<p><strong>ಗಂಗಾವತಿ: </strong>ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆ ಅಷ್ಟಕಷ್ಟೆ, ಶಿಕ್ಷಕರು ಸರಿಯಾಗಿ ಕರ್ತವ್ಯ ನಿರ್ವಹಿಸುವುದಿಲ್ಲ ಎಂಬ ದೂರು ದುಮ್ಮಾನಕ್ಕೆ ಇಲ್ಲೊಂದು ಶಾಲೆ ಅಪರೂಪದ ಸಾಧನೆ ಮಾಡುತ್ತಿದೆ. ಶಾಲೆಯ ಗೋಡೆಗಳನ್ನು ತೆರೆದ ಪುಸ್ತಕದಂತೆ ಮಾಡಿ ಮಕ್ಕಳ ಸಾಮಾನ್ಯ ಬೌದ್ಧಿಕ ಸಾಮರ್ಥ್ಯ ವೃದ್ಧಿಗೆ ಯತ್ನಿಸಿದೆ.<br /> <br /> ಶಾಲೆಯ ಆವರಣಕ್ಕೆ ಕಾಲಿಟ್ಟರೆ ಸಾಕು ಶಾಲೆಯ ಗೋಡೆಯ ಸುತ್ತಲೂ ಇರುವ ಅಲಂಕಾರಿಕ ಹೂ–ಗಿಡಗಳು ಸ್ವಾಗತಿಸುತ್ತವೆ. ಮಕ್ಕಳನ್ನು ಸೂಜಿಗಲ್ಲಂತೆ ಸೆಳೆದಿಡಬಲ್ಲ ಮಿಕ್ಕಿ ಮೌಸ್ನಂತ ಹತ್ತಾರು ವ್ಯೆಂಗ್ಯ ಚಿತ್ರ ಗಮನ ಸೆಳೆಯುತ್ತವೆ. ಇಷ್ಟಕ್ಕೂ ಆ ಶಾಲೆ ಗಂಗಾವತಿ ನಗರದ ಚಲುವಾದಿ ಓಣಿಯಲ್ಲಿರುವ ನಮ್ಮೂರ ಸರ್ಕಾರಿ ಶಾಲೆ.<br /> <br /> ಶಾಲೆಯ ಆವರಣ ಪ್ರವೇಶಿಸಿ ತರಗತಿ, ಶಿಕ್ಷಕರ ಹಾಗೂ ಮುಖ್ಯಗುರುಗಳ ಕೊಠಡಿಗಳಿಗೆ ತೆರಳಿದರೆ ಇದು ಸರ್ಕಾರಿ ಶಾಲೆ ಹೌದೆ, ಅಲ್ಲವೆ ಎಂಬ ಅನುಮಾನ ಮೂಡುತ್ತದೆ. ಎಕೆಂದರೆ ಇದು ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ಮೂಲ ಸೌಕರ್ಯ ಪಡೆದಿದೆ.<br /> ಮಕ್ಕಳನ್ನು ಕೇವಲ ಪಠ್ಯದ ಹುಳುವಾಗಿಸಿದರೆ ಬೌದ್ಧಿಕ ಸಾಮರ್ಥ್ಯ ವೃದ್ಧಿ ಅಸಾಧ್ಯ ಎಂದರಿತರ ಇಲ್ಲಿನ ಶಿಕ್ಷಕರು, ಮಕ್ಕಳ ತಲೆಗೆ ನೇರವಾಗಿ ಹೋಗಲಿ ಎಂಬ ಕಾರಣಕ್ಕೆ ಇಡೀ ಶಾಲೆಯ ಹೊರ–ಒಳ ಗೋಡೆ ಮಾಹಿತಿಯ ಕಣಜವಾಗಿದೆ.<br /> <br /> 12ನೇ ಶತಮಾನದ ಸಾಮಾಜಿಕ ಕ್ರಾಂತಿಕಾರರು, ಸ್ವಾತಂತ್ರ್ಯ ಸೇನಾನಿಗಳು, ಆಧ್ಯಾತ್ಮ ಚಿಂತಕರು, ರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲ, ರಾಷ್ಟ್ರಪತಿ, ಮುಖ್ಯಮಂತ್ರಿ, ಮಹಿಳಾ ಪ್ರಮುಖರು, ಮೇಧಾವಿ ಹೀಗೆ ಸಾಲು ಸಾಲು ಗಣ್ಯರು ಚಲುವಾದಿ ಓಣಿ ಶಾಲೆಯ ಗೋಡೆಯಲ್ಲಿ ವಿರಾಜಮಾನರಾಗಿದ್ದಾರೆ.