<p>‘ಭಾರತದಲ್ಲಿ ಎಲ್ಲ ರೀತಿಯ ಜನರೂ ಇದ್ದಾರೆ. ಅವರೆಲ್ಲವೂ ಭಾರತದ ಬಹುಸಂಸ್ಕೃತಿಯ ಭಾಗ. ಆದ್ದರಿಂದ ಈ ದೇಶವನ್ನು ಸಹಿಷ್ಣು–ಅಸಹಿಷ್ಣು ಹೀಗೆ ಯಾವುದೇ ಒಂದು ರೀತಿಯ ಹಣೆ ಪಟ್ಟಿ ಹಚ್ಚಿ ನೋಡುವುದು ಸಾಧ್ಯವಿಲ್ಲ’ ಎಂದು ಜನಪ್ರಿಯ ಹಾಸ್ಯನಟ ಸೈರಸ್ ಸಾಹುಕಾರ್ ಅಭಿಪ್ರಾಯಪಟ್ಟಿದ್ದಾರೆ.<br /> <br /> ‘ಛಾಲೆಂಜ್ ಅಕ್ಸೆಪ್ಟೆಡ್’ ಎಂಬ ಕಿರುತೆರೆ ಹಾಸ್ಯ ಕಾರ್ಯಕ್ರಮದ ಮೂಲಕ ಜನಪ್ರಿಯರಾದ ಸೈರಸ್ ಇತ್ತೀಚೆಗೆ ದೆಹಲಿಯಲ್ಲಿ ಐಎಎನ್ಎಸ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ ಹೀಗೆ ಹೇಳಿದ್ದಾರೆ.<br /> <br /> ‘ಭಾರತ ಅಸಹಿಷ್ಣು ಎಂದು ಹೇಗೆ ಹೇಳುತ್ತೀರಿ? ಇದು ಬಹುಸಂಸ್ಕೃತಿ ದೇಶ. ಈ ಒಂದು ದೇಶದ ಒಳಗೇ ಹಲವು ಉಪಭಾರತಗಳಿವೆ. ಇದು ವಿಶಾಲವಾದ ದೇಶ. ಇಲ್ಲಿ ತೀವ್ರ ಅಸಹಿಷ್ಣುಗಳು ಇದ್ದಾರೆ ಎನ್ನುವುದು ನಿಜ. ಆದರೆ ಅವರ ಅಸಹಿಷ್ಣುತೆಗೆ ಪ್ರಬಲವಾಗಿ ವಿರೋಧ ವ್ಯಕ್ತಪಡಿಸುವ ಸಹಿಷ್ಣುಗಳೂ ಸಾಕಷ್ಟಿದ್ದಾರೆ’ ಎಂದು ಅವರು ಹೇಳಿದ್ದಾರೆ.<br /> <br /> ‘ಅಸಹಿಷ್ಣುಗಳ ಒಂದು ಗುಂಪಿದೆ. ಆದರೆ ಅದಕ್ಕ ಪ್ರತಿರೋಧ ಒಡ್ಡುವವರೂ ಇಲ್ಲಿದ್ದಾರೆ. ಆದ್ದರಿಂದ ಇಷ್ಟು ವೈವಿಧ್ಯಮಯ ಜಾತಿ, ದೃಷ್ಟಿಕೋನ, ನಂಬಿಕೆಗಳು ಇರುವಂತಹ ಭಾರತಕ್ಕೆ ಯಾರೂ ಅಸಹಿಷ್ಣು ದೇಶ ಎಂದು ಹಣೆಪಟ್ಟಿ ಹಚ್ಚಲು ಸಾಧ್ಯವಿಲ್ಲ’ ಎಂದು ಸೈರಸ್ ಖಡಾಖಂಡಿತವಾಗಿ ನುಡಿದಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಭಾರತದಲ್ಲಿ ಎಲ್ಲ ರೀತಿಯ ಜನರೂ ಇದ್ದಾರೆ. ಅವರೆಲ್ಲವೂ ಭಾರತದ ಬಹುಸಂಸ್ಕೃತಿಯ ಭಾಗ. ಆದ್ದರಿಂದ ಈ ದೇಶವನ್ನು ಸಹಿಷ್ಣು–ಅಸಹಿಷ್ಣು ಹೀಗೆ ಯಾವುದೇ ಒಂದು ರೀತಿಯ ಹಣೆ ಪಟ್ಟಿ ಹಚ್ಚಿ ನೋಡುವುದು ಸಾಧ್ಯವಿಲ್ಲ’ ಎಂದು ಜನಪ್ರಿಯ ಹಾಸ್ಯನಟ ಸೈರಸ್ ಸಾಹುಕಾರ್ ಅಭಿಪ್ರಾಯಪಟ್ಟಿದ್ದಾರೆ.<br /> <br /> ‘ಛಾಲೆಂಜ್ ಅಕ್ಸೆಪ್ಟೆಡ್’ ಎಂಬ ಕಿರುತೆರೆ ಹಾಸ್ಯ ಕಾರ್ಯಕ್ರಮದ ಮೂಲಕ ಜನಪ್ರಿಯರಾದ ಸೈರಸ್ ಇತ್ತೀಚೆಗೆ ದೆಹಲಿಯಲ್ಲಿ ಐಎಎನ್ಎಸ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ ಹೀಗೆ ಹೇಳಿದ್ದಾರೆ.<br /> <br /> ‘ಭಾರತ ಅಸಹಿಷ್ಣು ಎಂದು ಹೇಗೆ ಹೇಳುತ್ತೀರಿ? ಇದು ಬಹುಸಂಸ್ಕೃತಿ ದೇಶ. ಈ ಒಂದು ದೇಶದ ಒಳಗೇ ಹಲವು ಉಪಭಾರತಗಳಿವೆ. ಇದು ವಿಶಾಲವಾದ ದೇಶ. ಇಲ್ಲಿ ತೀವ್ರ ಅಸಹಿಷ್ಣುಗಳು ಇದ್ದಾರೆ ಎನ್ನುವುದು ನಿಜ. ಆದರೆ ಅವರ ಅಸಹಿಷ್ಣುತೆಗೆ ಪ್ರಬಲವಾಗಿ ವಿರೋಧ ವ್ಯಕ್ತಪಡಿಸುವ ಸಹಿಷ್ಣುಗಳೂ ಸಾಕಷ್ಟಿದ್ದಾರೆ’ ಎಂದು ಅವರು ಹೇಳಿದ್ದಾರೆ.<br /> <br /> ‘ಅಸಹಿಷ್ಣುಗಳ ಒಂದು ಗುಂಪಿದೆ. ಆದರೆ ಅದಕ್ಕ ಪ್ರತಿರೋಧ ಒಡ್ಡುವವರೂ ಇಲ್ಲಿದ್ದಾರೆ. ಆದ್ದರಿಂದ ಇಷ್ಟು ವೈವಿಧ್ಯಮಯ ಜಾತಿ, ದೃಷ್ಟಿಕೋನ, ನಂಬಿಕೆಗಳು ಇರುವಂತಹ ಭಾರತಕ್ಕೆ ಯಾರೂ ಅಸಹಿಷ್ಣು ದೇಶ ಎಂದು ಹಣೆಪಟ್ಟಿ ಹಚ್ಚಲು ಸಾಧ್ಯವಿಲ್ಲ’ ಎಂದು ಸೈರಸ್ ಖಡಾಖಂಡಿತವಾಗಿ ನುಡಿದಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>