<p>ಬ್ರಹ್ಮಾವರ: ರಾಜ್ಯ ಸರ್ಕಾರ ಯಕ್ಷಗಾನ ವನ್ನು ಶಾಲಾ ಕಾಲೇಜುಗಳಿಗೆ ಪಠ್ಯಕ್ರಮವ ನ್ನಾಗಿ ಜಾರಿಗೆ ತಂದಲ್ಲಿ ಯಕ್ಷಗಾನಕ್ಕೆ ಉಜ್ವಲ ಭವಿಷ್ಯವಿದೆ ಎಂದು ಶಾಸಕ ಕೆ.ರಘುಪತಿ ಭಟ್ ಹೇಳಿದರು.<br /> <br /> ಬ್ರಹ್ಮಾವರ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಶನಿವಾರ ಅಜಪುರ ಯಕ್ಷಗಾನ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ಯಕ್ಷಗಾನಕ್ಕೆ ಅದರದೇ ಆದ ತಾಂತ್ರಿಕತೆಯ ರೀತಿ ನೀತಿಗಳಿವೆ. ಆದರೆ ಇಂದು ಯಕ್ಷಗಾನವನ್ನು ವ್ಯಾವಹಾರಿಕ ದೃಷ್ಟಿಯಿಂದ ನೋಡುತ್ತಿರುವ ಕಾರಣ ಯಕ್ಷಗಾನ ಸೊರಗುತ್ತಿದೆ ಎಂದು ಅವರು ಹೇಳಿದರು.<br /> <br /> ಬಡಗುತಿಟ್ಟು ಯಕ್ಷಗಾನಕ್ಕೆ ಬ್ರಹ್ಮಾವರ ಕೇಂದ್ರ ಸ್ಥಾನ. ಹಲವು ಕಲಾವಿದರನ್ನು ಬ್ರಹ್ಮಾವರ ನೀಡಿದೆ. ಅಜಪುರ ಯಕ್ಷಗಾನ ಸಂಘದಿಂದ ಮುಂದೆ ಯಕ್ಷಗಾನ ರಂಗದಲ್ಲಿ ಇನ್ನಷ್ಟು ಕಲಾವಿದರು ಬಂದು ಯಕ್ಷಗಾನ ತನ್ನ ಕಂಪನ್ನು ಎಲ್ಲಾ ಕಡೆ ಪಸರಿಸುವುದು ಎಂದರು.<br /> <br /> ಇದಕ್ಕೂ ಮುನ್ನ ಹಿರಿಯ ಯಕ್ಷಗಾನ ವಿದ್ವಾಂಸ ಹಂದಾಡಿ ಸುಬ್ಬಣ್ಣ ಭಟ್ ಉದ್ಘಾಟಿಸಿದರು. <br /> ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ ಅಧ್ಯಕ್ಷತೆ ವಹಿಸಿದ್ದರು.<br /> <br /> ಉದ್ಯಮಿ ಪ್ರಮೋದ್ ಮಧ್ವರಾಜ್, ಚಂದ್ರಶೇಖರ್ ಕೆದ್ಲಾಯ, ಅಜಪುರ ಯಕ್ಷಗಾನ ಸಂಘದ ಅಧ್ಯಕ್ಷ ಕೃಷ್ಣಸ್ವಾಮಿ ಜೋಯಿಸ, ಉಪಾಧ್ಯಕ್ಷರಾದ ಬಾಲಕೃಷ್ಣ ಬಿರ್ತಿ, ಎ.ರತ್ನಾಕರ ಭಟ್ ಮತ್ತಿತರರು ಇದ್ದರು. ಕಾರ್ಯಕ್ರಮದಲ್ಲಿ ಸ್ವಸ್ತಿಶ್ರೀ ಮತ್ತು ರಕ್ಷಿತಾ ಬಾಲಗೋಪಾಲ ನೃತ್ಯ ಮಾಡುವುದರ ಮೂಲಕ ಸಂಘಕ್ಕೆ ಚಾಲನೆ ನೀಡಿದರು. <br /> <br /> ಉದ್ಘಾಟನಾ ಸಮಾರಂಭದ ಬಳಿಕ ಸಂಘದ ಸದಸ್ಯರಿಂದ ಮೀನಾಕ್ಷಿ ಕಲ್ಯಾಣ ಯಕ್ಷಗಾನ ನಡೆಯಿತು. ಸಂಘ ಆಸಕ್ತ ಮಕ್ಕಳಿಗೆ ಮತ್ತು ಯುವಕರಿಗೆ ಯಕ್ಷಗಾನ ತರಬೇತಿ, ವೇಷಭೂಷಣ ತಯಾರಿ ಹಾಗೂ ಬಳಕೆಯ ತರಬೇತಿ ನೀಡುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬ್ರಹ್ಮಾವರ: ರಾಜ್ಯ ಸರ್ಕಾರ ಯಕ್ಷಗಾನ ವನ್ನು ಶಾಲಾ ಕಾಲೇಜುಗಳಿಗೆ ಪಠ್ಯಕ್ರಮವ ನ್ನಾಗಿ ಜಾರಿಗೆ ತಂದಲ್ಲಿ ಯಕ್ಷಗಾನಕ್ಕೆ ಉಜ್ವಲ ಭವಿಷ್ಯವಿದೆ ಎಂದು ಶಾಸಕ ಕೆ.