<p><strong>ಹೊಸಪೇಟೆ:</strong> ಪತ್ರಿಕಾ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಾರಕವಾಗುವಂತೆ ವರ್ತನೆ ಮಾಡಿದ ವಕೀಲರನ್ನು ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸುವಂತೆ ಹೊಸಪೇಟೆ ದಿನ ಮಾಧ್ಯಮ ಪತ್ರಕರ್ತರ ಸಂಘ ಆಗ್ರಹಿಸಿದೆ. <br /> ಈ ಕುರಿತು ಹೊಸಪೇಟೆಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ಪತ್ರಕರ್ತರು ತಹಸೀಲ್ದಾರರ ಮೂಲಕ ಮನವಿ ಸಲ್ಲಿಸಿದರು.<br /> <br /> ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯದ ಬಳಿ ವರದಿಗೆ ತೆರಳಿದ ಮಾಧ್ಯಮಗಳ ಮೇಲೆ ವಕೀಲರೆಂದು ಹೇಳಿಕೊಂಡ ಕೆಲವರು ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ.<br /> <br /> ಇದನ್ನು ಮೂಕ ಪ್ರೇಕ್ಷಕರಂತೆ ನೋಡಿದ ಪೊಲೀಸರು ಕರ್ತವ್ಯ ಲೋಪವೆಸಗಿದ್ದಾರೆ ಕಾರಣ ಹಲ್ಲೆ ಮಾಡಿದವರನ್ನು ಬಂದಿಸಬೇಕು, ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. <br /> <br /> ಸಂಘದ ಅಧ್ಯಕ್ಷ ಕೆ.ಲಕ್ಷ್ಮಣ ಹಾಗೂ ಪರಶುರಾಮ ಕಲಾಲ್ ಎಸ್.ಎನ್.ಪಿ.ಪಾಟೀಲ್ ಮತ್ತು ವೆಂಕೋಬ ನಾಯಕ್ ಮಾತನಾಡಿದರು ದಿನ ಮಾಧ್ಯಮ ಪತ್ರಕರ್ತರ ಸಂಘದ ಪದಾಧಿಕಾರಿಗಳು ಕಾರ್ಯಕರ್ತರು ಹಾಜರಿದ್ದರು. <br /> ಮನವಿ ಸ್ವೀಕರಿಸಿ ತಹಸೀಲ್ದಾರ ಬಸವರಾಜ ಸೋಮಣ್ಣನವರ ಮಾತನಾಡಿ ತಮ್ಮ ಭಾವನೆ ಗಳನ್ನು ಸರ್ಕಾರಕ್ಕೆ ತಲುಪಿಸುವುದಾಗಿ ಹೇಳಿದರು. <br /> <br /> <strong>ದಲಿತ ಸಂಘಟನೆ ಖಂಡನೆ:</strong> ಮಾಧ್ಯಮ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಗೂಂಡಾಗಳ ರೀತಿ ನಡೆದುಕೊಂಡಿರುವುದು ತುಂಬಾ ವಿಷಾದನೀಯ ಎಂದು ದಲಿತ ಅಭಿವೃದ್ಧಿ ಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷ ಗ್ಯಾನಪ್ಪ ಬಡಿಗೇರ ತಿಳಿಸಿದ್ದಾರೆ. <br /> <br /> ತಪ್ಪು ಮಾಡಿದ ವ್ಯಕ್ತಿಗಳನ್ನು ಕಾನೂನು ರೀತಿಯಲ್ಲಿ ಶಿಕ್ಷೆಗೊಳಪಡಿಸಬೇಕು ಹಾಗೂ ಮಾಧ್ಯಮದ ಸಿಬ್ಬಂದಿಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಈ ಮೂಲಕ ಒತ್ತಾಯಿಸಿದ್ದಾರೆ. <br /> <br /> <strong>ಕುರುಗೋಡು ವರದಿ</strong><br /> ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬೆಂಗಳೂರಿನ ನ್ಯಾಯಾಲಯದ ಆವರಣದಲ್ಲಿ ಮಾಧ್ಯಮಮಿತ್ರರ ಮೇಲೆ ವಕೀಲರು ನಡೆಸಿದ ಹಲ್ಲೆ ಖಂಡಿಸಿ ಶುಕ್ರವಾರ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.