<p><strong>ಬೆಂಗಳೂರು:</strong> `ನ್ಯಾಯಾಲಯದ ಶಾಸ್ತ್ರ ಭಾಷೆ ಸರಳವಾಗಿ ಕನ್ನಡಕ್ಕೆ ದಕ್ಕುವಂತಾದರೆ ಭಾಷೆ ಇನ್ನಷ್ಟು ಶ್ರೀಮಂತಗೊಳ್ಳುತ್ತದೆ' ಎಂದು ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.<br /> <br /> ಸ್ಫೂರ್ತಿ ಪ್ರಕಾಶನವು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಅವರ `ಅರಿವು ಬೆಳಕು' ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದರು.<br /> <br /> `ನ್ಯಾಯಾಲಯದ ಭಾಗವಾಗಿರುವ ವಕೀಲರು, ನ್ಯಾಯಾಧೀಶರು ಆತ್ಮಚರಿತ್ರೆಯ ರಚನೆಗೆ ಮುಂದಾಗಬೇಕು. ಇದರಿಂದ ಜೀವನದ ಸಾಮಾನ್ಯ ಸಂಗತಿಗಳ ಜತೆಯಲ್ಲಿಯೇ ಈ ವೃತ್ತಿಯ ಒಳ ಹೊರಗುಗಳು ಜನಸಾಮಾನ್ಯರಿಗೆ ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ' ಎಂದು ತಿಳಿಸಿದರು.<br /> <br /> `ನಿರ್ಲಿಪ್ತ ಸ್ಥಿತಿಯಲ್ಲಿದ್ದಾಗ ಮಾತ್ರ ನ್ಯಾಯ, ಅನ್ಯಾಯದ ಸೂಕ್ಷ್ಮಗಳನ್ನು ಅವಲೋಕಿಸಲುಸಾಧ್ಯವಿದೆ. ಇಡೀ ಪುಸ್ತಕವು ವಿವಿಧ ವಿದ್ಯಮಾನಗಳ ಚರ್ಚೆಯ ಜತೆಯಲ್ಲಿಯೇ ಒಂದು ಬಗೆಯ ನಿರ್ಲಿಪ್ತ ಭಾವವನ್ನು ತಾಳುವ ಮೂಲಕ ಓದುಗರಿಗೆ ಹಲವು ವಿಚಾರಗಳ ಕುರಿತು ತೀರ್ಪು ಒದಗಿಸುತ್ತದೆ' ಎಂದು ತಿಳಿಸಿದರು.<br /> <br /> `ದೇಶದಲ್ಲಿ ಎಲ್ಲ ವರ್ಗದ ಜನರ ಅಂತರಾತ್ಮ ಜಾಗೃತಗೊಳ್ಳಲು ಭಕ್ತಿಪಂಥ ಚಳವಳಿ ಹಾಗೂ ಅಕ್ಷರ ಕ್ರಾಂತಿ ಪ್ರಮುಖ ಕಾರಣವಾಗಿದೆ. ಚಾರಿತ್ರಿಕ ಘಟನೆಗಳು, ಪ್ರಸಕ್ತ ಕಾಲದ ವಿದ್ಯಮಾನಗಳನ್ನು ಒಳಗೊಂಡ ಪುಸ್ತಕ ತರ್ಕಬದ್ಧ ನ್ಯಾಯವನ್ನು ಒದಗಿಸುತ್ತದೆ' ಎಂದು ಹೇಳಿದರು.<br /> <br /> ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ, `ದಂತ ಸಿಂಹಾಸನವನ್ನು ಅಲಂಕರಿಸಿರುವ ನ್ಯಾಯಾಲಯದ ಆಗುಹೋಗುಗಳ ಬಗ್ಗೆಯೂ ಸದಾ ಚರ್ಚೆನಡೆಯಬೇಕು. ಆಗ ಮಾತ್ರ ಪ್ರಜಾಪ್ರಭುತ್ವದ ಮೌಲ್ಯ ವೃದ್ಧಿಸುತ್ತದೆ' ಎಂದು ಹೇಳಿದರು.<br /> <br /> ಲೇಖಕಿ ಡಾ.ಕೆ.ಆರ್. ಸಂಧ್ಯಾರೆಡ್ಡಿ, `ವಿದ್ವತ್ತು ಪ್ರದರ್ಶನ ಹಾಗೂ ವಿಮರ್ಶಕರಿಗಾಗಿ ಪುಸ್ತಕಗಳನ್ನು ರಚಿಸುವವರ ನಡುವೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ಪುಸ್ತಕ ಹೊರತಂದಿರುವುದು ನಿಜಕ್ಕೂ ಸಂತೋಷದ ವಿಚಾರ' ಎಂದು ಶ್ಲಾಘಿಸಿದರು.<br /> <br /> `ಲೈಂಗಿಕ ಅಲ್ಪಸಂಖ್ಯಾತರು ಹಾಗೂ ಅತ್ಯಾಚಾರ ದೌರ್ಜನ್ಯ ಎದುರಿಸುತ್ತಿರುವ ಮಹಿಳೆಯರ ಪರವಾಗಿ ಸಮರ್ಪಕ ಕಾನೂನು ಜಾರಿಯಾಗುವ ನಿಟ್ಟಿನಲ್ಲಿ ಎಲ್ಲ ವಕೀಲರು, ನ್ಯಾಯಾಧೀಶರು ಕ್ರಮ ಕೈಗೊಳ್ಳಬೇಕು' ಎಂದು ಮನವಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ನ್ಯಾಯಾಲಯದ ಶಾಸ್ತ್ರ ಭಾಷೆ ಸರಳವಾಗಿ ಕನ್ನಡಕ್ಕೆ ದಕ್ಕುವಂತಾದರೆ ಭಾಷೆ ಇನ್ನಷ್ಟು ಶ್ರೀಮಂತಗೊಳ್ಳುತ್ತದೆ' ಎಂದು ಹಿರಿಯ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಅಭಿಪ್ರಾಯಪಟ್ಟರು.