<p><strong>ಬಳ್ಳಾರಿ: </strong>ಸಂಡೂರಿನ ರಾಜ ಮನೆತನದಲ್ಲಿ ಹುಟ್ಟುತ್ತಲೇ ಚಿನ್ನದ ಚಮಚ ಹಿಡಿದರೂ, ಬಡವರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಮುರಾರಿರಾವ್ ಯಶವಂತರಾವ್ ಘೋರ್ಪಡೆ (1931- 2011) ಸ್ವತಃ ಗಣಿಗಾರಿಕೆ ನಡೆಸಿದ್ದರೂ, ಪರಿಸರದ ಬಗ್ಗೆ ಅಪಾರ ಪ್ರೇಮ ಹೊಂದಿದ್ದರು.<br /> <br /> ಸಂಡೂರು ರಾಜಮನೆತನದ ಕೊನೆಯ ರಾಜ ವೆಂಕಟರಾವ್ ಅವರು ಗಂಡು ಸಂತಾನವಿಲ್ಲದೆ 1928ರಲ್ಲಿ ತೀರಿಕೊಂಡಾಗ, ಬ್ರಿಟಿಷರು ಸಂಡೂರು ಸಂಸ್ಥಾನಕ್ಕೆ ಯಶವಂತ್ರಾವ್ ಘೋರ್ಪಡೆ ಅವರನ್ನು ನೇಮಿಸಿದರು.<br /> ಮುರಾರಿರಾವ್ ಹುಟ್ಟುತ್ತಲೇ ಯಶವಂತರಾವ್ಘೋರ್ಪಡೆ ಅವರು 1932ರಲ್ಲಿ ಹರಿಜನರಿಗೆ ದೇವಾಲಯಗಳಿಗೆ ಪ್ರವೇಶದ ಘೋಷಣೆ ಮಾಡಿ, ಹೆಸರಾಗಿದ್ದರಲ್ಲದೆ, ಮಹಾತ್ಮ ಗಾಂಧೀಜಿ ಅವರನ್ನು ಸಂಡೂರಿಗೆ ಆಹ್ವಾನಿಸಿದ್ದರು.<br /> <br /> 1934ರಲ್ಲಿ ನ್ಯಾಯಾಲಯ ಸ್ಥಾಪನೆ ಮಾಡಿದ್ದ ಇವರು, ಸಂಡೂರು ಸಂಸ್ಥಾನದ ಮೂಲಕ ಕಾನೂನಿನ ಮಹತ್ವದ ಕುರಿತು ಜನರಲ್ಲಿ ತಿಳಿವಳಿಕೆ ಮೂಡಿಸುವಲ್ಲಿಯೂ ಶ್ರಮಿಸಿದ್ದರು.ಸಮಾನತೆಗೆ ಹೆಸರಾಗಿದ್ದ ತಂದೆಯ ಗುಣಗಳನ್ನು ಮೈಗೂಡಿಸಿಕೊಂಡ ಮುರಾರಿರಾವ್, ಯೌವನಕ್ಕೆ ಕಾಲಿಡುತ್ತಿದ್ದಂತೆಯೇ ದೇಶ ಸ್ವತಂತ್ರವಾಯಿತು. <br /> <br /> ರಾಷ್ಟ್ರದೊಂದಿಗೆ ವಿಲೀನಗೊಂಡ ಮೊದಲ ರಾಜಮನೆತನ ಎಂಬ ಕೀರ್ತಿಗೆ ಸಂಡೂರು ಭಾಜನವಾಯಿತು.<br /> ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ಅಪಾರ ಗೌರವ ಹೊಂದಿದ್ದ ಘೋರ್ಪಡೆ, ಗಣಿಗಾರಿಕೆ ನಡೆಸಿದರೂ ಪರಿಸರ ಹಾನಿಗೆ ಅವಕಾಶ ನೀಡದೆ, ಅರಣ್ಯ ಭೂಮಿಯ ಸಂರಕ್ಷಣೆಗೂ ಒತ್ತು ನೀಡಿದ್ದರು.