<p><strong>ಕಳಸ:</strong> ಹೋಬಳಿಯಾದ್ಯಂತ ಕಳೆದ ವಾರದಿಂದ ಸತತವಾಗಿ ಭಾರಿ ಮಳೆ ಸುರಿಯುತ್ತಿದೆ.<br /> <br /> ಜೂನ್ 8ರಂದು ಆರಂಭಗೊಂಡ ಮಳೆಯು ಪ್ರತಿದಿನವೂ ಹದವಾಗಿ ಸುರಿಯುತ್ತಿದೆ. ಕಳೆದ ವರ್ಷ ಮಳೆಯ ಪ್ರಮಾಣ ಕೇವಲ 95 ಅಂಗುಲ ಆಗಿತ್ತು. ಆದರೆ ಈಗಾಗಲೇ ಬಾರಿ ಈಗಾಗಲೇ 20 ಅಂಗುಲ ಮಳೆ ಆಗಿದ್ದು, ವಾಡಿಕೆಯ 120 ಅಂಗುಲಕ್ಕೆ ಏರಬಹುದು ಎಂಬ ನಂಬಿಕೆ ಮೂಡಿಸಿದೆ.<br /> <br /> ಮಳೆಯ ಜತೆಗೆ ಆಗಾಗ್ಗೆ ಬೀಸುವ ರಭಸವಾದ ಗಾಳಿಯು ಚಳಿ ಹೆಚ್ಚಿಸಿದೆ. ಕಾಫಿ ತೋಟಗಳಲ್ಲಿ ಮರಗಳು ನೆಲಕ್ಕೆ ಉರುಳಿದರೆ ಅಡಿಕೆ ತೋಟಗಳಲ್ಲಿ ಅಡಿಕೆ ಮರಗಳೂ, ಬಾಳೆ ಗಿಡಗಳು ಮುರಿದು ಬಿದ್ದಿವೆ. ಮಳೆಯಿಂದಾಗಿ ಬತ್ತದ ಕೃಷಿ ಚುರುಕಾಗಿದ್ದು, ಗದ್ದೆಯಲ್ಲಿ ಉಳುಮೆ, ಅಗಡಿಯ ಕೆಲಸಗಳು ನಡೆದಿವೆ.<br /> <br /> ಆದರೆ ಮಳೆಯು ಕಾಫಿ ತೋಟದಲ್ಲಿ ಕೆಲಸವನ್ನು ಬಹುತೇಕ ಸ್ಥಗಿತಗೊಳಿಸಿದೆ. ಕಾಫಿ ಗಿಡಗಳಿಗೆ ಗೊಬ್ಬರ ನೀಡುವ ಮತ್ತು ಕಾಫಿ ಗಿಡ ಕಸಿ ಮಾಡುವ ಬೇಸಿಗೆ ಕಾಲದ ಕೆಲಸಗಳು ಈ ಬಾರಿ ಬಹುತೇಕ ತೋಟಗಳಲ್ಲಿ ಮುಗಿದಿಲ್ಲ. ಮಳೆಯಲ್ಲಿ ಈ ಕೆಲಸಗಳು ಅಸಾಧ್ಯವಾಗಿರುವುದರಿಂದ ಕೆಲ ಬೆಳೆಗಾರರು ಸಹಜ ಕಾಫಿ ಕೃಷಿ ಪ್ರಯೋಗಕ್ಕೆ ಕೈಹಾಕಿದಂತಾಗಿದೆ.<br /> <br /> ಮಳೆ ಬಿಡುವು ನೀಡಿದರೆ ಅಡಿಕೆ ಕೊಳೆ ರೋಗಕ್ಕೆ ಔಷಧಿ ಸಿಂಪಡಿಸುವ ಕೆಲಸ ತುರ್ತಾಗಿ ನಡೆಯಬೇಕಿದೆ. ಮಳೆಯು ಚಹಾತೋಟದಲ್ಲಿ ಭರ್ಜರಿ ಸೊಪ್ಪು ಚಿಗುರಿಸಿದೆ. ಆದರೆ ಸೊಪ್ಪು ಕೊಯ್ಯಲು ಕಾರ್ಮಿಕರ ಕೊರತೆಯಿಂದಾಗಿ ಉತ್ಪತ್ತಿ ಕೈ ಸೇರದೆ ನಷ್ಟವಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಳಸ:</strong> ಹೋಬಳಿಯಾದ್ಯಂತ ಕಳೆದ ವಾರದಿಂದ ಸತತವಾಗಿ ಭಾರಿ ಮಳೆ ಸುರಿಯುತ್ತಿದೆ.