<p>ಕುಶಾಲನಗರ: ಕೊಡಗಿನ ಹಾರಂಗಿ ಬಳಿಯ ಕಾಡಿನಲ್ಲಿ 11 ತಿಂಗಳ ಹಿಂದೆ ತಾಯಿಯಿಂದ ಬೇರ್ಪಟ್ಟು, ಕುಶಾಲನಗರ ಸಮೀಪದ ಆನೆಕಾಡು ಅರಣ್ಯ ಶಿಬಿರದಲ್ಲಿ ಆರೈಕೆಯಲ್ಲಿರುವ ಮರಿಯಾನೆ `ಶಿವ~ನ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. <br /> <br /> ಆಹಾರ ಸೇವನೆಯಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಭಾನುವಾರವೂ ತೀವ್ರ ನಿಗಾ ವಹಿಸಿ ಚಿಕಿತ್ಸೆ ಕೊಡಿಸುತ್ತಿದೆ.<br /> <br /> ಈ ಮರಿಯಾನೆ ಕುಶಾಲನಗರ- ಮಡಿಕೇರಿ ರಾಜ್ಯ ಹೆದ್ದಾರಿಯಲ್ಲಿನ ಆನೆಕಾಡು ಶಿಬಿರದಲ್ಲಿ ಮಾವುತರ ಪ್ರೀತಿಗೆ ಪಾತ್ರವಾಗಿತ್ತು. ಶನಿವಾರ ಬೆಳಿಗ್ಗೆ ಮಾವುತರ ಮನೆಯಂಗಳದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಬೆನ್ನಿಗೆ ತೀವ್ರವಾದ ಪೆಟ್ಟು ಮಾಡಿಕೊಂಡಿದೆ. ಮಾವುತ ಚಂದ್ರು ಅವರ ಆರೈಕೆಯಲ್ಲಿರುವ `ಶಿವ~ನಿಗೆ ಸ್ವತಂತ್ರವಾಗಿ ನಡೆದಾಡಲು ಸಾಧ್ಯವಾಗುತ್ತಿಲ್ಲ.<br /> <br /> ಇಡೀ ದೇಹ ನಿತ್ರಾಣವಾಗಿದ್ದು, ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಆಗಮಿಸಿದ ವನ್ಯಜೀವಿ ವೈದ್ಯ ಡಾ.ಉಮಾಶಂಕರ್ ನೇತೃತ್ವದ ತಂಡವು ತಪಾಸಣೆ ನಡೆಸಿದೆ. ವೈದ್ಯರು ಸ್ಥಳದಲ್ಲಿಯೇ ಬೀಡುಬಿಟ್ಟು ಗ್ಲೂಕೋಸ್ ನೀಡುತ್ತಿದ್ದಾರೆ. ಈಗ ವೈದ್ಯರ ಆರೈಕೆ ನಂತರ `ಶಿವ~ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಭಾನುವಾರ ಬೆಳಿಗ್ಗೆ ಸ್ವಲ್ಪ ಪ್ರಮಾಣದಲ್ಲಿ ಹಾಲು, ರಾಗಿ ಮುದ್ದೆ ಸೇವಿಸಿದ್ದಾನೆ. ಇದರಿಂದ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಡಾ.ಉಮಾಶಂಕರ್ ತಿಳಿಸಿದ್ದಾರೆ.<br /> <br /> ಮರಿಯಾನೆ `ಶಿವ~ನ ಆರೋಗ್ಯದ ಬಗ್ಗೆ ಇಲಾಖೆ ತೀವ್ರ ನಿಗಾ ವಹಿಸಿದೆ ಎಂದು ಕುಶಾಲನಗರ ವಲಯದ ಆರ್ಎಫ್ಓ ಎಂ.ಎಂ.ಅಚ್ಚಪ್ಪ ತಿಳಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕುಶಾಲನಗರ: ಕೊಡಗಿನ ಹಾರಂಗಿ ಬಳಿಯ ಕಾಡಿನಲ್ಲಿ 11 ತಿಂಗಳ ಹಿಂದೆ ತಾಯಿಯಿಂದ ಬೇರ್ಪಟ್ಟು, ಕುಶಾಲನಗರ ಸಮೀಪದ ಆನೆಕಾಡು ಅರಣ್ಯ ಶಿಬಿರದಲ್ಲಿ ಆರೈಕೆಯಲ್ಲಿರುವ ಮರಿಯಾನೆ `ಶಿವ~ನ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. <br /> <br /> ಆಹಾರ ಸೇವನೆಯಲ್ಲಿ ವ್ಯತ್ಯಯ ಉಂಟಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಭಾನುವಾರವೂ ತೀವ್ರ ನಿಗಾ ವಹಿಸಿ ಚಿಕಿತ್ಸೆ ಕೊಡಿಸುತ್ತಿದೆ.<br /> <br /> ಈ ಮರಿಯಾನೆ ಕುಶಾಲನಗರ- ಮಡಿಕೇರಿ ರಾಜ್ಯ ಹೆದ್ದಾರಿಯಲ್ಲಿನ ಆನೆಕಾಡು ಶಿಬಿರದಲ್ಲಿ ಮಾವುತರ ಪ್ರೀತಿಗೆ ಪಾತ್ರವಾಗಿತ್ತು. ಶನಿವಾರ ಬೆಳಿಗ್ಗೆ ಮಾವುತರ ಮನೆಯಂಗಳದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಬೆನ್ನಿಗೆ ತೀವ್ರವಾದ ಪೆಟ್ಟು ಮಾಡಿಕೊಂಡಿದೆ. ಮಾವುತ ಚಂದ್ರು ಅವರ ಆರೈಕೆಯಲ್ಲಿರುವ `ಶಿವ~ನಿಗೆ ಸ್ವತಂತ್ರವಾಗಿ ನಡೆದಾಡಲು ಸಾಧ್ಯವಾಗುತ್ತಿಲ್ಲ.<br /> <br /> ಇಡೀ ದೇಹ ನಿತ್ರಾಣವಾಗಿದ್ದು, ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಆಗಮಿಸಿದ ವನ್ಯಜೀವಿ ವೈದ್ಯ ಡಾ.ಉಮಾಶಂಕರ್ ನೇತೃತ್ವದ ತಂಡವು ತಪಾಸಣೆ ನಡೆಸಿದೆ. ವೈದ್ಯರು ಸ್ಥಳದಲ್ಲಿಯೇ ಬೀಡುಬಿಟ್ಟು ಗ್ಲೂಕೋಸ್ ನೀಡುತ್ತಿದ್ದಾರೆ. ಈಗ ವೈದ್ಯರ ಆರೈಕೆ ನಂತರ `ಶಿವ~ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಭಾನುವಾರ ಬೆಳಿಗ್ಗೆ ಸ್ವಲ್ಪ ಪ್ರಮಾಣದಲ್ಲಿ ಹಾಲು, ರಾಗಿ ಮುದ್ದೆ ಸೇವಿಸಿದ್ದಾನೆ. ಇದರಿಂದ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಡಾ.ಉಮಾಶಂಕರ್ ತಿಳಿಸಿದ್ದಾರೆ.<br /> <br /> ಮರಿಯಾನೆ `ಶಿವ~ನ ಆರೋಗ್ಯದ ಬಗ್ಗೆ ಇಲಾಖೆ ತೀವ್ರ ನಿಗಾ ವಹಿಸಿದೆ ಎಂದು ಕುಶಾಲನಗರ ವಲಯದ ಆರ್ಎಫ್ಓ ಎಂ.ಎಂ.ಅಚ್ಚಪ್ಪ ತಿಳಿಸಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>