<p><strong>ಪಾಲಕ್ಕಾಡ್, (ಪಿಟಿಐ): </strong>ಜಿಲ್ಲೆಯ ಶೊರ್ನೂರ್ನಲ್ಲಿನ ಪಟಾಕಿ ತಯಾರಿಕಾ ಘಟಕದಲ್ಲಿ ಮಂಗಳವಾರ ಆಕಸ್ಮಿಕ ಬೆಂಕಿಯಿಂದಾಗಿ ಸಂಭವಿಸಿದ ಸ್ಫೋಟದಲ್ಲಿ 8 ಮಂದಿ ಮೃತಪಟ್ಟಿದ್ದಾರೆ. ಘಟನೆ ಸಂಭವಿಸಿದಾಗ ಈ ಘಟಕದಲ್ಲಿ 12 ಮಂದಿ ಕಾರ್ಮಿಕರಿದ್ದರು. ರೈಲ್ವೆ ಹಳಿಗೆ ಸಮೀಪದ ಖಾಲಿ ಸ್ಥಳದಲ್ಲಿ ಈ ಘಟಕ ಇತ್ತು. ಸ್ಫೋಟ ಸಂಭವಿಸಿದ ಸಂದರ್ಭದಲ್ಲಿಯೇ ರೈಲೊಂದು ಸಾಗಿ ಹೋಯಿತಾದರೂ ರೈಲಿನಲ್ಲಿದ್ದವರಿಗೆ ಯಾರಿಗೂ ತೊಂದರೆಯಾಗಲಿಲ್ಲ.<br /> <br /> ‘<strong>ರಿಸೋರ್ಸ್ಸ್ಯಾಟ್-2’ ಉಡಾವಣೆಗೆ ಸಿದ್ಧತೆ<br /> ಚೆನ್ನೈ (ಐಎಎನ್ಎಸ್): </strong>ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಫೆಬ್ರುವರಿ ಅಂತ್ಯದಲ್ಲಿ ಭೂನಿರೀಕ್ಷಣ ಉಪಗ್ರಹ ‘ರಿಸೋರ್ಸ್ಸ್ಯಾಟ್-2’ ಅನ್ನು ಉಡಾವಣೆ ಮಾಡಲಿದೆ. ಇಸ್ರೊ ಎಲ್ಲ ರೀತಿಯಲ್ಲೂ ಸಜ್ಜಾಗಿದ್ದು, ಈ ದೂರ ಸಂವೇದಿ ಉಪಗ್ರಹ ವಿವಿಧ ಬಗೆಯ ಚಿತ್ರಗಳನ್ನು ಭೂ ನಿಯಂತ್ರಣ ಕೇಂದ್ರಕ್ಕೆ ರವಾನಿಸಲಿದೆ. ಫೆ. 20-25ರ ಅವಧಿಯಲ್ಲಿ ಉಡಾವಣೆ ನಡೆಯಲಿದೆ.<br /> <br /> <strong>ಪೊಲೀಸರ ಮೇಲೆ ಸೀಮೆಎಣ್ಣೆ ಮಾಫಿಯಾ ದಾಳಿ<br /> ನಾಗಪುರ, (ಐಎಎನ್ಎಸ್): </strong> ತೈಲ ಕಲಬೆರಕೆ ಮಾಫಿಯ ನಾಸಿಕ್ ಹೆಚ್ಚುವರಿ ಜಿಲ್ಲಾಧಿಕಾರಿ ಯಶವಂತ್ ಸೋನಾವಣೆ ಅವರನ್ನು ಸಜೀವವಾಗಿ ದಹಿಸಿ ವಾರ ಕಳೆಯುವಷ್ಟರಲ್ಲೇ ಅಕ್ರಮ ಸೀಮೆಎಣ್ಣೆ ಮಾರಾಟಗಾರರ ಜಾಲ ಮಂಗಳವಾರ ಪೊಲೀಸರ ಮೇಲೆ ದಾಳಿ ನಡೆಸಿರುವ ಪ್ರಕರಣ ನಾಗಪುರ ಜಿಲ್ಲೆಯ ಉಮ್ರೆದ್ ತೆಹಸಿಲ್ನ ರಜೂರ್ವಾಡಿ ಗ್ರಾಮದಲ್ಲಿ ನಡೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾಲಕ್ಕಾಡ್, (ಪಿಟಿಐ): </strong>ಜಿಲ್ಲೆಯ ಶೊರ್ನೂರ್ನಲ್ಲಿನ ಪಟಾಕಿ ತಯಾರಿಕಾ ಘಟಕದಲ್ಲಿ ಮಂಗಳವಾರ ಆಕಸ್ಮಿಕ ಬೆಂಕಿಯಿಂದಾಗಿ ಸಂಭವಿಸಿದ ಸ್ಫೋಟದಲ್ಲಿ 8 ಮಂದಿ ಮೃತಪಟ್ಟಿದ್ದಾರೆ. ಘಟನೆ ಸಂಭವಿಸಿದಾಗ ಈ ಘಟಕದಲ್ಲಿ 12 ಮಂದಿ ಕಾರ್ಮಿಕರಿದ್ದರು. ರೈಲ್ವೆ ಹಳಿಗೆ ಸಮೀಪದ ಖಾಲಿ ಸ್ಥಳದಲ್ಲಿ ಈ ಘಟಕ ಇತ್ತು. ಸ್ಫೋಟ ಸಂಭವಿಸಿದ ಸಂದರ್ಭದಲ್ಲಿಯೇ ರೈಲೊಂದು ಸಾಗಿ ಹೋಯಿತಾದರೂ ರೈಲಿನಲ್ಲಿದ್ದವರಿಗೆ ಯಾರಿಗೂ ತೊಂದರೆಯಾಗಲಿಲ್ಲ.<br /> <br /> ‘<strong>ರಿಸೋರ್ಸ್ಸ್ಯಾಟ್-2’ ಉಡಾವಣೆಗೆ ಸಿದ್ಧತೆ<br /> ಚೆನ್ನೈ (ಐಎಎನ್ಎಸ್): </strong>ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಫೆಬ್ರುವರಿ ಅಂತ್ಯದಲ್ಲಿ ಭೂನಿರೀಕ್ಷಣ ಉಪಗ್ರಹ ‘ರಿಸೋರ್ಸ್ಸ್ಯಾಟ್-2’ ಅನ್ನು ಉಡಾವಣೆ ಮಾಡಲಿದೆ. ಇಸ್ರೊ ಎಲ್ಲ ರೀತಿಯಲ್ಲೂ ಸಜ್ಜಾಗಿದ್ದು, ಈ ದೂರ ಸಂವೇದಿ ಉಪಗ್ರಹ ವಿವಿಧ ಬಗೆಯ ಚಿತ್ರಗಳನ್ನು ಭೂ ನಿಯಂತ್ರಣ ಕೇಂದ್ರಕ್ಕೆ ರವಾನಿಸಲಿದೆ. ಫೆ. 20-25ರ ಅವಧಿಯಲ್ಲಿ ಉಡಾವಣೆ ನಡೆಯಲಿದೆ.<br /> <br /> <strong>ಪೊಲೀಸರ ಮೇಲೆ ಸೀಮೆಎಣ್ಣೆ ಮಾಫಿಯಾ ದಾಳಿ<br /> ನಾಗಪುರ, (ಐಎಎನ್ಎಸ್): </strong> ತೈಲ ಕಲಬೆರಕೆ ಮಾಫಿಯ ನಾಸಿಕ್ ಹೆಚ್ಚುವರಿ ಜಿಲ್ಲಾಧಿಕಾರಿ ಯಶವಂತ್ ಸೋನಾವಣೆ ಅವರನ್ನು ಸಜೀವವಾಗಿ ದಹಿಸಿ ವಾರ ಕಳೆಯುವಷ್ಟರಲ್ಲೇ ಅಕ್ರಮ ಸೀಮೆಎಣ್ಣೆ ಮಾರಾಟಗಾರರ ಜಾಲ ಮಂಗಳವಾರ ಪೊಲೀಸರ ಮೇಲೆ ದಾಳಿ ನಡೆಸಿರುವ ಪ್ರಕರಣ ನಾಗಪುರ ಜಿಲ್ಲೆಯ ಉಮ್ರೆದ್ ತೆಹಸಿಲ್ನ ರಜೂರ್ವಾಡಿ ಗ್ರಾಮದಲ್ಲಿ ನಡೆದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>