<p>ಅನಿಲ್ ಕುಂಬ್ಳೆ ವೃತ್ತದಿಂದ ಎಂ.ಜಿ ರಸ್ತೆ ಪ್ರವೇಶಿಸಿದರೆ ಕಾವೇರಿ ಎಂಪೋರಿಯಂ ತಲುಪುವದರಲ್ಲಿಯೇ ಹೊಟ್ಟೆ ತಾಳ ಹಾಕತೊಡಗುತ್ತದೆ. ಎಂ.ಜಿ.ರಸ್ತೆಯ ಪರಿಚಯ ಇದ್ದವರೆಲ್ಲ ಇನ್ನೆಂಟು ಹೆಜ್ಜೆ ಹಾಕಿ ಬಲಕ್ಕೆ ಹೊರಳಿದರೆ, ಅದೊಂದು ಬಗೆಯ ನಿರಾಳ. ಅಲ್ಲಿದೆ, ಹೋಟೆಲ್ `ಬೃಂದಾವನ~. ಇನ್ನು ಕೆಲವೇ ದಿನಗಳಲ್ಲಿ ಶಾಶ್ವತವಾಗಿ ನೆನಪಿನ ಅಂಗಳವನ್ನೇ ಸೇರಲಿದೆ.</p>.<p>1960ರಲ್ಲಿ ನಿರ್ಮಾಣವಾದ ಈ ಹೋಟೆಲ್ಗೆ ಬಂದವರೆಲ್ಲರೂ ಮತ್ತೆ ಮತ್ತೆ ಭೇಟಿ ಕೊಡುವ, ಹೃದ್ಯವಾದ ಸಂಬಂಧವನ್ನು ಬೆಳೆಸಿದ ಹೋಟೆಲ್ ಅದು.</p>.<p>ರಾವ್ ಕುಟುಂಬದವರು ಆ ಕಾಲದಲ್ಲಿ 25 ಸಾವಿರ ರೂಪಾಯಿಗೆ ಖರೀದಿಸಿದ್ದ 46000 ಚದರ ಅಡಿ ವಿಸ್ತಾರದ ಈ ಆಸ್ತಿಯನ್ನು ಇದೀಗ ಮೆಹ್ತಾ ಕುಟುಂಬಕ್ಕೆ 80 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ 140-160 ಕೋಟಿ ಬೆಲೆ ಬಾಳುತ್ತಿದ್ದರೂ ಕಡಿಮೆ ಬೆಲೆಗೆ ಮಾರಾಟ ಮಾಡಲಾಗಿದೆ. ಇಕ್ಕಟ್ಟಾದ ಸಂಪರ್ಕ ರಸ್ತೆಯ ಕೊರತೆಯೇ ಈ ಅಗ್ಗದ ಬೆಲೆಗೆ ಕಾರಣವೆನ್ನಲಾಗಿದೆ.</p>.<p>ಅದೇನೆ ಇರಲಿ, ಕಳೆದ ಐದು ದಶಕಗಳಿಂದಲೂ ನಗುಮೊಗದ ಮಾಣಿಗಳೊಂದಿಗೆ ಮನೆಊಟದ ಸ್ವಾದವನ್ನೇ ನೀಡುತ್ತಿದ್ದುದು ಇಲ್ಲಿಯ ವಿಶೇಷವಾಗಿತ್ತು. ಬೆಳಿಗ್ಗೆ ಪೂರಿ, ಇಡ್ಲಿ-ವಡೆಗೆ ಹೆಸರಾಗಿದ್ದರೆ, ಸಂಜೆಗೆ ದೋಸೆ, ಪರಾಠಾ ಹಾಗೂ ರುಚಿಕರವಾದ ಬಜ್ಜಿಗೆ ಹೆಸರಾಗಿತ್ತು.</p>.<p>ಎಂ.