<p><strong>ಶಿಡ್ಲಘಟ್ಟ: </strong>ಪರಂಗಿ ಬೆಳೆಗೆ ಬಾಧಿ ಸುತ್ತಿರುವ ತುಪ್ಪಳ ತಿಗಣೆಯ ಹಾವಳಿ ಈಗ ತಾಲ್ಲೂಕಿನ ಕುಂದಲಗುರ್ಕಿ ಸುತ್ತ ಮುತ್ತಲಿನ ಹಿಪ್ಪುನೇರಳೆ ಗಿಡಗಳಿಗೂ ವ್ಯಾಪಿಸಿದೆ. <br /> <br /> ಇದಕ್ಕಿಂತ ಮೊದಲು ಪರಂಗಿ ಗಿಡದಲ್ಲಿ ಗಿಡ ಮತ್ತು ಕಾಯಿಗೆ ಕಾಣಿಸಿ ಕೊಂಡ ಪರಂಗಿ ತುಪ್ಪಳ ತಿಗಣೆ ಕಾಟ ಇದೀಗ ಹಿಪ್ಪುನೇರಳೆ ಸೊಪ್ಪಿಗೂ ಹರಡು ತ್ತಿದೆ. ಇದರಿಂದ ತಾಲ್ಲೂಕಿನ ಬೆಳೆ ಗಾರರು ಬೇಸತ್ತಿದ್ದಾರೆ.<br /> <br /> ರೋಗದ ಕುರಿತು `ಪ್ರಜಾವಾಣಿ~ ಯೊಂದಿಗೆ ಮಾತನಾಡಿದ ರೈತ ಮಾರುತಿ ಕುಮಾರ್ ` ಇದನ್ನು ಹೇಗೆ ಹತೋಟಿಗೆ ತರುವುದು ಮತ್ತು ಬೆಳೆಯನ್ನು ಹೇಗೆ ಉಳಿಸಿಕೊಳ್ಳುವುದು ಎಂಬುದು ತೋಚದಂತಾಗಿದೆ~ ಎಂದು ಆತಂಕ ವ್ಯಕ್ತಪಡಿಸಿದರು.<br /> <br /> ಈ ಹಿನ್ನೆಲೆಯಲ್ಲಿ ಈಚೆಗೆ ಭೇಟಿ ನೀಡಿದ್ದ ರೇಷ್ಮೆ ಸಂಶೋಧನಾ ಕೇಂದ್ರದ ವಿಜ್ಞಾನಿ ಮತ್ತು ಅಧಿಕಾರಿಗಳು ಪರಿಶೀಲಿಸಿ, `ಈ ರೋಗಕ್ಕೆ ಕಾರಣ ಪ್ಯಾರಾಕಾಕಸ್ ಮಾರ್ಜಿನೇಟಸ್ (ಪಪ್ಪಾಯ ಮೀಲಿಬಗ್) ಎಂಬ ಕೀಟ ಮೊದಲಿಗೆ ಗಿಡದ ಸುಳಿಯಲ್ಲಿ ಕಾಣಿಸಿ ಕೊಳ್ಳುತ್ತದೆ. ಆ ನಂತರ ಕಾಂಡ, ಹೂ, ಕಾಯಿ ಹಣ್ಣು ಸೇರಿದಂತೆ ಗಿಡದ ಪೂರ್ತಿಭಾಗ ವನ್ನು ಆವರಿಸಿ ಕೊಳ್ಳುತ್ತದೆ. <br /> <br /> ರೋಗಕ್ಕೆ ತುತ್ತಾದ ಗಿಡ ಬೆಳವಣಿಗೆ ಕಾಣದೆ ಕುರುಚಲು ಬಿದ್ದು ಒಣಗಿದಂತಾಗುತ್ತದೆ. ಪಪ್ಪಯಾ ಮೀಲಿ ಬಗ್ ಕೀಟ ಮಂಜಿನ ಬೂದಿ ಇದ್ದಂತೆ ಇರುವುದರಿಂದ ಆ ಕೀಟಗಳು ಆವರಿಸಿದ ಗಿಡವೂ ಬಿಳಿಬಣ್ಣಕ್ಕೆ ತಿರುಗಿದಂತೆ ಗೋಚರಿಸುತ್ತದೆ. <br /> <br /> ಅಲ್ಲಿಗೆ ಆ ಗಿಡದ ಬೆಳವಣಿಗೆ ಸಂಪೂರ್ಣ ಸ್ಥಗಿತ~ ಎಂದು ರಾಜ್ಯ ರೇಷ್ಮೆ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರದ ವಿಜ್ಞಾನಿ ಡಾ.