<p><span style="color: #ff0000">ಗುಲ್ಬರ್ಗ: ಐಎಎಸ್, ಎಂಜಿನಿಯರ್, ಶಿಕ್ಷಕ, ವೈದ್ಯ, ವಿಜ್ಞಾನಿ ಆಗುವ ಕನಸುಗಳನ್ನು ಬಿತ್ತರಿಸುವ ನೀವು, ರೈತರಾಗಿ ಎಂದು ಮಕ್ಕಳಿಗೆ ಏಕೆ ಹೇಳುವುದಿಲ್ಲ? </span><br /> -ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಕಲಾಂ ಅವರಿಗೆ ವಿದ್ಯಾರ್ಥಿಯೊಬ್ಬನಿಂದ ಬಂದ ಪ್ರಶ್ನೆ. ನೆರೆದಿದ್ದ ಲಕ್ಷ ಜನರ ಕರಡಾತನವೂ ಅದರ ಬೆನ್ನಲ್ಲೇ ಕೇಳಿಬಂತು. ಕಲಾಂ ಗಂಭೀರರಾದರು. <br /> <br /> ‘ಇತರ ಎಲ್ಲ ವಲಯಗಳ ನೆರವಿನಿಂದ ಕೃಷಿಯ ಉತ್ಪಾದನೆ ಹೆಚ್ಚಾಗುತ್ತಿದೆ. ವಿಜ್ಞಾನಿ, ಎಂಜಿನಿಯರ್... ಎಲ್ಲರೂ ಈ ನಿಟ್ಟಿನಲ್ಲಿ ರೈತರಿಗೆ ನೆರವಾಗಬೇಕು ಎಂಬುದೇ ನನ್ನ ಅಪೇಕ್ಷೆ’ ಎಂದು ಅವರು ಉತ್ತರಿಸಿದರು. ಕಲಿಕೆಗೆ ಸಂಪೂರ್ಣ ಪ್ರಾಮುಖ್ಯತೆ ನೀಡುವ ನೀವು ಇತರ ಚಟುವಟಿಕೆಗಳನ್ನು ಕಡೆಗಣಿಸುತ್ತೀರಲ್ಲ ಎಂಬ ವಿದ್ಯಾರ್ಥಿನಿಯೊಬ್ಬಳ ಪ್ರಶ್ನೆಗೆ ಉತ್ತರಿಸಿದ ಕಲಾಂ, ‘ನಿಮ್ಮ ಗುರಿ ದೃಢಪಡಿಸಿ. ಅತ್ತ ಕಲಿಕೆಯಲ್ಲಿ ಮುನ್ನಡೆಯಿರಿ’ ಎಂದರು. <br /> <br /> ಗುಲ್ಬರ್ಗದ ಶಿವಶರಣ ಉಪ್ಪಿನ ಅವರ ತೋಟದಲ್ಲಿ ನಡೆಯುತ್ತಿರುವ ‘ಕಲಬುರ್ಗಿ ಕಂಪು’ವಿನಲ್ಲಿ ಶನಿವಾರದ ’ಜ್ಞಾನಶಕ್ತಿ ಸಂಗಮ’ ಕಾರ್ಯಕ್ರಮದಲ್ಲಿ ಕಲಾಂ ಮಾತು-ಸಂವಾದ ನಡೆಸಿಕೊಟ್ಟರು. ‘ಗೃಹ ಗ್ರಂಥಾಲಯ’ವೇ ಕುಟುಂಬದ ದೊಡ್ಡ ಆಸ್ತಿ. ಇಪ್ಪತ್ತು ಪುಸ್ತಕಗಳನ್ನಿಟ್ಟು ಮನೆಯಲ್ಲಿ ಗ್ರಂಥಾಲಯ ಆರಂಭಿಸಿ. ಮಕ್ಕಳು ಅದಕ್ಕೆ 200 ಗ್ರಂಥಗಳನ್ನು ಸೇರಿಸಲಿ. ಮೊಮ್ಮಕ್ಕಳ ಕಾಲಕ್ಕೆ ಅದು 2000ಕ್ಕೆ ಏರಲಿ. ಅದಕ್ಕಿಂತ ದೊಡ್ಡ ಖಜಾನೆ ಬೇರೊಂದಿಲ್ಲ ಎಂದು ಆಶಿಸಿದರು. <br /> <br /> ಕನ್ನಡದಲ್ಲೇ ಮಾತು ಆರಂಭಿಸಿದ ಕಲಾಂ, ದೇಶಪ್ರೇಮ, ಪರಿಸರ ಸಂರಕ್ಷಣೆ, ಗುರಿ, ಪರಿಶ್ರಮ ಕುರಿತು ಪ್ರತಿಜ್ಞೆ ಬೋಧಿಸಿದರು. ಜನಸಾಮಾನ್ಯರ ಮಧ್ಯೆ ಆಸೀನರಾಗಿದ್ದ ‘ಸರಳಸಂತ’ ವಿಜಾಪುರ ಜ್ಞಾನಾಶ್ರಮದ ಸಿದ್ದೇಶ್ವರ ಸ್ವಾಮಿ ಅವರತ್ತ ಪ್ರಸನ್ನತೆಯ ಮುಗುಳ್ನಕ್ಕು ನಮಸ್ಕಾರ ಹೇಳಿದರು. ಸಭಾಂಗಣದ ಒಳಗೂ-ಹೊರಗೂ ವಿದ್ಯಾರ್ಥಿಗಳು ಕಿಕ್ಕಿರಿದು ತುಂಬಿದ್ದರು. ಕಲಾಂ ಭಾಷಣವನ್ನು ಗುರುರಾಜ ಕರ್ಜಗಿ ಕನ್ನಡಕ್ಕೆ ಅನುವಾದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="color: #ff0000">ಗುಲ್ಬರ್ಗ: ಐಎಎಸ್, ಎಂಜಿನಿಯರ್, ಶಿಕ್ಷಕ, ವೈದ್ಯ, ವಿಜ್ಞಾನಿ ಆಗುವ ಕನಸುಗಳನ್ನು ಬಿತ್ತರಿಸುವ ನೀವು, ರೈತರಾಗಿ ಎಂದು ಮಕ್ಕಳಿಗೆ ಏಕೆ ಹೇಳುವುದಿಲ್ಲ? </span><br /> -ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಕಲಾಂ ಅವರಿಗೆ ವಿದ್ಯಾರ್ಥಿಯೊಬ್ಬನಿಂದ ಬಂದ ಪ್ರಶ್ನೆ. ನೆರೆದಿದ್ದ ಲಕ್ಷ ಜನರ ಕರಡಾತನವೂ ಅದರ ಬೆನ್ನಲ್ಲೇ ಕೇಳಿಬಂತು. ಕಲಾಂ ಗಂಭೀರರಾದರು. <br /> <br /> ‘ಇತರ ಎಲ್ಲ ವಲಯಗಳ ನೆರವಿನಿಂದ ಕೃಷಿಯ ಉತ್ಪಾದನೆ ಹೆಚ್ಚಾಗುತ್ತಿದೆ. ವಿಜ್ಞಾನಿ, ಎಂಜಿನಿಯರ್... ಎಲ್ಲರೂ ಈ ನಿಟ್ಟಿನಲ್ಲಿ ರೈತರಿಗೆ ನೆರವಾಗಬೇಕು ಎಂಬುದೇ ನನ್ನ ಅಪೇಕ್ಷೆ’ ಎಂದು ಅವರು ಉತ್ತರಿಸಿದರು. ಕಲಿಕೆಗೆ ಸಂಪೂರ್ಣ ಪ್ರಾಮುಖ್ಯತೆ ನೀಡುವ ನೀವು ಇತರ ಚಟುವಟಿಕೆಗಳನ್ನು ಕಡೆಗಣಿಸುತ್ತೀರಲ್ಲ ಎಂಬ ವಿದ್ಯಾರ್ಥಿನಿಯೊಬ್ಬಳ ಪ್ರಶ್ನೆಗೆ ಉತ್ತರಿಸಿದ ಕಲಾಂ, ‘ನಿಮ್ಮ ಗುರಿ ದೃಢಪಡಿಸಿ. ಅತ್ತ ಕಲಿಕೆಯಲ್ಲಿ ಮುನ್ನಡೆಯಿರಿ’ ಎಂದರು. <br /> <br /> ಗುಲ್ಬರ್ಗದ ಶಿವಶರಣ ಉಪ್ಪಿನ ಅವರ ತೋಟದಲ್ಲಿ ನಡೆಯುತ್ತಿರುವ ‘ಕಲಬುರ್ಗಿ ಕಂಪು’ವಿನಲ್ಲಿ ಶನಿವಾರದ ’ಜ್ಞಾನಶಕ್ತಿ ಸಂಗಮ’ ಕಾರ್ಯಕ್ರಮದಲ್ಲಿ ಕಲಾಂ ಮಾತು-ಸಂವಾದ ನಡೆಸಿಕೊಟ್ಟರು. ‘ಗೃಹ ಗ್ರಂಥಾಲಯ’ವೇ ಕುಟುಂಬದ ದೊಡ್ಡ ಆಸ್ತಿ. ಇಪ್ಪತ್ತು ಪುಸ್ತಕಗಳನ್ನಿಟ್ಟು ಮನೆಯಲ್ಲಿ ಗ್ರಂಥಾಲಯ ಆರಂಭಿಸಿ. ಮಕ್ಕಳು ಅದಕ್ಕೆ 200 ಗ್ರಂಥಗಳನ್ನು ಸೇರಿಸಲಿ. ಮೊಮ್ಮಕ್ಕಳ ಕಾಲಕ್ಕೆ ಅದು 2000ಕ್ಕೆ ಏರಲಿ. ಅದಕ್ಕಿಂತ ದೊಡ್ಡ ಖಜಾನೆ ಬೇರೊಂದಿಲ್ಲ ಎಂದು ಆಶಿಸಿದರು. <br /> <br /> ಕನ್ನಡದಲ್ಲೇ ಮಾತು ಆರಂಭಿಸಿದ ಕಲಾಂ, ದೇಶಪ್ರೇಮ, ಪರಿಸರ ಸಂರಕ್ಷಣೆ, ಗುರಿ, ಪರಿಶ್ರಮ ಕುರಿತು ಪ್ರತಿಜ್ಞೆ ಬೋಧಿಸಿದರು. ಜನಸಾಮಾನ್ಯರ ಮಧ್ಯೆ ಆಸೀನರಾಗಿದ್ದ ‘ಸರಳಸಂತ’ ವಿಜಾಪುರ ಜ್ಞಾನಾಶ್ರಮದ ಸಿದ್ದೇಶ್ವರ ಸ್ವಾಮಿ ಅವರತ್ತ ಪ್ರಸನ್ನತೆಯ ಮುಗುಳ್ನಕ್ಕು ನಮಸ್ಕಾರ ಹೇಳಿದರು. ಸಭಾಂಗಣದ ಒಳಗೂ-ಹೊರಗೂ ವಿದ್ಯಾರ್ಥಿಗಳು ಕಿಕ್ಕಿರಿದು ತುಂಬಿದ್ದರು. ಕಲಾಂ ಭಾಷಣವನ್ನು ಗುರುರಾಜ ಕರ್ಜಗಿ ಕನ್ನಡಕ್ಕೆ ಅನುವಾದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>