<p>`ಪಾಪನಾಶ ಮಾಡುವ ಕಡಲ ತಡಿ~ ಎಂದು ಪ್ರಸಿದ್ಧವಾಗಿದೆ ಈ ಸಮುದ್ರ. ಕೇರಳದ ತಿರುವನಂತಪುರದಿಂದ 57 ಕಿ.ಮೀ ದೂರದಲ್ಲಿ ಇರುವ ವರ್ಕಲಾ ಊರಿನಲ್ಲಿ ಇರುವ ಈ ಸುಂದರ ಶರಧಿ ಕಣ್ಮನ ತಣಿಸುವಂತಿದೆ. <br /> <br /> ಇಲ್ಲಿನ ಶುದ್ಧನೀರಿನ ಬುಗ್ಗೆಯಲ್ಲಿ ಸ್ನಾನ ಮಾಡಿ, `ಪಾಪ ಕಳೆದುಹೋಯಿತು~ ಎಂದು ನಂಬುವವರಿದ್ದಾರೆ. ಆದ್ದರಿಂದಲೇ ಈ ಪ್ರದೇಶಕ್ಕೆ `ಪಾಪನಾಶಂ ಸಮುದ್ರ~ ಎಂಬ ಹೆಸರು. <br /> <br /> ತೀರದ ಪಕ್ಕದಲ್ಲಿಯೇ 2000 ಸಾವಿರ ವರ್ಷದ ಹಳೆಯ ವಿಷ್ಣು ದೇವಾಲಯ ಮತ್ತು `ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು~ ಎಂಬ ಸಂದೇಶ ಸಾರಿದ ಶ್ರೀ ನಾರಾಯಣ ಗುರು ಅವರ ಶಿವಗಿರಿ ಮಠವೂ ಇದೆ. ಕೊಲ್ಲಂನಿಂದ 37 ಕಿ.ಮೀ ಅಂತರದಲ್ಲಿ ಇರುವ ಈ ಸಮುದ್ರ ತೀರಕ್ಕೆ ರೆಸಾರ್ಟ್ಗಳಿಂದ ಆಧುನಿಕ ಕಳೆ ಬಂದಿದೆ.<br /> <br /> ನಗರ ಜೀವನದಿಂದ ಬೇಸತ್ತ ಮನಗಳು ಈ ಶರಧಿ ಕರೆಯನ್ನು ಒಲ್ಲೆ ಎನ್ನಲಾರವು. ಈ ಸಮುದ್ರ ತೀರಕ್ಕೆ ಪ್ರವಾಸಿಗರ ಹಿಂಡೇ ಬರುತ್ತದೆ. ಅಲ್ಲದೇ ಶಿವಗಿರಿ ಮಠ ಮತ್ತು ನಾರಾಯಣ ಗುರುಗಳ ಸಮಾಧಿ ಸ್ಥಳಕ್ಕೆ ಬರುವ ಪ್ರವಾಸಿಗರೂ ಕೂಡ ಇಲ್ಲಿಗೆ ಭೇಟಿ ನೀಡಿಯೇ ಹೋಗುತ್ತಾರೆ. <br /> <br /> ಶಿವಗಿರಿ ಮಠದಲ್ಲಿ ಡಿ. 31ಮತ್ತು.ಜ.1ರಂದು ನಡೆಯುವ ಉತ್ಸವದ ಸಂದರ್ಭದಲ್ಲಿ ಸಮುದ್ರ ತೀರದುದ್ದಕ್ಕೂ ಜನಜಂಗುಳಿ ಇರುತ್ತದೆ. ಸಾಕಷ್ಟು ಸುಸಜ್ಜಿತ ವಸತಿ ಗೃಹಗಳು, ಹೆಲ್ತ್ ರೆಸಾರ್ಟ್ಗಳು, ಆಯುರ್ವೇದಿಕ್ ಕೇಂದ್ರಗಳು ಇಲ್ಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>`ಪಾಪನಾಶ ಮಾಡುವ ಕಡಲ ತಡಿ~ ಎಂದು ಪ್ರಸಿದ್ಧವಾಗಿದೆ ಈ ಸಮುದ್ರ. ಕೇರಳದ ತಿರುವನಂತಪುರದಿಂದ 57 ಕಿ.