<p><strong>ಕೂಡ್ಲಿಗಿ</strong>: ತಾಲ್ಲೂಕಿನಲ್ಲಿ ವರುಣ ಮುನಿಸಿಕೊಂಡು ಒಂದು ತಿಂಗಳೇ ಕಳೆದಿದೆ. ರೈತರು ಕಂಗಾಲಾಗಿದ್ದು, ಇಳುವರಿ ಸಂಪೂರ್ಣ ಕುಸಿದಿದೆ. ಬಿತ್ತನೆ ಬೀಜಕ್ಕಾಗಿ ಸಾಲ ಮಾಡಿರುವ ರೈತರು ತಮಗಾಗಿ ದುಡಿಯುವ ಜಾನುವಾರು ಗಳನ್ನೂ ಮಾರುವ ದುಸ್ಥಿತಿಗೆ ತಲುಪಿದ್ದಾರೆ. ತಾಲ್ಲೂಕು ಪೀಡಿತ ಎಂದು ಘೋಷಣೆಯಾಗಿದ್ದರೂ ರೈತರ ಸಂಕಷ್ಟಗಳು ತಪ್ಪಿಲ್ಲ.<br /> <br /> ತಾಲ್ಲೂಕಿನ ಎಂ.ಬಿ.ಅಯ್ಯನಹಳ್ಳಿ ಯಲ್ಲಿ ಪ್ರತಿ ಬುಧವಾರ ಜಾನುವಾರು ಗಳ ಮಾರಾಟ ನಡೆಯುತ್ತಿದೆ. ಇಷ್ಟು ದಿನಗಳವರೆಗೆ ಅಷ್ಟೇನೂ ಮಾರಾಟ ವಾಗದ ಎತ್ತುಗಳು ಈ ಬಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿವೆ. ಬರಗಾಲದ ಹಿನ್ನೆಲೆಯಲ್ಲಿ ರೈತರು ಅನಿವಾರ್ಯವಾಗಿ ಎತ್ತುಗಳನ್ನು ಮಾರಾಟ ಮಾಡಬೇಕಾಗಿದೆ.<br /> <br /> ಈ ಬಾರಿ ಕನಿಷ್ಠ 50 ಎತ್ತುಗಳು ಮಾರಾಟವಾಗಿವೆ ಎಂದು ರೈತ ರಾಮಣ್ಣ ತಿಳಿಸಿದ್ದಾನೆ. ಒಂದು ಜೊತೆ ಎತ್ತುಗಳು 25,000 ರೂಪಾಯಿ ಗಳಿಂದ 35,000 ರೂಪಾಯಿ ಗಳವರೆಗೆ ಮಾರಾಟಗೊಂಡಿವೆ. <br /> <br /> ಮಾರಾಟಗೊಂಡಿರುವ ಎತ್ತುಗಳು ಲಾರಿ ಇತರೆ ವಾಹನಗಳಲ್ಲಿ ಬೆಂಗಳೂರಿನ ಕಸಾಯಿಖಾನೆಗೆ ಸರಬರಾಜಾಗುತ್ತವೆ ಎಂದು ಗ್ರಾಮಸ್ಥರು ತಿಳಿಸಿದರೆ ಎತ್ತುಗಳನ್ನು ಹಗರಿಬೊಮ್ಮನ ಹಳ್ಳಿಯ ಮಾರುಕಟ್ಟೆಗೆ ಕರೆದೊಯ್ಯಲಾಗುವುದು ಎಂಬುದು ಲಾರಿ ಚಾಲಕರು ತಿಳಿಸಿದರು.<br /> <br /> ಎಂ.ಬಿ.