<p><strong>ಬೆಂಗಳೂರು: </strong>ಗಮನಾರ್ಹ ಪ್ರದರ್ಶನ ನೀಡಿದ ವೆಂಕಟೇಶ್ ಪ್ರಸಾದ್ ಇಲ್ಲಿ ನಡೆಯುತ್ತಿರುವ ಎಂ.ಎಸ್. ರಾಮಯ್ಯ-ಆನಂದ ಶರ್ಮ ರಾಜ್ಯ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ವಿಭಾಗದಲ್ಲಿ ಸಿಂಗಲ್ಸ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.<br /> <br /> ಭಾನುವಾರ ನಡೆದ ಪ್ರೀ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ವೆಂಕಟೇಶ್ 21-18, 17-21, 21-18ರಲ್ಲಿ ಇರ್ಷಾದ್ ಖಾನ್ ವಿರುದ್ಧ ಗೆಲುವು ಪಡೆದು ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟರು.<br /> <br /> ಇದೇ ವಿಭಾಗದ ಇತರ ಪಂದ್ಯಗಳಲ್ಲಿ ಧಾರವಾಡದ ಅಭಿಷೇಕ್ ಯಲಿಗಾರ್ 21-12, 21-6ರಲ್ಲಿ ಎಸ್ಎಐನ ಗೌತಮ್ ಭಟ್ ಮೇಲೂ, ಜಗದೀಶ್ ಯಾದವ್ 21-18, 21-14ರಲ್ಲಿ ಬಿ. ಪ್ರವೀಣ್ ವಿರುದ್ಧವೂ, ಸೋನಿಕ್ ಪ್ರಭುದೇಸಾಯಿ 21-16, 21-18ರಲ್ಲಿ ಉಡುಪಿಯ ವೆಂಕಟೇಶ್ ಕಾಮತ್ ಮೇಲೂ, ಆದಿತ್ಯ ಆರ್. ಪ್ರಕಾಶ್ 21-9, 21-14ರಲ್ಲಿ ಕಮಲದೀಪ್ ಸಿಂಗ್ ವಿರುದ್ಧವೂ, ಬೆಳಗಾವಿಯ ರಜಸ್ ಜಾವಲ್ಕರ್ 21-15, 21-15ರಲ್ಲಿ ಬಿ.ಆರ್. ಸಂಕೀರ್ತ್ ಮೇಲೂ, ರಿಷಿಕೇಶ್ ಯಲಿಗಾರ್ 21-13, 21-13ರಲ್ಲಿ ಎಂ. ಕಾರ್ತಿಕ್ ವಿರುದ್ಧವೂ, ಅಭಿಜಿತ್ ನಿಂಪಳ್ಳಿ 21-19, 21-16ರಲ್ಲಿ ಆದರ್ಶ್ ಕುಮಾರ್ ಮೇಲೂ ಗೆಲುವು ಪಡೆದು ಕ್ವಾರ್ಟರ್ಫೈನಲ್ಗೆ ಲಗ್ಗೆ ಇಟ್ಟರು.<br /> <br /> ಸೆಮಿಫೈನಲ್ಗೆ ಸಿಂಧು ಭಾರದ್ವಾಜ್: ಇದೇ ಟೂರ್ನಿಯ ಮಹಿಳೆಯರ ವಿಭಾಗದ ಸಿಂಗಲ್ಸ್ನ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಸಿಂಧು ಭಾರದ್ವಾಜ್ 21-11, 21-19ರಲ್ಲಿ ಪಿ. ಹರ್ಷಿತಾ ಮೇಲೂ, ಉತ್ತರಾ ಪ್ರಕಾಶ್ 21-10, 21-2ರಲ್ಲಿ ಕೀರ್ತನಾ ವಿರುದ್ಧವೂ, ವಿ. ರುತು ಮಿಶಾ 21-19, 21-18ರಲ್ಲಿ ದೇವಿಕಾ ರವೀಂದ್ರ ವಿರುದ್ಧವೂ ಜಯ ಪಡೆದು ಸೆಮಿಫೈನಲ್ ಪ್ರವೇಶಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಗಮನಾರ್ಹ ಪ್ರದರ್ಶನ ನೀಡಿದ ವೆಂಕಟೇಶ್ ಪ್ರಸಾದ್ ಇಲ್ಲಿ ನಡೆಯುತ್ತಿರುವ ಎಂ.