<p><strong>ವಿಶ್ವಸಂಸ್ಥೆ (ಪಿಟಿಐ):</strong> ಮಧ್ಯಪ್ರಾಚ್ಯದಲ್ಲಿ ಹಿಂಸಾಚಾರ ಹೆಚ್ಚುತ್ತಿರುವ ಬಗ್ಗೆಕಳವಳ ವ್ಯಕ್ತಪಡಿಸಿರುವ ಭಾರತವು, ಇಸ್ರೇಲ್-ಪ್ಯಾಲೆಸ್ಟೈನ್ ಬಿಕ್ಕಟ್ಟಿಗೆ ತ್ವರಿತ ಪರಿಹಾರ ಹುಡುಕಬೇಕೆಂದು ಕರೆ ನೀಡಿದೆ.</p>.<p>ಮಧ್ಯಪ್ರಾಚ್ಯ ಪರಿಸ್ಥಿತಿ ಕುರಿತು ಸೋಮವಾರ ಬ್ರಿಟನ್ನ ಅಧ್ಯಕ್ಷತೆಯಲ್ಲಿ ನಡೆದ ಭದ್ರತಾ ಮಂಡಳಿಯ ಉನ್ನತ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆ ಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಹರದೀಪ್ಸಿಂಗ್ ಪುರಿ, `ಪ್ಯಾಲಸ್ಟೈ ನಿಯರು ತಮ್ಮನ್ನು ಜಾಗತಿಕ ಸಮು ದಾಯ ನಿರ್ಲಕ್ಷಿಸಿದಂತೆ ಭಾವಿಸು ವಂತಾಗಬಾರದು~ ಎಂದರು.</p>.<p>`ಇಸ್ರೇಲ್-ಪ್ಯಾಲೆಸ್ಟೈನ್ ಸಮಸ್ಯೆ ಸೇರಿದಂತೆ ಅರಬ್-ಇಸ್ರೇಲಿ ಬಿಕ್ಕಟ್ಟಿನ ಬಗ್ಗೆ ಯಾವುದೇ ಪರಿಹಾರ ನಿರ್ಣಯ ಕೈಗೊಳ್ಳದೆ, ಬಿಕ್ಕಟ್ಟಿನಲ್ಲಿರುವ ಪಶ್ಚಿಮ ಏಷ್ಯಾ ಮತ್ತು ಉತ್ತರ ಆಫ್ರಿಕಾ ಬೆಳವಣಿಗೆಗಳಿಗೆ ಸೂಕ್ತವಾಗಿ ಸ್ಪಂದಿಸಲಾಗದು~ ಎಂದು ಅವರು ತಿಳಿಸಿದರು. `ಬಹುಕಾಲದಿಂದ ನೆನೆಗುದಿಯಲ್ಲಿರುವ ಈ ಬಿಕ್ಕಟ್ಟುಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಅಂತರರಾಷ್ಟ್ರೀಯ ಸಮುದಾಯ ಯೋಗ್ಯ ರೀತಿಯಲ್ಲಿ ಪ್ರಯತ್ನಿಸುವ ಅವಶ್ಯಕತೆ ಇದೆ~ ಎಂದ ಅವರು, `ಪ್ರಜಾಸತ್ತಾತ್ಮಕ ಮತ್ತು ರಾಜಕೀಯ ಸುಧಾರಣಾ ಕ್ರಮಗಳಿಂದ ಮಾತ್ರ ಸೂಕ್ತ ಪರಿಹಾರ ಸಾಧ್ಯ~ ಎಂದು ನುಡಿದರು.</p>.<p>ಪ್ರತಿಯೊಂದು ಅರಬ್ ರಾಷ್ಟ್ರಗಳು ತಮ್ಮ ನೆಲದಲ್ಲಿ ಶಾಂತಿಯಿಂದ ಬದುಕಲು ಮತ್ತು ಸಹಕಾರ ಸಂಬಂಧಗಳನ್ನು ನಿರ್ಮಿಸಿಕೊಳ್ಳಲು ಅನುವು ಮಾಡಿಕೊಡಬೇಕು ಎಂದರು.</p>.