ಅಯ್ಯನಹಳ್ಳಿ ಸುತ್ತಲಿನ ಬೆಳ್ಳಕಟ್ಟೆ, ಹಾರಕಬಾವಿ, ಬಣವಿಕಲ್ಲು, ಇಮಡಾಪುರ, ಸೂಲದಹಳ್ಳಿ, ಚಿಕ್ಕ ಜೋಗಿಹಳ್ಳಿ, ಕಡಕೊಳ್ಳ, ಕೆಂಚೋಬನ ಹಳ್ಳಿಯಿಂದ ಸಾಲುಗಟ್ಟಿ ಬರುವ ಎತ್ತುಗಳು ಜೊತೆಯಲ್ಲಿಯೇ ಎಮ್ಮೆ, ಆಕಳುಗಳೂ ಮಾರಾಟಗೊಳ್ಳುತ್ತವೆ. <br /> <br /> ಮೇವು, ನೀರಿನ ಕೊರತೆಯಿಂದ ಕಂಗೆಟ್ಟಿ ರುವ ರೈತರು ಜಾನುವಾರುಗಳನ್ನು ಕಣ್ಣೀರಿನೊಂದಿಗೇ ಮಾರಾಟ ಮಾಡುತ್ತಿರುವುದು ಕರುಣಾಜನಕ ವಾಗಿದೆ. ತಾಲ್ಲೂಕನ್ನು ಬರಪೀಡಿತ ವೆಂದು ಘೋಷಿಸಿದ್ದರೂ ಇದುವರೆಗೆ ಜಾನುವಾರುಗಳಿಗೆ ಮೇವು, ನೀರಿನ ವ್ಯವಸ್ಥೆ ಮಾಡಲಾಗಿಲ್ಲ. ಆದ್ದರಿಂದ ರೈತರಿಗೆ ಮಾರಾಟ ಮಾಡುವುದೊಂದೇ ಪರ್ಯಾಯ ಮಾರ್ಗವಾಗಿದೆ.<br /> <br /> `ಮಳಿ ಹೋತ್ರಿ, ಬೆಳೀನು ಇಲ್ಲ, ಮನುಸಾರು ಬದುಕೋದೇ ಕಷ್ಟಾಗೆತಿ, ದನಗಳನ್ನ ಎಲ್ಲಿಂದ ಸಾಕಾಣ?~ ಎಂದು ರೈತ ದುರುಗಪ್ಪ ಪ್ರಶ್ನಿಸುತ್ತಾನೆ. `ಸರ್ಕಾರ ಏನ ಪರಿಹಾರ ಕೊಡ್ತೇತ್ರಿ, ನಮ್ ದಾರಿ ನಾವ ನೋಡ್ಕೋಬೇಕು, ಒಳ್ಳೆ ದುಡಿಯೋ ಎತ್ತುಗಳನ್ನ ಮಾರ್ಬೇಕಾದ್ರ ಕಣ್ಣೀರು ಕಪಾಳಕ್ಕ ಬರ್ತಾವ, ನನ್ ದನಗಳ್ನ ಕಣ್ಮು ಚ್ಕೊಂಡು ಮಾರೀನ್ರಿ~ ಎಂದು ನೋವಿನ ದನಿಯಿಂದ ಬಸಣ್ಣ ಹೇಳುತ್ತಾನೆ.ಇಲ್ಲಿ ಒಬ್ಬೊಬ್ಬರದೂ ಒಂದೊಂದು ಕಥೆಯೇ. <br /> <br /> ತಾಲ್ಲೂಕು ಹಾಗೂ ಜಿಲ್ಲಾಡಳಿತ ತಕ್ಷಣದಲ್ಲಿಯೇ ಜಾನುವಾರು ಗಳಿಗೆ ಮೇವು, ನೀರಿನ ಸೌಲಭ್ಯವನ್ನು ಒದಗಿಸ ಬೇಕಾಗಿದೆ. ವಿದ್ಯುತ್ ಕೊರತೆಯಿಂದ ಕೊಳವೆ ಬಾವಿಯಲ್ಲಿ ನೀರಿದ್ದರೂ ನೀರಿನ ಸರಬರಾಜು ಸಮಸ್ಯೆಯಾಗಿದೆ. ಈ ಕುರಿತು ಶೀಘ್ರ ಕ್ರಮ ಕೈಗೊಳ್ಳ ಬೇಕೆಂಬುದು ತಾಲ್ಲೂಕಿನ ರೈತರ, ಗ್ರಾಮಸ್ಥರ ಮನವಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೂಡ್ಲಿಗಿ</strong>: ತಾಲ್ಲೂಕಿನಲ್ಲಿ ವರುಣ ಮುನಿಸಿಕೊಂಡು ಒಂದು ತಿಂಗಳೇ ಕಳೆದಿದೆ. ರೈತರು ಕಂಗಾಲಾಗಿದ್ದು, ಇಳುವರಿ ಸಂಪೂರ್ಣ ಕುಸಿದಿದೆ. ಬಿತ್ತನೆ ಬೀಜಕ್ಕಾಗಿ ಸಾಲ ಮಾಡಿರುವ ರೈತರು ತಮಗಾಗಿ ದುಡಿಯುವ ಜಾನುವಾರು ಗಳನ್ನೂ ಮಾರುವ ದುಸ್ಥಿತಿಗೆ ತಲುಪಿದ್ದಾರೆ. ತಾಲ್ಲೂಕು ಪೀಡಿತ ಎಂದು ಘೋಷಣೆಯಾಗಿದ್ದರೂ ರೈತರ ಸಂಕಷ್ಟಗಳು ತಪ್ಪಿಲ್ಲ.<br /> <br /> ತಾಲ್ಲೂಕಿನ ಎಂ.ಬಿ.ಅಯ್ಯನಹಳ್ಳಿ ಯಲ್ಲಿ ಪ್ರತಿ ಬುಧವಾರ ಜಾನುವಾರು ಗಳ ಮಾರಾಟ ನಡೆಯುತ್ತಿದೆ. ಇಷ್ಟು ದಿನಗಳವರೆಗೆ ಅಷ್ಟೇನೂ ಮಾರಾಟ ವಾಗದ ಎತ್ತುಗಳು ಈ ಬಾರಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿವೆ. ಬರಗಾಲದ ಹಿನ್ನೆಲೆಯಲ್ಲಿ ರೈತರು ಅನಿವಾರ್ಯವಾಗಿ ಎತ್ತುಗಳನ್ನು ಮಾರಾಟ ಮಾಡಬೇಕಾಗಿದೆ.<br /> <br /> ಈ ಬಾರಿ ಕನಿಷ್ಠ 50 ಎತ್ತುಗಳು ಮಾರಾಟವಾಗಿವೆ ಎಂದು ರೈತ ರಾಮಣ್ಣ ತಿಳಿಸಿದ್ದಾನೆ. ಒಂದು ಜೊತೆ ಎತ್ತುಗಳು 25,000 ರೂಪಾಯಿ ಗಳಿಂದ 35,000 ರೂಪಾಯಿ ಗಳವರೆಗೆ ಮಾರಾಟಗೊಂಡಿವೆ. <br /> <br /> ಮಾರಾಟಗೊಂಡಿರುವ ಎತ್ತುಗಳು ಲಾರಿ ಇತರೆ ವಾಹನಗಳಲ್ಲಿ ಬೆಂಗಳೂರಿನ ಕಸಾಯಿಖಾನೆಗೆ ಸರಬರಾಜಾಗುತ್ತವೆ ಎಂದು ಗ್ರಾಮಸ್ಥರು ತಿಳಿಸಿದರೆ ಎತ್ತುಗಳನ್ನು ಹಗರಿಬೊಮ್ಮನ ಹಳ್ಳಿಯ ಮಾರುಕಟ್ಟೆಗೆ ಕರೆದೊಯ್ಯಲಾಗುವುದು ಎಂಬುದು ಲಾರಿ ಚಾಲಕರು ತಿಳಿಸಿದರು.<br /> <br /> ಎಂ.ಬಿ.