<p><strong>ಬೆಂಗಳೂರು:</strong> ಬಳ್ಳಾರಿಯಲ್ಲಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗಾಗಿ ಸ್ವಾಧೀನಪಡಿಸಿಕೊಂಡ 950 ಎಕರೆ ಜಮೀನಿನ ಪೈಕಿ ಸುಮಾರು 250 ಎಕರೆ ಜಮೀನಿಗೆ ಸಂಬಂಧಿಸಿದಂತೆ ಹೊರಡಿಸಲಾದ ಅಧಿಸೂಚನೆಯನ್ನು ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ.<br /> <br /> 2009ರ ಮೇ 23ರಂದು ಹೊರಡಿಸಲಾಗಿದ್ದ ಅಂತಿಮ ಅಧಿಸೂಚನೆ ಇದಾಗಿದೆ. ಈ ಪೈಕಿ ಕೋರ್ಟ್ಗೆ ಅರ್ಜಿ ಸಲ್ಲಿಸಿರುವ 78 ರೈತರ ಜಮೀನುಗಳಿಗೆ ಮಾತ್ರ ಹೈಕೋರ್ಟ್ ಆದೇಶ ಅನ್ವಯ ಆಗಲಿದೆ. <br /> <br /> `ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದಾಗ ತಮ್ಮ ಜಮೀನನ್ನು ಸ್ವಾಧೀನಪಡಿಸಿಕೊಳ್ಳದಂತೆ ಅರ್ಜಿದಾರರು ಸಲ್ಲಿಸಿರುವ ಆಕ್ಷೇಪಣೆಗಳನ್ನು ಆಲಿಸದೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಇದು ನಿಯಮಬಾಹಿರ. ಆದುದರಿಂದ ಕಾನೂನುಬದ್ಧವಾಗಿ ಅರ್ಜಿದಾರರ ಅಹವಾಲು ಆಲಿಸಿ ಮುಂದಿನ ಕ್ರಮ ತೆಗೆದುಕೊಳ್ಳಿ~ ಎಂದು ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ವಿಶೇಷ ಭೂಸ್ವಾಧೀನ ಅಧಿಕಾರಿಗೆ ಆದೇಶಿಸಿದ್ದಾರೆ. ಆದುದರಿಂದ, ಹೈಕೋರ್ಟ್ ಮೊರೆ ಹೋಗಿರುವ ರೈತರ 250 ಎಕರೆ ಜಮೀನು ಹಾಗೂ ಅದರ ಸ್ವಾಧೀನದ `ಭವಿಷ್ಯ~ ಈಗ ವಿಶೇಷ ಭೂಸ್ವಾಧೀನ ಅಧಿಕಾರಿಗಳ ಕೈಯಲ್ಲಿದೆ. <br /> <br /> <strong>ಅರ್ಜಿದಾರರ ಆರೋಪವೇನು? </strong>ಸಿರಿವಾರ, ಚಾಗನೂರು ಹಾಗೂ ತಗ್ಗಿನಬೂದಿಹಾಳು ಬಳಿಯ ಜಮೀನಿನ ವಿವಾದ ಇದಾಗಿದೆ. ಭೂಸ್ವಾಧೀನ ಪ್ರಶ್ನಿಸಿ ಇವರು ಸಲ್ಲಿಸಿದ್ದ ಅರ್ಜಿಯನ್ನು ಬಳ್ಳಾರಿಯ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ 2010ರ ಏಪ್ರಿಲ್ 24ರಂದು ವಜಾಗೊಳಿಸಿತ್ತು. ಇದನ್ನು ಅವರು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.<br /> <br /> `ಬಳ್ಳಾರಿಯಲ್ಲಿ ಈಗಾಗಲೇ ಎರಡು ವಿಮಾನ ನಿಲ್ದಾಣಗಳು ಕಾರ್ಯ ನಿರ್ವಹಿಸುತ್ತಿವೆ. ಒಂದು ನಾಗರಿಕ ವಿಮಾನ ನಿಲ್ದಾಣವಿದ್ದರೆ, ಬಳ್ಳಾರಿಯಿಂದ ಸುಮಾರು 25 ಕಿ.