<br /> <br /> ಬೇಟೆಯನ್ನು ಹವ್ಯಾಸವಾಗಿಸಿಕೊಂಡಿದ್ದ ಇವರು, ಕಾಲಾಂತರದಲ್ಲಿ ಛಾಯಾಗ್ರಹಣದತ್ತ ಮುಖಮಾಡಿ, ಬೇಟೆಯನ್ನು ಕೈಬಿಟ್ಟು, ವನ್ಯಜೀವಿಗಳ ಜೀವನಶೈಲಿ ಕುರಿತು ಅಭ್ಯಸಿಸಿ, ಅವುಗಳ ಅಪರೂಪದ ಚಿತ್ರ ತೆಗೆದು ಅಂತರರಾಷ್ಟ್ರೀಯ ಪುರಸ್ಕಾರಕ್ಕೂ ಪಾತ್ರರಾಗಿದ್ದರು.<br /> <br /> ಸಂಡೂರು ತಾಲ್ಲೂಕಿನ ರಾಮಘಡ ಅರಣ್ಯ ಪ್ರದೇಶದಲ್ಲಿ ಕುಮಾರರಾಮ ಕಟ್ಟಿಸಿದ್ದ ಪ್ರದೇಶದಲ್ಲೇ `ಬೇಸಿಗೆ ಧಾಮ~ ಕಟ್ಟಿಕೊಂಡು, ಬೇಸಿಗೆಯನ್ನು ಅಲ್ಲೇ ಕಳೆಯುತ್ತಿದ್ದ ಇವರು, ಕೆಲವು ಶೈಕ್ಷಣಿಕ ಸಂಸ್ಥೆಗಳನ್ನು ಆರಂಭಿಸಿದರು. ಡೂನ್ ಮಾದರಿಯ ಶಾಲೆ ಆರಂಭಿಸಿ ಹೊರ ರಾಜ್ಯದ ವಿದ್ಯಾರ್ಥಿಗಳೂ ಸಂಡೂರಿಗೆ ಬಂದು ಕಲಿಯುವಂತೆ ಮಾಡಿದ್ದರು ಘೋರ್ಪಡೆ.<br /> <br /> ಬಿಸಿಲಿಗೆ ಹೆಸರಾಗಿರುವ ಬಳ್ಳಾರಿ ಜಿಲ್ಲೆಯಲ್ಲಿ ಹಸಿರನ್ನುಟ್ಟುಕೊಂಡು ನಳನಳಿಸುತ್ತಿದ್ದ ಸಂಡೂರಿನ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗಿದ್ದ ಇವರು, `ಸೀ ಸಂಡೂರ್ ಇನ್ ಸೆಪ್ಟೆಂಬರ್~ (ಸಂಡೂರನ್ನು ಸೆಪ್ಟೆಂಬರ್ನಲ್ಲಿ ನೋಡಿ) ಎಂದು ಅನೇಕರನ್ನು ಆಹ್ವಾನಿಸುತ್ತಿದ್ದರು.<br /> <br /> ಸ್ಥಳೀಯ ಕರಕುಶಲಕಲೆಯನ್ನು ಪೋಷಿಸಲೆಂದೇ `ಸಂಡೂರು ಕರಕುಶಲ ಕೇಂದ್ರ~ ಸ್ಥಾಪಿಸಿ ಬುಡಕಟ್ಟು ಜನರಿಗೆ ಅವಕಾಶ ಕಲ್ಪಿಸಿ, ಅವರು ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ವ್ಯವಸ್ಥೆಯನ್ನೂ ಮಾಡಿದ್ದರು.<br /> <br /> ಬುಡಕಟ್ಟು ಜನಾಂಗದ ಅನೇಕ ಕರಕುಶಲಕರ್ಮಿಗಳು ಘೋರ್ಪಡೆ ಅವರ ಸಹಕಾರ, ಪ್ರೋತ್ಸಾಹದಿಂದ ವಿದೇಶ ಪ್ರವಾಸಕ್ಕೂ ತೆರಳಿ, ಸಂಡೂರಿನ ಕರಕುಶಲ ಕಲೆಯನ್ನು ಪ್ರದರ್ಶಿಸಿ ಬರುವಂತಾಯಿತು.