<p><strong>ಯಳಂದೂರು:</strong> ತಾಲ್ಲೂಕಿನ ಹುಲಿ ಅಭಯಾರಣ್ಯದ ಮಾನ್ಯತೆ ಪಡೆದ ಬಿಳಿಗಿರಿರಂಗನಬೆಟ್ಟ ಅರಣ್ಯದಲ್ಲಿ ಭಾನುವಾರ ನಾಲ್ಕಾರು ಕಡೆ ಚದುರಿದಂತೆ ಮತ್ತೆ ಕಾಳ್ಗಿಚ್ಚು ಕಾಣಿಸಿಕೊಂಡಿತು.<br /> <br /> ಚಾಮರಾಜನಗರಕ್ಕೆ ತೆರಳುವ ಹೊಸಪೋಡು ಕಾಡಿನಲ್ಲಿ ಶನಿವಾರ ಹೊಗೆ ಕಂಡುಬಂದು ಸ್ಪಲ್ಪ ಪ್ರದೇಶ ದಹನವಾಗಿದ್ದು, ಭಾನುವಾರ ಮಧ್ಯಾಹ್ನದ ವೇಳೆಗೆ ಅಗ್ನಿ ನಂದಿ ಹೋಗಿದೆ. ಬಿಆರ್ಟಿ ಪರಿಸರದ ನಾಲ್ಕು ದಿಕ್ಕಿನಲ್ಲಿ ಚದುರಿದಂತೆ ಹೊಗೆ ಭುಗಿಲೆದ್ದಿತ್ತು. ಈಗಾಗಲೇ ಒಂದೆರಡು ಬಾರಿ ಮಳೆ ಆಗಬೇಕಾಗಿತ್ತು. ಕಳೆದ ವರ್ಷ ಈ ವೇಳೆಗೆ ವಾತಾವರಣ ತಂಪಾದ ಕಾರಣ ಕಾಡು ಅಗ್ನಿಗೆ ತುತ್ತಾಗಿರಲ್ಲಿಲ್ಲ. ಆದರೆ ಈ ಬಾರಿ ತಾಪಮಾನದಲ್ಲಾದ ಹೆಚ್ಚಳವೂ ಅಲ್ಲಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವಾಗಿದೆ.<br /> <br /> ಪುರಾಣಿಪೋಡಿನ ಹಿಂಭಾಗದ ಕಾನನದಲ್ಲೂ ದಟ್ಟ ಹೊಗೆ ಆವರಿಸಿತ್ತು. ಬೆಲ್ಲವತ್ತ ಡ್ಯಾಂನ ಪಕ್ಕದ ಗುಡ್ಡದಿಂದಲೂ ಹೊಗೆ ಭುಗಿಲೆದ್ದಿತ್ತು. ರಾಮಕೃಷ್ಣ ಕುಟೀರದ ಬಳಿಯೂ ಕಾಡಿನ ಸ್ವಲ್ಪ ಭಾಗ ದಹಿಸಿದೆ. ಈಗಾಗಲೇ ಅರಣ್ಯ ಸಂರಕ್ಷಕರು ಅಗ್ನಿ ನಂದಿಸುವ ಕಾರ್ಯದಲ್ಲಿ ಸಕ್ರಿಯವಾಗಿರುವುದು ಅಲ್ಲಲ್ಲಿ ಕಂಡು ಬರುತ್ತಿತ್ತು.<br /> <br /> `ಶನಿವಾರ ಸಂಜೆ ವೇಳೆ ಯರಕನಗದ್ದೆ ಕಾಲೋನಿ ಬಳಿ ಇರುವ ಖಾಸಗಿಯವರ ಜಮೀನಿಗೆ ಬೆಂಕಿ ಬಿದ್ದಿದೆ. 30 ಜನರ ತಂಡದ ಅರಣ್ಯ ಸಿಬ್ಬಂದಿ ತಕ್ಷಣವೇ ಇದನ್ನು ನಂದಿಸಿದ್ದರಿಂದ ದೊಡ್ಡ ಅವಘಡವಾಗಿಲ್ಲ. <br /> <br /> ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ನಮ್ಮ ಸಿಬ್ಬಂದಿ ಕಣ್ಗಾವಲಿನಿಂದ ಕಾಯುತ್ತಿದ್ದು, ಅರಣ್ಯ ಪ್ರದೇಶಕ್ಕೆ ಹೆಚ್ಚಿನ ಹಾನಿಯಾಗಿಲ್ಲ~ ಎಂದು ಆರ್ಎಫ್ಓ ನಾಗರಾಜು `ಪ್ರಜಾವಾಣಿ~ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಳಂದೂರು:</strong> ತಾಲ್ಲೂಕಿನ ಹುಲಿ ಅಭಯಾರಣ್ಯದ ಮಾನ್ಯತೆ ಪಡೆದ ಬಿಳಿಗಿರಿರಂಗನಬೆಟ್ಟ ಅರಣ್ಯದಲ್ಲಿ ಭಾನುವಾರ ನಾಲ್ಕಾರು ಕಡೆ ಚದುರಿದಂತೆ ಮತ್ತೆ ಕಾಳ್ಗಿಚ್ಚು ಕಾಣಿಸಿಕೊಂಡಿತು.