ಎಸ್. ರಾಮಯ್ಯ-ಆನಂದ ಶರ್ಮ ರಾಜ್ಯ ರ್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ವಿಭಾಗದಲ್ಲಿ ಸಿಂಗಲ್ಸ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.<br /> <br /> ಭಾನುವಾರ ನಡೆದ ಪ್ರೀ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ವೆಂಕಟೇಶ್ 21-18, 17-21, 21-18ರಲ್ಲಿ ಇರ್ಷಾದ್ ಖಾನ್ ವಿರುದ್ಧ ಗೆಲುವು ಪಡೆದು ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟರು.<br /> <br /> ಇದೇ ವಿಭಾಗದ ಇತರ ಪಂದ್ಯಗಳಲ್ಲಿ ಧಾರವಾಡದ ಅಭಿಷೇಕ್ ಯಲಿಗಾರ್ 21-12, 21-6ರಲ್ಲಿ ಎಸ್ಎಐನ ಗೌತಮ್ ಭಟ್ ಮೇಲೂ, ಜಗದೀಶ್ ಯಾದವ್ 21-18, 21-14ರಲ್ಲಿ ಬಿ. ಪ್ರವೀಣ್ ವಿರುದ್ಧವೂ, ಸೋನಿಕ್ ಪ್ರಭುದೇಸಾಯಿ 21-16, 21-18ರಲ್ಲಿ ಉಡುಪಿಯ ವೆಂಕಟೇಶ್ ಕಾಮತ್ ಮೇಲೂ, ಆದಿತ್ಯ ಆರ್. ಪ್ರಕಾಶ್ 21-9, 21-14ರಲ್ಲಿ ಕಮಲದೀಪ್ ಸಿಂಗ್ ವಿರುದ್ಧವೂ, ಬೆಳಗಾವಿಯ ರಜಸ್ ಜಾವಲ್ಕರ್ 21-15, 21-15ರಲ್ಲಿ ಬಿ.ಆರ್. ಸಂಕೀರ್ತ್ ಮೇಲೂ, ರಿಷಿಕೇಶ್ ಯಲಿಗಾರ್ 21-13, 21-13ರಲ್ಲಿ ಎಂ. ಕಾರ್ತಿಕ್ ವಿರುದ್ಧವೂ, ಅಭಿಜಿತ್ ನಿಂಪಳ್ಳಿ 21-19, 21-16ರಲ್ಲಿ ಆದರ್ಶ್ ಕುಮಾರ್ ಮೇಲೂ ಗೆಲುವು ಪಡೆದು ಕ್ವಾರ್ಟರ್ಫೈನಲ್ಗೆ ಲಗ್ಗೆ ಇಟ್ಟರು.<br /> <br /> ಸೆಮಿಫೈನಲ್ಗೆ ಸಿಂಧು ಭಾರದ್ವಾಜ್: ಇದೇ ಟೂರ್ನಿಯ ಮಹಿಳೆಯರ ವಿಭಾಗದ ಸಿಂಗಲ್ಸ್ನ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಸಿಂಧು ಭಾರದ್ವಾಜ್ 21-11, 21-19ರಲ್ಲಿ ಪಿ. ಹರ್ಷಿತಾ ಮೇಲೂ, ಉತ್ತರಾ ಪ್ರಕಾಶ್ 21-10, 21-2ರಲ್ಲಿ ಕೀರ್ತನಾ ವಿರುದ್ಧವೂ, ವಿ. ರುತು ಮಿಶಾ 21-19, 21-18ರಲ್ಲಿ ದೇವಿಕಾ ರವೀಂದ್ರ ವಿರುದ್ಧವೂ ಜಯ ಪಡೆದು ಸೆಮಿಫೈನಲ್ ಪ್ರವೇಶಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>