ಜಿ ರಸ್ತೆಯಲ್ಲಿರುವ ಎಲ್ಲ ಮಳಿಗೆ, ಕಚೇರಿಯವರೂ ಒಂದಲ್ಲ ಒಂದು ದಿನ ಇಲ್ಲಿ ಬಂದು ಬಜ್ಜಿಯೊಂದಿಗೆ ಚಹಾ ಸವಿದವರೇ ಆಗಿದ್ದಾರೆ.</p>.<p>ಬೆಂಗಳೂರಿನಲ್ಲಿಯೇ ವಿದ್ಯಾರ್ಥಿ ಜೀವನ ಕಳೆದು ಇದೀಗ ಮಂಗಳೂರಿನಲ್ಲಿ ವಾಸವಾಗಿರುವ ಸುಧಾ, ಈಗಲೂ ಬೆಂಗಳೂರಿಗೆ ಭೇಟಿ ನೀಡಿದರೆ, ಬೃಂದಾವನದಲ್ಲಿ ಬೋಂಡಾ ತಿನ್ನುವುದಕ್ಕೆ ಎಂ.ಜಿ.ರಸ್ತೆಗೆ ಭೇಟಿ ನೀಡುವುದಾಗಿ ತಿಳಿಸುತ್ತಾರೆ.</p>.<p>ಸಿ.ಇ.ಟಿಗಾಗಿ ಅಪ್ಪನೊಂದಿಗೆ ಧಾರವಾಡದಿಂದ ಬೆಂಗಳೂರಿಗೆ ಬಂದಿದ್ದೆ. ಇಲ್ಲಿಯೇ ಮೊದಲ ಸಲ ಬಟನ್ ಇಡ್ಲಿ, ಸಾಂಬಾರ್ ಸವಿದಿದ್ದು. ಆ ನಂತರ ಬೆಂಗಳೂರಿನಲ್ಲಿಯೇ ಎಂಜಿನಿಯರಿಂಗ್ಗೆ ಸೇರಿದ್ದು, ಇಲ್ಲಿಯೇ ಕೆಲಸಕ್ಕೆ ಸೇರಿದ್ದು. ಈಗಲೂ ತಿಂಗಳಿಗೊಮ್ಮೆ ಬೃಂದಾವನಕ್ಕೆ ಭೇಟಿ ನೀಡದಿದ್ದರೆ ಏನೋ ಕಳೆದುಕೊಂಡಂತೆ ಎನಿಸುತ್ತದೆ ಎನ್ನುತ್ತಾರೆ ಬಾಷ್ ಉದ್ಯೋಗಿ ವಿನಯ್.</p>.<p>ಹೋಟೆಲ್ ಬೃಂದಾವನದಲ್ಲಿ ಝಗಮಗಿಸುವ ಲೈಟುಗಳಿಲ್ಲ. ಮೆತ್ತನೆಯ ಸೋಫಾಗಳಿಲ್ಲ. ಚಂದದ ಟೇಬಲ್ ಅದರ ಮೇಲೊಂದು ನಗೆಚೆಲ್ಲುವ ಗುಲಾಬಿಯೂ ಇಲ್ಲ. ಯಾವುದೇ ನಾಜೂಕಿನ ಅಲಂಕಾರಗಳೂ ಇಲ್ಲಿಲ್ಲ.</p>.<p>ಇಲ್ಲಿರುವುದು ಒಂದೆರಡು ದಶಕಗಳ ಹಿಂದೆ ಎಲ್ಲರ ಮನೆಯಲ್ಲಿದ್ದ ಮಾದರಿಯ ಸರಳವಾದ ಟೇಬಲ್ಗಳು. ಅಷ್ಟೇ ಸರಳವಾದ ಕುರ್ಚಿಗಳು. ಈ ಸರಳತನವೇ ಎಲ್ಲರನ್ನೂ ಸೆಳೆಯುತ್ತಿತ್ತೇ? ನಕ್ಕರೆ, ತುಟಿರಂಗು ಮಾಸುತ್ತದೆಯೇನೋ ಎಂಬ ಭೀತಿಯಲ್ಲಿ ನಗೆ ಸೂಸುವ ಅರೆಬಿರಿದ ಒಂಟಿ ಗುಲಾಬಿ ಯಾವ ಟೇಬಲ್ ಮೇಲೆ ಇಲ್ಲದಿದ್ದರೂ ಇಲ್ಲಿಯ ನಗುಮೊಗದ ಮಾಣಿಗಳ ಸ್ವಾಗತವೇ ಆಪ್ತವೆನಿಸುತ್ತದೆ.