<p>ಗಂಗಾವತಿ: ಪೊಲೀಸ್ ಪೇದೆಯೊಬ್ಬ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿ ಸಾರ್ವಜನಿಕವಾಗಿ ಸಿಕ್ಕು ಬಿದ್ದರಿಂದ ಜನರೇ ಹಿಗ್ಗಾಮುಗ್ಗಾ ಥಳಿಸಿ ಗ್ರಾಮೀಣ ಪೊಲೀಸ್ಠಾಣೆಗೆ ಒಪ್ಪಿಸಿದ ಘಟನೆ ಬುಧವಾರ ನಗರದ ಲಿಂಗರಾಜ ಕ್ಯಾಂಪಿನಲ್ಲಿ ನಡೆದಿದೆ. <br /> <br /> ಗ್ರಾಮೀಣ ಪೊಲೀಸ್ಠಾಣೆಯ ಪೇದೆ ಸ್ವಾಮಿ (ಪೂರ್ಣ ಹೆಸರು ತಿಳಿದು ಬಂದಿಲ್ಲ) ಎಂಬಾತ ಲಿಂಗರಾಜ ಕ್ಯಾಂಪಿಗೆ ಹೋಗಿ ಆಗಾಗ ಅಲ್ಲಿನ ಹಲವು ಯುವತಿ ಮತ್ತು ಮಧ್ಯ ಮಯಸ್ಸಿನ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ.<br /> <br /> ಕೆಲ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದರೂ ಕೂಡ ಕೇವಲ ಪೊಲೀಸ್ ಎಂಬ ಕಾರಣಕ್ಕಾಗಿ ಕೆಲವೊಮ್ಮೆ ಮಹಿಳೆಯರು ಮೌನ ವಹಿಸಿ ಪೇದೆಯ ಉಪಟಳ ಸಹಿಸಿದ್ದರು. ಆದರೆ ಪೇದೆಯ ಉಪಟಳ ಹೆಚ್ಚಾಗಿದ್ದರಿಂದ ಬುಧವಾರ ಸಾರ್ವಜನಿಕರೇ ಧಮದೇಟು ನೀಡಿದ್ದಾರೆ. <br /> <br /> ಅದಕ್ಕೂ ಮುನ್ನ ಕೆಲ ಮಹಿಳೆಯರಿಗೆ ತನ್ನ ಮೊಬೈಲ್ ನಂಬರ್ ಕೊಟ್ಟ ಪೇದೆ ಕರೆ ಮಾಡುವಂತೆ ಒತ್ತಾಯಿಸುತ್ತಿದ್ದ. ಮಾತನಾಡಿದರೆ ಅಸಭ್ಯವಾಗಿ ಮಾತನಾಡುತ್ತಿದ್ದ ಎಂದು ಲಿಂಗರಾಜ ಕ್ಯಾಂಪಿನ ಮಹೆಬೂಬ, ಶೇಖರಪ್ಪ, ದೇವೇಂದ್ರ ದೂರಿದರು. <br /> <br /> ಬುಧವಾರ ಮಧ್ಯಾಹ್ನದ ಸಮಯ ಇದ್ದಕ್ಕಿಂದಂತೆ ಮಹಿಳೆಯೊಬ್ಬರ ಮನೆ ಹೊಕ್ಕ ಪೇದೆ ಆಕೆಯನ್ನು ಹಿಡಿಯಲು ಹೋದ ಸಂದರ್ಭದಲ್ಲಿ ಮಹಿಳೆ ಕಿರುಚಿಕೊಳ್ಳುತ್ತಿದ್ದಂತೆಯೆ ಪೇದೆ ಜನರ ಕೈಗೆ ಸಿಗದೇ ಪರಾರಿಯಾದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. <br /> <br /> ಘಟನೆಯ ಕೆಲ ಸಮಯದ ಬಳಿಕ ಕೆಲ ಯುವಕರು ಉಪಾಯ ಹೂಡಿ ಮಹಿಳೆಯೊಬ್ಬರಿಂದ ಪೇದೆಗೆ ದೂರವಾಣಿ ಕರೆ ಮಾಡಿಸಿ ಸಿ.ಬಿ.