<p>ನಾಲ್ಕು ತಿಂಗಳಿಂದ ತೆರವಾಗಿರುವ ಲೋಕಾಯುಕ್ತರ ನೇಮಕ ಇನ್ನೂ ನೆನೆಗುದಿಯಲ್ಲಿದೆ. ನ್ಯಾ. ಸಂತೋಷ ಹೆಗ್ಡೆ ಅವರ ನಿವೃತ್ತಿಯ ಬಳಿಕ ನೇಮಕಗೊಂಡಿದ್ದ ನ್ಯಾ. ಶಿವರಾಜ ಪಾಟೀಲರು ನಿವೇಶನ ಹಗರಣದಲ್ಲಿ ಸಿಲುಕಿ ರಾಜೀನಾಮೆ ನೀಡಿದ ನಂತರ ಲೋಕಾಯುಕ್ತರ ನೇಮಕ ಸಾಧ್ಯವಾಗಿಲ್ಲ.<br /> <br /> ಕರ್ನಾಟಕ ವಿಧಾನಮಂಡಲ ಅಂಗೀಕರಿಸಿದ 1984ರ ಲೋಕಾಯುಕ್ತ ಕಾಯ್ದೆಯಲ್ಲಿ ತೆರವಾದ ಲೋಕಾಯುಕ್ತ ಹುದ್ದೆಯನ್ನು ಎಷ್ಟು ಅವಧಿಯಲ್ಲಿ ಭರ್ತಿ ಮಾಡಬೇಕು ಎಂಬುದು ಸ್ಪಷ್ಟವಾಗಿಲ್ಲದ ಕಾರಣ ಇದು ಸರ್ಕಾರ ಮತ್ತು ರಾಜ್ಯಪಾಲರ ಮರ್ಜಿಯನ್ನು ಆಧರಿಸಿಯೇ ತುಂಬ ಬೇಕಾದ ಹುದ್ದೆಯಂತಾಗಿದೆ. <br /> <br /> ಭ್ರಷ್ಟಾಚಾರ ಹಗರಣಗಳ ಕಳಂಕದ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆ ಆಗಿರುವ ರಾಜ್ಯದ ಬಿಜೆಪಿ ಸರ್ಕಾರ, ಪಕ್ಷದಲ್ಲಿನ ಪ್ರಭಾವಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾದ ಆಡಳಿತಾತ್ಮಕ ಹೊಣೆ ನಿರ್ವಹಿಸಬೇಕಾಗಿದೆ. <br /> <br /> ಇಂಥ ನಾಜೂಕಿನ ಸ್ಥಿತಿಯಲ್ಲಿ ಬಿಜೆಪಿ ಸರ್ಕಾರಕ್ಕೆ ಲೋಕಾಯುಕ್ತರ ನೇಮಕ ವಿಳಂಬವಾಗುವುದೇ ಬೇಕಾಗಿದೆ. ಇದಕ್ಕೆ ಒತ್ತಾಸೆ ನೀಡುವಂತೆ ರಾಜ್ಯಪಾಲರೂ ಬಿಗಿ ನಿಲುವನ್ನು ಪ್ರಕಟಿಸುತ್ತಿರುವುದರಿಂದ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ರೂಪುಗೊಂಡಿದ್ದ ಲೋಕಾಯುಕ್ತ ಹಲ್ಲಿಲ್ಲದ ಹಾವಿನಂತೆ ನಿಷ್ಕ್ರಿಯ ಸ್ಥಿತಿಗೆ ಇಳಿದಿದೆ.