ಮೀ. ದೂರದಲ್ಲಿ `ಜಿಂದಾಲ್ ಸ್ಟೀಲ್ಸ್~ ಒಡೆತನದ ಏರ್ಸ್ಟ್ರಿಪ್ ಇದೆ. ನಾಗರಿಕ ವಿಮಾನ ನಿಲ್ದಾಣಕ್ಕೆ ದಿನಂಪ್ರತಿ ಕನಿಷ್ಠ 30 ಪ್ರಯಾಣಿಕರೂ ಬಾರದ ಕಾರಣ ಅದನ್ನು ಮುಚ್ಚಲಾಗಿದೆ. ಪರಿಸ್ಥಿತಿ ಹೀಗಿರುವಾಗ ಇನ್ನೊಂದು ನಿಲ್ದಾಣಕ್ಕೆ ಮುಂದಾಗಿರುವುದು ಉಚಿತವಲ್ಲ. ಗಣಿ ಧಣಿಗಳ ಅನುಕೂಲಕ್ಕೆ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ~ ಎಂದು ಅವರು ದೂರಿದ್ದರು. <br /> <br /> <strong>ಕೃಷಿ ಜಮೀನು ಸ್ವಾಧೀನ</strong>: `ಬಳ್ಳಾರಿಯಿಂದ ಸುಮಾರು 30-35 ಕಿ.ಮೀ. ಅಂತರದಲ್ಲಿ ಇರುವ ಪಾಪನಾಯಕನಹಳ್ಳಿ ಬಳಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬಹಳ ಹಿಂದೆಯೇ ಜಾಗ ಗೊತ್ತು ಮಾಡಲಾಗಿದೆ. <br /> <br /> ಆದರೆ ಅದನ್ನು ಬಿಟ್ಟು ಈಗ ಕೃಷಿ ಜಮೀನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಅರೆನೀರಾವರಿ ಯೋಜನೆ ಅಡಿ ತುಂಗಭದ್ರಾ ಆಯಕಟ್ಟು ಪ್ರದೇಶಲ್ಲಿ ಇರುವ ಕೃಷಿ ಜಮೀನು ಇದಾಗಿದೆ. ಇಲ್ಲಿ ಹಲವಾರು ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಇಲ್ಲಿ ನಿಲ್ದಾಣ ನಿರ್ಮಾಣವಾದರೆ ರೈತರು ಬೀದಿ ಪಾಲಾಗಬೇಕಾಗುತ್ತದೆ~ ಎನ್ನುವುದು ಅವರ ಆರೋಪವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬಳ್ಳಾರಿಯಲ್ಲಿ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆಗಾಗಿ ಸ್ವಾಧೀನಪಡಿಸಿಕೊಂಡ 950 ಎಕರೆ ಜಮೀನಿನ ಪೈಕಿ ಸುಮಾರು 250 ಎಕರೆ ಜಮೀನಿಗೆ ಸಂಬಂಧಿಸಿದಂತೆ ಹೊರಡಿಸಲಾದ ಅಧಿಸೂಚನೆಯನ್ನು ಹೈಕೋರ್ಟ್ ಬುಧವಾರ ರದ್ದುಗೊಳಿಸಿದೆ.<br /> <br /> 2009ರ ಮೇ 23ರಂದು ಹೊರಡಿಸಲಾಗಿದ್ದ ಅಂತಿಮ ಅಧಿಸೂಚನೆ ಇದಾಗಿದೆ. ಈ ಪೈಕಿ ಕೋರ್ಟ್ಗೆ ಅರ್ಜಿ ಸಲ್ಲಿಸಿರುವ 78 ರೈತರ ಜಮೀನುಗಳಿಗೆ ಮಾತ್ರ ಹೈಕೋರ್ಟ್ ಆದೇಶ ಅನ್ವಯ ಆಗಲಿದೆ. <br /> <br /> `ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದಾಗ ತಮ್ಮ ಜಮೀನನ್ನು ಸ್ವಾಧೀನಪಡಿಸಿಕೊಳ್ಳದಂತೆ ಅರ್ಜಿದಾರರು ಸಲ್ಲಿಸಿರುವ ಆಕ್ಷೇಪಣೆಗಳನ್ನು ಆಲಿಸದೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಇದು ನಿಯಮಬಾಹಿರ. ಆದುದರಿಂದ ಕಾನೂನುಬದ್ಧವಾಗಿ ಅರ್ಜಿದಾರರ ಅಹವಾಲು ಆಲಿಸಿ ಮುಂದಿನ ಕ್ರಮ ತೆಗೆದುಕೊಳ್ಳಿ~ ಎಂದು ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ವಿಶೇಷ ಭೂಸ್ವಾಧೀನ ಅಧಿಕಾರಿಗೆ ಆದೇಶಿಸಿದ್ದಾರೆ. ಆದುದರಿಂದ, ಹೈಕೋರ್ಟ್ ಮೊರೆ ಹೋಗಿರುವ ರೈತರ 250 ಎಕರೆ ಜಮೀನು ಹಾಗೂ ಅದರ ಸ್ವಾಧೀನದ `ಭವಿಷ್ಯ~ ಈಗ ವಿಶೇಷ ಭೂಸ್ವಾಧೀನ ಅಧಿಕಾರಿಗಳ ಕೈಯಲ್ಲಿದೆ. <br /> <br /> <strong>ಅರ್ಜಿದಾರರ ಆರೋಪವೇನು? </strong>ಸಿರಿವಾರ, ಚಾಗನೂರು ಹಾಗೂ ತಗ್ಗಿನಬೂದಿಹಾಳು ಬಳಿಯ ಜಮೀನಿನ ವಿವಾದ ಇದಾಗಿದೆ. ಭೂಸ್ವಾಧೀನ ಪ್ರಶ್ನಿಸಿ ಇವರು ಸಲ್ಲಿಸಿದ್ದ ಅರ್ಜಿಯನ್ನು ಬಳ್ಳಾರಿಯ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ 2010ರ ಏಪ್ರಿಲ್ 24ರಂದು ವಜಾಗೊಳಿಸಿತ್ತು. ಇದನ್ನು ಅವರು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.<br /> <br /> `ಬಳ್ಳಾರಿಯಲ್ಲಿ ಈಗಾಗಲೇ ಎರಡು ವಿಮಾನ ನಿಲ್ದಾಣಗಳು ಕಾರ್ಯ ನಿರ್ವಹಿಸುತ್ತಿವೆ. ಒಂದು ನಾಗರಿಕ ವಿಮಾನ ನಿಲ್ದಾಣವಿದ್ದರೆ, ಬಳ್ಳಾರಿಯಿಂದ ಸುಮಾರು 25 ಕಿ.ಮೀ. ದೂರದಲ್ಲಿ `ಜಿಂದಾಲ್ ಸ್ಟೀಲ್ಸ್~ ಒಡೆತನದ ಏರ್ಸ್ಟ್ರಿಪ್ ಇದೆ. ನಾಗರಿಕ ವಿಮಾನ ನಿಲ್ದಾಣಕ್ಕೆ ದಿನಂಪ್ರತಿ ಕನಿಷ್ಠ 30 ಪ್ರಯಾಣಿಕರೂ ಬಾರದ ಕಾರಣ ಅದನ್ನು ಮುಚ್ಚಲಾಗಿದೆ. ಪರಿಸ್ಥಿತಿ ಹೀಗಿರುವಾಗ ಇನ್ನೊಂದು ನಿಲ್ದಾಣಕ್ಕೆ ಮುಂದಾಗಿರುವುದು ಉಚಿತವಲ್ಲ. ಗಣಿ ಧಣಿಗಳ ಅನುಕೂಲಕ್ಕೆ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ~ ಎಂದು ಅವರು ದೂರಿದ್ದರು. <br /> <br /> <strong>ಕೃಷಿ ಜಮೀನು ಸ್ವಾಧೀನ</strong>: `ಬಳ್ಳಾರಿಯಿಂದ ಸುಮಾರು 30-35 ಕಿ.ಮೀ. ಅಂತರದಲ್ಲಿ ಇರುವ ಪಾಪನಾಯಕನಹಳ್ಳಿ ಬಳಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಬಹಳ ಹಿಂದೆಯೇ ಜಾಗ ಗೊತ್ತು ಮಾಡಲಾಗಿದೆ. <br /> <br /> ಆದರೆ ಅದನ್ನು ಬಿಟ್ಟು ಈಗ ಕೃಷಿ ಜಮೀನು ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ. ಅರೆನೀರಾವರಿ ಯೋಜನೆ ಅಡಿ ತುಂಗಭದ್ರಾ ಆಯಕಟ್ಟು ಪ್ರದೇಶಲ್ಲಿ ಇರುವ ಕೃಷಿ ಜಮೀನು ಇದಾಗಿದೆ. ಇಲ್ಲಿ ಹಲವಾರು ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಇಲ್ಲಿ ನಿಲ್ದಾಣ ನಿರ್ಮಾಣವಾದರೆ ರೈತರು ಬೀದಿ ಪಾಲಾಗಬೇಕಾಗುತ್ತದೆ~ ಎನ್ನುವುದು ಅವರ ಆರೋಪವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>