<p><strong>ಕಟಾಂಗದಲ್ಲಿ ಭಾರತದ ಸೈನ್ಯ ದೌರ್ಜನ್ಯವೆಸಗಲಿಲ್ಲ<br /> ಲಿಯೊಪೋಲ್ಡ್ವಿಲ್, ಸೆ. 24</strong> - ಕಟಾಂಗದಲ್ಲಿರುವ ಭಾರತದ ಸೈನಿಕರಾರೂ, ಕೆಲವರು ಆಪಾದಿಸಿರುವಂತೆ ದೌರ್ಜನ್ಯಗಳೆನ್ನೆಸಗಿಲ್ಲವೆಂದು ಕಾಂಗೋದಲ್ಲಿರುವ ವಿಶ್ವರಾಷ್ಟ್ರ ಸಂಸ್ಥೆಯ ದಂಡನಾಯಕರಾದ ಜನರಲ್ ಸೀನ್ಮೆಕ್ಕೆಯೋವರ್ರವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.<br /> <br /> ತಮ್ಮ ಮೇಲಿನ ದಾಳಿಗೆ ಅವರು ಪ್ರತಿಕ್ರಮ ಕೈಗೊಂಡಾಗ ಕೆಲವರು ಹತರಾದರೆಂದೂ, ಅದು ದೌರ್ಜನ್ಯವಲ್ಲವೆಂದೂ ಅವರು ನುಡಿದರು. ಭಾರತದ ಸೈನಿಕರ ಅದರಲ್ಲಿಯೂ ಗೂರ್ಖಾಗಳ ತಾಳ್ಮೆ - ಸಂಯಮಗಳನ್ನು ಅವರು ಪ್ರಶಂಸಿಸಿ ತಮ್ಮ ಮೇಲೆ ಏಕಪ್ರಕಾರವಾಗಿ ಮರೆಗಳಿಂದ ಗುಂಡು ಹಾರಿಸಲಾಗುತ್ತಿದ್ದರೂ ಗೂರ್ಖಾಗಳು ಉಗ್ರ ಕದನವನ್ನೆಸಗಲು ನಿರಾಕರಿಸಿದರೆಂದು ತಿಳಿಸಿದರು.</p>.<p><strong>ಮ್ಯಾಂಗನೀಸ್ ಅದುರಿನ ರಫ್ತು ಏರಿಕೆಗೆ ಕ್ರಮಗಳು<br /> ನವದೆಹಲಿ, ಸೆ. 24</strong> - ಮ್ಯಾಂಗನೀಸ್ ಅದುರಿನ ರಫ್ತನ್ನು ಹೆಚ್ಚಿಸಲೋಸುಗ ಸರ್ಕಾರವು ಸದ್ಯದಲ್ಲಿಯೇ ಕೆಲವು ರಿಯಾಯಿತಿಗಳನ್ನು ಪ್ರಕಟಿಸಿದೆ.<br /> ಈ ರಿಯಾಯಿತಿಗಳು, ಗಣಿಗಳಿಂದ ಬಂದರುಗಳಿಗೆ ರೈಲುಗಳಲ್ಲಿ ಸಾಗಿಸಲಾಗಿರುವ ಅದುರಿನ ಸಾಗಣೆಯ ಶುಲ್ಕದ ಇಳಿತಾಯ ಹಾಗೂ ಗೌರವ ಧನಗಳು ಮತ್ತು ಬಂದರು ಶುಲ್ಕಗಳಲ್ಲಿನ ಕೆಲವು ಇಳಿತಾಯಗಳ ರೂಪದಲ್ಲಿರಬಹುದು.<br /> <br /> <strong>ಇಂದು ನಗರದಲ್ಲಿ ದಕ್ಷಿಣ ವಲಯ ಸಮಿತಿ ಸಭೆ<br /> ಬೆಂಗಳೂರು, ಸೆ. 24 </strong>- ಬೆಂಗಳೂರು ನಗರದಲ್ಲಿ ಇದೇ ಪ್ರಥಮವಾಗಿ ನಾಳೆ ಸಮಾವೇಶಗೊಳ್ಳಲಿರುವ ದಕ್ಷಿಣ ವಲಯ ಸಮಿತಿಯ ಮುಂದೆ ಅಂತರ ರಾಜ್ಯ ನದಿ ನೀರಿನ ಹಂಚಿಕೆ, ಗಡಿಗಳ ಹೊಂದಾಣಿಕೆ, ಭಾಷಾ ಅಲ್ಪಸಂಖ್ಯಾತರ ಹಿತರಕ್ಷಣೆ ಮೊದಲಾದ ಪ್ರಮುಖ ಪ್ರಶ್ನೆಗಳು ಚರ್ಚೆಗೆ ಬರಲಿವೆ.