<p><strong>ಕುಶಾಲನಗರ:</strong> ಒಂದೆಡೆ ಬಲಿಚಕ್ರವರ್ತಿ ಇನ್ನೊಂದೆಡೆ ಕಲಾ ಸಂಪತ್ತೇ ಇರುವ ಜಾನಪದ ಕಲೆಗಾರರ ದಂಡು, ಮತ್ತೊಂದೆಡೆ ಕಾಡಿನಿಂದ ನಾಡಿಗೆ ಬಂದ ಪ್ರಾಣಿಗಳು. ಇದು ಪಟ್ಟಣದ ಜ್ಞಾನಭಾರತಿ ಶಾಲೆಯಲ್ಲಿ ಈಚೆಗೆ ನಡೆದ ಕುಶಾಲನಗರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಂಡುಬಂದ ದೃಶ್ಯಗಳು.<br /> <br /> ಕೊಡಗು ಜಿಲ್ಲಾ ಪಂಚಾಯಿತಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಕ್ಲಸ್ಟರ್ನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ಪ್ರತಿಭೆಗಳನ್ನು ಅನಾವರಣಗೊಳಿಸಿದರು.<br /> <br /> ಈ ಸಂದರ್ಭ ಬಲಿಚಕ್ರವರ್ತಿ ವೇಷಧರಿಸಿ ಪ್ರದರ್ಶನ ನೀಡಿದ್ದು ಸಭಿಕರನ್ನು ಮನಸೂರೆಗೊಳಿಸಿತು. ಅಲ್ಲದೇ, ಕೋಲಾಟ ಸೇರಿದಂತೆ ವಿದ್ಯಾರ್ಥಿಗಳು ನೀಡಿದ ಜಾನಪದ ನೃತ್ಯಗಳು ನೋಡುಗರ ಮನಸೂರೆಗೊಳಿಸಿದವು.<br /> <br /> ರಾಜೇಶ್, ಜ್ಞಾನ ಭಾರತಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ನಾರಾಯಣ, ನಿರ್ದೇಶಕರಾದ ಜಿ.ಎಲ್. ನಾಗರಾಜು, ನಾರಾಯಣ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಶಾಲನಗರ:</strong> ಒಂದೆಡೆ ಬಲಿಚಕ್ರವರ್ತಿ ಇನ್ನೊಂದೆಡೆ ಕಲಾ ಸಂಪತ್ತೇ ಇರುವ ಜಾನಪದ ಕಲೆಗಾರರ ದಂಡು, ಮತ್ತೊಂದೆಡೆ ಕಾಡಿನಿಂದ ನಾಡಿಗೆ ಬಂದ ಪ್ರಾಣಿಗಳು. ಇದು ಪಟ್ಟಣದ ಜ್ಞಾನಭಾರತಿ ಶಾಲೆಯಲ್ಲಿ ಈಚೆಗೆ ನಡೆದ ಕುಶಾಲನಗರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಂಡುಬಂದ ದೃಶ್ಯಗಳು.<br /> <br /> ಕೊಡಗು ಜಿಲ್ಲಾ ಪಂಚಾಯಿತಿ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಕ್ಲಸ್ಟರ್ನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ಪ್ರತಿಭೆಗಳನ್ನು ಅನಾವರಣಗೊಳಿಸಿದರು.<br /> <br /> ಈ ಸಂದರ್ಭ ಬಲಿಚಕ್ರವರ್ತಿ ವೇಷಧರಿಸಿ ಪ್ರದರ್ಶನ ನೀಡಿದ್ದು ಸಭಿಕರನ್ನು ಮನಸೂರೆಗೊಳಿಸಿತು. ಅಲ್ಲದೇ, ಕೋಲಾಟ ಸೇರಿದಂತೆ ವಿದ್ಯಾರ್ಥಿಗಳು ನೀಡಿದ ಜಾನಪದ ನೃತ್ಯಗಳು ನೋಡುಗರ ಮನಸೂರೆಗೊಳಿಸಿದವು.<br /> <br /> ರಾಜೇಶ್, ಜ್ಞಾನ ಭಾರತಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ನಾರಾಯಣ, ನಿರ್ದೇಶಕರಾದ ಜಿ.ಎಲ್. ನಾಗರಾಜು, ನಾರಾಯಣ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>