<p>ಬೆಂಗಳೂರು: `ಉನ್ನತ ಶಿಕ್ಷಣ ನೀಡಲು ಅಸ್ತಿತ್ವಕ್ಕೆ ಬಂದಿರುವ ಬೆಂಗಳೂರು ವಿಶ್ವವಿದ್ಯಾಲಯವನ್ನು ಬೇರ್ಪಡಿಸುವ ನಿರ್ಧಾರದ ಹಿಂದಿರುವ ತರ್ಕವೇನು?' ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಪ್ರಶ್ನಿಸಿದರು.<br /> <br /> ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ದ್ವಿತೀಯ ದೀಕ್ಷಾಂತ ಘಟಿಕೋತ್ಸವ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ರಾಜ್ಯದಲ್ಲಿ ಬೆಂಗಳೂರು, ಮೈಸೂರು ಮತ್ತು ಧಾರವಾಡ ವಿಶ್ವವಿದ್ಯಾಲಯಗಳು ಉನ್ನತ ಶಿಕ್ಷಣ ಪಡೆಯುವ ಸಲುವಾಗಿ ಆರಂಭದಲ್ಲಿ ಹುಟ್ಟಿದ ವಿ.ವಿ ಗಳಾಗಿವೆ.<br /> <br /> ಇವುಗಳ ಮೂಲವನ್ನು ಉಳಿಸಿಕೊಳ್ಳುವತ್ತ ಪ್ರಯತ್ನ ನಡೆಸಬೇಕು. ಅಲ್ಲದೇ ಬೆಂಗಳೂರು ವಿ.ವಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸುಮ್ಮನೆ ಬೇರ್ಪಡಿಸುವ ಔಚಿತ್ಯ ನನಗಂತೂ ಕಾಣುತ್ತಿಲ್ಲ. ಈ ಬಗ್ಗೆ ಸರ್ಕಾರವೇ ಸ್ಪಷ್ಟ ನಿಲುವು ತಳೆಯಬೇಕು' ಎಂದು ಪ್ರತಿಕ್ರಿಯಿಸಿದರು.<br /> <br /> `ಸಂಸ್ಕೃತ ವಿಶ್ವವಿದ್ಯಾಲಯ ರೂಪುಗೊಂಡು 4 ವರ್ಷಗಳು ಕಳೆದರೂ ಘಟಿಕೋತ್ಸವ ನಡೆಸಲು ವಿ.ವಿ.ಗೆ ತನ್ನದೇ ಸಭಾಂಗಣವಿಲ್ಲ. ಮೂಲ ಸೌಕರ್ಯಗಳ ಕೊರತೆ ಎದ್ದುಕಾಣುತ್ತಿದ್ದು, ಉನ್ನತ ಶಿಕ್ಷಣ ಸಂಪೂರ್ಣ ದಿಕ್ಕು ತಪ್ಪಿದಂತೆ ಭಾಸವಾಗುತ್ತಿದೆ. ಇದರಿಂದ ಹಿಂದಿನ ಉನ್ನತ ಶಿಕ್ಷಣ ಸಚಿವರು ಸಮರ್ಪಕವಾಗಿ ಕಾರ್ಯನಿರ್ವಹಿಸಿಲ್ಲ ಎಂಬುದು ಅರಿವಾಗುತ್ತದೆ' ಎಂದು ದೂರಿದರು.<br /> <br /> ಇದಕ್ಕೂ ಮುನ್ನ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಕುಲಪತಿ ಡಾ.ಕೋಟೆಮನೆ ರಾಮಚಂದ್ರ ಜಿ.ಭಟ್ `ವಿಶ್ವದ ಎಲ್ಲೆಡೆ ಹೆಚ್ಚುತ್ತಿರುವ ಮತಪಂಥಗಳ ಗೋಡೆಗಳನ್ನು ಕೆಡವಲು ಸಾಮರಸ್ಯದ ಸೂತ್ರವಿಂದು ಅಗತ್ಯವಾಗಿ ಬೇಕಿದ್ದು, ಅದು ವೇದಗಳಲ್ಲಿದೆ' ಎಂದು ತಿಳಿಸಿದರು.<br /> <br /> ಸಂಸ್ಕೃತವೂ ಈ ನೆಲದ ಭಾಷೆಯಾಗಿದ್ದರೂ ಸಮರ್ಪಕವಾಗಿ ಉಸಿರಾಡಲು ತೊಂದರೆ ಪಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಯುವಸಮೂಹ ಸಂಸ್ಕೃತದೆಡೆಗೆ ಕುತೂಹಲ, ಆಸಕ್ತಿ ಬೆಳೆಸಿಕೊಳ್ಳುವಂತೆ ವಿ.ವಿ ಮಾಡಬೇಕು' ಎಂದು ಸಲಹೆ ನೀಡಿದರು.<br /> <br /> ವಿ.