<p>ಭ್ರಷ್ಟಾಚಾರದ ಹಗರಣಗಳು, ರಾಜಕೀಯ ಗುಂಪುಗಾರಿಕೆಯಲ್ಲಿ ಮುಳುಗಿದ್ದ ಬಿಜೆಪಿ ಸರ್ಕಾರ ಏಕಾಏಕಿ ಕೊಳೆಗೇರಿಗಳ ಅಭಿವೃದ್ಧಿಯತ್ತ ಗಮನ ಹರಿಸಿದೆ.</p>.<p>ರಾಜ್ಯದ ಕೊಳೆಗೇರಿಗಳ ನಿವಾಸಿಗಳಿಗೆ ಹಕ್ಕು ಪತ್ರ ನೀಡುವುದೂ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಅನುಕೂಲವಾಗುವಂತೆ ವಸತಿ ಇಲಾಖೆ ರೂಪಿಸಿರುವ ಹೊಸ `ಕೊಳೆಗೇರಿ ನೀತಿ~ಗೆ ರಾಜ್ಯ ಸಂಪುಟ ತರಾತುರಿಯಲ್ಲಿ ಒಪ್ಪಿಗೆ ನೀಡಿದೆ.</p>.<p>ಹೊಸ ನೀತಿ ಜಾರಿಗೆ ತರಲು ಕಾನೂನಿನ ತೊಡಕುಗಳಿವೆ ಎಂಬ ನಗರಾಭಿವೃದ್ಧಿ ಇಲಾಖೆಯ ಅಭಿಪ್ರಾಯವನ್ನು ಸಂಪುಟ ಸಭೆ ಗಮನಕ್ಕೆ ತೆಗೆದುಕೊಂಡಿಲ್ಲ.</p>.<p>ರಾಜ್ಯದ 2,250ಕ್ಕೂ ಹೆಚ್ಚು ಘೋಷಿತ ಕೊಳೆಗೇರಿಗಳ ಅಭಿವೃದ್ಧಿಗೆ ಬೇಕಾದ ಹಣಕಾಸಿನ ವ್ಯವಸ್ಥೆಯನ್ನೂ ಮಾಡಿಕೊಳ್ಳದೆ ಹಕ್ಕುಪತ್ರ ನೀಡುವ ಮತ್ತು ಮೂಲಭೂತ ಸೌಲಭ್ಯ ಒದಗಿಸುವ ಮಾತುಗಳು ಕೊಳೆಗೇರಿ ಜನರ `ಮೂಗಿಗೆ ತುಪ್ಪ ಹಚ್ಚುವ~ ಪ್ರಯತ್ನದಂತೆ ಕಾಣಿಸುತ್ತವೆ.</p>.<p>ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೊಳೆಗೇರಿಗಳ ಮತದಾರರನ್ನು ಓಲೈಸಲು ಸರ್ಕಾರ ಹಕ್ಕು ಪತ್ರ ನೀಡುವ ಮಾತುಗಳನ್ನಾಡುತ್ತಿದೆ ಎಂದೇ ಈ ಬೆಳವಣಿಗೆಯನ್ನು ಅರ್ಥೈಸಬೇಕಾಗಿದೆ.</p>.<p>ಬೆಂಗಳೂರೂ ಸೇರಿದಂತೆ ರಾಜ್ಯದ ಪ್ರಮುಖ ಪಟ್ಟಣಗಳಲ್ಲಿರುವ ಕೊಳೆಗೇರಿಗಳು ಸರ್ಕಾರಿ ಇಲ್ಲವೇ ಖಾಸಗಿ ಜಮೀನುಗಳಲ್ಲಿವೆ. ಖಾಸಗಿಯವರ ಭೂಮಿ ಹಕ್ಕನ್ನು ಕೊಳೆಗೇರಿ ನಿವಾಸಿಗಳಿಗೆ ಹಸ್ತಾಂತರಿಸಲು ಕಾನೂನಿನಲ್ಲಿ ಅವಕಾಶವಿಲ್ಲ.</p>.<p>ರೈಲ್ವೆ, ಸಾರಿಗೆ ಮತ್ತಿತರ ಸರ್ಕಾರಿ ಇಲಾಖೆಗಳಿಗೆ ಸೇರಿದ ಭೂಮಿಯನ್ನು ಅತಿಕ್ರಮಿಸಿಕೊಂಡು ಮನೆಗಳನ್ನು ಕಟ್ಟಿಕೊಂಡಿರುವ ಜನರಿಗೆ ಭೂ ಹಕ್ಕನ್ನು ನೀಡುವುದು ಸುಲಭದ ಕೆಲಸ ಅಲ್ಲ. ರಾಜಕೀಯ ಲಾಭ ಪಡೆಯಲು ಹೋಗಿ ಕೊಳೆಗೇರಿಗಳ ಜನರ ಬದುಕನ್ನು ಸರ್ಕಾರ ಇನ್ನಷ್ಟು ಅತಂತ್ರದ ಸ್ಥಿತಿಗೆ ದೂಡಬಾರದು.