<br /> <br /> <strong>ಪರಿಸರ ಪ್ರೇಮಿ</strong>: ಇತ್ತೀಚಿನ ವರ್ಷಗಳಲ್ಲಿ ಅಕ್ರಮ ಗಣಿಗಾರಿಕೆಯಿಂದಲೇ ಕುಖ್ಯಾತಿಗೆ ಒಳಗಾಗಿರುವ ಬಳ್ಳಾರಿ ಜಿಲ್ಲೆಯಲ್ಲಿ ದೊರೆಯುವ ಅಪಾರ ಪ್ರಮಾಣದ ಕಬ್ಬಿಣ ಮತ್ತು ಮ್ಯಾಂಗನೀಸ್ನ ಅದಿರು ಸ್ಥಳೀಯವಾಗಿಯೇ ಬಳಕೆಯಾಗಬೇಕು ಎಂಬ ದೂರದೃಷ್ಟಿಯನ್ನು ದಶಕಗಳ ಹಿಂದೆಯೇ ಹೊಂದಿದ್ದ ಇವರು, ಮೌಲ್ಯ ವರ್ಧನೆಗೆ ಆದ್ಯತೆ ನೀಡಿದ್ದರು.<br /> <br /> 1954ರಲ್ಲಿ ತಂದೆ ಸ್ಥಾಪಿಸಿದ್ದ ಸಂಡೂರು ಮ್ಯಾಂಗನೀಸ್ ಅಂಡ್ ಐರನ್ ಓರ್ (ಸ್ಮಯೋರ್) ಕಂಪೆನಿಗೆ ನಿರ್ದೇಶಕರಾಗಿ, ಅದನ್ನು 1968ರಲ್ಲಿ ಸಾರ್ವಜನಿಕ ಉದ್ದಿಮೆಯನ್ನಾಗಿ ಪರಿವರ್ತಿಸುವ ಮೂಲಕ ಕಾರ್ಮಿಕರಿಗೆ ಸಕಲ ಸೌಲಭ್ಯ ದೊರಕಿಸಿಕೊಟ್ಟರು.<br /> <br /> ಸ್ಥಳೀಯ ನೈಸರ್ಗಿಕ ಸಂಪನ್ಮೂಲವನ್ನು ಸದ್ಬಳಕೆ ಮಾಡಿ, ಉದ್ಯೋಗ ಸೃಷ್ಟಿಸುವ ಮಹದಾಸೆಯಿಂದ ಉಕ್ಕಿನ ಕಾರ್ಖಾನೆ ಸ್ಥಾಪಿಸುವ ಕನಸು ಕಂಡಿದ್ದರು.1971ರ ಸೆಪ್ಟೆಂಬರ್ 14ರಂದು ತೋರಣಗಲ್ ಬಳಿ ಇವರ ಕನಸಿನ ಕೂಸಾದ ವಿಜಯನಗರ ಉಕ್ಕು ಕಾರ್ಖಾನೆಗೆ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದ್ದರು.<br /> <br /> ಶ್ರೀಮಂತಿಕೆಯ ಹಿನ್ನೆಲೆಯಿದ್ದರೂ ಅಹಂ, ಅಹಂಕಾರಗಳನ್ನು ರೂಢಿಸಿಕೊಳ್ಳದೆ ಜನನಾಯಕರಾಗಿ ಹೊರಹೊಮ್ಮಿದ ಘೋರ್ಪಡೆ, ಮಿತಭಾಷಿಯಾಗಿದ್ದರಲ್ಲದೆ, ಸಾರ್ವಜನಿಕರ ಸಂಪರ್ಕದಿಂದ ದೂರ ಉಳಿದಿದ್ದರು. ದರ್ಪ, ಐಷಾರಾಮಿ ಜೀವನಕ್ಕೆ ಗಮನ ನೀಡದೆ, ಸರ್ಕಾರಿ ಯೋಜನೆಗಳು ಈ ಭಾಗದ ಜನತೆಗೆ ಲಭಿಸುವಲ್ಲಿ ವಿಶೇಷ ಮುತುವರ್ಜಿ ವಹಿಸಿದ್ದರು.