ವಿ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ, `ದಿನದಿಂದ ದಿನಕ್ಕೆ ವಿ.ವಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದು, ಅದಕ್ಕೆ ಸರ್ಕಾರ ಸಂಪೂರ್ಣ ಸಹಕಾರ ನೀಡಿರುವುದು ಸಂತೋಷದ ವಿಚಾರ' ಎಂದು ತಿಳಿಸಿದರು. ಕುಲಸಚಿವ ವೈ.ಎಸ್.ಸಿದ್ದೇಗೌಡ, `ಸಂಸ್ಕೃತದೆಡೆಗೆ ಆಸಕ್ತಿ ಇರುವವರಿಗಾಗಿಯೇ ಸಂಜೆ ಕಾಲೇಜುಗಳನ್ನು ಕೂಡ ತೆರೆಯಲು ಅನುಮತಿ ಸಿಕ್ಕಿದ್ದು, ಸದ್ಯದಲ್ಲೇ ಚಾಲನೆ ದೊರೆಯಲಿದೆ. ಅಲ್ಲದೇ ತಿಪ್ಪಸಂದ್ರದಲ್ಲಿ ನೂರು ಎಕರೆಯ ಜಮೀನು ದೊರೆತಿದ್ದು, ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಪ್ರತೇಕ ಕಟ್ಟಡ ದೊರೆಯಲಿದೆ' ಎಂದರು.<br /> <br /> ಘಟಿಕೋತ್ಸವದಲ್ಲಿ 460 ಮಂದಿ ವಿದ್ಯಾರ್ಥಿಗಳಿಗೆ ಪದವಿಯನ್ನು ಪ್ರಮಾಣ ಮಾಡಲಾಯಿತು. ಅದರಲ್ಲಿ 166ಮಂದಿ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆದರು. 9 ಮಂದಿ ರ್ಯಾಂಕ್ ಪಡೆದಿದ್ದು, ಹೊನ್ನಾವರದ ಗೌರಿ ಹೆಗಡೆ ಅವರಿಗೆ ಪ್ರಥಮ ರ್ಯಾಂಕ್ ಲಭಿಸಿತು. ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು ಧಾರವಾಡದ ಬಾಲಚಂದ್ರಶಾಸ್ತ್ರಿ ಜೋಶಿ, ಮೈಸೂರಿನ ಕೆ.ಎಸ್.ವರದಾಚಾರ್ಯ, ಹೊನ್ನಾವಾರದ ಕೆ.ನಾರಾಯಣ ಶಾಸ್ತ್ರಿ ಬುಚ್ಚನ್, ಬೆಂಗಳೂರಿನ ಡಾ.ಎಂ.ಶಿವಕುಮಾರ ಸ್ವಾಮಿ ಅವರಿಗೆ ಡಿ.ಲಿಟ್ ಪ್ರದಾನ ಮಾಡಿದರು.<br /> <br /> <strong>ಪರಿಶೀಲಿಸುವೆ: ಸಿಎಂ<br /> ಬೆಂಗಳೂರು</strong>: ಬೆಂಗಳೂರು ವಿವಿ ವಿಭಜನೆಗೆ ರಾಜ್ಯಪಾಲರು ಏಕೆ ವಿರೋಧಿಸಿದ್ದಾರೆ ಎಂಬುದರ ಬಗ್ಗೆ ತಮಗೇನೂ ಗೊತ್ತಿಲ್ಲ. ಪರಿಶೀಲನೆ ನಂತರ ಆ ಕುರಿತು ಸೂಕ್ತ ತೀರ್ಮಾನಕ್ಕೆ ಬರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಇಲ್ಲಿ ಹೇಳಿದರು.<br /> <br /> `ಇಷ್ಟಕ್ಕೂ ವಿಶ್ವವಿದ್ಯಾಲಯ ವಿಭಜನೆ ಮಾಡಿದ್ದು, ಹಿಂದಿನ ಬಿಜೆಪಿ ಸರ್ಕಾರ. ಅವರು ಯಾವ ಕಾರಣಕ್ಕೆ ವಿಭಜನೆ ಮಾಡಿದರು? ಅದನ್ನು ರಾಜ್ಯಪಾಲರು ಏಕೆ ವಿರೋಧಿಸುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಎಲ್ಲವನ್ನೂ ಪರಿಶೀಲಿಸಿದ ಬಳಿಕ ಸೂಕ್ತ ತೀರ್ಮಾನಕ್ಕೆ ಬರಲಾಗುವುದು' ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: `ಉನ್ನತ ಶಿಕ್ಷಣ ನೀಡಲು ಅಸ್ತಿತ್ವಕ್ಕೆ ಬಂದಿರುವ ಬೆಂಗಳೂರು ವಿಶ್ವವಿದ್ಯಾಲಯವನ್ನು ಬೇರ್ಪಡಿಸುವ ನಿರ್ಧಾರದ ಹಿಂದಿರುವ ತರ್ಕವೇನು?' ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಪ್ರಶ್ನಿಸಿದರು.<br /> <br /> ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ದ್ವಿತೀಯ ದೀಕ್ಷಾಂತ ಘಟಿಕೋತ್ಸವ ಸಮಾರಂಭದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ರಾಜ್ಯದಲ್ಲಿ ಬೆಂಗಳೂರು, ಮೈಸೂರು ಮತ್ತು ಧಾರವಾಡ ವಿಶ್ವವಿದ್ಯಾಲಯಗಳು ಉನ್ನತ ಶಿಕ್ಷಣ ಪಡೆಯುವ ಸಲುವಾಗಿ ಆರಂಭದಲ್ಲಿ ಹುಟ್ಟಿದ ವಿ.ವಿ ಗಳಾಗಿವೆ.<br /> <br /> ಇವುಗಳ ಮೂಲವನ್ನು ಉಳಿಸಿಕೊಳ್ಳುವತ್ತ ಪ್ರಯತ್ನ ನಡೆಸಬೇಕು. ಅಲ್ಲದೇ ಬೆಂಗಳೂರು ವಿ.ವಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಸುಮ್ಮನೆ ಬೇರ್ಪಡಿಸುವ ಔಚಿತ್ಯ ನನಗಂತೂ ಕಾಣುತ್ತಿಲ್ಲ. ಈ ಬಗ್ಗೆ ಸರ್ಕಾರವೇ ಸ್ಪಷ್ಟ ನಿಲುವು ತಳೆಯಬೇಕು' ಎಂದು ಪ್ರತಿಕ್ರಿಯಿಸಿದರು.<br /> <br /> `ಸಂಸ್ಕೃತ ವಿಶ್ವವಿದ್ಯಾಲಯ ರೂಪುಗೊಂಡು 4 ವರ್ಷಗಳು ಕಳೆದರೂ ಘಟಿಕೋತ್ಸವ ನಡೆಸಲು ವಿ.ವಿ.ಗೆ ತನ್ನದೇ ಸಭಾಂಗಣವಿಲ್ಲ. ಮೂಲ ಸೌಕರ್ಯಗಳ ಕೊರತೆ ಎದ್ದುಕಾಣುತ್ತಿದ್ದು, ಉನ್ನತ ಶಿಕ್ಷಣ ಸಂಪೂರ್ಣ ದಿಕ್ಕು ತಪ್ಪಿದಂತೆ ಭಾಸವಾಗುತ್ತಿದೆ. ಇದರಿಂದ ಹಿಂದಿನ ಉನ್ನತ ಶಿಕ್ಷಣ ಸಚಿವರು ಸಮರ್ಪಕವಾಗಿ ಕಾರ್ಯನಿರ್ವಹಿಸಿಲ್ಲ ಎಂಬುದು ಅರಿವಾಗುತ್ತದೆ' ಎಂದು ದೂರಿದರು.<br /> <br /> ಇದಕ್ಕೂ ಮುನ್ನ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದ ಕುಲಪತಿ ಡಾ.ಕೋಟೆಮನೆ ರಾಮಚಂದ್ರ ಜಿ.ಭಟ್ `ವಿಶ್ವದ ಎಲ್ಲೆಡೆ ಹೆಚ್ಚುತ್ತಿರುವ ಮತಪಂಥಗಳ ಗೋಡೆಗಳನ್ನು ಕೆಡವಲು ಸಾಮರಸ್ಯದ ಸೂತ್ರವಿಂದು ಅಗತ್ಯವಾಗಿ ಬೇಕಿದ್ದು, ಅದು ವೇದಗಳಲ್ಲಿದೆ' ಎಂದು ತಿಳಿಸಿದರು.<br /> <br /> ಸಂಸ್ಕೃತವೂ ಈ ನೆಲದ ಭಾಷೆಯಾಗಿದ್ದರೂ ಸಮರ್ಪಕವಾಗಿ ಉಸಿರಾಡಲು ತೊಂದರೆ ಪಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಯುವಸಮೂಹ ಸಂಸ್ಕೃತದೆಡೆಗೆ ಕುತೂಹಲ, ಆಸಕ್ತಿ ಬೆಳೆಸಿಕೊಳ್ಳುವಂತೆ ವಿ.ವಿ ಮಾಡಬೇಕು' ಎಂದು ಸಲಹೆ ನೀಡಿದರು.<br /> <br /> ವಿ.