<br /> <br /> ದೇಶದ ಉದ್ದಗಲದಲ್ಲಿ 49,000ಕ್ಕೂ ಹೆಚ್ಚು ಕೊಳೆಗೇರಿಗಳಿವೆ. ಇವುಗಳಲ್ಲಿ ಶೇ 57 ರಷ್ಟು ಕೊಳೆಗೇರಿಗಳು ಸರ್ಕಾರದ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಸೇರಿದ ಜಾಗಗಳಲ್ಲಿವೆ. <br /> <br /> ಅನೇಕ ರಾಜ್ಯಗಳಲ್ಲಿ ಕೊಳೆಗೇರಿಗಳನ್ನು ತೆರವುಗೊಳಿಸಿ ಅಲ್ಲಿನ ನಿವಾಸಿಗಳಿಗೆ ಸರ್ಕಾರವೇ ಮನೆಗಳನ್ನು ನಿರ್ಮಿಸಿಕೊಟ್ಟಿದೆ. ಕೊಳೆಗೇರಿಗಳ ನಿವಾಸಿಗಳೂ ಸೇರಿದಂತೆ ಎಲ್ಲ ಪ್ರಜೆಗಳಿಗೂ ಮೂಲಭೂತ ಸೌಕರ್ಯ ಒದಗಿಸುವುದು ಸರ್ಕಾರಗಳ ಕರ್ತವ್ಯ. <br /> <br /> ಜನಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ಕಾಲಕಾಲಕ್ಕೆ ವಸತಿಹೀನರಿಗೆ ಮನೆ ಕಟ್ಟಿಕೊಳ್ಳಲು ನಿವೇಶನ ಕೊಡುವ ವಿಷಯದಲ್ಲಿ ಸರ್ಕಾರಗಳು ವಿಫಲವಾದ್ದರಿಂದ ಕೊಳೆಗೇರಿಗಳ ಸಂಖ್ಯೆ ಹೆಚ್ಚಾಗಿದೆ.</p>.<p>ಈ ವಿಷಯದಲ್ಲಿ ಬಿಜೆಪಿ ಸರ್ಕಾರವೂ ಹೊರತಲ್ಲ. ಸರ್ಕಾರಿ ಭೂಮಿಯಲ್ಲಿರುವ ಕೊಳೆಗೇರಿಗಳ ಜನರಿಗೆ ಹಕ್ಕುಪತ್ರ ನೀಡುವ ಹೊಸ ನೀತಿ ಜಾರಿಗೆ ಬಂದರೆ ಸಾರ್ವಜನಿಕ ಬಳಕೆಗೆ ಮೀಸಲಿಟ್ಟ ಭೂಮಿಯಲ್ಲೂ ಕೊಳೆಗೇರಿಗಳು ತಲೆ ಎತ್ತುವುದಕ್ಕೆ ಅವಕಾಶ ಕೊಟ್ಟಂತೆ.ಸರ್ಕಾರ ಅದಕ್ಕೆ ಅವಕಾಶ ಕೊಡಬಾರದು.</p>.<p>ಹಕ್ಕುಪತ್ರ ನೀಡಲು ಇರುವ ಕಾನೂನು ತೊಡಕುಗಳನ್ನು ಮರೆಮಾಚಿ ಸುಳ್ಳು ಭರವಸೆ ನೀಡುವ ಬದಲು, ಕೊಳೆಗೇರಿ ಜನರಿಗೆ ವಸತಿ ಸಮುಚ್ಚಯ ನಿರ್ಮಿಸಿ ಕೊಡುವ ಅಥವಾ ನಿವೇಶನಗಳನ್ನು ನೀಡಲು ಸರ್ಕಾರ ಯೋಜನೆ ರೂಪಿಸಿ ಜಾರಿಗೆ ತರಬೇಕು. ಇದು ನಿರಂತರವಾಗಿ ಮಾಡುತ್ತಲೇ ಇರಬೇಕಾದ ಕೆಲಸ. <br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಭ್ರಷ್ಟಾಚಾರದ ಹಗರಣಗಳು, ರಾಜಕೀಯ ಗುಂಪುಗಾರಿಕೆಯಲ್ಲಿ ಮುಳುಗಿದ್ದ ಬಿಜೆಪಿ ಸರ್ಕಾರ ಏಕಾಏಕಿ ಕೊಳೆಗೇರಿಗಳ ಅಭಿವೃದ್ಧಿಯತ್ತ ಗಮನ ಹರಿಸಿದೆ.