ಜೆ.ಸುಕುಮಾರ್ ಎನ್ನುತ್ತಾರೆ.<br /> <br /> `ಮೀಲಿಬಗ್ ಕೀಟ ಬಾಧಿತ ಗಿಡ, ಕಾಯಿ, ಹಣ್ಣು, ಸಸಿ, ತರಕಾರಿ ಸಾಗಾಣಿಕೆಯಿಂದ ಈ ಕೀಟಗಳು ಒಂದು ಕಡೆಯಿಂದ ಒಂದು ಕಡೆಗೆ ಹರಡುತ್ತವೆ. ಇದಲ್ಲದೆ ಕೀಟ ಬಾಧಿತ ಗಿಡಮರಗಳ ಬಳಿ ಸುಳಿದಾಡುವ ಕುರಿ, ಮೇಕೆ, ದನಕರುಗಳಿಂದಲೂ ಈ ರೋಗ ಇತರೆಡೆಗೆ ಪಸರಿಸುತ್ತದೆ.</p>.<p>ಜತೆಗೆ ರೋಗಪೀಡಿತ ಗಿಡದಲ್ಲಿನ ಮೀಲಿಬಗ್ ಕೀಟ ಸ್ರವಿಸುವ ದ್ರವ್ಯ ಹೀರಿಕೊಳ್ಳಲು ಬರುವ ಇರುವೆ ಇನ್ನಿತರೆ ಕೀಟಗಳಿಂದಲೂ ರೋಗ ಹರಡುತ್ತದೆ. ಕೆಲವೊಮ್ಮೆ ಗಾಳಿ ಮೂಲಕವೂ ಹರಡುತ್ತದೆ~ ಎನ್ನುತ್ತಾರೆ.<br /> <br /> `ಹಿಪ್ಪುನೇರಳೆ ತೋಟಗಳಲ್ಲಿ ಮತ್ತು ಬದುಗಳಲ್ಲಿ ಹಿಪ್ಪುನೇರಳೆ ಹೊರತು ಪಡಿಸಿ ಇತರೆ ಪರ್ಯಾಯ ಆಶ್ರಯ ಬೆಳೆ ಗಳನ್ನು, ಮರಗಿಡಗಳನ್ನು ಹಾಕ ಬಾರದು. <br /> <br /> ಮುಖ್ಯವಾಗಿ ಪರಂಗಿ ಗಿಡ ಬೆಳೆಸಲೇಬಾರದು. ಕೀಟ ಬಾಧೆಗೆ ತುತ್ತಾದ ಹಿಪ್ಪುನೇರಳೆ ಸಸ್ಯಗಳ ತೊಟಗಳು ಹಾಗೂ ಗಿಡದ ತುದಿ ಆರಂಭದಲ್ಲೇ ಕತ್ತರಿಸಿ ಪ್ರಸರಣಕ್ಕೆ ಅವಕಾಶವಿಲ್ಲದಂತೆ ಸುಡಬೇಕು. <br /> <br /> ತುಂತುರು ನೀರಾವರಿ ಅಥವಾ ರೈನ್ ಗನ್ ನೀರಾವರಿ ಪದ್ಧತಿ ಅಳವಡಿಸಿ ಈ ಕೀಟದ ಬಾಧೆ ನಿಯಂತ್ರಿಸಬಹುದು. ರಾಸಾ ಯನಿಕ ಹಾಗೂ ಜೈವಿಕ ನಿಯಂತ್ರಣ ಕ್ರಮಗಳಿಂದಲೂ ಕೀಟ ಬಾಧೆ ನಿಯಂತ್ರಿಸಬಹುದು~ ಎಂದು ವಿವರಿಸಿದರು.<br /> <br /> ಈ ಸಮಸ್ಯೆ ಕುರಿತು ರೇಷ್ಮೆ ಇಲಾಖೆ ಅಧಿಕಾರಿಗಳಾದ ಎಂ.ಎನ್.ಶಂಕರಪ್ಪ, ಎಂ.ಸಿ.