ವಿ ಕುಲಪತಿ ಮಲ್ಲೇಪುರಂ ಜಿ.ವೆಂಕಟೇಶ, `ದಿನದಿಂದ ದಿನಕ್ಕೆ ವಿ.ವಿಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದು, ಅದಕ್ಕೆ ಸರ್ಕಾರ ಸಂಪೂರ್ಣ ಸಹಕಾರ ನೀಡಿರುವುದು ಸಂತೋಷದ ವಿಚಾರ' ಎಂದು ತಿಳಿಸಿದರು. ಕುಲಸಚಿವ ವೈ.ಎಸ್.ಸಿದ್ದೇಗೌಡ, `ಸಂಸ್ಕೃತದೆಡೆಗೆ ಆಸಕ್ತಿ ಇರುವವರಿಗಾಗಿಯೇ ಸಂಜೆ ಕಾಲೇಜುಗಳನ್ನು ಕೂಡ ತೆರೆಯಲು ಅನುಮತಿ ಸಿಕ್ಕಿದ್ದು, ಸದ್ಯದಲ್ಲೇ ಚಾಲನೆ ದೊರೆಯಲಿದೆ. ಅಲ್ಲದೇ ತಿಪ್ಪಸಂದ್ರದಲ್ಲಿ ನೂರು ಎಕರೆಯ ಜಮೀನು ದೊರೆತಿದ್ದು, ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ಪ್ರತೇಕ ಕಟ್ಟಡ ದೊರೆಯಲಿದೆ' ಎಂದರು.<br /> <br /> ಘಟಿಕೋತ್ಸವದಲ್ಲಿ 460 ಮಂದಿ ವಿದ್ಯಾರ್ಥಿಗಳಿಗೆ ಪದವಿಯನ್ನು ಪ್ರಮಾಣ ಮಾಡಲಾಯಿತು. ಅದರಲ್ಲಿ 166ಮಂದಿ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆದರು. 9 ಮಂದಿ ರ್ಯಾಂಕ್ ಪಡೆದಿದ್ದು, ಹೊನ್ನಾವರದ ಗೌರಿ ಹೆಗಡೆ ಅವರಿಗೆ ಪ್ರಥಮ ರ್ಯಾಂಕ್ ಲಭಿಸಿತು. ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅವರು ಧಾರವಾಡದ ಬಾಲಚಂದ್ರಶಾಸ್ತ್ರಿ ಜೋಶಿ, ಮೈಸೂರಿನ ಕೆ.ಎಸ್.ವರದಾಚಾರ್ಯ, ಹೊನ್ನಾವಾರದ ಕೆ.ನಾರಾಯಣ ಶಾಸ್ತ್ರಿ ಬುಚ್ಚನ್, ಬೆಂಗಳೂರಿನ ಡಾ.ಎಂ.ಶಿವಕುಮಾರ ಸ್ವಾಮಿ ಅವರಿಗೆ ಡಿ.ಲಿಟ್ ಪ್ರದಾನ ಮಾಡಿದರು.<br /> <br /> <strong>ಪರಿಶೀಲಿಸುವೆ: ಸಿಎಂ<br /> ಬೆಂಗಳೂರು</strong>: ಬೆಂಗಳೂರು ವಿವಿ ವಿಭಜನೆಗೆ ರಾಜ್ಯಪಾಲರು ಏಕೆ ವಿರೋಧಿಸಿದ್ದಾರೆ ಎಂಬುದರ ಬಗ್ಗೆ ತಮಗೇನೂ ಗೊತ್ತಿಲ್ಲ. ಪರಿಶೀಲನೆ ನಂತರ ಆ ಕುರಿತು ಸೂಕ್ತ ತೀರ್ಮಾನಕ್ಕೆ ಬರಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶನಿವಾರ ಇಲ್ಲಿ ಹೇಳಿದರು.<br /> <br /> `ಇಷ್ಟಕ್ಕೂ ವಿಶ್ವವಿದ್ಯಾಲಯ ವಿಭಜನೆ ಮಾಡಿದ್ದು, ಹಿಂದಿನ ಬಿಜೆಪಿ ಸರ್ಕಾರ. ಅವರು ಯಾವ ಕಾರಣಕ್ಕೆ ವಿಭಜನೆ ಮಾಡಿದರು? ಅದನ್ನು ರಾಜ್ಯಪಾಲರು ಏಕೆ ವಿರೋಧಿಸುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಎಲ್ಲವನ್ನೂ ಪರಿಶೀಲಿಸಿದ ಬಳಿಕ ಸೂಕ್ತ ತೀರ್ಮಾನಕ್ಕೆ ಬರಲಾಗುವುದು' ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>