</p>.<p>ರಾಜ್ಯದ ಕೊಳೆಗೇರಿಗಳ ನಿವಾಸಿಗಳಿಗೆ ಹಕ್ಕು ಪತ್ರ ನೀಡುವುದೂ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಅನುಕೂಲವಾಗುವಂತೆ ವಸತಿ ಇಲಾಖೆ ರೂಪಿಸಿರುವ ಹೊಸ `ಕೊಳೆಗೇರಿ ನೀತಿ~ಗೆ ರಾಜ್ಯ ಸಂಪುಟ ತರಾತುರಿಯಲ್ಲಿ ಒಪ್ಪಿಗೆ ನೀಡಿದೆ.</p>.<p>ಹೊಸ ನೀತಿ ಜಾರಿಗೆ ತರಲು ಕಾನೂನಿನ ತೊಡಕುಗಳಿವೆ ಎಂಬ ನಗರಾಭಿವೃದ್ಧಿ ಇಲಾಖೆಯ ಅಭಿಪ್ರಾಯವನ್ನು ಸಂಪುಟ ಸಭೆ ಗಮನಕ್ಕೆ ತೆಗೆದುಕೊಂಡಿಲ್ಲ.</p>.<p>ರಾಜ್ಯದ 2,250ಕ್ಕೂ ಹೆಚ್ಚು ಘೋಷಿತ ಕೊಳೆಗೇರಿಗಳ ಅಭಿವೃದ್ಧಿಗೆ ಬೇಕಾದ ಹಣಕಾಸಿನ ವ್ಯವಸ್ಥೆಯನ್ನೂ ಮಾಡಿಕೊಳ್ಳದೆ ಹಕ್ಕುಪತ್ರ ನೀಡುವ ಮತ್ತು ಮೂಲಭೂತ ಸೌಲಭ್ಯ ಒದಗಿಸುವ ಮಾತುಗಳು ಕೊಳೆಗೇರಿ ಜನರ `ಮೂಗಿಗೆ ತುಪ್ಪ ಹಚ್ಚುವ~ ಪ್ರಯತ್ನದಂತೆ ಕಾಣಿಸುತ್ತವೆ.</p>.<p>ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೊಳೆಗೇರಿಗಳ ಮತದಾರರನ್ನು ಓಲೈಸಲು ಸರ್ಕಾರ ಹಕ್ಕು ಪತ್ರ ನೀಡುವ ಮಾತುಗಳನ್ನಾಡುತ್ತಿದೆ ಎಂದೇ ಈ ಬೆಳವಣಿಗೆಯನ್ನು ಅರ್ಥೈಸಬೇಕಾಗಿದೆ.</p>.<p>ಬೆಂಗಳೂರೂ ಸೇರಿದಂತೆ ರಾಜ್ಯದ ಪ್ರಮುಖ ಪಟ್ಟಣಗಳಲ್ಲಿರುವ ಕೊಳೆಗೇರಿಗಳು ಸರ್ಕಾರಿ ಇಲ್ಲವೇ ಖಾಸಗಿ ಜಮೀನುಗಳಲ್ಲಿವೆ. ಖಾಸಗಿಯವರ ಭೂಮಿ ಹಕ್ಕನ್ನು ಕೊಳೆಗೇರಿ ನಿವಾಸಿಗಳಿಗೆ ಹಸ್ತಾಂತರಿಸಲು ಕಾನೂನಿನಲ್ಲಿ ಅವಕಾಶವಿಲ್ಲ.</p>.<p>ರೈಲ್ವೆ, ಸಾರಿಗೆ ಮತ್ತಿತರ ಸರ್ಕಾರಿ ಇಲಾಖೆಗಳಿಗೆ ಸೇರಿದ ಭೂಮಿಯನ್ನು ಅತಿಕ್ರಮಿಸಿಕೊಂಡು ಮನೆಗಳನ್ನು ಕಟ್ಟಿಕೊಂಡಿರುವ ಜನರಿಗೆ ಭೂ ಹಕ್ಕನ್ನು ನೀಡುವುದು ಸುಲಭದ ಕೆಲಸ ಅಲ್ಲ. ರಾಜಕೀಯ ಲಾಭ ಪಡೆಯಲು ಹೋಗಿ ಕೊಳೆಗೇರಿಗಳ ಜನರ ಬದುಕನ್ನು ಸರ್ಕಾರ ಇನ್ನಷ್ಟು ಅತಂತ್ರದ ಸ್ಥಿತಿಗೆ ದೂಡಬಾರದು.