ರಘುಪತಿ ಭಟ್ ಹೇಳಿದರು.<br /> <br /> ಬ್ರಹ್ಮಾವರ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಶನಿವಾರ ಅಜಪುರ ಯಕ್ಷಗಾನ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.<br /> <br /> ಯಕ್ಷಗಾನಕ್ಕೆ ಅದರದೇ ಆದ ತಾಂತ್ರಿಕತೆಯ ರೀತಿ ನೀತಿಗಳಿವೆ. ಆದರೆ ಇಂದು ಯಕ್ಷಗಾನವನ್ನು ವ್ಯಾವಹಾರಿಕ ದೃಷ್ಟಿಯಿಂದ ನೋಡುತ್ತಿರುವ ಕಾರಣ ಯಕ್ಷಗಾನ ಸೊರಗುತ್ತಿದೆ ಎಂದು ಅವರು ಹೇಳಿದರು.<br /> <br /> ಬಡಗುತಿಟ್ಟು ಯಕ್ಷಗಾನಕ್ಕೆ ಬ್ರಹ್ಮಾವರ ಕೇಂದ್ರ ಸ್ಥಾನ. ಹಲವು ಕಲಾವಿದರನ್ನು ಬ್ರಹ್ಮಾವರ ನೀಡಿದೆ. ಅಜಪುರ ಯಕ್ಷಗಾನ ಸಂಘದಿಂದ ಮುಂದೆ ಯಕ್ಷಗಾನ ರಂಗದಲ್ಲಿ ಇನ್ನಷ್ಟು ಕಲಾವಿದರು ಬಂದು ಯಕ್ಷಗಾನ ತನ್ನ ಕಂಪನ್ನು ಎಲ್ಲಾ ಕಡೆ ಪಸರಿಸುವುದು ಎಂದರು.<br /> <br /> ಇದಕ್ಕೂ ಮುನ್ನ ಹಿರಿಯ ಯಕ್ಷಗಾನ ವಿದ್ವಾಂಸ ಹಂದಾಡಿ ಸುಬ್ಬಣ್ಣ ಭಟ್ ಉದ್ಘಾಟಿಸಿದರು. <br /> ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎಲ್.ಸಾಮಗ ಅಧ್ಯಕ್ಷತೆ ವಹಿಸಿದ್ದರು.<br /> <br /> ಉದ್ಯಮಿ ಪ್ರಮೋದ್ ಮಧ್ವರಾಜ್, ಚಂದ್ರಶೇಖರ್ ಕೆದ್ಲಾಯ, ಅಜಪುರ ಯಕ್ಷಗಾನ ಸಂಘದ ಅಧ್ಯಕ್ಷ ಕೃಷ್ಣಸ್ವಾಮಿ ಜೋಯಿಸ, ಉಪಾಧ್ಯಕ್ಷರಾದ ಬಾಲಕೃಷ್ಣ ಬಿರ್ತಿ, ಎ.ರತ್ನಾಕರ ಭಟ್ ಮತ್ತಿತರರು ಇದ್ದರು. ಕಾರ್ಯಕ್ರಮದಲ್ಲಿ ಸ್ವಸ್ತಿಶ್ರೀ ಮತ್ತು ರಕ್ಷಿತಾ ಬಾಲಗೋಪಾಲ ನೃತ್ಯ ಮಾಡುವುದರ ಮೂಲಕ ಸಂಘಕ್ಕೆ ಚಾಲನೆ ನೀಡಿದರು. <br /> <br /> ಉದ್ಘಾಟನಾ ಸಮಾರಂಭದ ಬಳಿಕ ಸಂಘದ ಸದಸ್ಯರಿಂದ ಮೀನಾಕ್ಷಿ ಕಲ್ಯಾಣ ಯಕ್ಷಗಾನ ನಡೆಯಿತು. ಸಂಘ ಆಸಕ್ತ ಮಕ್ಕಳಿಗೆ ಮತ್ತು ಯುವಕರಿಗೆ ಯಕ್ಷಗಾನ ತರಬೇತಿ, ವೇಷಭೂಷಣ ತಯಾರಿ ಹಾಗೂ ಬಳಕೆಯ ತರಬೇತಿ ನೀಡುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>