<br /> <br /> 2004ರಿಂದ ಸಕ್ರಿಯ ರಾಜಕಾರಣದಿಂದ ದೂರವಾಗಿದ್ದ ಮುರಾರಿರಾವ್ ಘೋರ್ಪಡೆ, ಹಸನ್ಮುಖಿಯಾಗಿ, ಸರಳ ಸಜ್ಜನಿಕೆಯ ಜೀವನಕ್ಕೆ ಹೆಸರಾಗಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ: </strong>ಸಂಡೂರಿನ ರಾಜ ಮನೆತನದಲ್ಲಿ ಹುಟ್ಟುತ್ತಲೇ ಚಿನ್ನದ ಚಮಚ ಹಿಡಿದರೂ, ಬಡವರ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಮುರಾರಿರಾವ್ ಯಶವಂತರಾವ್ ಘೋರ್ಪಡೆ (1931- 2011) ಸ್ವತಃ ಗಣಿಗಾರಿಕೆ ನಡೆಸಿದ್ದರೂ, ಪರಿಸರದ ಬಗ್ಗೆ ಅಪಾರ ಪ್ರೇಮ ಹೊಂದಿದ್ದರು.<br /> <br /> ಸಂಡೂರು ರಾಜಮನೆತನದ ಕೊನೆಯ ರಾಜ ವೆಂಕಟರಾವ್ ಅವರು ಗಂಡು ಸಂತಾನವಿಲ್ಲದೆ 1928ರಲ್ಲಿ ತೀರಿಕೊಂಡಾಗ, ಬ್ರಿಟಿಷರು ಸಂಡೂರು ಸಂಸ್ಥಾನಕ್ಕೆ ಯಶವಂತ್ರಾವ್ ಘೋರ್ಪಡೆ ಅವರನ್ನು ನೇಮಿಸಿದರು.<br /> ಮುರಾರಿರಾವ್ ಹುಟ್ಟುತ್ತಲೇ ಯಶವಂತರಾವ್ಘೋರ್ಪಡೆ ಅವರು 1932ರಲ್ಲಿ ಹರಿಜನರಿಗೆ ದೇವಾಲಯಗಳಿಗೆ ಪ್ರವೇಶದ ಘೋಷಣೆ ಮಾಡಿ, ಹೆಸರಾಗಿದ್ದರಲ್ಲದೆ, ಮಹಾತ್ಮ ಗಾಂಧೀಜಿ ಅವರನ್ನು ಸಂಡೂರಿಗೆ ಆಹ್ವಾನಿಸಿದ್ದರು.<br /> <br /> 1934ರಲ್ಲಿ ನ್ಯಾಯಾಲಯ ಸ್ಥಾಪನೆ ಮಾಡಿದ್ದ ಇವರು, ಸಂಡೂರು ಸಂಸ್ಥಾನದ ಮೂಲಕ ಕಾನೂನಿನ ಮಹತ್ವದ ಕುರಿತು ಜನರಲ್ಲಿ ತಿಳಿವಳಿಕೆ ಮೂಡಿಸುವಲ್ಲಿಯೂ ಶ್ರಮಿಸಿದ್ದರು.ಸಮಾನತೆಗೆ ಹೆಸರಾಗಿದ್ದ ತಂದೆಯ ಗುಣಗಳನ್ನು ಮೈಗೂಡಿಸಿಕೊಂಡ ಮುರಾರಿರಾವ್, ಯೌವನಕ್ಕೆ ಕಾಲಿಡುತ್ತಿದ್ದಂತೆಯೇ ದೇಶ ಸ್ವತಂತ್ರವಾಯಿತು. <br /> <br /> ರಾಷ್ಟ್ರದೊಂದಿಗೆ ವಿಲೀನಗೊಂಡ ಮೊದಲ ರಾಜಮನೆತನ ಎಂಬ ಕೀರ್ತಿಗೆ ಸಂಡೂರು ಭಾಜನವಾಯಿತು.<br /> ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ಅಪಾರ ಗೌರವ ಹೊಂದಿದ್ದ ಘೋರ್ಪಡೆ, ಗಣಿಗಾರಿಕೆ ನಡೆಸಿದರೂ ಪರಿಸರ ಹಾನಿಗೆ ಅವಕಾಶ ನೀಡದೆ, ಅರಣ್ಯ ಭೂಮಿಯ ಸಂರಕ್ಷಣೆಗೂ ಒತ್ತು ನೀಡಿದ್ದರು.