ಚಂದ್ರಪ್ಪ, ಸತೀಶ್, ತಿಮ್ಮ ರಾಜು, ಮುನಿರಾಜು, ತಿಮ್ಮಪ್ಪ ಭೇಟಿ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿಡ್ಲಘಟ್ಟ: </strong>ಪರಂಗಿ ಬೆಳೆಗೆ ಬಾಧಿ ಸುತ್ತಿರುವ ತುಪ್ಪಳ ತಿಗಣೆಯ ಹಾವಳಿ ಈಗ ತಾಲ್ಲೂಕಿನ ಕುಂದಲಗುರ್ಕಿ ಸುತ್ತ ಮುತ್ತಲಿನ ಹಿಪ್ಪುನೇರಳೆ ಗಿಡಗಳಿಗೂ ವ್ಯಾಪಿಸಿದೆ. <br /> <br /> ಇದಕ್ಕಿಂತ ಮೊದಲು ಪರಂಗಿ ಗಿಡದಲ್ಲಿ ಗಿಡ ಮತ್ತು ಕಾಯಿಗೆ ಕಾಣಿಸಿ ಕೊಂಡ ಪರಂಗಿ ತುಪ್ಪಳ ತಿಗಣೆ ಕಾಟ ಇದೀಗ ಹಿಪ್ಪುನೇರಳೆ ಸೊಪ್ಪಿಗೂ ಹರಡು ತ್ತಿದೆ. ಇದರಿಂದ ತಾಲ್ಲೂಕಿನ ಬೆಳೆ ಗಾರರು ಬೇಸತ್ತಿದ್ದಾರೆ.<br /> <br /> ರೋಗದ ಕುರಿತು `ಪ್ರಜಾವಾಣಿ~ ಯೊಂದಿಗೆ ಮಾತನಾಡಿದ ರೈತ ಮಾರುತಿ ಕುಮಾರ್ ` ಇದನ್ನು ಹೇಗೆ ಹತೋಟಿಗೆ ತರುವುದು ಮತ್ತು ಬೆಳೆಯನ್ನು ಹೇಗೆ ಉಳಿಸಿಕೊಳ್ಳುವುದು ಎಂಬುದು ತೋಚದಂತಾಗಿದೆ~ ಎಂದು ಆತಂಕ ವ್ಯಕ್ತಪಡಿಸಿದರು.<br /> <br /> ಈ ಹಿನ್ನೆಲೆಯಲ್ಲಿ ಈಚೆಗೆ ಭೇಟಿ ನೀಡಿದ್ದ ರೇಷ್ಮೆ ಸಂಶೋಧನಾ ಕೇಂದ್ರದ ವಿಜ್ಞಾನಿ ಮತ್ತು ಅಧಿಕಾರಿಗಳು ಪರಿಶೀಲಿಸಿ, `ಈ ರೋಗಕ್ಕೆ ಕಾರಣ ಪ್ಯಾರಾಕಾಕಸ್ ಮಾರ್ಜಿನೇಟಸ್ (ಪಪ್ಪಾಯ ಮೀಲಿಬಗ್) ಎಂಬ ಕೀಟ ಮೊದಲಿಗೆ ಗಿಡದ ಸುಳಿಯಲ್ಲಿ ಕಾಣಿಸಿ ಕೊಳ್ಳುತ್ತದೆ. ಆ ನಂತರ ಕಾಂಡ, ಹೂ, ಕಾಯಿ ಹಣ್ಣು ಸೇರಿದಂತೆ ಗಿಡದ ಪೂರ್ತಿಭಾಗ ವನ್ನು ಆವರಿಸಿ ಕೊಳ್ಳುತ್ತದೆ. <br /> <br /> ರೋಗಕ್ಕೆ ತುತ್ತಾದ ಗಿಡ ಬೆಳವಣಿಗೆ ಕಾಣದೆ ಕುರುಚಲು ಬಿದ್ದು ಒಣಗಿದಂತಾಗುತ್ತದೆ. ಪಪ್ಪಯಾ ಮೀಲಿ ಬಗ್ ಕೀಟ ಮಂಜಿನ ಬೂದಿ ಇದ್ದಂತೆ ಇರುವುದರಿಂದ ಆ ಕೀಟಗಳು ಆವರಿಸಿದ ಗಿಡವೂ ಬಿಳಿಬಣ್ಣಕ್ಕೆ ತಿರುಗಿದಂತೆ ಗೋಚರಿಸುತ್ತದೆ. <br /> <br /> ಅಲ್ಲಿಗೆ ಆ ಗಿಡದ ಬೆಳವಣಿಗೆ ಸಂಪೂರ್ಣ ಸ್ಥಗಿತ~ ಎಂದು ರಾಜ್ಯ ರೇಷ್ಮೆ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರದ ವಿಜ್ಞಾನಿ ಡಾ.