<p><strong>ಬೆಂಗಳೂರು:</strong> `ಭೂಕಂಪದಂತಹ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಅದನ್ನು ತಡೆಯುವಲ್ಲಿ ಮತ್ತು ಮುನ್ನೆಚ್ಚರಿಕೆ ಕೈಗೊಳ್ಳುವಲ್ಲಿ ಎಂಜಿನಿಯರ್ಗಳ ಸಾಧನೆ ತೃಪ್ತಿಕರವಾಗಿಲ್ಲ~ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಪ್ರೊ.ಟಿ.ಜಿ.ಸೀತಾರಾಮ್ ವಿಷಾದಿಸಿದರು.<br /> <br /> ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು (ಯುವಿಸಿಇ) ಮತ್ತು ಕಂದಾಯ ಇಲಾಖೆಯ ಸಿವಿಲ್ ಎಂಜಿನಿಯರಿಂಗ್ ವಿಭಾಗವು ಜಂಟಿಯಾಗಿ ಬೆಂಗಳೂರು ವಿ.ವಿ.ಯ ಜ್ಞಾನಭಾರತಿ ಆವರಣದಲ್ಲಿ ಬುಧವಾರದಿಂದ ಏರ್ಪಡಿಸಿದ ಮೂರು ದಿನಗಳ, `ಕಟ್ಟಡಗಳ ನಿರ್ಮಾಣದಲ್ಲಿ ಸಾಮರ್ಥ್ಯ, ವಾಸ್ತುಶಿಲ್ಪ ಮತ್ತು ಭೂಕಂಪ ಅನಾಹುತ ತಡೆಯುವಲ್ಲಿ ಎಂಜಿನಿಯರ್ಗಳ ಪಾತ್ರ~ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.<br /> <br /> `ಎಂಜಿನಿಯರ್ಗಳು ಭೂಕಂಪ, ಸುನಾಮಿಗಳಂತಹ ಪ್ರಾಕೃತಿಕ ವೈಪರೀತ್ಯಗಳ ಬಗ್ಗೆ ಯೋಚಿಸುವುದಿಲ್ಲ. ಪಾಕೃತಿಕ ವಿಕೋಪ ತಡೆಗೆ ಸಂಬಂಧಿಸಿದಂತೆ ಅವರು ಪಡೆಯುವ ತರಬೇತಿಯೂ ಕಳಪೆ ಮಟ್ಟದ್ದು. ದುರಂತಗಳನ್ನು ಹೇಗೆ ಕಡಿತಗೊಳಿಸಬೇಕು ಎಂಬ ಬಗ್ಗೆ ತಿಳಿದುಕೊಳ್ಳಬೇಕು~ ಎಂದು ಸಲಹೆ ನೀಡಿದ ಅವರು, ` ಭೂಕಂಪಗಳು ಮನುಷ್ಯರನ್ನು ಸಾಯಿಸುವುದಿಲ್ಲ. ಬದಲಾಗಿ ಕಳಪೆ ಕಟ್ಟಡ ಕಾಮಗಾರಿಗೆ ಬಲಿಯಾಗುತ್ತಾರೆ~ ಎಂದರು.<br /> <br /> ವಿ.ವಿ. ಕುಲಪತಿ ಡಾ.ಎನ್.ಪ್ರಭುದೇವ್ ಮಾತನಾಡಿ, `ಭಾರತದ ಶೇಕಡಾ 60ರಷ್ಟು ಪ್ರದೇಶ ಭೂಕಂಪಕ್ಕೆ ಒಳಗಾಗುತ್ತದೆ. ಸರ್ಕಾರ ಇದನ್ನು ತಡೆಯಲು ಗುಣಮಟ್ಟದ ಎಂಜಿನಿಯರಿಂಗ್ಗೆ ಮಹತ್ವ ನೀಡಬೇಕು. ಪುನರ್ನಿರ್ಮಾಣ ಮತ್ತು ಪುನರ್ವಸತಿಗಳು ಮುಖ್ಯ ಆದ್ಯತೆಯಾಗಬೇಕು~ ಎಂದರು. <br /> <br /> ಯುವಿಸಿಇ ಪ್ರಾಂಶುಪಾಲ ಡಾ.ಕೆ.ಆರ್.ವೇಣುಗೋಪಾಲ್, `ಕಟ್ಟಡ ನಿರ್ಮಾಣದಲ್ಲಿ ಜಪಾನ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಭೂಕಂಪನವು ರಿಕ್ಟರ್ ಮಾಪಕದಲ್ಲಿ 7ರಷ್ಟಿದ್ದರೂ ಆ ಮನೆಗಳಿಗೆ ಯಾವ ತೊಂದರೆಯೂ ಆಗುವುದಿಲ್ಲ~ ಎಂದು ಹೇಳಿದರು.<br /> <br /> ಪ್ರಾಧ್ಯಾಪಕರಾದ ಡಾ.ವಿ.ದೇವರಾಜು ಮತ್ತು ಡಾ.ಎಲ್.ಗೋವಿಂದರಾಜು ಅವರು ಮೂರು ದಿನಗಳ ಕಾರ್ಯಾಗಾರದ ವಿವರ ನೀಡಿದರು. ಡಾ.ಎಚ್.ಎನ್.ರಮೇಶ್ ಸ್ವಾಗತಿಸಿದರು. ಡಾ.