<p>ಮದ್ದೂರು: ತಾಲ್ಲೂಕಿನ ಸೋಂಪುರ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ತೆರೆಯುವಂತೆ ಆಗ್ರಹಿಸಿ ಮಂಗಳವಾರ ಗ್ರಾಮಸ್ಥರು ತಾಲೂಕು ಕಚೇರಿ ಆಹಾರ ಶಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.<br /> <br /> ತಮ್ಮ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ತೆರೆಯದ ಕ್ರಮ ಖಂಡಿಸಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.<br /> <br /> ಗ್ರಾಮದ ಹಿರಿಯ ಮುಖಂಡ ಶಂಕರಯ್ಯ ಮಾತನಾಡಿ, ’ಸೋಂಪುರ ಗ್ರಾಮದ ಗ್ರಾಮಸ್ಥರು ಪಡಿತರ ತೆಗೆದುಕೊಳ್ಳಲು ಸುಮಾರು ಒಂದುವರೆ ಕಿ.ಮೀ. ದೂರುವಿರುವ ನಗರಕೆರೆ ಗ್ರಾಮಕ್ಕೆ ಹೋಗಬೇಕು. ಗ್ರಾಮದಿಂದ ಅಲ್ಲಿಗೆ ವೃದ್ಧರು, ಮಹಿಳೆಯರು ತೆರಳಿ ಪಡಿತರ ತರುವುದು ತುಂಬಾ ಕಷ್ಟವಾಗಿದೆ. ಈ ಸಂಬಂಧ ನಮ್ಮ ಮನವಿ ಮೇರೆಗೆ ಈ ಹಿಂದೆ ಇದ್ದ ತಹಶೀಲ್ದಾರ್ ಜಗದೀಶ್ ಅವರು ನ್ಯಾಯಬೆಲೆ ಅಂಗಡಿಯನ್ನು ನಮ್ಮ ಗ್ರಾಮದಲ್ಲಿ ತೆರೆಯುವಂತೆ ಆದೇಶಿಸಿದ್ದರು. ಆದೇಶಿಸಿ ಒಂದು ತಿಂಗಳು ಕಳೆದರೂ ಇಂದಿಗೂ ನ್ಯಾಯಬೆಲೆ ಅಂಗಡಿಯನ್ನು ನಮ್ಮ ಗ್ರಾಮದಲ್ಲಿ ತೆಗೆದಿಲ್ಲ. ಈ ಕೂಡಲೇ ಅಂಗಡಿ ತೆರೆಯದೆ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯ’ ಎಂದು ಎಚ್ಚರಿಕೆ ನೀಡಿದರು.<br /> <br /> ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಮಂಚೇಗೌಡ ಉದ್ರಿಕ್ತ ಗ್ರಾಮಸ್ಥರನ್ನು ಸಮಾಧಾನಗೊಳಿಸಿದರು. ನಿಮ್ಮ ಗ್ರಾಮದಲ್ಲಿ ಶೀಘ್ರದಲ್ಲೇ ನ್ಯಾಯಬೆಲೆ ಅಂಗಡಿ ತೆರೆಯುವುದು ಎಂಬ ಭರವಸೆ ನೀಡಿದ ಬಳಿಕ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.<br /> <br /> ಗ್ರಾಮದ ಮುಖಂಡರಾದ ಸುರೇಶ್, ಪುಟ್ಟೇಗೌಡ, ಚಿಕ್ಕಮಾದಯ್ಯ, ಚಿಕ್ಕತಿಮ್ಮಯ್ಯ, ಲತಾ, ಬೋರಮ್ಮ, ಜಯಮ್ಮ, ಯಶೋಧಮ್ಮ, ರಾಮು, ಮಲ್ಲಯ್ಯ, ಸಂದೀಪ್, ಶಶಿ, ಉದಯ್, ದೇವೇಗೌಡ, ಉಮೇಶ್ ಪ್ರತಿಭಟನೆಯ ನೇತೃತ್ವವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮದ್ದೂರು: ತಾಲ್ಲೂಕಿನ ಸೋಂಪುರ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ತೆರೆಯುವಂತೆ ಆಗ್ರಹಿಸಿ ಮಂಗಳವಾರ ಗ್ರಾಮಸ್ಥರು ತಾಲೂಕು ಕಚೇರಿ ಆಹಾರ ಶಾಖೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.