<br /> <br /> ಮೈಸೂರು, ಕೇರಳ, ಮದ್ರಾಸು ಮತ್ತು ಆಂಧ್ರಪ್ರದೇಶ ರಾಜ್ಯ ಸರ್ಕಾರಗಳಿಂದ ಕೂಡಿರುವ ಈ ದಕ್ಷಿಣ ವಲಯ ಸಮಿತಿಯ ಕಲಾಪಗಳ ಪಟ್ಟಿಯಲ್ಲಿ ನದಿ ನೀರಿನ ಹಂಚಿಕೆ ಮತ್ತು ಗಡಿ ವಿವಾದಗಳ ಪ್ರಶ್ನೆ ಸೇರಿಲ್ಲ.<br /> <br /> ಆದರೂ ಕಲಾಪಗಳ ಪಟ್ಟಿಯಲ್ಲಿ ಸೇರಿರುವ `ಇತರ ವಿಷಯಗಳ~ ಚರ್ಚೆಯಲ್ಲಿ ಈ ವಿಷಯಗಳ ಪ್ರಸ್ತಾಪವಾಗುವ ಸಂಭವ ಹೆಚ್ಚಾಗಿದೆಯೆನ್ನಲಾಗಿದೆ.</p>.<p><strong>ಪಠ್ಯ ಪುಸ್ತಕಗಳ ಬಗ್ಗೆ ಸಂಶೋಧನೆಗಾಗಿ ಸಂಸ್ಥೆ<br /> ಬೆಂಗಳೂರು, ಸೆ. 24</strong> - ಈಗಿರುವ ಪ್ರಾಥಮಿಕ ಪಾಠಕ್ರಮದ ಮೌಲ್ಯವನ್ನು ಪರಿಶೀಲಿಸಿ ಉತ್ತಮ ಪಠ್ಯ ಪುಸ್ತಕಗಳನ್ನು ತಯಾರಿಸುವುದಕ್ಕೆ ಸಹಾಯಕವಾಗುವಂತೆ ಒಂದು ಸಂಶೋಧನಾ ಸಂಸ್ಥೆಯನ್ನು ಆರಂಭಿಸಬೇಕೆಂದು ಇಂದು ಇಲ್ಲಿ ನಡೆದ ದಕ್ಷಿಣ ರಾಜ್ಯಗಳ ಶಿಕ್ಷಣ ಮಂತ್ರಿಗಳ ಸಭೆಯಲ್ಲಿ ನಿರ್ಧರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಟಾಂಗದಲ್ಲಿ ಭಾರತದ ಸೈನ್ಯ ದೌರ್ಜನ್ಯವೆಸಗಲಿಲ್ಲ<br /> ಲಿಯೊಪೋಲ್ಡ್ವಿಲ್, ಸೆ. 24</strong> - ಕಟಾಂಗದಲ್ಲಿರುವ ಭಾರತದ ಸೈನಿಕರಾರೂ, ಕೆಲವರು ಆಪಾದಿಸಿರುವಂತೆ ದೌರ್ಜನ್ಯಗಳೆನ್ನೆಸಗಿಲ್ಲವೆಂದು ಕಾಂಗೋದಲ್ಲಿರುವ ವಿಶ್ವರಾಷ್ಟ್ರ ಸಂಸ್ಥೆಯ ದಂಡನಾಯಕರಾದ ಜನರಲ್ ಸೀನ್ಮೆಕ್ಕೆಯೋವರ್ರವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.<br /> <br /> ತಮ್ಮ ಮೇಲಿನ ದಾಳಿಗೆ ಅವರು ಪ್ರತಿಕ್ರಮ ಕೈಗೊಂಡಾಗ ಕೆಲವರು ಹತರಾದರೆಂದೂ, ಅದು ದೌರ್ಜನ್ಯವಲ್ಲವೆಂದೂ ಅವರು ನುಡಿದರು. ಭಾರತದ ಸೈನಿಕರ ಅದರಲ್ಲಿಯೂ ಗೂರ್ಖಾಗಳ ತಾಳ್ಮೆ - ಸಂಯಮಗಳನ್ನು ಅವರು ಪ್ರಶಂಸಿಸಿ ತಮ್ಮ ಮೇಲೆ ಏಕಪ್ರಕಾರವಾಗಿ ಮರೆಗಳಿಂದ ಗುಂಡು ಹಾರಿಸಲಾಗುತ್ತಿದ್ದರೂ ಗೂರ್ಖಾಗಳು ಉಗ್ರ ಕದನವನ್ನೆಸಗಲು ನಿರಾಕರಿಸಿದರೆಂದು ತಿಳಿಸಿದರು.</p>.