ಎಸ್ ಪೆಟ್ರೋಲ್ ಬಂಕ್ ಹತ್ತಿರ ಬರಲು ಹೇಳಿದರು. ಕಾಯ್ದು ಕುಳಿತು ಪೇದೆಯನ್ನು ಹಿಡಿದು ಥಳಿಸುವಲ್ಲಿ ಯಶಸ್ವಿಯಾದರು. ಕೊನೆಗೆ ಠಾಣೆಗೆ ಒಪ್ಪಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗಂಗಾವತಿ: ಪೊಲೀಸ್ ಪೇದೆಯೊಬ್ಬ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿ ಸಾರ್ವಜನಿಕವಾಗಿ ಸಿಕ್ಕು ಬಿದ್ದರಿಂದ ಜನರೇ ಹಿಗ್ಗಾಮುಗ್ಗಾ ಥಳಿಸಿ ಗ್ರಾಮೀಣ ಪೊಲೀಸ್ಠಾಣೆಗೆ ಒಪ್ಪಿಸಿದ ಘಟನೆ ಬುಧವಾರ ನಗರದ ಲಿಂಗರಾಜ ಕ್ಯಾಂಪಿನಲ್ಲಿ ನಡೆದಿದೆ. <br /> <br /> ಗ್ರಾಮೀಣ ಪೊಲೀಸ್ಠಾಣೆಯ ಪೇದೆ ಸ್ವಾಮಿ (ಪೂರ್ಣ ಹೆಸರು ತಿಳಿದು ಬಂದಿಲ್ಲ) ಎಂಬಾತ ಲಿಂಗರಾಜ ಕ್ಯಾಂಪಿಗೆ ಹೋಗಿ ಆಗಾಗ ಅಲ್ಲಿನ ಹಲವು ಯುವತಿ ಮತ್ತು ಮಧ್ಯ ಮಯಸ್ಸಿನ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ.<br /> <br /> ಕೆಲ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದರೂ ಕೂಡ ಕೇವಲ ಪೊಲೀಸ್ ಎಂಬ ಕಾರಣಕ್ಕಾಗಿ ಕೆಲವೊಮ್ಮೆ ಮಹಿಳೆಯರು ಮೌನ ವಹಿಸಿ ಪೇದೆಯ ಉಪಟಳ ಸಹಿಸಿದ್ದರು. ಆದರೆ ಪೇದೆಯ ಉಪಟಳ ಹೆಚ್ಚಾಗಿದ್ದರಿಂದ ಬುಧವಾರ ಸಾರ್ವಜನಿಕರೇ ಧಮದೇಟು ನೀಡಿದ್ದಾರೆ. <br /> <br /> ಅದಕ್ಕೂ ಮುನ್ನ ಕೆಲ ಮಹಿಳೆಯರಿಗೆ ತನ್ನ ಮೊಬೈಲ್ ನಂಬರ್ ಕೊಟ್ಟ ಪೇದೆ ಕರೆ ಮಾಡುವಂತೆ ಒತ್ತಾಯಿಸುತ್ತಿದ್ದ. ಮಾತನಾಡಿದರೆ ಅಸಭ್ಯವಾಗಿ ಮಾತನಾಡುತ್ತಿದ್ದ ಎಂದು ಲಿಂಗರಾಜ ಕ್ಯಾಂಪಿನ ಮಹೆಬೂಬ, ಶೇಖರಪ್ಪ, ದೇವೇಂದ್ರ ದೂರಿದರು. <br /> <br /> ಬುಧವಾರ ಮಧ್ಯಾಹ್ನದ ಸಮಯ ಇದ್ದಕ್ಕಿಂದಂತೆ ಮಹಿಳೆಯೊಬ್ಬರ ಮನೆ ಹೊಕ್ಕ ಪೇದೆ ಆಕೆಯನ್ನು ಹಿಡಿಯಲು ಹೋದ ಸಂದರ್ಭದಲ್ಲಿ ಮಹಿಳೆ ಕಿರುಚಿಕೊಳ್ಳುತ್ತಿದ್ದಂತೆಯೆ ಪೇದೆ ಜನರ ಕೈಗೆ ಸಿಗದೇ ಪರಾರಿಯಾದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. <br /> <br /> ಘಟನೆಯ ಕೆಲ ಸಮಯದ ಬಳಿಕ ಕೆಲ ಯುವಕರು ಉಪಾಯ ಹೂಡಿ ಮಹಿಳೆಯೊಬ್ಬರಿಂದ ಪೇದೆಗೆ ದೂರವಾಣಿ ಕರೆ ಮಾಡಿಸಿ ಸಿ.ಬಿ.ಎಸ್ ಪೆಟ್ರೋಲ್ ಬಂಕ್ ಹತ್ತಿರ ಬರಲು ಹೇಳಿದರು. ಕಾಯ್ದು ಕುಳಿತು ಪೇದೆಯನ್ನು ಹಿಡಿದು ಥಳಿಸುವಲ್ಲಿ ಯಶಸ್ವಿಯಾದರು. ಕೊನೆಗೆ ಠಾಣೆಗೆ ಒಪ್ಪಿಸಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>