<p>ಸಡಗರದ ನವರಾತ್ರಿ ಆಚರಣೆ ಮುಗಿದಿದೆ. ದೀಪಾವಳಿ ಸಂಭ್ರಮಕ್ಕೆ ದಿನಗಣನೆಯೂ ಆರಂಭವಾಗಿದೆ. ಎಲ್ಲಾ ಮಳಿಗೆಗಳಲ್ಲಿ ದೀಪಗಳು, ಲಕ್ಷ್ಮಿಯ ಪ್ರತಿರೂಪದ ಮೂರ್ತಿಗಳು ಗ್ರಾಹಕರ ಬರುವಿಕೆಗೆ ಕಾಯುತ್ತಿವೆ. ಇವೆಲ್ಲದಕ್ಕಿಂತ ವಿಭಿನ್ನವಾಗಿ ದೀಪಾವಳಿ ಆಚರಿಸುವ ಯೋಚನೆ ಸ್ನೋ ಸಿಟಿಯದು.<br /> <br /> ನಗರಕ್ಕೆ ಮಂಜಿನ ಮನೆಯ ಅನುಭವವನ್ನು ಪರಿಚಯಿಸಿದ ಹೆಗ್ಗಳಿಕೆ ಇರುವ ಸ್ನೋಸಿಟಿ ನವರಾತ್ರಿ-ದೀಪಾವಳಿ ಸಡಗರಕ್ಕಾಗಿ ಮಂಜಿನ ದೇವರನ್ನು ಸೃಷ್ಟಿಸಿದೆ. ಪ್ರಸ್ತುತ ದುರ್ಗಾಮಾತೆಯ ಮೂರ್ತಿ ಸ್ನೋ ಸಿಟಿಯ ಒಳಾಂಗಣದಲ್ಲಿ ಸ್ಥಾನ ಪಡೆದ್ದ್ದಿದಾಳೆ. <br /> <br /> ವಾರದೊಳಗೆ ಲಕ್ಷ್ಮೀಮಾತೆ, ಪಟಾಕಿ, ಬಣ್ಣದ ಕಡ್ಡಿಗಳು ಅದೇ ಆವರಣದಲ್ಲಿ ಜಾಗ ಪಡೆಯಲಿವೆ. ಶ್ರೇಣಿಕ್ ಜೋಶಿ ನೇತೃತ್ವದ 12 ಕಲಾವಿದರ ತಂಡ ಕಳೆದ ಹತ್ತು ದಿನಗಳಿಂದ ಇದಕ್ಕಾಗಿ ಹಗಲಿರುಳು ಶ್ರಮಿಸಿದೆ.<br /> <br /> `ಐದು ಡಿಗ್ರಿ ಸೆಲ್ಸಿಯಸ್ನಲ್ಲಿ ದಿನಪೂರ್ತಿ ಕೆಲಸ ಮಾಡುವುದು ಸುಲಭವಾಗಿರಲಿಲ್ಲ. ಸತತ ಒಂದು ಗಂಟೆ ಇದೇ ವಾತಾವರಣದಲ್ಲಿದ್ದರೆ ಕಾಲು ಮರಗಟ್ಟುತ್ತದೆ. ರಬ್ಬರ್ ಶೂ, ಕೈಗೆ ಗ್ಲೌಸ್, ಜರ್ಕಿನ್ ತೊಟ್ಟರೂ ಚಳಿಯಲ್ಲಿ ಮೈ ಕೊರೆಯುತ್ತದೆ.<br /> <br /> ಪ್ರತಿ ಗಂಟೆಗೆ ಹದಿನೈದು ನಿಮಿಷ ವಿರಾಮ ನೀಡಲೇಬೇಕು~ ಎಂದರು ಕಲಾವಿದ ಶ್ರೇಣಿಕ್ ಜೋಷಿ. ಅವರು ಸ್ನೋ ಸಿಟಿಯ ಕ್ರಿಯೇಟಿವ್ ಡೈರೆಕ್ಟರ್ ಆಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ.</p>.