<br /> <br /> ದೇಶದ ಉದ್ದಗಲದಲ್ಲಿ 49,000ಕ್ಕೂ ಹೆಚ್ಚು ಕೊಳೆಗೇರಿಗಳಿವೆ. ಇವುಗಳಲ್ಲಿ ಶೇ 57 ರಷ್ಟು ಕೊಳೆಗೇರಿಗಳು ಸರ್ಕಾರದ ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಸೇರಿದ ಜಾಗಗಳಲ್ಲಿವೆ. <br /> <br /> ಅನೇಕ ರಾಜ್ಯಗಳಲ್ಲಿ ಕೊಳೆಗೇರಿಗಳನ್ನು ತೆರವುಗೊಳಿಸಿ ಅಲ್ಲಿನ ನಿವಾಸಿಗಳಿಗೆ ಸರ್ಕಾರವೇ ಮನೆಗಳನ್ನು ನಿರ್ಮಿಸಿಕೊಟ್ಟಿದೆ. ಕೊಳೆಗೇರಿಗಳ ನಿವಾಸಿಗಳೂ ಸೇರಿದಂತೆ ಎಲ್ಲ ಪ್ರಜೆಗಳಿಗೂ ಮೂಲಭೂತ ಸೌಕರ್ಯ ಒದಗಿಸುವುದು ಸರ್ಕಾರಗಳ ಕರ್ತವ್ಯ. <br /> <br /> ಜನಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ಕಾಲಕಾಲಕ್ಕೆ ವಸತಿಹೀನರಿಗೆ ಮನೆ ಕಟ್ಟಿಕೊಳ್ಳಲು ನಿವೇಶನ ಕೊಡುವ ವಿಷಯದಲ್ಲಿ ಸರ್ಕಾರಗಳು ವಿಫಲವಾದ್ದರಿಂದ ಕೊಳೆಗೇರಿಗಳ ಸಂಖ್ಯೆ ಹೆಚ್ಚಾಗಿದೆ.</p>.<p>ಈ ವಿಷಯದಲ್ಲಿ ಬಿಜೆಪಿ ಸರ್ಕಾರವೂ ಹೊರತಲ್ಲ. ಸರ್ಕಾರಿ ಭೂಮಿಯಲ್ಲಿರುವ ಕೊಳೆಗೇರಿಗಳ ಜನರಿಗೆ ಹಕ್ಕುಪತ್ರ ನೀಡುವ ಹೊಸ ನೀತಿ ಜಾರಿಗೆ ಬಂದರೆ ಸಾರ್ವಜನಿಕ ಬಳಕೆಗೆ ಮೀಸಲಿಟ್ಟ ಭೂಮಿಯಲ್ಲೂ ಕೊಳೆಗೇರಿಗಳು ತಲೆ ಎತ್ತುವುದಕ್ಕೆ ಅವಕಾಶ ಕೊಟ್ಟಂತೆ.ಸರ್ಕಾರ ಅದಕ್ಕೆ ಅವಕಾಶ ಕೊಡಬಾರದು.</p>.<p>ಹಕ್ಕುಪತ್ರ ನೀಡಲು ಇರುವ ಕಾನೂನು ತೊಡಕುಗಳನ್ನು ಮರೆಮಾಚಿ ಸುಳ್ಳು ಭರವಸೆ ನೀಡುವ ಬದಲು, ಕೊಳೆಗೇರಿ ಜನರಿಗೆ ವಸತಿ ಸಮುಚ್ಚಯ ನಿರ್ಮಿಸಿ ಕೊಡುವ ಅಥವಾ ನಿವೇಶನಗಳನ್ನು ನೀಡಲು ಸರ್ಕಾರ ಯೋಜನೆ ರೂಪಿಸಿ ಜಾರಿಗೆ ತರಬೇಕು. ಇದು ನಿರಂತರವಾಗಿ ಮಾಡುತ್ತಲೇ ಇರಬೇಕಾದ ಕೆಲಸ. <br /> <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>