<br /> <br /> ಬೇಟೆಯನ್ನು ಹವ್ಯಾಸವಾಗಿಸಿಕೊಂಡಿದ್ದ ಇವರು, ಕಾಲಾಂತರದಲ್ಲಿ ಛಾಯಾಗ್ರಹಣದತ್ತ ಮುಖಮಾಡಿ, ಬೇಟೆಯನ್ನು ಕೈಬಿಟ್ಟು, ವನ್ಯಜೀವಿಗಳ ಜೀವನಶೈಲಿ ಕುರಿತು ಅಭ್ಯಸಿಸಿ, ಅವುಗಳ ಅಪರೂಪದ ಚಿತ್ರ ತೆಗೆದು ಅಂತರರಾಷ್ಟ್ರೀಯ ಪುರಸ್ಕಾರಕ್ಕೂ ಪಾತ್ರರಾಗಿದ್ದರು.<br /> <br /> ಸಂಡೂರು ತಾಲ್ಲೂಕಿನ ರಾಮಘಡ ಅರಣ್ಯ ಪ್ರದೇಶದಲ್ಲಿ ಕುಮಾರರಾಮ ಕಟ್ಟಿಸಿದ್ದ ಪ್ರದೇಶದಲ್ಲೇ `ಬೇಸಿಗೆ ಧಾಮ~ ಕಟ್ಟಿಕೊಂಡು, ಬೇಸಿಗೆಯನ್ನು ಅಲ್ಲೇ ಕಳೆಯುತ್ತಿದ್ದ ಇವರು, ಕೆಲವು ಶೈಕ್ಷಣಿಕ ಸಂಸ್ಥೆಗಳನ್ನು ಆರಂಭಿಸಿದರು. ಡೂನ್ ಮಾದರಿಯ ಶಾಲೆ ಆರಂಭಿಸಿ ಹೊರ ರಾಜ್ಯದ ವಿದ್ಯಾರ್ಥಿಗಳೂ ಸಂಡೂರಿಗೆ ಬಂದು ಕಲಿಯುವಂತೆ ಮಾಡಿದ್ದರು ಘೋರ್ಪಡೆ.<br /> <br /> ಬಿಸಿಲಿಗೆ ಹೆಸರಾಗಿರುವ ಬಳ್ಳಾರಿ ಜಿಲ್ಲೆಯಲ್ಲಿ ಹಸಿರನ್ನುಟ್ಟುಕೊಂಡು ನಳನಳಿಸುತ್ತಿದ್ದ ಸಂಡೂರಿನ ಪ್ರಕೃತಿ ಸೌಂದರ್ಯಕ್ಕೆ ಮಾರು ಹೋಗಿದ್ದ ಇವರು, `ಸೀ ಸಂಡೂರ್ ಇನ್ ಸೆಪ್ಟೆಂಬರ್~ (ಸಂಡೂರನ್ನು ಸೆಪ್ಟೆಂಬರ್ನಲ್ಲಿ ನೋಡಿ) ಎಂದು ಅನೇಕರನ್ನು ಆಹ್ವಾನಿಸುತ್ತಿದ್ದರು.<br /> <br /> ಸ್ಥಳೀಯ ಕರಕುಶಲಕಲೆಯನ್ನು ಪೋಷಿಸಲೆಂದೇ `ಸಂಡೂರು ಕರಕುಶಲ ಕೇಂದ್ರ~ ಸ್ಥಾಪಿಸಿ ಬುಡಕಟ್ಟು ಜನರಿಗೆ ಅವಕಾಶ ಕಲ್ಪಿಸಿ, ಅವರು ತಯಾರಿಸಿದ ವಸ್ತುಗಳಿಗೆ ಮಾರುಕಟ್ಟೆ ವ್ಯವಸ್ಥೆಯನ್ನೂ ಮಾಡಿದ್ದರು.<br /> <br /> ಬುಡಕಟ್ಟು ಜನಾಂಗದ ಅನೇಕ ಕರಕುಶಲಕರ್ಮಿಗಳು ಘೋರ್ಪಡೆ ಅವರ ಸಹಕಾರ, ಪ್ರೋತ್ಸಾಹದಿಂದ ವಿದೇಶ ಪ್ರವಾಸಕ್ಕೂ ತೆರಳಿ, ಸಂಡೂರಿನ ಕರಕುಶಲ ಕಲೆಯನ್ನು ಪ್ರದರ್ಶಿಸಿ ಬರುವಂತಾಯಿತು.