<p>ಹುಲಿಯ ಮೇಲೆ ಕುಳಿತ ದುರ್ಗಾಮಾತೆಯ ಹಿಮಮೂರ್ತಿ ಇದೀಗ ಸ್ನೋ ಸಿಟಿಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಎಂಟು ಅಡಿ ಎತ್ತರ, ಐದು ಅಡಿ ಅಗಲದ ಈ ಮೂರ್ತಿ ತಯಾರಿಕೆಗೆ 25 ಐಸ್ ತುಂಡುಗಳನ್ನು ಬಳಸಿಕೊಳ್ಳಲಾಗಿದೆ. ಒಟ್ಟು 500 ಕೆಜಿ ತೂಕವಿರುವ ಈ ಮೂರ್ತಿಯ ಒಂದು ಬ್ಲಾಕ್ನಲ್ಲಿ 150 ಲೀಟರ್ ನೀರಿದೆ. <br /> <br /> `ಅಮರನಾಥ ದೇವಾಲಯ ಮಾದರಿಯ ಮೂರ್ತಿಯಿದು. ಪ್ರತಿ ಬಾರಿ ಹಬ್ಬಗಳಿಗೆ ಪರಿಸರಸ್ನೇಹಿ ಮೂರ್ತಿ ತಯಾರಿಸುತ್ತಿದ್ದೆವು. ಈ ಬಾರಿ ವಿಭಿನ್ನವಾದುದನ್ನು ನೀಡಬೇಕು ಎಂಬ ಕಾರಣಕ್ಕೆ ಮಂಜಿನ ಮೂರ್ತಿ ತಯಾರಿಸಿದೆವು. <br /> <br /> ಇದು ನೀರಿನಿಂದಲೇ ತಯಾರಿಸಿದ್ದು ಹಾಗೂ ನೀರಿನಲ್ಲೇ ಕರಗಿ ಹೋಗುವಂತದ್ದು. ಬೇಕಾದ ಭಾಗಗಳನ್ನು ಬಣ್ಣದಲ್ಲೇ ತಯಾರಿಸಿದೆವು. ಇತರೆ ಕಲಾಕೃತಿಗಳಿಗೆ ಹೋಲಿಸಿದರೆ ಮಂಜಿನ ಮೂರ್ತಿ ತಯಾರಿಸುವುದು ಕಷ್ಟ. ಅದಕ್ಕೆ ಬೇಕಾದ ರೂಪ ನೀಡುವುದು ಅತಿ ಸೂಕ್ಷ್ಮದ ಕೆಲಸ. <br /> </p>.<p>ಕೆತ್ತನೆಯಲ್ಲಿ ತುಸು ಲೋಪವಾದರೂ ರೂಪ ಕಳೆದುಕೊಳ್ಳುತ್ತದೆ, ಕಡಿಮೆಯಾದರೂ ಸುಂದರವಾಗಿ ಕಾಣುವುದಿಲ್ಲ. ಇಲ್ಲಿ ಹೆಚ್ಚು ತಾಳ್ಮೆ ಬೇಕಾಗುತ್ತದೆ. ಈ ಹಿಂದೆ ಸ್ವಾತಂತ್ರ್ಯ ದಿನಾಚರಣೆಗೆ ಮಹಾತ್ಮ ಗಾಂಧಿಯ ಮೂರ್ತಿ, ಗಣಪತಿ ಹಬ್ಬಕ್ಕೆ ಗಣೇಶನ ಮೂರ್ತಿ ತಯಾರಿಸಿದ್ದೆವು~ ಎಂದು ವಿವರಿಸಿದರು.