ಜಯರಾಮಪ್ಪ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ಭೂಕಂಪದಂತಹ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಅದನ್ನು ತಡೆಯುವಲ್ಲಿ ಮತ್ತು ಮುನ್ನೆಚ್ಚರಿಕೆ ಕೈಗೊಳ್ಳುವಲ್ಲಿ ಎಂಜಿನಿಯರ್ಗಳ ಸಾಧನೆ ತೃಪ್ತಿಕರವಾಗಿಲ್ಲ~ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಪ್ರೊ.ಟಿ.ಜಿ.ಸೀತಾರಾಮ್ ವಿಷಾದಿಸಿದರು.<br /> <br /> ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು (ಯುವಿಸಿಇ) ಮತ್ತು ಕಂದಾಯ ಇಲಾಖೆಯ ಸಿವಿಲ್ ಎಂಜಿನಿಯರಿಂಗ್ ವಿಭಾಗವು ಜಂಟಿಯಾಗಿ ಬೆಂಗಳೂರು ವಿ.ವಿ.ಯ ಜ್ಞಾನಭಾರತಿ ಆವರಣದಲ್ಲಿ ಬುಧವಾರದಿಂದ ಏರ್ಪಡಿಸಿದ ಮೂರು ದಿನಗಳ, `ಕಟ್ಟಡಗಳ ನಿರ್ಮಾಣದಲ್ಲಿ ಸಾಮರ್ಥ್ಯ, ವಾಸ್ತುಶಿಲ್ಪ ಮತ್ತು ಭೂಕಂಪ ಅನಾಹುತ ತಡೆಯುವಲ್ಲಿ ಎಂಜಿನಿಯರ್ಗಳ ಪಾತ್ರ~ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.<br /> <br /> `ಎಂಜಿನಿಯರ್ಗಳು ಭೂಕಂಪ, ಸುನಾಮಿಗಳಂತಹ ಪ್ರಾಕೃತಿಕ ವೈಪರೀತ್ಯಗಳ ಬಗ್ಗೆ ಯೋಚಿಸುವುದಿಲ್ಲ. ಪಾಕೃತಿಕ ವಿಕೋಪ ತಡೆಗೆ ಸಂಬಂಧಿಸಿದಂತೆ ಅವರು ಪಡೆಯುವ ತರಬೇತಿಯೂ ಕಳಪೆ ಮಟ್ಟದ್ದು. ದುರಂತಗಳನ್ನು ಹೇಗೆ ಕಡಿತಗೊಳಿಸಬೇಕು ಎಂಬ ಬಗ್ಗೆ ತಿಳಿದುಕೊಳ್ಳಬೇಕು~ ಎಂದು ಸಲಹೆ ನೀಡಿದ ಅವರು, ` ಭೂಕಂಪಗಳು ಮನುಷ್ಯರನ್ನು ಸಾಯಿಸುವುದಿಲ್ಲ. ಬದಲಾಗಿ ಕಳಪೆ ಕಟ್ಟಡ ಕಾಮಗಾರಿಗೆ ಬಲಿಯಾಗುತ್ತಾರೆ~ ಎಂದರು.<br /> <br /> ವಿ.ವಿ. ಕುಲಪತಿ ಡಾ.ಎನ್.ಪ್ರಭುದೇವ್ ಮಾತನಾಡಿ, `ಭಾರತದ ಶೇಕಡಾ 60ರಷ್ಟು ಪ್ರದೇಶ ಭೂಕಂಪಕ್ಕೆ ಒಳಗಾಗುತ್ತದೆ. ಸರ್ಕಾರ ಇದನ್ನು ತಡೆಯಲು ಗುಣಮಟ್ಟದ ಎಂಜಿನಿಯರಿಂಗ್ಗೆ ಮಹತ್ವ ನೀಡಬೇಕು. ಪುನರ್ನಿರ್ಮಾಣ ಮತ್ತು ಪುನರ್ವಸತಿಗಳು ಮುಖ್ಯ ಆದ್ಯತೆಯಾಗಬೇಕು~ ಎಂದರು. <br /> <br /> ಯುವಿಸಿಇ ಪ್ರಾಂಶುಪಾಲ ಡಾ.ಕೆ.ಆರ್.ವೇಣುಗೋಪಾಲ್, `ಕಟ್ಟಡ ನಿರ್ಮಾಣದಲ್ಲಿ ಜಪಾನ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಭೂಕಂಪನವು ರಿಕ್ಟರ್ ಮಾಪಕದಲ್ಲಿ 7ರಷ್ಟಿದ್ದರೂ ಆ ಮನೆಗಳಿಗೆ ಯಾವ ತೊಂದರೆಯೂ ಆಗುವುದಿಲ್ಲ~ ಎಂದು ಹೇಳಿದರು.<br /> <br /> ಪ್ರಾಧ್ಯಾಪಕರಾದ ಡಾ.ವಿ.ದೇವರಾಜು ಮತ್ತು ಡಾ.ಎಲ್.ಗೋವಿಂದರಾಜು ಅವರು ಮೂರು ದಿನಗಳ ಕಾರ್ಯಾಗಾರದ ವಿವರ ನೀಡಿದರು. ಡಾ.ಎಚ್.ಎನ್.ರಮೇಶ್ ಸ್ವಾಗತಿಸಿದರು. ಡಾ.ಜಯರಾಮಪ್ಪ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>