<br /> <br /> ಚಾಮರಾಜನಗರಕ್ಕೆ ತೆರಳುವ ಹೊಸಪೋಡು ಕಾಡಿನಲ್ಲಿ ಶನಿವಾರ ಹೊಗೆ ಕಂಡುಬಂದು ಸ್ಪಲ್ಪ ಪ್ರದೇಶ ದಹನವಾಗಿದ್ದು, ಭಾನುವಾರ ಮಧ್ಯಾಹ್ನದ ವೇಳೆಗೆ ಅಗ್ನಿ ನಂದಿ ಹೋಗಿದೆ. ಬಿಆರ್ಟಿ ಪರಿಸರದ ನಾಲ್ಕು ದಿಕ್ಕಿನಲ್ಲಿ ಚದುರಿದಂತೆ ಹೊಗೆ ಭುಗಿಲೆದ್ದಿತ್ತು. ಈಗಾಗಲೇ ಒಂದೆರಡು ಬಾರಿ ಮಳೆ ಆಗಬೇಕಾಗಿತ್ತು. ಕಳೆದ ವರ್ಷ ಈ ವೇಳೆಗೆ ವಾತಾವರಣ ತಂಪಾದ ಕಾರಣ ಕಾಡು ಅಗ್ನಿಗೆ ತುತ್ತಾಗಿರಲ್ಲಿಲ್ಲ. ಆದರೆ ಈ ಬಾರಿ ತಾಪಮಾನದಲ್ಲಾದ ಹೆಚ್ಚಳವೂ ಅಲ್ಲಲ್ಲಿ ಬೆಂಕಿ ಕಾಣಿಸಿಕೊಳ್ಳಲು ಕಾರಣವಾಗಿದೆ.<br /> <br /> ಪುರಾಣಿಪೋಡಿನ ಹಿಂಭಾಗದ ಕಾನನದಲ್ಲೂ ದಟ್ಟ ಹೊಗೆ ಆವರಿಸಿತ್ತು. ಬೆಲ್ಲವತ್ತ ಡ್ಯಾಂನ ಪಕ್ಕದ ಗುಡ್ಡದಿಂದಲೂ ಹೊಗೆ ಭುಗಿಲೆದ್ದಿತ್ತು. ರಾಮಕೃಷ್ಣ ಕುಟೀರದ ಬಳಿಯೂ ಕಾಡಿನ ಸ್ವಲ್ಪ ಭಾಗ ದಹಿಸಿದೆ. ಈಗಾಗಲೇ ಅರಣ್ಯ ಸಂರಕ್ಷಕರು ಅಗ್ನಿ ನಂದಿಸುವ ಕಾರ್ಯದಲ್ಲಿ ಸಕ್ರಿಯವಾಗಿರುವುದು ಅಲ್ಲಲ್ಲಿ ಕಂಡು ಬರುತ್ತಿತ್ತು.<br /> <br /> `ಶನಿವಾರ ಸಂಜೆ ವೇಳೆ ಯರಕನಗದ್ದೆ ಕಾಲೋನಿ ಬಳಿ ಇರುವ ಖಾಸಗಿಯವರ ಜಮೀನಿಗೆ ಬೆಂಕಿ ಬಿದ್ದಿದೆ. 30 ಜನರ ತಂಡದ ಅರಣ್ಯ ಸಿಬ್ಬಂದಿ ತಕ್ಷಣವೇ ಇದನ್ನು ನಂದಿಸಿದ್ದರಿಂದ ದೊಡ್ಡ ಅವಘಡವಾಗಿಲ್ಲ. <br /> <br /> ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ನಮ್ಮ ಸಿಬ್ಬಂದಿ ಕಣ್ಗಾವಲಿನಿಂದ ಕಾಯುತ್ತಿದ್ದು, ಅರಣ್ಯ ಪ್ರದೇಶಕ್ಕೆ ಹೆಚ್ಚಿನ ಹಾನಿಯಾಗಿಲ್ಲ~ ಎಂದು ಆರ್ಎಫ್ಓ ನಾಗರಾಜು `ಪ್ರಜಾವಾಣಿ~ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>