<br /> <br /> ಪಟ್ಟಣದ ಮುಖ್ಯ ವೃತ್ತದಿಂದ ವಿಶೇಷ ತಹಶೀಲ್ದಾರ ಕಚೇರಿಯವರೆಗೆ ಮೆರವಣಿಗೆಯಲ್ಲಿ ತೆರಳಿದ ಪತ್ರಕರ್ತರು, ವಕೀಲರ ವಿರುದ್ಧ ಘೋಷಣೆಗಳನ್ನು ಕೂಗಿದರು.<br /> <br /> ಪತ್ರಕರ್ತ ಪಿ.ಆರ್.ವೆಂಕಟೇಶ್, ಸಿಪಿಐ(ಎಂ) ಮುಖಂಡ ವಿ.ಎಸ್. ಶಿವಶಂಕರ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಾನಾಳ್ ಚನ್ನಬಸವರಾಜ್ ಮಾತನಾಡಿದರು.<br /> <br /> ಪತ್ರಕರ್ತರಾದ ವಾಗೀಶ್ ಎ. ಕುರುಗೋಡು, ಕೆ.ಭೀಮಣ್ಣ, ಪಂಪಾಪತಿಗೌಡ, ಕೆ.ಬಸವರಾಜ, ಪ್ರಾಂತ ರೈತಸಂಘದ ಕೆ.ಗಾದಿಲಿಂಗಪ್ಪ, ಎಚ್.ಎಂ. ವಿಶ್ವನಾಥ ಸ್ವಾಮಿ, ಎಸ್.ಬಿ. ಮಹ್ಮದ್ಖಾನ್, ಜೆಡಿ(ಎಸ್) ಯುವ ಘಟಕದ ಅಧ್ಯಕ್ಷ ನಾಗಲಿಂಗ ಸ್ವಾಮಿ, ನಂದಿಕೋಲು ಬಸವರಾಜ, ಚನ್ನಪಟ್ಟಣ ಮಲ್ಲಿಕಾರ್ಜುನ ಉಪಸ್ಥಿತರಿದ್ದರು.<br /> <br /> ಕರ್ನಾಟಕ ರಕ್ಷಣಾ ವೇದಿಕೆ, ಸಿಪಿಐ(ಎಂ), ಕರ್ನಾಟಕ ಪ್ರಾಂತ ರೈತ ಸಂಘ ವಿವಿಧ ಸಂಘಟನೆ ಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದವು.<br /> <br /> <strong>ಸಂಡೂರು ವರದಿ</strong><br /> ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಕರ್ತವ್ಯ ನಿರ್ವಹಣೆಯಲ್ಲಿದ್ದ ಪರ್ತಕರ್ತರು ಹಾಗೂ ಪೋಲೀಸ್ ಸಿಬ್ಬಂಇ ಮೇಲೆ ನಡೆಸಿದ ವಕೀಲರ ವಿದುದ್ಧ ಕೂಡಲೇ ಕ್ರಮ ಜರುಗಿಸುವಂತೆ ಪತ್ರಕರ್ತ ಸಂಘದವರು ಶುಕ್ರವಾರ ಆಗ್ರಹಿಸಿದರು.<br /> <br /> ಕಾನೂನು ರಕ್ಷಣೆ ಮಾಡಬೇಕಾದ ವಕೀಲರೆ ಪರ್ತಕರ್ತರ ಮೇಲೆ ಹಲ್ಲೆ ನಡೆಸಿದ್ದು ಅಮಾನವೀಯ. ಇಂಥ ಸಂದರ್ಭದಲ್ಲಿ ಸುಮ್ಮನಿದ್ದ ಪೋಲೀಸರು ಕಾನೂನು ರಕ್ಷಣೆ ಮಾಡುವಲ್ಲಿ ವಿಫಲರಾಗಿದ್ದಾರೆ.ಪೋಲೀಸರ ಮೇಲೆ ಹಲ್ಲೆ ಜರುಗಿದ ನಂತರ ಘಟನೆಯ ತೀವ್ರತೆ ಅರಿವು ಪೋಲೀಸರಿಗಾಗಿದೆ. <br /> <br /> ಸಿಟಿ ಸಿವಿಲ್ ನ್ಯಾಯಾಲಯ ವಕಿಕೀಲರ ಖಾಸಗಿ ಆಸ್ತಿಯಲ್ಲ, ಸುದ್ದಿ ಮಾಡಲು ಹೋದ ಪತ್ರಕರ್ತರ ಮೇಲೆ ಅಮಾನುಷವಾಗಿ ಮಾಡಿದ್ದು ಖಂಡನಾರ್ಹ. <br /> <br /> ತಾಲ್ಲೂಕು ಆಡಳಿತದ ಮೂಲಕ ರಾಜ್ಯ ಪಾಲರಿಗೆ ಮನವಿಸಲ್ಲಿಸಿದರು.ಪ್ರತಿಭಟನೆಯಲ್ಲಿ ಮುರಳೀಧರ್ ಆಚಾರ್, ವಿ.ಎಂ.