<br /> <br /> ಸ್ಫೂರ್ತಿ ಪ್ರಕಾಶನವು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಅವರ `ಅರಿವು ಬೆಳಕು' ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದರು.<br /> <br /> `ನ್ಯಾಯಾಲಯದ ಭಾಗವಾಗಿರುವ ವಕೀಲರು, ನ್ಯಾಯಾಧೀಶರು ಆತ್ಮಚರಿತ್ರೆಯ ರಚನೆಗೆ ಮುಂದಾಗಬೇಕು. ಇದರಿಂದ ಜೀವನದ ಸಾಮಾನ್ಯ ಸಂಗತಿಗಳ ಜತೆಯಲ್ಲಿಯೇ ಈ ವೃತ್ತಿಯ ಒಳ ಹೊರಗುಗಳು ಜನಸಾಮಾನ್ಯರಿಗೆ ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ' ಎಂದು ತಿಳಿಸಿದರು.<br /> <br /> `ನಿರ್ಲಿಪ್ತ ಸ್ಥಿತಿಯಲ್ಲಿದ್ದಾಗ ಮಾತ್ರ ನ್ಯಾಯ, ಅನ್ಯಾಯದ ಸೂಕ್ಷ್ಮಗಳನ್ನು ಅವಲೋಕಿಸಲುಸಾಧ್ಯವಿದೆ. ಇಡೀ ಪುಸ್ತಕವು ವಿವಿಧ ವಿದ್ಯಮಾನಗಳ ಚರ್ಚೆಯ ಜತೆಯಲ್ಲಿಯೇ ಒಂದು ಬಗೆಯ ನಿರ್ಲಿಪ್ತ ಭಾವವನ್ನು ತಾಳುವ ಮೂಲಕ ಓದುಗರಿಗೆ ಹಲವು ವಿಚಾರಗಳ ಕುರಿತು ತೀರ್ಪು ಒದಗಿಸುತ್ತದೆ' ಎಂದು ತಿಳಿಸಿದರು.<br /> <br /> `ದೇಶದಲ್ಲಿ ಎಲ್ಲ ವರ್ಗದ ಜನರ ಅಂತರಾತ್ಮ ಜಾಗೃತಗೊಳ್ಳಲು ಭಕ್ತಿಪಂಥ ಚಳವಳಿ ಹಾಗೂ ಅಕ್ಷರ ಕ್ರಾಂತಿ ಪ್ರಮುಖ ಕಾರಣವಾಗಿದೆ. ಚಾರಿತ್ರಿಕ ಘಟನೆಗಳು, ಪ್ರಸಕ್ತ ಕಾಲದ ವಿದ್ಯಮಾನಗಳನ್ನು ಒಳಗೊಂಡ ಪುಸ್ತಕ ತರ್ಕಬದ್ಧ ನ್ಯಾಯವನ್ನು ಒದಗಿಸುತ್ತದೆ' ಎಂದು ಹೇಳಿದರು.<br /> <br /> ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ, `ದಂತ ಸಿಂಹಾಸನವನ್ನು ಅಲಂಕರಿಸಿರುವ ನ್ಯಾಯಾಲಯದ ಆಗುಹೋಗುಗಳ ಬಗ್ಗೆಯೂ ಸದಾ ಚರ್ಚೆನಡೆಯಬೇಕು. ಆಗ ಮಾತ್ರ ಪ್ರಜಾಪ್ರಭುತ್ವದ ಮೌಲ್ಯ ವೃದ್ಧಿಸುತ್ತದೆ' ಎಂದು ಹೇಳಿದರು.<br /> <br /> ಲೇಖಕಿ ಡಾ.ಕೆ.ಆರ್. ಸಂಧ್ಯಾರೆಡ್ಡಿ, `ವಿದ್ವತ್ತು ಪ್ರದರ್ಶನ ಹಾಗೂ ವಿಮರ್ಶಕರಿಗಾಗಿ ಪುಸ್ತಕಗಳನ್ನು ರಚಿಸುವವರ ನಡುವೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ಪುಸ್ತಕ ಹೊರತಂದಿರುವುದು ನಿಜಕ್ಕೂ ಸಂತೋಷದ ವಿಚಾರ' ಎಂದು ಶ್ಲಾಘಿಸಿದರು.<br /> <br /> `ಲೈಂಗಿಕ ಅಲ್ಪಸಂಖ್ಯಾತರು ಹಾಗೂ ಅತ್ಯಾಚಾರ ದೌರ್ಜನ್ಯ ಎದುರಿಸುತ್ತಿರುವ ಮಹಿಳೆಯರ ಪರವಾಗಿ ಸಮರ್ಪಕ ಕಾನೂನು ಜಾರಿಯಾಗುವ ನಿಟ್ಟಿನಲ್ಲಿ ಎಲ್ಲ ವಕೀಲರು, ನ್ಯಾಯಾಧೀಶರು ಕ್ರಮ ಕೈಗೊಳ್ಳಬೇಕು' ಎಂದು ಮನವಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>