</p>.<p>ಎಂ.ಜಿ.ರಸ್ತೆಯ ಗೌಜಿನಿಂದ ದೂರವಾಗಿ ಇಲ್ಲಿ ಒಳಗೆ ಬಂದು ಕುಳಿತರೆ, ನೀಡಿದ ಆರ್ಡರ್ ತಡ ಮಾಡಿ ಬಂದರೂ ನಿರಾಳವಾಗಿರುವ ವಾತಾವರಣ ಇಲ್ಲಿಯದು.</p>.<p>ಇನ್ನು ಕೆಲ ದಿನಗಳಲ್ಲಿಯೇ ಇವೆಲ್ಲವೂ ಶಾಶ್ವತವಾಗಿ ಮಾಯವಾಗಲಿವೆ. ನೀಲಿ ಹೊದಿಕೆಯ ಅಡಿ ಐದು ದಶಕಗಳ ಕಾಲ ಊಟ ಹಾಗೂ ವಸತಿಯ ಸೇವೆಯಲ್ಲಿ ನಿರತವಾಗಿದ್ದ ಕಟ್ಟಡವೊಂದು ನೆಲಕ್ಕುರುಳುತ್ತದೆ.</p>.<p>ಶುಭ್ ಜ್ಯುವೆಲ್ಲರ್ಸ್ನ ಮಾಲೀಕರಾದ ಮೆಹ್ತಾ ಕುಟುಂಬದವರು ತಮಗಾಗಿ ಇಲ್ಲೊಂದು ವಿಲ್ಲಾ ನಿರ್ಮಿಸುವ ಯೋಚನೆಯಲ್ಲಿದ್ದಾರಂತೆ. ಅದಕ್ಕೇ ಈ ನೆಲವನ್ನು ಖರೀದಿಸಿದ್ದು. <br /> ಕಳೆದ ಇಪ್ಪತ್ತೈದು ವರ್ಷಗಳಿಂದ ಇದೇ ಹೋಟೆಲ್ನಲ್ಲಿ ಸೇವೆ ಸಲ್ಲಿಸಿದ ಕೆಲವು ಕೆಲಸಗಾರರಿಗೆ ಈಗಾಗಲೇ ಲೆಕ್ಕ ಚುಕ್ತಾ ಮಾಡಲಾಗಿದೆ. ಮಂಗಳೂರು ಉಡುಪಿ ಮೂಲದ ಕೆಲಸಗಾರರಿಗೆ ಇಲ್ಲಿಂದ ಹೊರಡಲು ಊರು ಬಿಟ್ಟಷ್ಟೇ ಸಂಕಟವಾಗುತ್ತಿದೆ ಎನ್ನುತ್ತಾರೆ ಕಳೆದ 10 ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿರುವ ಮಾಣಿಯೊಬ್ಬರು.</p>.<p>ಈ ವಿದಾಯದ ದುಃಖ ಅವರಲ್ಲಷ್ಟೇ ಅಲ್ಲ, ಬೃಂದಾವನದ ಬಿಸಿ ಕಾಫಿ, ದೋಸೆ, ಬೋಂಡಾ ಹಾಗೂ ಬಾಳೆಲೆಯ ಊಟ ಮಾಡಿದವರೆಲ್ಲರಿಗೂ ಕಾಡುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅನಿಲ್ ಕುಂಬ್ಳೆ ವೃತ್ತದಿಂದ ಎಂ.