ನಾಗಭೂಷಣ್, ವೀರೇಂದ್ರ ಗೌಡ, ಕೋಳೂರು ಪ್ರಹ್ಲಾದ್, ಆರ್. ಶಿವರಾಮ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ:</strong> ಪತ್ರಿಕಾ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮಾರಕವಾಗುವಂತೆ ವರ್ತನೆ ಮಾಡಿದ ವಕೀಲರನ್ನು ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸುವಂತೆ ಹೊಸಪೇಟೆ ದಿನ ಮಾಧ್ಯಮ ಪತ್ರಕರ್ತರ ಸಂಘ ಆಗ್ರಹಿಸಿದೆ. <br /> ಈ ಕುರಿತು ಹೊಸಪೇಟೆಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದ ಪತ್ರಕರ್ತರು ತಹಸೀಲ್ದಾರರ ಮೂಲಕ ಮನವಿ ಸಲ್ಲಿಸಿದರು.<br /> <br /> ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯದ ಬಳಿ ವರದಿಗೆ ತೆರಳಿದ ಮಾಧ್ಯಮಗಳ ಮೇಲೆ ವಕೀಲರೆಂದು ಹೇಳಿಕೊಂಡ ಕೆಲವರು ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ.<br /> <br /> ಇದನ್ನು ಮೂಕ ಪ್ರೇಕ್ಷಕರಂತೆ ನೋಡಿದ ಪೊಲೀಸರು ಕರ್ತವ್ಯ ಲೋಪವೆಸಗಿದ್ದಾರೆ ಕಾರಣ ಹಲ್ಲೆ ಮಾಡಿದವರನ್ನು ಬಂದಿಸಬೇಕು, ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು. <br /> <br /> ಸಂಘದ ಅಧ್ಯಕ್ಷ ಕೆ.ಲಕ್ಷ್ಮಣ ಹಾಗೂ ಪರಶುರಾಮ ಕಲಾಲ್ ಎಸ್.ಎನ್.ಪಿ.ಪಾಟೀಲ್ ಮತ್ತು ವೆಂಕೋಬ ನಾಯಕ್ ಮಾತನಾಡಿದರು ದಿನ ಮಾಧ್ಯಮ ಪತ್ರಕರ್ತರ ಸಂಘದ ಪದಾಧಿಕಾರಿಗಳು ಕಾರ್ಯಕರ್ತರು ಹಾಜರಿದ್ದರು. <br /> ಮನವಿ ಸ್ವೀಕರಿಸಿ ತಹಸೀಲ್ದಾರ ಬಸವರಾಜ ಸೋಮಣ್ಣನವರ ಮಾತನಾಡಿ ತಮ್ಮ ಭಾವನೆ ಗಳನ್ನು ಸರ್ಕಾರಕ್ಕೆ ತಲುಪಿಸುವುದಾಗಿ ಹೇಳಿದರು. <br /> <br /> <strong>ದಲಿತ ಸಂಘಟನೆ ಖಂಡನೆ:</strong> ಮಾಧ್ಯಮ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಗೂಂಡಾಗಳ ರೀತಿ ನಡೆದುಕೊಂಡಿರುವುದು ತುಂಬಾ ವಿಷಾದನೀಯ ಎಂದು ದಲಿತ ಅಭಿವೃದ್ಧಿ ಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷ ಗ್ಯಾನಪ್ಪ ಬಡಿಗೇರ ತಿಳಿಸಿದ್ದಾರೆ. <br /> <br /> ತಪ್ಪು ಮಾಡಿದ ವ್ಯಕ್ತಿಗಳನ್ನು ಕಾನೂನು ರೀತಿಯಲ್ಲಿ ಶಿಕ್ಷೆಗೊಳಪಡಿಸಬೇಕು ಹಾಗೂ ಮಾಧ್ಯಮದ ಸಿಬ್ಬಂದಿಗಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಈ ಮೂಲಕ ಒತ್ತಾಯಿಸಿದ್ದಾರೆ. <br /> <br /> <strong>ಕುರುಗೋಡು ವರದಿ</strong><br /> ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಬೆಂಗಳೂರಿನ ನ್ಯಾಯಾಲಯದ ಆವರಣದಲ್ಲಿ ಮಾಧ್ಯಮಮಿತ್ರರ ಮೇಲೆ ವಕೀಲರು ನಡೆಸಿದ ಹಲ್ಲೆ ಖಂಡಿಸಿ ಶುಕ್ರವಾರ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.