<p><strong>ಬೆಂಗಳೂರು</strong>: `ಗಯಟೆ ಸಂಸ್ಥೆ, ಮ್ಯಾಕ್ಸ್ಮುಲ್ಲರ್ ಭವನ ಮತ್ತು ಇಂಡಿಯಾ ಫೌಂಡೇಶನ್ ಆಫ್ ದಿ ಆರ್ಟ್ಸ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ `ಕಲಾ ಶಿಕ್ಷಣ~ ಸಮ್ಮೇಳನವನ್ನು ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ನಲ್ಲಿ ಫೆಬ್ರುವರಿ 3 ಮತ್ತು 4 ರಂದು ಹಮ್ಮಿಕೊಳ್ಳಲಾಗಿದೆ ಎಂದು ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ನ ಕಾರ್ಯನಿರ್ವಾಹಕ ನಿರ್ದೇಶಕ ಅನಮೋಲ್ ಇರಾನಿ ತಿಳಿಸಿದರು.<br /> <br /> ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಸರ್ಕಾರಿ ಶಾಲೆಗಳ ಶಿಕ್ಷಕರಿಗಾಗಿ `ಕಲಿ-ಕಲಿಸು~ ಹೆಸರಿನ ಕಲೆಗಳ ಬೋಧನಾ ತರಬೇತಿ ಯೋಜನೆಯನ್ನು 2009 ರಿಂದ ಕರ್ನಾಟಕದಲ್ಲಿ ಜಾರಿಗೊಳಿಸಲಾಗಿದೆ~ ಎಂದರು.<br /> <br /> `ಕಲೆಗಳ ಶಿಕ್ಷಣ, ವೈವಿಧ್ಯತೆ ಮತ್ತು ಸಾಮಾಜಿಕ ನ್ಯಾಯದ ನಡುವಿನ ನಂಟಿನ ಕುರಿತು ಸಮ್ಮೇಳನ ಕೇಂದ್ರೀಕೃತವಾಗಿದ್ದು, ಲಿಂಗ, ವೈಕಲ್ಯತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆ ವಿಷಯಗಳನ್ನು ಶೈಕ್ಷಣಿಕ ನೆಲಗಟ್ಟಿನಲ್ಲಿ ರೂಪಿಸಲಾಗಿದೆ. ಒಟ್ಟು 500 ಶಿಕ್ಷಕರು ಭಾಗವಹಿಸಲಿದ್ದಾರೆ~ ಎಂದು ಕಾರ್ಯಕ್ರಮ ಸಂಯೋಜಕಿ ಅನುಪಮಾ ಪ್ರಕಾಶ್ ಮಾಹಿತಿ ನೀಡಿದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: `ಗಯಟೆ ಸಂಸ್ಥೆ, ಮ್ಯಾಕ್ಸ್ಮುಲ್ಲರ್ ಭವನ ಮತ್ತು ಇಂಡಿಯಾ ಫೌಂಡೇಶನ್ ಆಫ್ ದಿ ಆರ್ಟ್ಸ್ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ `ಕಲಾ ಶಿಕ್ಷಣ~ ಸಮ್ಮೇಳನವನ್ನು ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ನಲ್ಲಿ ಫೆಬ್ರುವರಿ 3 ಮತ್ತು 4 ರಂದು ಹಮ್ಮಿಕೊಳ್ಳಲಾಗಿದೆ ಎಂದು ಇಂಡಿಯಾ ಫೌಂಡೇಶನ್ ಫಾರ್ ದಿ ಆರ್ಟ್ಸ್ನ ಕಾರ್ಯನಿರ್ವಾಹಕ ನಿರ್ದೇಶಕ ಅನಮೋಲ್ ಇರಾನಿ ತಿಳಿಸಿದರು.<br /> <br /> ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಸರ್ಕಾರಿ ಶಾಲೆಗಳ ಶಿಕ್ಷಕರಿಗಾಗಿ `ಕಲಿ-ಕಲಿಸು~ ಹೆಸರಿನ ಕಲೆಗಳ ಬೋಧನಾ ತರಬೇತಿ ಯೋಜನೆಯನ್ನು 2009 ರಿಂದ ಕರ್ನಾಟಕದಲ್ಲಿ ಜಾರಿಗೊಳಿಸಲಾಗಿದೆ~ ಎಂದರು.<br /> <br /> `ಕಲೆಗಳ ಶಿಕ್ಷಣ, ವೈವಿಧ್ಯತೆ ಮತ್ತು ಸಾಮಾಜಿಕ ನ್ಯಾಯದ ನಡುವಿನ ನಂಟಿನ ಕುರಿತು ಸಮ್ಮೇಳನ ಕೇಂದ್ರೀಕೃತವಾಗಿದ್ದು, ಲಿಂಗ, ವೈಕಲ್ಯತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆ ವಿಷಯಗಳನ್ನು ಶೈಕ್ಷಣಿಕ ನೆಲಗಟ್ಟಿನಲ್ಲಿ ರೂಪಿಸಲಾಗಿದೆ. ಒಟ್ಟು 500 ಶಿಕ್ಷಕರು ಭಾಗವಹಿಸಲಿದ್ದಾರೆ~ ಎಂದು ಕಾರ್ಯಕ್ರಮ ಸಂಯೋಜಕಿ ಅನುಪಮಾ ಪ್ರಕಾಶ್ ಮಾಹಿತಿ ನೀಡಿದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>