<br /> <br /> ಮಕ್ಕಳಿಗೆ ಕೃಷಿಯ ಬಗ್ಗೆ ಆಸಕ್ತಿ ಮೂಡಿಸಲು ಶಾಲೆಯ ಒಂದು ಬದಿಯಲ್ಲಿ ಕೈತೋಟ ಬೆಳೆಸಲಾಗಿದ್ದು, ಪಾಲಕ್, ಮೂಲಂಗಿ, ಕೊತ್ತಂಬರಿ, ಮೆಂತ್ಯೆ, ಸಬ್ಸಗಿ, ಟೊಮೊಟೊ ಸೇರಿದಂತೆ ಇತರ ತರಕಾರಿ, ಸೊಪ್ಪು ಬೆಳೆಯಲು ಮಕ್ಕಳನ್ನು ತೊಡಗಿಸಲಾಗುತ್ತಿದೆ. <br /> ಶಾಲೆಯ ಕೊಠಡಿಯೊಳಗೆ ಕಾಲಿಟ್ಟರೆ ಸಾಕು ಮಕ್ಕಳ ಜ್ಞಾನ ವಿಕಾಸಕ್ಕೆ ಪೂರಕವಾಗಬಲ್ಲ, ಗಣಿತದ ಸೂತ್ರಗಳು, ಕನ್ನಡ ವ್ಯಾಕರಣ, ಇಂಗ್ಲಿಷಿನ ವಿರುದ್ಧಾರ್ಥ ಪದಗಳು, ಸಂಧಿಗಳು, ಕಾಲ, ಕನ್ನಡ ಸಾರಸ್ವತ ಲೋಕವನ್ನು ಉಜ್ವಲಗೊಳಿಸಿದ ನೂರಾರು ಸಾಹಿತಿ–ಕವಿಗಳ ಚಿತ್ರಣ ಅನಾವರಣಗೊಳ್ಳುತ್ತವೆ.<br /> <br /> ನಾಡಿನ ಐತಿಹಾಸಿಕ, ಪ್ರೇಕ್ಷಣೀಯ ಸ್ಥಳಗಳು, ಕರ್ನಾಟಕ, ಜಿಲ್ಲಾ, ತಾಲ್ಲೂಕು ದರ್ಶನದ ವಿಭಾಗದಲ್ಲಿ ಆಯಾ ಭಾಗದಲ್ಲಿನ ಪ್ರವಾಸಿತಾಣಗಳ ಮಾಹಿತಿ ಮಕ್ಕಳಲ್ಲಿ ಆಸಕ್ತಿ ಮೂಡಿಸುತ್ತಿವೆ. ಶಾಲೆಯಲ್ಲೊಂದು ಸುಸಜ್ಜಿತ ಸಭಾಂಗಣ ನಿರ್ಮಿಸಿದ ಹೆಗ್ಗಳಿಕೆ ಈ ಶಾಲೆಯ ಶಿಕ್ಷಕರದ್ದು.<br /> <br /> ಶಾಲೆಯ ಪ್ರತಿಯೊಂದು ಕೊಠಡಿಗೆ ನೆಲಹಾಸು ಹಾಕಲಾಗಿದೆ. ಮುಖ್ಯ ಶಿಕ್ಷಕರ ಕೊಠಡಿಯಂತೂ ಕ್ಷೇತ್ರ ಶಿಕ್ಷಣಾಧಿಕಾರಿಗಿಲ್ಲದಂತ ಸೌಲಭ್ಯಗಳಿಂದ ಕೂಡಿದೆ. ಸುಸಜ್ಜಿತ ಗಣಕಯಂತ್ರ ಕೊಠಡಿ ಹಾಗೂ ಬೋಧನೆಗೆ 2013ರ ಅಕ್ಟೋಬರ್ನಲ್ಲಿ ಅತ್ಯುತ್ತಮ ಶಾಲೆ ಎಂಬ ರಾಜ್ಯಮಟ್ಟದ ಪ್ರಶಸ್ತಿ ದೊರೆತಿದೆ.<br /> <br /> ಸರ್ಕಾರಿ ಶಾಲೆಯ ಈ ಸಾಧನೆಗೆ ಮುಖ್ಯ ಶಿಕ್ಷಕ, ರಾಜ್ಯ ಪ್ರಶಸ್ತಿ ವಿಜೇತ ಸಂಗಪ್ಪ ಗಾಜಿ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಖಾದರಸಾಬ ಹುಲ್ಲೂರು ಅವರ ಆಸಕ್ತಿ, ಪರಿಶ್ರಮ ಕಾರಣ. ಹಿಂದುಳಿದ ಚಲುವಾದಿ ಓಣಿಯ ನಮ್ಮೂರ ಶಾಲೆ ಇತರ ಸರ್ಕಾರಿ–ಖಾಸಗಿ ಶಾಲೆಗೆ ಮಾದರಿಯಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ: </strong>ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕಲಿಕೆ ಅಷ್ಟಕಷ್ಟೆ, ಶಿಕ್ಷಕರು ಸರಿಯಾಗಿ ಕರ್ತವ್ಯ ನಿರ್ವಹಿಸುವುದಿಲ್ಲ ಎಂಬ ದೂರು ದುಮ್ಮಾನಕ್ಕೆ ಇಲ್ಲೊಂದು ಶಾಲೆ ಅಪರೂಪದ ಸಾಧನೆ ಮಾಡುತ್ತಿದೆ. ಶಾಲೆಯ ಗೋಡೆಗಳನ್ನು ತೆರೆದ ಪುಸ್ತಕದಂತೆ ಮಾಡಿ ಮಕ್ಕಳ ಸಾಮಾನ್ಯ ಬೌದ್ಧಿಕ ಸಾಮರ್ಥ್ಯ ವೃದ್ಧಿಗೆ ಯತ್ನಿಸಿದೆ.<br /> <br /> ಶಾಲೆಯ ಆವರಣಕ್ಕೆ ಕಾಲಿಟ್ಟರೆ ಸಾಕು ಶಾಲೆಯ ಗೋಡೆಯ ಸುತ್ತಲೂ ಇರುವ ಅಲಂಕಾರಿಕ ಹೂ–ಗಿಡಗಳು ಸ್ವಾಗತಿಸುತ್ತವೆ. ಮಕ್ಕಳನ್ನು ಸೂಜಿಗಲ್ಲಂತೆ ಸೆಳೆದಿಡಬಲ್ಲ ಮಿಕ್ಕಿ ಮೌಸ್ನಂತ ಹತ್ತಾರು ವ್ಯೆಂಗ್ಯ ಚಿತ್ರ ಗಮನ ಸೆಳೆಯುತ್ತವೆ. ಇಷ್ಟಕ್ಕೂ ಆ ಶಾಲೆ ಗಂಗಾವತಿ ನಗರದ ಚಲುವಾದಿ ಓಣಿಯಲ್ಲಿರುವ ನಮ್ಮೂರ ಸರ್ಕಾರಿ ಶಾಲೆ.<br /> <br /> ಶಾಲೆಯ ಆವರಣ ಪ್ರವೇಶಿಸಿ ತರಗತಿ, ಶಿಕ್ಷಕರ ಹಾಗೂ ಮುಖ್ಯಗುರುಗಳ ಕೊಠಡಿಗಳಿಗೆ ತೆರಳಿದರೆ ಇದು ಸರ್ಕಾರಿ ಶಾಲೆ ಹೌದೆ, ಅಲ್ಲವೆ ಎಂಬ ಅನುಮಾನ ಮೂಡುತ್ತದೆ. ಎಕೆಂದರೆ ಇದು ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ಮೂಲ ಸೌಕರ್ಯ ಪಡೆದಿದೆ.<br /> ಮಕ್ಕಳನ್ನು ಕೇವಲ ಪಠ್ಯದ ಹುಳುವಾಗಿಸಿದರೆ ಬೌದ್ಧಿಕ ಸಾಮರ್ಥ್ಯ ವೃದ್ಧಿ ಅಸಾಧ್ಯ ಎಂದರಿತರ ಇಲ್ಲಿನ ಶಿಕ್ಷಕರು, ಮಕ್ಕಳ ತಲೆಗೆ ನೇರವಾಗಿ ಹೋಗಲಿ ಎಂಬ ಕಾರಣಕ್ಕೆ ಇಡೀ ಶಾಲೆಯ ಹೊರ–ಒಳ ಗೋಡೆ ಮಾಹಿತಿಯ ಕಣಜವಾಗಿದೆ.<br /> <br /> 12ನೇ ಶತಮಾನದ ಸಾಮಾಜಿಕ ಕ್ರಾಂತಿಕಾರರು, ಸ್ವಾತಂತ್ರ್ಯ ಸೇನಾನಿಗಳು, ಆಧ್ಯಾತ್ಮ ಚಿಂತಕರು, ರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲ, ರಾಷ್ಟ್ರಪತಿ, ಮುಖ್ಯಮಂತ್ರಿ, ಮಹಿಳಾ ಪ್ರಮುಖರು, ಮೇಧಾವಿ ಹೀಗೆ ಸಾಲು ಸಾಲು ಗಣ್ಯರು ಚಲುವಾದಿ ಓಣಿ ಶಾಲೆಯ ಗೋಡೆಯಲ್ಲಿ ವಿರಾಜಮಾನರಾಗಿದ್ದಾರೆ.