<p><strong>ಮ್ಯಾಂಗನೀಸ್ ಅದುರಿನ ರಫ್ತು ಏರಿಕೆಗೆ ಕ್ರಮಗಳು<br /> ನವದೆಹಲಿ, ಸೆ. 24</strong> - ಮ್ಯಾಂಗನೀಸ್ ಅದುರಿನ ರಫ್ತನ್ನು ಹೆಚ್ಚಿಸಲೋಸುಗ ಸರ್ಕಾರವು ಸದ್ಯದಲ್ಲಿಯೇ ಕೆಲವು ರಿಯಾಯಿತಿಗಳನ್ನು ಪ್ರಕಟಿಸಿದೆ.<br /> ಈ ರಿಯಾಯಿತಿಗಳು, ಗಣಿಗಳಿಂದ ಬಂದರುಗಳಿಗೆ ರೈಲುಗಳಲ್ಲಿ ಸಾಗಿಸಲಾಗಿರುವ ಅದುರಿನ ಸಾಗಣೆಯ ಶುಲ್ಕದ ಇಳಿತಾಯ ಹಾಗೂ ಗೌರವ ಧನಗಳು ಮತ್ತು ಬಂದರು ಶುಲ್ಕಗಳಲ್ಲಿನ ಕೆಲವು ಇಳಿತಾಯಗಳ ರೂಪದಲ್ಲಿರಬಹುದು.<br /> <br /> <strong>ಇಂದು ನಗರದಲ್ಲಿ ದಕ್ಷಿಣ ವಲಯ ಸಮಿತಿ ಸಭೆ<br /> ಬೆಂಗಳೂರು, ಸೆ. 24 </strong>- ಬೆಂಗಳೂರು ನಗರದಲ್ಲಿ ಇದೇ ಪ್ರಥಮವಾಗಿ ನಾಳೆ ಸಮಾವೇಶಗೊಳ್ಳಲಿರುವ ದಕ್ಷಿಣ ವಲಯ ಸಮಿತಿಯ ಮುಂದೆ ಅಂತರ ರಾಜ್ಯ ನದಿ ನೀರಿನ ಹಂಚಿಕೆ, ಗಡಿಗಳ ಹೊಂದಾಣಿಕೆ, ಭಾಷಾ ಅಲ್ಪಸಂಖ್ಯಾತರ ಹಿತರಕ್ಷಣೆ ಮೊದಲಾದ ಪ್ರಮುಖ ಪ್ರಶ್ನೆಗಳು ಚರ್ಚೆಗೆ ಬರಲಿವೆ.<br /> <br /> ಮೈಸೂರು, ಕೇರಳ, ಮದ್ರಾಸು ಮತ್ತು ಆಂಧ್ರಪ್ರದೇಶ ರಾಜ್ಯ ಸರ್ಕಾರಗಳಿಂದ ಕೂಡಿರುವ ಈ ದಕ್ಷಿಣ ವಲಯ ಸಮಿತಿಯ ಕಲಾಪಗಳ ಪಟ್ಟಿಯಲ್ಲಿ ನದಿ ನೀರಿನ ಹಂಚಿಕೆ ಮತ್ತು ಗಡಿ ವಿವಾದಗಳ ಪ್ರಶ್ನೆ ಸೇರಿಲ್ಲ.<br /> <br /> ಆದರೂ ಕಲಾಪಗಳ ಪಟ್ಟಿಯಲ್ಲಿ ಸೇರಿರುವ `ಇತರ ವಿಷಯಗಳ~ ಚರ್ಚೆಯಲ್ಲಿ ಈ ವಿಷಯಗಳ ಪ್ರಸ್ತಾಪವಾಗುವ ಸಂಭವ ಹೆಚ್ಚಾಗಿದೆಯೆನ್ನಲಾಗಿದೆ.</p>.<p><strong>ಪಠ್ಯ ಪುಸ್ತಕಗಳ ಬಗ್ಗೆ ಸಂಶೋಧನೆಗಾಗಿ ಸಂಸ್ಥೆ<br /> ಬೆಂಗಳೂರು, ಸೆ. 24</strong> - ಈಗಿರುವ ಪ್ರಾಥಮಿಕ ಪಾಠಕ್ರಮದ ಮೌಲ್ಯವನ್ನು ಪರಿಶೀಲಿಸಿ ಉತ್ತಮ ಪಠ್ಯ ಪುಸ್ತಕಗಳನ್ನು ತಯಾರಿಸುವುದಕ್ಕೆ ಸಹಾಯಕವಾಗುವಂತೆ ಒಂದು ಸಂಶೋಧನಾ ಸಂಸ್ಥೆಯನ್ನು ಆರಂಭಿಸಬೇಕೆಂದು ಇಂದು ಇಲ್ಲಿ ನಡೆದ ದಕ್ಷಿಣ ರಾಜ್ಯಗಳ ಶಿಕ್ಷಣ ಮಂತ್ರಿಗಳ ಸಭೆಯಲ್ಲಿ ನಿರ್ಧರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>