<br /> <br /> ನೀರು ಹಾಗೂ ಬಣ್ಣದ ಹೊರತಾಗಿ ಇದಕ್ಕೆ ಬೇರೆ ಖರ್ಚು ತಗುಲುವುದಿಲ್ಲ ಎನ್ನುವ ಶ್ರೇಣಿಕ್ಗೆ ಮುಂದೆಯೂ ಇಂತಹುದೇ ಹಲವು ಮೂರ್ತಿಗಳನ್ನು ತಯಾರಿಸುವ ಹಂಬಲವಿದೆಯಂತೆ. `ನನಗೆ ದುರ್ಗಾಮಾತೆಯರೆಂದರೆ ಬಲು ಇಷ್ಟ. <br /> <br /> ಎಲ್ಲಾ ದೇವರನ್ನೂ ಮಂಜಿನಲ್ಲಿ ತಯಾರಿಸುವ ಆಸೆಯಿದೆ. ಈ ಹಿಂದೆ ಮಾರ್ಬಲ್ನಿಂದ ಕಲಾಕೃತಿಗಳನ್ನು ತಯಾರಿಸುತ್ತಿದ್ದರಿಂದ ಸೂಕ್ಷ್ಮ ಕೆಲಸಗಳೇ ಇರುತ್ತಿದ್ದವು. ಈಗ ಮಂಜಿನಲ್ಲೂ ಅಷ್ಟೇ. <br /> <br /> ಎಷ್ಟು ನಿಧಾನವಾಗಿ, ಸರಳವಾಗಿ, ಸಹನೆಯಿಂದ ಕೆಲಸ ಮಾಡಬೇಕು. ಭಾರತದಲ್ಲಿ ಈ ಹಿಂದೆ ಮಂಜಿನ ಮೂರ್ತಿಗಳನ್ನು ತಯಾರಿಸಿಲ್ಲ. ಆದ್ದರಿಂದ ಹೀಗೆಯೇ ತಯಾರಿಸಬೇಕು ಎಂಬುದಕ್ಕೆ ಮಾದರಿಗಳಿರಲಿಲ್ಲ. ನಮ್ಮ ಮಟ್ಟಿಗಿದು ಹೊಸ ಪ್ರಯತ್ನ~ ಎಂಬ ಖುಷಿ ಅವರದ್ದು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಡಗರದ ನವರಾತ್ರಿ ಆಚರಣೆ ಮುಗಿದಿದೆ. ದೀಪಾವಳಿ ಸಂಭ್ರಮಕ್ಕೆ ದಿನಗಣನೆಯೂ ಆರಂಭವಾಗಿದೆ. ಎಲ್ಲಾ ಮಳಿಗೆಗಳಲ್ಲಿ ದೀಪಗಳು, ಲಕ್ಷ್ಮಿಯ ಪ್ರತಿರೂಪದ ಮೂರ್ತಿಗಳು ಗ್ರಾಹಕರ ಬರುವಿಕೆಗೆ ಕಾಯುತ್ತಿವೆ. ಇವೆಲ್ಲದಕ್ಕಿಂತ ವಿಭಿನ್ನವಾಗಿ ದೀಪಾವಳಿ ಆಚರಿಸುವ ಯೋಚನೆ ಸ್ನೋ ಸಿಟಿಯದು.<br /> <br /> ನಗರಕ್ಕೆ ಮಂಜಿನ ಮನೆಯ ಅನುಭವವನ್ನು ಪರಿಚಯಿಸಿದ ಹೆಗ್ಗಳಿಕೆ ಇರುವ ಸ್ನೋಸಿಟಿ ನವರಾತ್ರಿ-ದೀಪಾವಳಿ ಸಡಗರಕ್ಕಾಗಿ ಮಂಜಿನ ದೇವರನ್ನು ಸೃಷ್ಟಿಸಿದೆ. ಪ್ರಸ್ತುತ ದುರ್ಗಾಮಾತೆಯ ಮೂರ್ತಿ ಸ್ನೋ ಸಿಟಿಯ ಒಳಾಂಗಣದಲ್ಲಿ ಸ್ಥಾನ ಪಡೆದ್ದ್ದಿದಾಳೆ. <br /> <br /> ವಾರದೊಳಗೆ ಲಕ್ಷ್ಮೀಮಾತೆ, ಪಟಾಕಿ, ಬಣ್ಣದ ಕಡ್ಡಿಗಳು ಅದೇ ಆವರಣದಲ್ಲಿ ಜಾಗ ಪಡೆಯಲಿವೆ. ಶ್ರೇಣಿಕ್ ಜೋಶಿ ನೇತೃತ್ವದ 12 ಕಲಾವಿದರ ತಂಡ ಕಳೆದ ಹತ್ತು ದಿನಗಳಿಂದ ಇದಕ್ಕಾಗಿ ಹಗಲಿರುಳು ಶ್ರಮಿಸಿದೆ.