<br /> <br /> ಭ್ರಷ್ಟಾಚಾರ ನಿಯಂತ್ರಣಕ್ಕೆ ತಾನೇ ರೂಪಿಸಿದ್ದ ತನಿಖಾ ಸಂಸ್ಥೆಯನ್ನು ದುರ್ಬಲಗೊಳಿಸುವ ಮೂಲಕ ರಾಜ್ಯ ಸರ್ಕಾರ ತನ್ನ ಹೊಣೆಗೇಡಿತನವನ್ನು ನಿರ್ಲಜ್ಜೆಯಿಂದ ಸಮರ್ಥಿಸಿಕೊಳ್ಳುವ ದಿವಾಳಿತನಕ್ಕೆ ಇಳಿದಂತಾಗಿದೆ.<br /> <br /> ಲೋಕಾಯುಕ್ತ ಹುದ್ದೆಗೆ ಒಬ್ಬರ ಹೆಸರಿಗೆ ಪಟ್ಟು ಹಿಡಿದ ರಾಜ್ಯ ಸರ್ಕಾರ, ಸರ್ಕಾರ ಸೂಚಿಸಿದ ವ್ಯಕ್ತಿಯನ್ನು ನೇಮಕ ಮಾಡಲಾಗದು ಎಂದು ಹಠ ಹಿಡಿದ ರಾಜ್ಯಪಾಲರ ನಿಲುವುಗಳಿಂದ ಈ ನೇಮಕವೇ ಅನಿಶ್ಚಿತವಾಗಿದೆ. <br /> <br /> ನ್ಯಾ. ಸಂತೋಷ ಹೆಗ್ಡೆ ಅವರು, ರಾಜ್ಯದಲ್ಲಿ ನಡೆದ ಅಕ್ರಮ ಗಣಿಗಾರಿಕೆ ಕುರಿತು ಸಲ್ಲಿಸಿದ ತನಿಖಾ ವರದಿಯನ್ನು ಆಧರಿಸಿ ಮೂರು ತಿಂಗಳಲ್ಲಿ ಕ್ರಮ ಆರಂಭಿಸಬೇಕಿದ್ದ ರಾಜ್ಯ ಸರ್ಕಾರಕ್ಕೆ ಲೋಕಾಯುಕ್ತ ಹುದ್ದೆ ಇಲ್ಲದಿರುವುದು ತಾಂತ್ರಿಕವಾಗಿ ಅನುಕೂಲಸ್ಥಿತಿ ಕಲ್ಪಿಸಿದೆ.<br /> <br /> ಲೋಕಾಯುಕ್ತ ಕಾಯ್ದೆಯ ಆರಂಭದಲ್ಲಿಯೇ `ಸಾರ್ವಜನಿಕ ಸೇವಕರಾದ ಮುಖ್ಯಮಂತ್ರಿ, ಸಚಿವರನ್ನು ಒಳಗೊಂಡಂತೆ..~ ಎಂಬ ಉಲ್ಲೇಖವಿದ್ದರೂ ರಾಜ್ಯ ಸರ್ಕಾರ, `ಮುಖ್ಯಮಂತ್ರಿ ಮತ್ತು ಸಚಿವರು ಸಾರ್ವಜನಿಕ ಸೇವಕರೇ~ ಎಂಬುದನ್ನು ಸ್ಪಷ್ಟಪಡಿಸುವಂತೆ ಲೋಕಾಯುಕ್ತರನ್ನು ಕೋರಿದೆ. ಇದು ಲೋಕಾಯುಕ್ತ ವರದಿಯ ಅನುಪಾಲನೆಗೆ ಕುಂಟು ನೆಪಗಳನ್ನು ಕಂಡುಕೊಂಡ ತಂತ್ರ.<br /> <br /> ಲೋಕಾಯುಕ್ತರಿಲ್ಲದೆ ಸರ್ಕಾರ ಕೋರಿದ ಸ್ಪಷ್ಟನೆಗೆ ಉತ್ತರ ಬರುತ್ತಿಲ್ಲ. ಯಾವ ವರದಿಯನ್ನು ಆಧರಿಸಿ ರಾಜ್ಯದ ಬಿಜೆಪಿ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಆಯಿತೋ, ಆ ಲೋಕಾಯುಕ್ತ ವರದಿಯನ್ನೇ ತಿರಸ್ಕರಿಸುವಂಥ ಸನ್ನಿವೇಶ ನಿರ್ಮಾಣ ಸರ್ಕಾರದ ಹುನ್ನಾರ ಇರುವಂತಿದೆ.