ್ಪ ಇಟಗಿ ಪರಾರಿಯಾಗಿದ್ದಾನೆ. ಈ ಸಂಬಂಧ ಅಮೀನಗಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.<br /> <br /> <strong>ಬೈಕ್ ಸವಾರರಿಬ್ಬರ ಸಾವು</strong><br /> ಮುಧೋಳ ತಾಲ್ಲೂಕಿನ ಲೋಕಾಪುರ ಸಮೀಪ ಬೆಳಗಾವಿ ರಸ್ತೆಯಲ್ಲಿ ಸೋಮವಾರ ರಾತ್ರಿ ಬೈಕ್ ಮತ್ತು ಕಾಕು ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.<br /> <br /> ಮುಗಳಖೋಡದ ವಿವೇಕಾನಂದ ಗುರುವ (30), ಮುಧೋಳದ ಮಹಾಲಿಂಗ ಹಿಪ್ಪರಗಿ (32) ಮೃತಪಟ್ಟಿರುವ ಬೈಕ್ ಸವಾರರಾಗಿದ್ದಾರೆ. <br /> <br /> ಬೆಳಗಾವಿಯಿಂದ ಬೈಕ್ನಲ್ಲಿ ಬರುತ್ತಿದ್ದ ಸಂದರ್ಭ ಅಪಘಾತ ಸಂಭವಿಸಿದೆ.<br /> ಈ ಸಂಬಂಧ ಲೋಕಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>