<br /> <br /> ಪಟ್ಟಣದ ಮುಖ್ಯ ವೃತ್ತದಿಂದ ವಿಶೇಷ ತಹಶೀಲ್ದಾರ ಕಚೇರಿಯವರೆಗೆ ಮೆರವಣಿಗೆಯಲ್ಲಿ ತೆರಳಿದ ಪತ್ರಕರ್ತರು, ವಕೀಲರ ವಿರುದ್ಧ ಘೋಷಣೆಗಳನ್ನು ಕೂಗಿದರು.<br /> <br /> ಪತ್ರಕರ್ತ ಪಿ.ಆರ್.ವೆಂಕಟೇಶ್, ಸಿಪಿಐ(ಎಂ) ಮುಖಂಡ ವಿ.ಎಸ್. ಶಿವಶಂಕರ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಾನಾಳ್ ಚನ್ನಬಸವರಾಜ್ ಮಾತನಾಡಿದರು.<br /> <br /> ಪತ್ರಕರ್ತರಾದ ವಾಗೀಶ್ ಎ. ಕುರುಗೋಡು, ಕೆ.ಭೀಮಣ್ಣ, ಪಂಪಾಪತಿಗೌಡ, ಕೆ.ಬಸವರಾಜ, ಪ್ರಾಂತ ರೈತಸಂಘದ ಕೆ.ಗಾದಿಲಿಂಗಪ್ಪ, ಎಚ್.ಎಂ. ವಿಶ್ವನಾಥ ಸ್ವಾಮಿ, ಎಸ್.ಬಿ. ಮಹ್ಮದ್ಖಾನ್, ಜೆಡಿ(ಎಸ್) ಯುವ ಘಟಕದ ಅಧ್ಯಕ್ಷ ನಾಗಲಿಂಗ ಸ್ವಾಮಿ, ನಂದಿಕೋಲು ಬಸವರಾಜ, ಚನ್ನಪಟ್ಟಣ ಮಲ್ಲಿಕಾರ್ಜುನ ಉಪಸ್ಥಿತರಿದ್ದರು.<br /> <br /> ಕರ್ನಾಟಕ ರಕ್ಷಣಾ ವೇದಿಕೆ, ಸಿಪಿಐ(ಎಂ), ಕರ್ನಾಟಕ ಪ್ರಾಂತ ರೈತ ಸಂಘ ವಿವಿಧ ಸಂಘಟನೆ ಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದವು.<br /> <br /> <strong>ಸಂಡೂರು ವರದಿ</strong><br /> ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಕರ್ತವ್ಯ ನಿರ್ವಹಣೆಯಲ್ಲಿದ್ದ ಪರ್ತಕರ್ತರು ಹಾಗೂ ಪೋಲೀಸ್ ಸಿಬ್ಬಂಇ ಮೇಲೆ ನಡೆಸಿದ ವಕೀಲರ ವಿದುದ್ಧ ಕೂಡಲೇ ಕ್ರಮ ಜರುಗಿಸುವಂತೆ ಪತ್ರಕರ್ತ ಸಂಘದವರು ಶುಕ್ರವಾರ ಆಗ್ರಹಿಸಿದರು.<br /> <br /> ಕಾನೂನು ರಕ್ಷಣೆ ಮಾಡಬೇಕಾದ ವಕೀಲರೆ ಪರ್ತಕರ್ತರ ಮೇಲೆ ಹಲ್ಲೆ ನಡೆಸಿದ್ದು ಅಮಾನವೀಯ. ಇಂಥ ಸಂದರ್ಭದಲ್ಲಿ ಸುಮ್ಮನಿದ್ದ ಪೋಲೀಸರು ಕಾನೂನು ರಕ್ಷಣೆ ಮಾಡುವಲ್ಲಿ ವಿಫಲರಾಗಿದ್ದಾರೆ.ಪೋಲೀಸರ ಮೇಲೆ ಹಲ್ಲೆ ಜರುಗಿದ ನಂತರ ಘಟನೆಯ ತೀವ್ರತೆ ಅರಿವು ಪೋಲೀಸರಿಗಾಗಿದೆ. <br /> <br /> ಸಿಟಿ ಸಿವಿಲ್ ನ್ಯಾಯಾಲಯ ವಕಿಕೀಲರ ಖಾಸಗಿ ಆಸ್ತಿಯಲ್ಲ, ಸುದ್ದಿ ಮಾಡಲು ಹೋದ ಪತ್ರಕರ್ತರ ಮೇಲೆ ಅಮಾನುಷವಾಗಿ ಮಾಡಿದ್ದು ಖಂಡನಾರ್ಹ. <br /> <br /> ತಾಲ್ಲೂಕು ಆಡಳಿತದ ಮೂಲಕ ರಾಜ್ಯ ಪಾಲರಿಗೆ ಮನವಿಸಲ್ಲಿಸಿದರು.ಪ್ರತಿಭಟನೆಯಲ್ಲಿ ಮುರಳೀಧರ್ ಆಚಾರ್, ವಿ.ಎಂ.ನಾಗಭೂಷಣ್, ವೀರೇಂದ್ರ ಗೌಡ, ಕೋಳೂರು ಪ್ರಹ್ಲಾದ್, ಆರ್. ಶಿವರಾಮ್ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>