<br /> <br /> ರಾಜ್ಯದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಲೋಕಾಯುಕ್ತ ಪ್ರಬಲವಾಗಿರಲು ಅದಕ್ಕೆ ಸಾಂವಿಧಾನಿಕ ಸ್ಥಾನ ಸಿಗುವಂತೆ ಕಾಯ್ದೆ ತಿದ್ದುಪಡಿ ಅಗತ್ಯ. ಅಕ್ರಮ ಗಣಿಗಾರಿಕೆಯ ಹಗರಣಗಳು ಸುತ್ತಿಕೊಂಡಿರುವುದರಿಂದ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ಗಳಿಗೂ ಪ್ರಬಲ ಲೋಕಾಯುಕ್ತ ವ್ಯವಸ್ಥೆ ಅಂತರಂಗದಲ್ಲಿ ಬೇಕಾಗಿಲ್ಲ. <br /> <br /> ಆದರೆ ಪ್ರಾಮಾಣಿಕ ಮತ್ತು ದಕ್ಷ ಆಡಳಿತ ವ್ಯವಸ್ಥೆಯನ್ನು ಬಯಸುವವರೆಲ್ಲರೂ ಲೋಕಾಯುಕ್ತರ ಶೀಘ್ರ ನೇಮಕದ ಪರವಾಗಿದ್ದಾರೆ. ಜನಮತಕ್ಕೆ ಮನ್ನಣೆ ನೀಡಿ ಬೇಗನೆ ಲೋಕಾಯುಕ್ತರ ನೇಮಕ ಆಗಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಾಲ್ಕು ತಿಂಗಳಿಂದ ತೆರವಾಗಿರುವ ಲೋಕಾಯುಕ್ತರ ನೇಮಕ ಇನ್ನೂ ನೆನೆಗುದಿಯಲ್ಲಿದೆ. ನ್ಯಾ. ಸಂತೋಷ ಹೆಗ್ಡೆ ಅವರ ನಿವೃತ್ತಿಯ ಬಳಿಕ ನೇಮಕಗೊಂಡಿದ್ದ ನ್ಯಾ. ಶಿವರಾಜ ಪಾಟೀಲರು ನಿವೇಶನ ಹಗರಣದಲ್ಲಿ ಸಿಲುಕಿ ರಾಜೀನಾಮೆ ನೀಡಿದ ನಂತರ ಲೋಕಾಯುಕ್ತರ ನೇಮಕ ಸಾಧ್ಯವಾಗಿಲ್ಲ.<br /> <br /> ಕರ್ನಾಟಕ ವಿಧಾನಮಂಡಲ ಅಂಗೀಕರಿಸಿದ 1984ರ ಲೋಕಾಯುಕ್ತ ಕಾಯ್ದೆಯಲ್ಲಿ ತೆರವಾದ ಲೋಕಾಯುಕ್ತ ಹುದ್ದೆಯನ್ನು ಎಷ್ಟು ಅವಧಿಯಲ್ಲಿ ಭರ್ತಿ ಮಾಡಬೇಕು ಎಂಬುದು ಸ್ಪಷ್ಟವಾಗಿಲ್ಲದ ಕಾರಣ ಇದು ಸರ್ಕಾರ ಮತ್ತು ರಾಜ್ಯಪಾಲರ ಮರ್ಜಿಯನ್ನು ಆಧರಿಸಿಯೇ ತುಂಬ ಬೇಕಾದ ಹುದ್ದೆಯಂತಾಗಿದೆ. <br /> <br /> ಭ್ರಷ್ಟಾಚಾರ ಹಗರಣಗಳ ಕಳಂಕದ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆ ಆಗಿರುವ ರಾಜ್ಯದ ಬಿಜೆಪಿ ಸರ್ಕಾರ, ಪಕ್ಷದಲ್ಲಿನ ಪ್ರಭಾವಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾದ ಆಡಳಿತಾತ್ಮಕ ಹೊಣೆ ನಿರ್ವಹಿಸಬೇಕಾಗಿದೆ. <br /> <br /> ಇಂಥ ನಾಜೂಕಿನ ಸ್ಥಿತಿಯಲ್ಲಿ ಬಿಜೆಪಿ ಸರ್ಕಾರಕ್ಕೆ ಲೋಕಾಯುಕ್ತರ ನೇಮಕ ವಿಳಂಬವಾಗುವುದೇ ಬೇಕಾಗಿದೆ. ಇದಕ್ಕೆ ಒತ್ತಾಸೆ ನೀಡುವಂತೆ ರಾಜ್ಯಪಾಲರೂ ಬಿಗಿ ನಿಲುವನ್ನು ಪ್ರಕಟಿಸುತ್ತಿರುವುದರಿಂದ ಭ್ರಷ್ಟಾಚಾರ ಪ್ರಕರಣಗಳ ತನಿಖೆಗೆ ರೂಪುಗೊಂಡಿದ್ದ ಲೋಕಾಯುಕ್ತ ಹಲ್ಲಿಲ್ಲದ ಹಾವಿನಂತೆ ನಿಷ್ಕ್ರಿಯ ಸ್ಥಿತಿಗೆ ಇಳಿದಿದೆ.<br /> <br /> ಭ್ರಷ್ಟಾಚಾರ ನಿಯಂತ್ರಣಕ್ಕೆ ತಾನೇ ರೂಪಿಸಿದ್ದ ತನಿಖಾ ಸಂಸ್ಥೆಯನ್ನು ದುರ್ಬಲಗೊಳಿಸುವ ಮೂಲಕ ರಾಜ್ಯ ಸರ್ಕಾರ ತನ್ನ ಹೊಣೆಗೇಡಿತನವನ್ನು ನಿರ್ಲಜ್ಜೆಯಿಂದ ಸಮರ್ಥಿಸಿಕೊಳ್ಳುವ ದಿವಾಳಿತನಕ್ಕೆ ಇಳಿದಂತಾಗಿದೆ.<br /> <br /> ಲೋಕಾಯುಕ್ತ ಹುದ್ದೆಗೆ ಒಬ್ಬರ ಹೆಸರಿಗೆ ಪಟ್ಟು ಹಿಡಿದ ರಾಜ್ಯ ಸರ್ಕಾರ, ಸರ್ಕಾರ ಸೂಚಿಸಿದ ವ್ಯಕ್ತಿಯನ್ನು ನೇಮಕ ಮಾಡಲಾಗದು ಎಂದು ಹಠ ಹಿಡಿದ ರಾಜ್ಯಪಾಲರ ನಿಲುವುಗಳಿಂದ ಈ ನೇಮಕವೇ ಅನಿಶ್ಚಿತವಾಗಿದೆ. <br /> <br /> ನ್ಯಾ. ಸಂತೋಷ ಹೆಗ್ಡೆ ಅವರು, ರಾಜ್ಯದಲ್ಲಿ ನಡೆದ ಅಕ್ರಮ ಗಣಿಗಾರಿಕೆ ಕುರಿತು ಸಲ್ಲಿಸಿದ ತನಿಖಾ ವರದಿಯನ್ನು ಆಧರಿಸಿ ಮೂರು ತಿಂಗಳಲ್ಲಿ ಕ್ರಮ ಆರಂಭಿಸಬೇಕಿದ್ದ ರಾಜ್ಯ ಸರ್ಕಾರಕ್ಕೆ ಲೋಕಾಯುಕ್ತ ಹುದ್ದೆ ಇಲ್ಲದಿರುವುದು ತಾಂತ್ರಿಕವಾಗಿ ಅನುಕೂಲಸ್ಥಿತಿ ಕಲ್ಪಿಸಿದೆ.