ಜಿ ರಸ್ತೆ ಪ್ರವೇಶಿಸಿದರೆ ಕಾವೇರಿ ಎಂಪೋರಿಯಂ ತಲುಪುವದರಲ್ಲಿಯೇ ಹೊಟ್ಟೆ ತಾಳ ಹಾಕತೊಡಗುತ್ತದೆ. ಎಂ.ಜಿ.ರಸ್ತೆಯ ಪರಿಚಯ ಇದ್ದವರೆಲ್ಲ ಇನ್ನೆಂಟು ಹೆಜ್ಜೆ ಹಾಕಿ ಬಲಕ್ಕೆ ಹೊರಳಿದರೆ, ಅದೊಂದು ಬಗೆಯ ನಿರಾಳ. ಅಲ್ಲಿದೆ, ಹೋಟೆಲ್ `ಬೃಂದಾವನ~. ಇನ್ನು ಕೆಲವೇ ದಿನಗಳಲ್ಲಿ ಶಾಶ್ವತವಾಗಿ ನೆನಪಿನ ಅಂಗಳವನ್ನೇ ಸೇರಲಿದೆ.</p>.<p>1960ರಲ್ಲಿ ನಿರ್ಮಾಣವಾದ ಈ ಹೋಟೆಲ್ಗೆ ಬಂದವರೆಲ್ಲರೂ ಮತ್ತೆ ಮತ್ತೆ ಭೇಟಿ ಕೊಡುವ, ಹೃದ್ಯವಾದ ಸಂಬಂಧವನ್ನು ಬೆಳೆಸಿದ ಹೋಟೆಲ್ ಅದು.</p>.<p>ರಾವ್ ಕುಟುಂಬದವರು ಆ ಕಾಲದಲ್ಲಿ 25 ಸಾವಿರ ರೂಪಾಯಿಗೆ ಖರೀದಿಸಿದ್ದ 46000 ಚದರ ಅಡಿ ವಿಸ್ತಾರದ ಈ ಆಸ್ತಿಯನ್ನು ಇದೀಗ ಮೆಹ್ತಾ ಕುಟುಂಬಕ್ಕೆ 80 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ 140-160 ಕೋಟಿ ಬೆಲೆ ಬಾಳುತ್ತಿದ್ದರೂ ಕಡಿಮೆ ಬೆಲೆಗೆ ಮಾರಾಟ ಮಾಡಲಾಗಿದೆ. ಇಕ್ಕಟ್ಟಾದ ಸಂಪರ್ಕ ರಸ್ತೆಯ ಕೊರತೆಯೇ ಈ ಅಗ್ಗದ ಬೆಲೆಗೆ ಕಾರಣವೆನ್ನಲಾಗಿದೆ.</p>.<p>ಅದೇನೆ ಇರಲಿ, ಕಳೆದ ಐದು ದಶಕಗಳಿಂದಲೂ ನಗುಮೊಗದ ಮಾಣಿಗಳೊಂದಿಗೆ ಮನೆಊಟದ ಸ್ವಾದವನ್ನೇ ನೀಡುತ್ತಿದ್ದುದು ಇಲ್ಲಿಯ ವಿಶೇಷವಾಗಿತ್ತು. ಬೆಳಿಗ್ಗೆ ಪೂರಿ, ಇಡ್ಲಿ-ವಡೆಗೆ ಹೆಸರಾಗಿದ್ದರೆ, ಸಂಜೆಗೆ ದೋಸೆ, ಪರಾಠಾ ಹಾಗೂ ರುಚಿಕರವಾದ ಬಜ್ಜಿಗೆ ಹೆಸರಾಗಿತ್ತು.</p>.