<br /> <br /> ಮಕ್ಕಳಿಗೆ ಕೃಷಿಯ ಬಗ್ಗೆ ಆಸಕ್ತಿ ಮೂಡಿಸಲು ಶಾಲೆಯ ಒಂದು ಬದಿಯಲ್ಲಿ ಕೈತೋಟ ಬೆಳೆಸಲಾಗಿದ್ದು, ಪಾಲಕ್, ಮೂಲಂಗಿ, ಕೊತ್ತಂಬರಿ, ಮೆಂತ್ಯೆ, ಸಬ್ಸಗಿ, ಟೊಮೊಟೊ ಸೇರಿದಂತೆ ಇತರ ತರಕಾರಿ, ಸೊಪ್ಪು ಬೆಳೆಯಲು ಮಕ್ಕಳನ್ನು ತೊಡಗಿಸಲಾಗುತ್ತಿದೆ. <br /> ಶಾಲೆಯ ಕೊಠಡಿಯೊಳಗೆ ಕಾಲಿಟ್ಟರೆ ಸಾಕು ಮಕ್ಕಳ ಜ್ಞಾನ ವಿಕಾಸಕ್ಕೆ ಪೂರಕವಾಗಬಲ್ಲ, ಗಣಿತದ ಸೂತ್ರಗಳು, ಕನ್ನಡ ವ್ಯಾಕರಣ, ಇಂಗ್ಲಿಷಿನ ವಿರುದ್ಧಾರ್ಥ ಪದಗಳು, ಸಂಧಿಗಳು, ಕಾಲ, ಕನ್ನಡ ಸಾರಸ್ವತ ಲೋಕವನ್ನು ಉಜ್ವಲಗೊಳಿಸಿದ ನೂರಾರು ಸಾಹಿತಿ–ಕವಿಗಳ ಚಿತ್ರಣ ಅನಾವರಣಗೊಳ್ಳುತ್ತವೆ.<br /> <br /> ನಾಡಿನ ಐತಿಹಾಸಿಕ, ಪ್ರೇಕ್ಷಣೀಯ ಸ್ಥಳಗಳು, ಕರ್ನಾಟಕ, ಜಿಲ್ಲಾ, ತಾಲ್ಲೂಕು ದರ್ಶನದ ವಿಭಾಗದಲ್ಲಿ ಆಯಾ ಭಾಗದಲ್ಲಿನ ಪ್ರವಾಸಿತಾಣಗಳ ಮಾಹಿತಿ ಮಕ್ಕಳಲ್ಲಿ ಆಸಕ್ತಿ ಮೂಡಿಸುತ್ತಿವೆ. ಶಾಲೆಯಲ್ಲೊಂದು ಸುಸಜ್ಜಿತ ಸಭಾಂಗಣ ನಿರ್ಮಿಸಿದ ಹೆಗ್ಗಳಿಕೆ ಈ ಶಾಲೆಯ ಶಿಕ್ಷಕರದ್ದು.<br /> <br /> ಶಾಲೆಯ ಪ್ರತಿಯೊಂದು ಕೊಠಡಿಗೆ ನೆಲಹಾಸು ಹಾಕಲಾಗಿದೆ. ಮುಖ್ಯ ಶಿಕ್ಷಕರ ಕೊಠಡಿಯಂತೂ ಕ್ಷೇತ್ರ ಶಿಕ್ಷಣಾಧಿಕಾರಿಗಿಲ್ಲದಂತ ಸೌಲಭ್ಯಗಳಿಂದ ಕೂಡಿದೆ. ಸುಸಜ್ಜಿತ ಗಣಕಯಂತ್ರ ಕೊಠಡಿ ಹಾಗೂ ಬೋಧನೆಗೆ 2013ರ ಅಕ್ಟೋಬರ್ನಲ್ಲಿ ಅತ್ಯುತ್ತಮ ಶಾಲೆ ಎಂಬ ರಾಜ್ಯಮಟ್ಟದ ಪ್ರಶಸ್ತಿ ದೊರೆತಿದೆ.<br /> <br /> ಸರ್ಕಾರಿ ಶಾಲೆಯ ಈ ಸಾಧನೆಗೆ ಮುಖ್ಯ ಶಿಕ್ಷಕ, ರಾಜ್ಯ ಪ್ರಶಸ್ತಿ ವಿಜೇತ ಸಂಗಪ್ಪ ಗಾಜಿ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕ ಖಾದರಸಾಬ ಹುಲ್ಲೂರು ಅವರ ಆಸಕ್ತಿ, ಪರಿಶ್ರಮ ಕಾರಣ. ಹಿಂದುಳಿದ ಚಲುವಾದಿ ಓಣಿಯ ನಮ್ಮೂರ ಶಾಲೆ ಇತರ ಸರ್ಕಾರಿ–ಖಾಸಗಿ ಶಾಲೆಗೆ ಮಾದರಿಯಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>