<br /> <br /> `ಐದು ಡಿಗ್ರಿ ಸೆಲ್ಸಿಯಸ್ನಲ್ಲಿ ದಿನಪೂರ್ತಿ ಕೆಲಸ ಮಾಡುವುದು ಸುಲಭವಾಗಿರಲಿಲ್ಲ. ಸತತ ಒಂದು ಗಂಟೆ ಇದೇ ವಾತಾವರಣದಲ್ಲಿದ್ದರೆ ಕಾಲು ಮರಗಟ್ಟುತ್ತದೆ. ರಬ್ಬರ್ ಶೂ, ಕೈಗೆ ಗ್ಲೌಸ್, ಜರ್ಕಿನ್ ತೊಟ್ಟರೂ ಚಳಿಯಲ್ಲಿ ಮೈ ಕೊರೆಯುತ್ತದೆ.<br /> <br /> ಪ್ರತಿ ಗಂಟೆಗೆ ಹದಿನೈದು ನಿಮಿಷ ವಿರಾಮ ನೀಡಲೇಬೇಕು~ ಎಂದರು ಕಲಾವಿದ ಶ್ರೇಣಿಕ್ ಜೋಷಿ. ಅವರು ಸ್ನೋ ಸಿಟಿಯ ಕ್ರಿಯೇಟಿವ್ ಡೈರೆಕ್ಟರ್ ಆಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ.</p>.<p>ಹುಲಿಯ ಮೇಲೆ ಕುಳಿತ ದುರ್ಗಾಮಾತೆಯ ಹಿಮಮೂರ್ತಿ ಇದೀಗ ಸ್ನೋ ಸಿಟಿಯ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ಎಂಟು ಅಡಿ ಎತ್ತರ, ಐದು ಅಡಿ ಅಗಲದ ಈ ಮೂರ್ತಿ ತಯಾರಿಕೆಗೆ 25 ಐಸ್ ತುಂಡುಗಳನ್ನು ಬಳಸಿಕೊಳ್ಳಲಾಗಿದೆ. ಒಟ್ಟು 500 ಕೆಜಿ ತೂಕವಿರುವ ಈ ಮೂರ್ತಿಯ ಒಂದು ಬ್ಲಾಕ್ನಲ್ಲಿ 150 ಲೀಟರ್ ನೀರಿದೆ. <br /> <br /> `ಅಮರನಾಥ ದೇವಾಲಯ ಮಾದರಿಯ ಮೂರ್ತಿಯಿದು. ಪ್ರತಿ ಬಾರಿ ಹಬ್ಬಗಳಿಗೆ ಪರಿಸರಸ್ನೇಹಿ ಮೂರ್ತಿ ತಯಾರಿಸುತ್ತಿದ್ದೆವು. ಈ ಬಾರಿ ವಿಭಿನ್ನವಾದುದನ್ನು ನೀಡಬೇಕು ಎಂಬ ಕಾರಣಕ್ಕೆ ಮಂಜಿನ ಮೂರ್ತಿ ತಯಾರಿಸಿದೆವು. <br /> <br /> ಇದು ನೀರಿನಿಂದಲೇ ತಯಾರಿಸಿದ್ದು ಹಾಗೂ ನೀರಿನಲ್ಲೇ ಕರಗಿ ಹೋಗುವಂತದ್ದು. ಬೇಕಾದ ಭಾಗಗಳನ್ನು ಬಣ್ಣದಲ್ಲೇ ತಯಾರಿಸಿದೆವು. ಇತರೆ ಕಲಾಕೃತಿಗಳಿಗೆ ಹೋಲಿಸಿದರೆ ಮಂಜಿನ ಮೂರ್ತಿ ತಯಾರಿಸುವುದು ಕಷ್ಟ. ಅದಕ್ಕೆ ಬೇಕಾದ ರೂಪ ನೀಡುವುದು ಅತಿ ಸೂಕ್ಷ್ಮದ ಕೆಲಸ. <br /> </p>.<p>ಕೆತ್ತನೆಯಲ್ಲಿ ತುಸು ಲೋಪವಾದರೂ ರೂಪ ಕಳೆದುಕೊಳ್ಳುತ್ತದೆ, ಕಡಿಮೆಯಾದರೂ ಸುಂದರವಾಗಿ ಕಾಣುವುದಿಲ್ಲ. ಇಲ್ಲಿ ಹೆಚ್ಚು ತಾಳ್ಮೆ ಬೇಕಾಗುತ್ತದೆ. ಈ ಹಿಂದೆ ಸ್ವಾತಂತ್ರ್ಯ ದಿನಾಚರಣೆಗೆ ಮಹಾತ್ಮ ಗಾಂಧಿಯ ಮೂರ್ತಿ, ಗಣಪತಿ ಹಬ್ಬಕ್ಕೆ ಗಣೇಶನ ಮೂರ್ತಿ ತಯಾರಿಸಿದ್ದೆವು~ ಎಂದು ವಿವರಿಸಿದರು.<br /> <br /> ನೀರು ಹಾಗೂ ಬಣ್ಣದ ಹೊರತಾಗಿ ಇದಕ್ಕೆ ಬೇರೆ ಖರ್ಚು ತಗುಲುವುದಿಲ್ಲ ಎನ್ನುವ ಶ್ರೇಣಿಕ್ಗೆ ಮುಂದೆಯೂ ಇಂತಹುದೇ ಹಲವು ಮೂರ್ತಿಗಳನ್ನು ತಯಾರಿಸುವ ಹಂಬಲವಿದೆಯಂತೆ. `ನನಗೆ ದುರ್ಗಾಮಾತೆಯರೆಂದರೆ ಬಲು ಇಷ್ಟ. <br /> <br /> ಎಲ್ಲಾ ದೇವರನ್ನೂ ಮಂಜಿನಲ್ಲಿ ತಯಾರಿಸುವ ಆಸೆಯಿದೆ. ಈ ಹಿಂದೆ ಮಾರ್ಬಲ್ನಿಂದ ಕಲಾಕೃತಿಗಳನ್ನು ತಯಾರಿಸುತ್ತಿದ್ದರಿಂದ ಸೂಕ್ಷ್ಮ ಕೆಲಸಗಳೇ ಇರುತ್ತಿದ್ದವು. ಈಗ ಮಂಜಿನಲ್ಲೂ ಅಷ್ಟೇ. <br /> <br /> ಎಷ್ಟು ನಿಧಾನವಾಗಿ, ಸರಳವಾಗಿ, ಸಹನೆಯಿಂದ ಕೆಲಸ ಮಾಡಬೇಕು. ಭಾರತದಲ್ಲಿ ಈ ಹಿಂದೆ ಮಂಜಿನ ಮೂರ್ತಿಗಳನ್ನು ತಯಾರಿಸಿಲ್ಲ. ಆದ್ದರಿಂದ ಹೀಗೆಯೇ ತಯಾರಿಸಬೇಕು ಎಂಬುದಕ್ಕೆ ಮಾದರಿಗಳಿರಲಿಲ್ಲ. ನಮ್ಮ ಮಟ್ಟಿಗಿದು ಹೊಸ ಪ್ರಯತ್ನ~ ಎಂಬ ಖುಷಿ ಅವರದ್ದು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>