ಜೆ.ಸುಕುಮಾರ್ ಎನ್ನುತ್ತಾರೆ.<br /> <br /> `ಮೀಲಿಬಗ್ ಕೀಟ ಬಾಧಿತ ಗಿಡ, ಕಾಯಿ, ಹಣ್ಣು, ಸಸಿ, ತರಕಾರಿ ಸಾಗಾಣಿಕೆಯಿಂದ ಈ ಕೀಟಗಳು ಒಂದು ಕಡೆಯಿಂದ ಒಂದು ಕಡೆಗೆ ಹರಡುತ್ತವೆ. ಇದಲ್ಲದೆ ಕೀಟ ಬಾಧಿತ ಗಿಡಮರಗಳ ಬಳಿ ಸುಳಿದಾಡುವ ಕುರಿ, ಮೇಕೆ, ದನಕರುಗಳಿಂದಲೂ ಈ ರೋಗ ಇತರೆಡೆಗೆ ಪಸರಿಸುತ್ತದೆ.</p>.<p>ಜತೆಗೆ ರೋಗಪೀಡಿತ ಗಿಡದಲ್ಲಿನ ಮೀಲಿಬಗ್ ಕೀಟ ಸ್ರವಿಸುವ ದ್ರವ್ಯ ಹೀರಿಕೊಳ್ಳಲು ಬರುವ ಇರುವೆ ಇನ್ನಿತರೆ ಕೀಟಗಳಿಂದಲೂ ರೋಗ ಹರಡುತ್ತದೆ. ಕೆಲವೊಮ್ಮೆ ಗಾಳಿ ಮೂಲಕವೂ ಹರಡುತ್ತದೆ~ ಎನ್ನುತ್ತಾರೆ.<br /> <br /> `ಹಿಪ್ಪುನೇರಳೆ ತೋಟಗಳಲ್ಲಿ ಮತ್ತು ಬದುಗಳಲ್ಲಿ ಹಿಪ್ಪುನೇರಳೆ ಹೊರತು ಪಡಿಸಿ ಇತರೆ ಪರ್ಯಾಯ ಆಶ್ರಯ ಬೆಳೆ ಗಳನ್ನು, ಮರಗಿಡಗಳನ್ನು ಹಾಕ ಬಾರದು. <br /> <br /> ಮುಖ್ಯವಾಗಿ ಪರಂಗಿ ಗಿಡ ಬೆಳೆಸಲೇಬಾರದು. ಕೀಟ ಬಾಧೆಗೆ ತುತ್ತಾದ ಹಿಪ್ಪುನೇರಳೆ ಸಸ್ಯಗಳ ತೊಟಗಳು ಹಾಗೂ ಗಿಡದ ತುದಿ ಆರಂಭದಲ್ಲೇ ಕತ್ತರಿಸಿ ಪ್ರಸರಣಕ್ಕೆ ಅವಕಾಶವಿಲ್ಲದಂತೆ ಸುಡಬೇಕು. <br /> <br /> ತುಂತುರು ನೀರಾವರಿ ಅಥವಾ ರೈನ್ ಗನ್ ನೀರಾವರಿ ಪದ್ಧತಿ ಅಳವಡಿಸಿ ಈ ಕೀಟದ ಬಾಧೆ ನಿಯಂತ್ರಿಸಬಹುದು. ರಾಸಾ ಯನಿಕ ಹಾಗೂ ಜೈವಿಕ ನಿಯಂತ್ರಣ ಕ್ರಮಗಳಿಂದಲೂ ಕೀಟ ಬಾಧೆ ನಿಯಂತ್ರಿಸಬಹುದು~ ಎಂದು ವಿವರಿಸಿದರು.<br /> <br /> ಈ ಸಮಸ್ಯೆ ಕುರಿತು ರೇಷ್ಮೆ ಇಲಾಖೆ ಅಧಿಕಾರಿಗಳಾದ ಎಂ.ಎನ್.ಶಂಕರಪ್ಪ, ಎಂ.ಸಿ.ಚಂದ್ರಪ್ಪ, ಸತೀಶ್, ತಿಮ್ಮ ರಾಜು, ಮುನಿರಾಜು, ತಿಮ್ಮಪ್ಪ ಭೇಟಿ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>