<br /> <br /> ತಮ್ಮ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ತೆರೆಯದ ಕ್ರಮ ಖಂಡಿಸಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.<br /> <br /> ಗ್ರಾಮದ ಹಿರಿಯ ಮುಖಂಡ ಶಂಕರಯ್ಯ ಮಾತನಾಡಿ, ’ಸೋಂಪುರ ಗ್ರಾಮದ ಗ್ರಾಮಸ್ಥರು ಪಡಿತರ ತೆಗೆದುಕೊಳ್ಳಲು ಸುಮಾರು ಒಂದುವರೆ ಕಿ.ಮೀ. ದೂರುವಿರುವ ನಗರಕೆರೆ ಗ್ರಾಮಕ್ಕೆ ಹೋಗಬೇಕು. ಗ್ರಾಮದಿಂದ ಅಲ್ಲಿಗೆ ವೃದ್ಧರು, ಮಹಿಳೆಯರು ತೆರಳಿ ಪಡಿತರ ತರುವುದು ತುಂಬಾ ಕಷ್ಟವಾಗಿದೆ. ಈ ಸಂಬಂಧ ನಮ್ಮ ಮನವಿ ಮೇರೆಗೆ ಈ ಹಿಂದೆ ಇದ್ದ ತಹಶೀಲ್ದಾರ್ ಜಗದೀಶ್ ಅವರು ನ್ಯಾಯಬೆಲೆ ಅಂಗಡಿಯನ್ನು ನಮ್ಮ ಗ್ರಾಮದಲ್ಲಿ ತೆರೆಯುವಂತೆ ಆದೇಶಿಸಿದ್ದರು. ಆದೇಶಿಸಿ ಒಂದು ತಿಂಗಳು ಕಳೆದರೂ ಇಂದಿಗೂ ನ್ಯಾಯಬೆಲೆ ಅಂಗಡಿಯನ್ನು ನಮ್ಮ ಗ್ರಾಮದಲ್ಲಿ ತೆಗೆದಿಲ್ಲ. ಈ ಕೂಡಲೇ ಅಂಗಡಿ ತೆರೆಯದೆ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಅನಿವಾರ್ಯ’ ಎಂದು ಎಚ್ಚರಿಕೆ ನೀಡಿದರು.<br /> <br /> ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಮಂಚೇಗೌಡ ಉದ್ರಿಕ್ತ ಗ್ರಾಮಸ್ಥರನ್ನು ಸಮಾಧಾನಗೊಳಿಸಿದರು. ನಿಮ್ಮ ಗ್ರಾಮದಲ್ಲಿ ಶೀಘ್ರದಲ್ಲೇ ನ್ಯಾಯಬೆಲೆ ಅಂಗಡಿ ತೆರೆಯುವುದು ಎಂಬ ಭರವಸೆ ನೀಡಿದ ಬಳಿಕ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.<br /> <br /> ಗ್ರಾಮದ ಮುಖಂಡರಾದ ಸುರೇಶ್, ಪುಟ್ಟೇಗೌಡ, ಚಿಕ್ಕಮಾದಯ್ಯ, ಚಿಕ್ಕತಿಮ್ಮಯ್ಯ, ಲತಾ, ಬೋರಮ್ಮ, ಜಯಮ್ಮ, ಯಶೋಧಮ್ಮ, ರಾಮು, ಮಲ್ಲಯ್ಯ, ಸಂದೀಪ್, ಶಶಿ, ಉದಯ್, ದೇವೇಗೌಡ, ಉಮೇಶ್ ಪ್ರತಿಭಟನೆಯ ನೇತೃತ್ವವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>