<p>ಮಂಡ್ಯ: ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಾಮುಖ್ಯತೆ ಹೊಂದಿರುವ ಪದವಿ ಪೂರ್ವ ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕಾದ ಅಗತ್ಯವಿದೆ ಎಂದು ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ ಅಭಿಪ್ರಾಯಪಟ್ಟರು.<br /> <br /> ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಭಾನುವಾರ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ `ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ನೀತಿ ಜಾರಿ~ ಕುರಿತ ವಿಚಾರಗೋಷ್ಠಿ ಮತ್ತು ಕಾರ್ಯಕಾರಿ ಮಂಡಳಿ ಸಭೆ ಉದ್ಘಾಟಿಸಿ ಮಾತನಾಡಿದರು.<br /> <br /> ಪದವಿ ಪೂರ್ವ ಹಂತವನ್ನು ಪ್ರೌಢ ಶಿಕ್ಷಣದ ಜತೆಗೆ ವಿಲೀನಗೊಳಿಸುವ ಚಿಂತನೆ ಅವೈಜ್ಞಾನಿಕ. ಇದರ ವಿರುದ್ಧ ಶಿಕ್ಷಣ ತಜ್ಞರು ಹೋರಾಟ ಮಾಡಬೇಕು. ವಿಲೀನ ಚಿಂತನೆ ವೈಚಾರಿಕತೆಯಿಂದ ದೂರವಾಗಿದೆ ಎಂದರು. <br /> <br /> ಪದವಿ ಪೂರ್ವ ಶಿಕ್ಷಣ ಇಂದು ಗುಣಮಟ್ಟದಿಂದ ಕೂಡಿದೆ. ಸರ್ಕಾರ ವಸ್ತುಸ್ಥಿತಿ ಗಮನಿಸದೇ ವಿಲೀನ ಪ್ರಕ್ರಿಯೆಗೆ ಮುಂದಾಗುವುದು ಸರಿಯಲ್ಲ. ಈಗಾಗಲೇ ವಿವಿಧ ಕಾರ್ಯಕ್ರಮಗಳ ಜಾರಿ ನಂತರವೂ ಶಿಕ್ಷಣದಲ್ಲಿ ಹಿಂದೆ ಉಳಿದಿದ್ದೇವೆ. ಈ ಸ್ಥಿತಿಯಲ್ಲಿಯೇ ಪ್ರೌಢಶಿಕ್ಷಣ-ಪಿಯುಸಿ ವಿಲೀನದ ಮಾತು ಆರಂಭವಾಗಿದೆ ಎಂದು ಹೇಳಿದರು. <br /> <br /> ಶಾಸಕ ಮರಿತಿಬ್ಬೇಗೌಡ ಮಾತನಾಡಿ, ಕಾಲ್ಪನಿಕ ಬಡ್ತಿ, ಅನುದಾನರಹಿತ ಸಂಸ್ಥೆಗಳ ಉಪನ್ಯಾಸಕರಿಗೆ ವೈದ್ಯಕೀಯ ಭತ್ಯೆ ಇಲ್ಲದಿರುವುದು, ವೇತನ ತಾರತಮ್ಯ ನಿವಾರಣೆಗೆ ಹೋರಾಟ ನಡೆದಿದರೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ವಿಷಾದಿಸಿದರು. <br /> <br /> ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ರಾಮಕೃಷ್ಣಯ್ಯ ಮಾತನಾಡಿದರು. ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ, ಖಜಾಂಚಿ ಎಂ.ಜಯಣ್ಣ, ಜಿಲ್ಲಾ ಕಾರ್ಯದರ್ಶಿ ಮುತ್ತಯ್ಯ, ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ರಂಗದಾಸೇಗೌಡ, ಎಚ್. ನರಸಿಂಹೇಗೌಡ, ದೇವರಾಜು, ನಿಂಗರಾಜು ಮತ್ತಿತರರು ಇದ್ದರು.<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಡ್ಯ: ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಾಮುಖ್ಯತೆ ಹೊಂದಿರುವ ಪದವಿ ಪೂರ್ವ ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕಾದ ಅಗತ್ಯವಿದೆ ಎಂದು ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ ಅಭಿಪ್ರಾಯಪಟ್ಟರು.<br /> <br /> ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಭಾನುವಾರ ನಗರದ ಗಾಂಧಿ ಭವನದಲ್ಲಿ ಆಯೋಜಿಸಿದ್ದ `ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ನೀತಿ ಜಾರಿ~ ಕುರಿತ ವಿಚಾರಗೋಷ್ಠಿ ಮತ್ತು ಕಾರ್ಯಕಾರಿ ಮಂಡಳಿ ಸಭೆ ಉದ್ಘಾಟಿಸಿ ಮಾತನಾಡಿದರು.<br /> <br /> ಪದವಿ ಪೂರ್ವ ಹಂತವನ್ನು ಪ್ರೌಢ ಶಿಕ್ಷಣದ ಜತೆಗೆ ವಿಲೀನಗೊಳಿಸುವ ಚಿಂತನೆ ಅವೈಜ್ಞಾನಿಕ. ಇದರ ವಿರುದ್ಧ ಶಿಕ್ಷಣ ತಜ್ಞರು ಹೋರಾಟ ಮಾಡಬೇಕು. ವಿಲೀನ ಚಿಂತನೆ ವೈಚಾರಿಕತೆಯಿಂದ ದೂರವಾಗಿದೆ ಎಂದರು. <br /> <br /> ಪದವಿ ಪೂರ್ವ ಶಿಕ್ಷಣ ಇಂದು ಗುಣಮಟ್ಟದಿಂದ ಕೂಡಿದೆ. ಸರ್ಕಾರ ವಸ್ತುಸ್ಥಿತಿ ಗಮನಿಸದೇ ವಿಲೀನ ಪ್ರಕ್ರಿಯೆಗೆ ಮುಂದಾಗುವುದು ಸರಿಯಲ್ಲ. ಈಗಾಗಲೇ ವಿವಿಧ ಕಾರ್ಯಕ್ರಮಗಳ ಜಾರಿ ನಂತರವೂ ಶಿಕ್ಷಣದಲ್ಲಿ ಹಿಂದೆ ಉಳಿದಿದ್ದೇವೆ. ಈ ಸ್ಥಿತಿಯಲ್ಲಿಯೇ ಪ್ರೌಢಶಿಕ್ಷಣ-ಪಿಯುಸಿ ವಿಲೀನದ ಮಾತು ಆರಂಭವಾಗಿದೆ ಎಂದು ಹೇಳಿದರು. <br /> <br /> ಶಾಸಕ ಮರಿತಿಬ್ಬೇಗೌಡ ಮಾತನಾಡಿ, ಕಾಲ್ಪನಿಕ ಬಡ್ತಿ, ಅನುದಾನರಹಿತ ಸಂಸ್ಥೆಗಳ ಉಪನ್ಯಾಸಕರಿಗೆ ವೈದ್ಯಕೀಯ ಭತ್ಯೆ ಇಲ್ಲದಿರುವುದು, ವೇತನ ತಾರತಮ್ಯ ನಿವಾರಣೆಗೆ ಹೋರಾಟ ನಡೆದಿದರೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ವಿಷಾದಿಸಿದರು. <br /> <br /> ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ರಾಮಕೃಷ್ಣಯ್ಯ ಮಾತನಾಡಿದರು. ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಅಧ್ಯಕ್ಷ ತಿಮ್ಮಯ್ಯ, ಖಜಾಂಚಿ ಎಂ.ಜಯಣ್ಣ, ಜಿಲ್ಲಾ ಕಾರ್ಯದರ್ಶಿ ಮುತ್ತಯ್ಯ, ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ರಂಗದಾಸೇಗೌಡ, ಎಚ್. ನರಸಿಂಹೇಗೌಡ, ದೇವರಾಜು, ನಿಂಗರಾಜು ಮತ್ತಿತರರು ಇದ್ದರು.<br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>