<p>ಮತ್ತು ಈ ನಿಟ್ಟಿನಲ್ಲಿ ತ್ವರಿತಗತಿಯ ಮಹತ್ವಪೂರ್ಣ ಪುನರ್ವಸತಿ ಕ್ರಮಗಳನ್ನು ಕೈಗೊಳ್ಳ ~ ಎಂದು ಅವರು ಸೂಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಶ್ವಸಂಸ್ಥೆ (ಪಿಟಿಐ):</strong> ಮಧ್ಯಪ್ರಾಚ್ಯದಲ್ಲಿ ಹಿಂಸಾಚಾರ ಹೆಚ್ಚುತ್ತಿರುವ ಬಗ್ಗೆಕಳವಳ ವ್ಯಕ್ತಪಡಿಸಿರುವ ಭಾರತವು, ಇಸ್ರೇಲ್-ಪ್ಯಾಲೆಸ್ಟೈನ್ ಬಿಕ್ಕಟ್ಟಿಗೆ ತ್ವರಿತ ಪರಿಹಾರ ಹುಡುಕಬೇಕೆಂದು ಕರೆ ನೀಡಿದೆ.</p>.<p>ಮಧ್ಯಪ್ರಾಚ್ಯ ಪರಿಸ್ಥಿತಿ ಕುರಿತು ಸೋಮವಾರ ಬ್ರಿಟನ್ನ ಅಧ್ಯಕ್ಷತೆಯಲ್ಲಿ ನಡೆದ ಭದ್ರತಾ ಮಂಡಳಿಯ ಉನ್ನತ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆ ಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಹರದೀಪ್ಸಿಂಗ್ ಪುರಿ, `ಪ್ಯಾಲಸ್ಟೈ ನಿಯರು ತಮ್ಮನ್ನು ಜಾಗತಿಕ ಸಮು ದಾಯ ನಿರ್ಲಕ್ಷಿಸಿದಂತೆ ಭಾವಿಸು ವಂತಾಗಬಾರದು~ ಎಂದರು.</p>.<p>`ಇಸ್ರೇಲ್-ಪ್ಯಾಲೆಸ್ಟೈನ್ ಸಮಸ್ಯೆ ಸೇರಿದಂತೆ ಅರಬ್-ಇಸ್ರೇಲಿ ಬಿಕ್ಕಟ್ಟಿನ ಬಗ್ಗೆ ಯಾವುದೇ ಪರಿಹಾರ ನಿರ್ಣಯ ಕೈಗೊಳ್ಳದೆ, ಬಿಕ್ಕಟ್ಟಿನಲ್ಲಿರುವ ಪಶ್ಚಿಮ ಏಷ್ಯಾ ಮತ್ತು ಉತ್ತರ ಆಫ್ರಿಕಾ ಬೆಳವಣಿಗೆಗಳಿಗೆ ಸೂಕ್ತವಾಗಿ ಸ್ಪಂದಿಸಲಾಗದು~ ಎಂದು ಅವರು ತಿಳಿಸಿದರು. `ಬಹುಕಾಲದಿಂದ ನೆನೆಗುದಿಯಲ್ಲಿರುವ ಈ ಬಿಕ್ಕಟ್ಟುಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಅಂತರರಾಷ್ಟ್ರೀಯ ಸಮುದಾಯ ಯೋಗ್ಯ ರೀತಿಯಲ್ಲಿ ಪ್ರಯತ್ನಿಸುವ ಅವಶ್ಯಕತೆ ಇದೆ~ ಎಂದ ಅವರು, `ಪ್ರಜಾಸತ್ತಾತ್ಮಕ ಮತ್ತು ರಾಜಕೀಯ ಸುಧಾರಣಾ ಕ್ರಮಗಳಿಂದ ಮಾತ್ರ ಸೂಕ್ತ ಪರಿಹಾರ ಸಾಧ್ಯ~ ಎಂದು ನುಡಿದರು.</p>.<p>ಪ್ರತಿಯೊಂದು ಅರಬ್ ರಾಷ್ಟ್ರಗಳು ತಮ್ಮ ನೆಲದಲ್ಲಿ ಶಾಂತಿಯಿಂದ ಬದುಕಲು ಮತ್ತು ಸಹಕಾರ ಸಂಬಂಧಗಳನ್ನು ನಿರ್ಮಿಸಿಕೊಳ್ಳಲು ಅನುವು ಮಾಡಿಕೊಡಬೇಕು ಎಂದರು.</p>.<p>ಮತ್ತು ಈ ನಿಟ್ಟಿನಲ್ಲಿ ತ್ವರಿತಗತಿಯ ಮಹತ್ವಪೂರ್ಣ ಪುನರ್ವಸತಿ ಕ್ರಮಗಳನ್ನು ಕೈಗೊಳ್ಳ ~ ಎಂದು ಅವರು ಸೂಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>