ಮೀ ದೂರದಲ್ಲಿ ಇರುವ ವರ್ಕಲಾ ಊರಿನಲ್ಲಿ ಇರುವ ಈ ಸುಂದರ ಶರಧಿ ಕಣ್ಮನ ತಣಿಸುವಂತಿದೆ. <br /> <br /> ಇಲ್ಲಿನ ಶುದ್ಧನೀರಿನ ಬುಗ್ಗೆಯಲ್ಲಿ ಸ್ನಾನ ಮಾಡಿ, `ಪಾಪ ಕಳೆದುಹೋಯಿತು~ ಎಂದು ನಂಬುವವರಿದ್ದಾರೆ. ಆದ್ದರಿಂದಲೇ ಈ ಪ್ರದೇಶಕ್ಕೆ `ಪಾಪನಾಶಂ ಸಮುದ್ರ~ ಎಂಬ ಹೆಸರು. <br /> <br /> ತೀರದ ಪಕ್ಕದಲ್ಲಿಯೇ 2000 ಸಾವಿರ ವರ್ಷದ ಹಳೆಯ ವಿಷ್ಣು ದೇವಾಲಯ ಮತ್ತು `ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು~ ಎಂಬ ಸಂದೇಶ ಸಾರಿದ ಶ್ರೀ ನಾರಾಯಣ ಗುರು ಅವರ ಶಿವಗಿರಿ ಮಠವೂ ಇದೆ. ಕೊಲ್ಲಂನಿಂದ 37 ಕಿ.ಮೀ ಅಂತರದಲ್ಲಿ ಇರುವ ಈ ಸಮುದ್ರ ತೀರಕ್ಕೆ ರೆಸಾರ್ಟ್ಗಳಿಂದ ಆಧುನಿಕ ಕಳೆ ಬಂದಿದೆ.<br /> <br /> ನಗರ ಜೀವನದಿಂದ ಬೇಸತ್ತ ಮನಗಳು ಈ ಶರಧಿ ಕರೆಯನ್ನು ಒಲ್ಲೆ ಎನ್ನಲಾರವು. ಈ ಸಮುದ್ರ ತೀರಕ್ಕೆ ಪ್ರವಾಸಿಗರ ಹಿಂಡೇ ಬರುತ್ತದೆ. ಅಲ್ಲದೇ ಶಿವಗಿರಿ ಮಠ ಮತ್ತು ನಾರಾಯಣ ಗುರುಗಳ ಸಮಾಧಿ ಸ್ಥಳಕ್ಕೆ ಬರುವ ಪ್ರವಾಸಿಗರೂ ಕೂಡ ಇಲ್ಲಿಗೆ ಭೇಟಿ ನೀಡಿಯೇ ಹೋಗುತ್ತಾರೆ. <br /> <br /> ಶಿವಗಿರಿ ಮಠದಲ್ಲಿ ಡಿ. 31ಮತ್ತು.ಜ.1ರಂದು ನಡೆಯುವ ಉತ್ಸವದ ಸಂದರ್ಭದಲ್ಲಿ ಸಮುದ್ರ ತೀರದುದ್ದಕ್ಕೂ ಜನಜಂಗುಳಿ ಇರುತ್ತದೆ. ಸಾಕಷ್ಟು ಸುಸಜ್ಜಿತ ವಸತಿ ಗೃಹಗಳು, ಹೆಲ್ತ್ ರೆಸಾರ್ಟ್ಗಳು, ಆಯುರ್ವೇದಿಕ್ ಕೇಂದ್ರಗಳು ಇಲ್ಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>