<p>ಎಂ.ಜಿ ರಸ್ತೆಯಲ್ಲಿರುವ ಎಲ್ಲ ಮಳಿಗೆ, ಕಚೇರಿಯವರೂ ಒಂದಲ್ಲ ಒಂದು ದಿನ ಇಲ್ಲಿ ಬಂದು ಬಜ್ಜಿಯೊಂದಿಗೆ ಚಹಾ ಸವಿದವರೇ ಆಗಿದ್ದಾರೆ.</p>.<p>ಬೆಂಗಳೂರಿನಲ್ಲಿಯೇ ವಿದ್ಯಾರ್ಥಿ ಜೀವನ ಕಳೆದು ಇದೀಗ ಮಂಗಳೂರಿನಲ್ಲಿ ವಾಸವಾಗಿರುವ ಸುಧಾ, ಈಗಲೂ ಬೆಂಗಳೂರಿಗೆ ಭೇಟಿ ನೀಡಿದರೆ, ಬೃಂದಾವನದಲ್ಲಿ ಬೋಂಡಾ ತಿನ್ನುವುದಕ್ಕೆ ಎಂ.ಜಿ.ರಸ್ತೆಗೆ ಭೇಟಿ ನೀಡುವುದಾಗಿ ತಿಳಿಸುತ್ತಾರೆ.</p>.<p>ಸಿ.ಇ.ಟಿಗಾಗಿ ಅಪ್ಪನೊಂದಿಗೆ ಧಾರವಾಡದಿಂದ ಬೆಂಗಳೂರಿಗೆ ಬಂದಿದ್ದೆ. ಇಲ್ಲಿಯೇ ಮೊದಲ ಸಲ ಬಟನ್ ಇಡ್ಲಿ, ಸಾಂಬಾರ್ ಸವಿದಿದ್ದು. ಆ ನಂತರ ಬೆಂಗಳೂರಿನಲ್ಲಿಯೇ ಎಂಜಿನಿಯರಿಂಗ್ಗೆ ಸೇರಿದ್ದು, ಇಲ್ಲಿಯೇ ಕೆಲಸಕ್ಕೆ ಸೇರಿದ್ದು. ಈಗಲೂ ತಿಂಗಳಿಗೊಮ್ಮೆ ಬೃಂದಾವನಕ್ಕೆ ಭೇಟಿ ನೀಡದಿದ್ದರೆ ಏನೋ ಕಳೆದುಕೊಂಡಂತೆ ಎನಿಸುತ್ತದೆ ಎನ್ನುತ್ತಾರೆ ಬಾಷ್ ಉದ್ಯೋಗಿ ವಿನಯ್.</p>.<p>ಹೋಟೆಲ್ ಬೃಂದಾವನದಲ್ಲಿ ಝಗಮಗಿಸುವ ಲೈಟುಗಳಿಲ್ಲ. ಮೆತ್ತನೆಯ ಸೋಫಾಗಳಿಲ್ಲ. ಚಂದದ ಟೇಬಲ್ ಅದರ ಮೇಲೊಂದು ನಗೆಚೆಲ್ಲುವ ಗುಲಾಬಿಯೂ ಇಲ್ಲ. ಯಾವುದೇ ನಾಜೂಕಿನ ಅಲಂಕಾರಗಳೂ ಇಲ್ಲಿಲ್ಲ.</p>.<p>ಇಲ್ಲಿರುವುದು ಒಂದೆರಡು ದಶಕಗಳ ಹಿಂದೆ ಎಲ್ಲರ ಮನೆಯಲ್ಲಿದ್ದ ಮಾದರಿಯ ಸರಳವಾದ ಟೇಬಲ್ಗಳು. ಅಷ್ಟೇ ಸರಳವಾದ ಕುರ್ಚಿಗಳು. ಈ ಸರಳತನವೇ ಎಲ್ಲರನ್ನೂ ಸೆಳೆಯುತ್ತಿತ್ತೇ? ನಕ್ಕರೆ, ತುಟಿರಂಗು ಮಾಸುತ್ತದೆಯೇನೋ ಎಂಬ ಭೀತಿಯಲ್ಲಿ ನಗೆ ಸೂಸುವ ಅರೆಬಿರಿದ ಒಂಟಿ ಗುಲಾಬಿ ಯಾವ ಟೇಬಲ್ ಮೇಲೆ ಇಲ್ಲದಿದ್ದರೂ ಇಲ್ಲಿಯ ನಗುಮೊಗದ ಮಾಣಿಗಳ ಸ್ವಾಗತವೇ ಆಪ್ತವೆನಿಸುತ್ತದೆ.