<br /> <br /> <strong>ಪರಿಸರ ಪ್ರೇಮಿ</strong>: ಇತ್ತೀಚಿನ ವರ್ಷಗಳಲ್ಲಿ ಅಕ್ರಮ ಗಣಿಗಾರಿಕೆಯಿಂದಲೇ ಕುಖ್ಯಾತಿಗೆ ಒಳಗಾಗಿರುವ ಬಳ್ಳಾರಿ ಜಿಲ್ಲೆಯಲ್ಲಿ ದೊರೆಯುವ ಅಪಾರ ಪ್ರಮಾಣದ ಕಬ್ಬಿಣ ಮತ್ತು ಮ್ಯಾಂಗನೀಸ್ನ ಅದಿರು ಸ್ಥಳೀಯವಾಗಿಯೇ ಬಳಕೆಯಾಗಬೇಕು ಎಂಬ ದೂರದೃಷ್ಟಿಯನ್ನು ದಶಕಗಳ ಹಿಂದೆಯೇ ಹೊಂದಿದ್ದ ಇವರು, ಮೌಲ್ಯ ವರ್ಧನೆಗೆ ಆದ್ಯತೆ ನೀಡಿದ್ದರು.<br /> <br /> 1954ರಲ್ಲಿ ತಂದೆ ಸ್ಥಾಪಿಸಿದ್ದ ಸಂಡೂರು ಮ್ಯಾಂಗನೀಸ್ ಅಂಡ್ ಐರನ್ ಓರ್ (ಸ್ಮಯೋರ್) ಕಂಪೆನಿಗೆ ನಿರ್ದೇಶಕರಾಗಿ, ಅದನ್ನು 1968ರಲ್ಲಿ ಸಾರ್ವಜನಿಕ ಉದ್ದಿಮೆಯನ್ನಾಗಿ ಪರಿವರ್ತಿಸುವ ಮೂಲಕ ಕಾರ್ಮಿಕರಿಗೆ ಸಕಲ ಸೌಲಭ್ಯ ದೊರಕಿಸಿಕೊಟ್ಟರು.<br /> <br /> ಸ್ಥಳೀಯ ನೈಸರ್ಗಿಕ ಸಂಪನ್ಮೂಲವನ್ನು ಸದ್ಬಳಕೆ ಮಾಡಿ, ಉದ್ಯೋಗ ಸೃಷ್ಟಿಸುವ ಮಹದಾಸೆಯಿಂದ ಉಕ್ಕಿನ ಕಾರ್ಖಾನೆ ಸ್ಥಾಪಿಸುವ ಕನಸು ಕಂಡಿದ್ದರು.1971ರ ಸೆಪ್ಟೆಂಬರ್ 14ರಂದು ತೋರಣಗಲ್ ಬಳಿ ಇವರ ಕನಸಿನ ಕೂಸಾದ ವಿಜಯನಗರ ಉಕ್ಕು ಕಾರ್ಖಾನೆಗೆ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದ್ದರು.<br /> <br /> ಶ್ರೀಮಂತಿಕೆಯ ಹಿನ್ನೆಲೆಯಿದ್ದರೂ ಅಹಂ, ಅಹಂಕಾರಗಳನ್ನು ರೂಢಿಸಿಕೊಳ್ಳದೆ ಜನನಾಯಕರಾಗಿ ಹೊರಹೊಮ್ಮಿದ ಘೋರ್ಪಡೆ, ಮಿತಭಾಷಿಯಾಗಿದ್ದರಲ್ಲದೆ, ಸಾರ್ವಜನಿಕರ ಸಂಪರ್ಕದಿಂದ ದೂರ ಉಳಿದಿದ್ದರು. ದರ್ಪ, ಐಷಾರಾಮಿ ಜೀವನಕ್ಕೆ ಗಮನ ನೀಡದೆ, ಸರ್ಕಾರಿ ಯೋಜನೆಗಳು ಈ ಭಾಗದ ಜನತೆಗೆ ಲಭಿಸುವಲ್ಲಿ ವಿಶೇಷ ಮುತುವರ್ಜಿ ವಹಿಸಿದ್ದರು.<br /> <br /> 2004ರಿಂದ ಸಕ್ರಿಯ ರಾಜಕಾರಣದಿಂದ ದೂರವಾಗಿದ್ದ ಮುರಾರಿರಾವ್ ಘೋರ್ಪಡೆ, ಹಸನ್ಮುಖಿಯಾಗಿ, ಸರಳ ಸಜ್ಜನಿಕೆಯ ಜೀವನಕ್ಕೆ ಹೆಸರಾಗಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>