<br /> <br /> ಜೂನ್ 8ರಂದು ಆರಂಭಗೊಂಡ ಮಳೆಯು ಪ್ರತಿದಿನವೂ ಹದವಾಗಿ ಸುರಿಯುತ್ತಿದೆ. ಕಳೆದ ವರ್ಷ ಮಳೆಯ ಪ್ರಮಾಣ ಕೇವಲ 95 ಅಂಗುಲ ಆಗಿತ್ತು. ಆದರೆ ಈಗಾಗಲೇ ಬಾರಿ ಈಗಾಗಲೇ 20 ಅಂಗುಲ ಮಳೆ ಆಗಿದ್ದು, ವಾಡಿಕೆಯ 120 ಅಂಗುಲಕ್ಕೆ ಏರಬಹುದು ಎಂಬ ನಂಬಿಕೆ ಮೂಡಿಸಿದೆ.<br /> <br /> ಮಳೆಯ ಜತೆಗೆ ಆಗಾಗ್ಗೆ ಬೀಸುವ ರಭಸವಾದ ಗಾಳಿಯು ಚಳಿ ಹೆಚ್ಚಿಸಿದೆ. ಕಾಫಿ ತೋಟಗಳಲ್ಲಿ ಮರಗಳು ನೆಲಕ್ಕೆ ಉರುಳಿದರೆ ಅಡಿಕೆ ತೋಟಗಳಲ್ಲಿ ಅಡಿಕೆ ಮರಗಳೂ, ಬಾಳೆ ಗಿಡಗಳು ಮುರಿದು ಬಿದ್ದಿವೆ. ಮಳೆಯಿಂದಾಗಿ ಬತ್ತದ ಕೃಷಿ ಚುರುಕಾಗಿದ್ದು, ಗದ್ದೆಯಲ್ಲಿ ಉಳುಮೆ, ಅಗಡಿಯ ಕೆಲಸಗಳು ನಡೆದಿವೆ.<br /> <br /> ಆದರೆ ಮಳೆಯು ಕಾಫಿ ತೋಟದಲ್ಲಿ ಕೆಲಸವನ್ನು ಬಹುತೇಕ ಸ್ಥಗಿತಗೊಳಿಸಿದೆ. ಕಾಫಿ ಗಿಡಗಳಿಗೆ ಗೊಬ್ಬರ ನೀಡುವ ಮತ್ತು ಕಾಫಿ ಗಿಡ ಕಸಿ ಮಾಡುವ ಬೇಸಿಗೆ ಕಾಲದ ಕೆಲಸಗಳು ಈ ಬಾರಿ ಬಹುತೇಕ ತೋಟಗಳಲ್ಲಿ ಮುಗಿದಿಲ್ಲ. ಮಳೆಯಲ್ಲಿ ಈ ಕೆಲಸಗಳು ಅಸಾಧ್ಯವಾಗಿರುವುದರಿಂದ ಕೆಲ ಬೆಳೆಗಾರರು ಸಹಜ ಕಾಫಿ ಕೃಷಿ ಪ್ರಯೋಗಕ್ಕೆ ಕೈಹಾಕಿದಂತಾಗಿದೆ.<br /> <br /> ಮಳೆ ಬಿಡುವು ನೀಡಿದರೆ ಅಡಿಕೆ ಕೊಳೆ ರೋಗಕ್ಕೆ ಔಷಧಿ ಸಿಂಪಡಿಸುವ ಕೆಲಸ ತುರ್ತಾಗಿ ನಡೆಯಬೇಕಿದೆ. ಮಳೆಯು ಚಹಾತೋಟದಲ್ಲಿ ಭರ್ಜರಿ ಸೊಪ್ಪು ಚಿಗುರಿಸಿದೆ. ಆದರೆ ಸೊಪ್ಪು ಕೊಯ್ಯಲು ಕಾರ್ಮಿಕರ ಕೊರತೆಯಿಂದಾಗಿ ಉತ್ಪತ್ತಿ ಕೈ ಸೇರದೆ ನಷ್ಟವಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>