</p>.<p>ಎಂ.ಜಿ.ರಸ್ತೆಯ ಗೌಜಿನಿಂದ ದೂರವಾಗಿ ಇಲ್ಲಿ ಒಳಗೆ ಬಂದು ಕುಳಿತರೆ, ನೀಡಿದ ಆರ್ಡರ್ ತಡ ಮಾಡಿ ಬಂದರೂ ನಿರಾಳವಾಗಿರುವ ವಾತಾವರಣ ಇಲ್ಲಿಯದು.</p>.<p>ಇನ್ನು ಕೆಲ ದಿನಗಳಲ್ಲಿಯೇ ಇವೆಲ್ಲವೂ ಶಾಶ್ವತವಾಗಿ ಮಾಯವಾಗಲಿವೆ. ನೀಲಿ ಹೊದಿಕೆಯ ಅಡಿ ಐದು ದಶಕಗಳ ಕಾಲ ಊಟ ಹಾಗೂ ವಸತಿಯ ಸೇವೆಯಲ್ಲಿ ನಿರತವಾಗಿದ್ದ ಕಟ್ಟಡವೊಂದು ನೆಲಕ್ಕುರುಳುತ್ತದೆ.</p>.<p>ಶುಭ್ ಜ್ಯುವೆಲ್ಲರ್ಸ್ನ ಮಾಲೀಕರಾದ ಮೆಹ್ತಾ ಕುಟುಂಬದವರು ತಮಗಾಗಿ ಇಲ್ಲೊಂದು ವಿಲ್ಲಾ ನಿರ್ಮಿಸುವ ಯೋಚನೆಯಲ್ಲಿದ್ದಾರಂತೆ. ಅದಕ್ಕೇ ಈ ನೆಲವನ್ನು ಖರೀದಿಸಿದ್ದು. <br /> ಕಳೆದ ಇಪ್ಪತ್ತೈದು ವರ್ಷಗಳಿಂದ ಇದೇ ಹೋಟೆಲ್ನಲ್ಲಿ ಸೇವೆ ಸಲ್ಲಿಸಿದ ಕೆಲವು ಕೆಲಸಗಾರರಿಗೆ ಈಗಾಗಲೇ ಲೆಕ್ಕ ಚುಕ್ತಾ ಮಾಡಲಾಗಿದೆ. ಮಂಗಳೂರು ಉಡುಪಿ ಮೂಲದ ಕೆಲಸಗಾರರಿಗೆ ಇಲ್ಲಿಂದ ಹೊರಡಲು ಊರು ಬಿಟ್ಟಷ್ಟೇ ಸಂಕಟವಾಗುತ್ತಿದೆ ಎನ್ನುತ್ತಾರೆ ಕಳೆದ 10 ವರ್ಷಗಳಿಂದ ಇಲ್ಲಿ ಕೆಲಸ ಮಾಡುತ್ತಿರುವ ಮಾಣಿಯೊಬ್ಬರು.</p>.<p>ಈ ವಿದಾಯದ ದುಃಖ ಅವರಲ್ಲಷ್ಟೇ ಅಲ್ಲ, ಬೃಂದಾವನದ ಬಿಸಿ ಕಾಫಿ, ದೋಸೆ, ಬೋಂಡಾ ಹಾಗೂ ಬಾಳೆಲೆಯ ಊಟ ಮಾಡಿದವರೆಲ್ಲರಿಗೂ ಕಾಡುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>