ಅಯ್ಯನಹಳ್ಳಿ ಸುತ್ತಲಿನ ಬೆಳ್ಳಕಟ್ಟೆ, ಹಾರಕಬಾವಿ, ಬಣವಿಕಲ್ಲು, ಇಮಡಾಪುರ, ಸೂಲದಹಳ್ಳಿ, ಚಿಕ್ಕ ಜೋಗಿಹಳ್ಳಿ, ಕಡಕೊಳ್ಳ, ಕೆಂಚೋಬನ ಹಳ್ಳಿಯಿಂದ ಸಾಲುಗಟ್ಟಿ ಬರುವ ಎತ್ತುಗಳು ಜೊತೆಯಲ್ಲಿಯೇ ಎಮ್ಮೆ, ಆಕಳುಗಳೂ ಮಾರಾಟಗೊಳ್ಳುತ್ತವೆ. <br /> <br /> ಮೇವು, ನೀರಿನ ಕೊರತೆಯಿಂದ ಕಂಗೆಟ್ಟಿ ರುವ ರೈತರು ಜಾನುವಾರುಗಳನ್ನು ಕಣ್ಣೀರಿನೊಂದಿಗೇ ಮಾರಾಟ ಮಾಡುತ್ತಿರುವುದು ಕರುಣಾಜನಕ ವಾಗಿದೆ. ತಾಲ್ಲೂಕನ್ನು ಬರಪೀಡಿತ ವೆಂದು ಘೋಷಿಸಿದ್ದರೂ ಇದುವರೆಗೆ ಜಾನುವಾರುಗಳಿಗೆ ಮೇವು, ನೀರಿನ ವ್ಯವಸ್ಥೆ ಮಾಡಲಾಗಿಲ್ಲ. ಆದ್ದರಿಂದ ರೈತರಿಗೆ ಮಾರಾಟ ಮಾಡುವುದೊಂದೇ ಪರ್ಯಾಯ ಮಾರ್ಗವಾಗಿದೆ.<br /> <br /> `ಮಳಿ ಹೋತ್ರಿ, ಬೆಳೀನು ಇಲ್ಲ, ಮನುಸಾರು ಬದುಕೋದೇ ಕಷ್ಟಾಗೆತಿ, ದನಗಳನ್ನ ಎಲ್ಲಿಂದ ಸಾಕಾಣ?~ ಎಂದು ರೈತ ದುರುಗಪ್ಪ ಪ್ರಶ್ನಿಸುತ್ತಾನೆ. `ಸರ್ಕಾರ ಏನ ಪರಿಹಾರ ಕೊಡ್ತೇತ್ರಿ, ನಮ್ ದಾರಿ ನಾವ ನೋಡ್ಕೋಬೇಕು, ಒಳ್ಳೆ ದುಡಿಯೋ ಎತ್ತುಗಳನ್ನ ಮಾರ್ಬೇಕಾದ್ರ ಕಣ್ಣೀರು ಕಪಾಳಕ್ಕ ಬರ್ತಾವ, ನನ್ ದನಗಳ್ನ ಕಣ್ಮು ಚ್ಕೊಂಡು ಮಾರೀನ್ರಿ~ ಎಂದು ನೋವಿನ ದನಿಯಿಂದ ಬಸಣ್ಣ ಹೇಳುತ್ತಾನೆ.ಇಲ್ಲಿ ಒಬ್ಬೊಬ್ಬರದೂ ಒಂದೊಂದು ಕಥೆಯೇ. <br /> <br /> ತಾಲ್ಲೂಕು ಹಾಗೂ ಜಿಲ್ಲಾಡಳಿತ ತಕ್ಷಣದಲ್ಲಿಯೇ ಜಾನುವಾರು ಗಳಿಗೆ ಮೇವು, ನೀರಿನ ಸೌಲಭ್ಯವನ್ನು ಒದಗಿಸ ಬೇಕಾಗಿದೆ. ವಿದ್ಯುತ್ ಕೊರತೆಯಿಂದ ಕೊಳವೆ ಬಾವಿಯಲ್ಲಿ ನೀರಿದ್ದರೂ ನೀರಿನ ಸರಬರಾಜು ಸಮಸ್ಯೆಯಾಗಿದೆ. ಈ ಕುರಿತು ಶೀಘ್ರ ಕ್ರಮ ಕೈಗೊಳ್ಳ ಬೇಕೆಂಬುದು ತಾಲ್ಲೂಕಿನ ರೈತರ, ಗ್ರಾಮಸ್ಥರ ಮನವಿಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>