<br /> <br /> ಲೋಕಾಯುಕ್ತ ಕಾಯ್ದೆಯ ಆರಂಭದಲ್ಲಿಯೇ `ಸಾರ್ವಜನಿಕ ಸೇವಕರಾದ ಮುಖ್ಯಮಂತ್ರಿ, ಸಚಿವರನ್ನು ಒಳಗೊಂಡಂತೆ..~ ಎಂಬ ಉಲ್ಲೇಖವಿದ್ದರೂ ರಾಜ್ಯ ಸರ್ಕಾರ, `ಮುಖ್ಯಮಂತ್ರಿ ಮತ್ತು ಸಚಿವರು ಸಾರ್ವಜನಿಕ ಸೇವಕರೇ~ ಎಂಬುದನ್ನು ಸ್ಪಷ್ಟಪಡಿಸುವಂತೆ ಲೋಕಾಯುಕ್ತರನ್ನು ಕೋರಿದೆ. ಇದು ಲೋಕಾಯುಕ್ತ ವರದಿಯ ಅನುಪಾಲನೆಗೆ ಕುಂಟು ನೆಪಗಳನ್ನು ಕಂಡುಕೊಂಡ ತಂತ್ರ.<br /> <br /> ಲೋಕಾಯುಕ್ತರಿಲ್ಲದೆ ಸರ್ಕಾರ ಕೋರಿದ ಸ್ಪಷ್ಟನೆಗೆ ಉತ್ತರ ಬರುತ್ತಿಲ್ಲ. ಯಾವ ವರದಿಯನ್ನು ಆಧರಿಸಿ ರಾಜ್ಯದ ಬಿಜೆಪಿ ಸರ್ಕಾರದಲ್ಲಿ ನಾಯಕತ್ವ ಬದಲಾವಣೆ ಆಯಿತೋ, ಆ ಲೋಕಾಯುಕ್ತ ವರದಿಯನ್ನೇ ತಿರಸ್ಕರಿಸುವಂಥ ಸನ್ನಿವೇಶ ನಿರ್ಮಾಣ ಸರ್ಕಾರದ ಹುನ್ನಾರ ಇರುವಂತಿದೆ.<br /> <br /> ರಾಜ್ಯದಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಲೋಕಾಯುಕ್ತ ಪ್ರಬಲವಾಗಿರಲು ಅದಕ್ಕೆ ಸಾಂವಿಧಾನಿಕ ಸ್ಥಾನ ಸಿಗುವಂತೆ ಕಾಯ್ದೆ ತಿದ್ದುಪಡಿ ಅಗತ್ಯ. ಅಕ್ರಮ ಗಣಿಗಾರಿಕೆಯ ಹಗರಣಗಳು ಸುತ್ತಿಕೊಂಡಿರುವುದರಿಂದ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ಗಳಿಗೂ ಪ್ರಬಲ ಲೋಕಾಯುಕ್ತ ವ್ಯವಸ್ಥೆ ಅಂತರಂಗದಲ್ಲಿ ಬೇಕಾಗಿಲ್ಲ. <br /> <br /> ಆದರೆ ಪ್ರಾಮಾಣಿಕ ಮತ್ತು ದಕ್ಷ ಆಡಳಿತ ವ್ಯವಸ್ಥೆಯನ್ನು ಬಯಸುವವರೆಲ್ಲರೂ ಲೋಕಾಯುಕ್ತರ ಶೀಘ್ರ ನೇಮಕದ ಪರವಾಗಿದ್ದಾರೆ. ಜನಮತಕ್ಕೆ ಮನ್ನಣೆ ನೀಡಿ ಬೇಗನೆ ಲೋಕಾಯುಕ್ತರ ನೇಮಕ ಆಗಲಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>