<p><span style="font-size: 26px;"><strong>ಯಾದಗಿರಿ:</strong> ಬಿಸಿಲು ನಾಡಿನಲ್ಲಿ ಈಗ ಎಲ್ಲರಿಗೂ ಮಳೆಯದ್ದೇ ನಿರೀಕ್ಷೆ. ಬೇಸಿಗೆಯ ಬಿಸಿಲಿಗೆ ತತ್ತರಿಸಿರುವ ಜನರು, ತಂಪಾದ ವಾತಾವರಣಕ್ಕಾಗಿ ಹಾತೊರೆಯುತ್ತಿದ್ದಾರೆ. ಆಗಸದಲ್ಲಿ ಮೋಡ ಕವಿದರೂ, ಹನಿಗಳಾಗಿ ಧರೆಗೆ ಬೀಳುತ್ತಿಲ್ಲ. ಈಗಲೂ ಬೆವರಿನ ಹನಿಗಳನ್ನು ಒರೆಸಿಕೊಳ್ಳುತ್ತಲೇ ಕಾಲ ಕಳೆಯುತ್ತಿದ್ದಾರೆ.</span><br /> <br /> ಇದೆಲ್ಲರ ಮಧ್ಯೆ ಮಳೆಯಿಂದ ಆಗಬಹುದಾದ ತೊಂದರೆಗಳ ನಿವಾರಣೆಗೆ ನಗರಸಭೆ ಮುಂದಾಗಿದೆ. ತುಂಬಿರುವ ಚರಂಡಿಗಳ ಸ್ವಚ್ಛತೆ, ಕಸದ ರಾಶಿಗಳ ವಿಲೇವಾರಿ ಕಾರ್ಯವನ್ನು ಕೈಗೆತ್ತಿಕೊಂಡಿದೆ.<br /> <br /> ನಗರಸಭೆಗೆ ಚುನಾವಣೆ ನಡೆದು ಮೂರು ತಿಂಗಳಾದರೂ, ಇನ್ನೂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಾಗಿಲ್ಲ. ಆಯ್ಕೆಯಾಗಿರುವ ನಗರಸಭೆಯ 31 ಸದಸ್ಯರು ಇನ್ನೂ ಅಧಿಕಾರ ವಹಿಸಿಕೊಂಡಿಲ್ಲ. ಅದರಲ್ಲೂ ನಗರದ ಪ್ರಮುಖ ಸಮಸ್ಯೆಯಾಗಿರುವ ಚರಂಡಿ ವ್ಯವಸ್ಥೆಯ ಸುಧಾರಣೆಗೆ ಯಾವುದೇ ಕ್ರಮಗಳನ್ನೂ ಕೈಗೊಳ್ಳಲು ಆಗುತ್ತಿಲ್ಲ.<br /> <br /> ಇಂತಹ ಸಂದರ್ಭದಲ್ಲಿ ಮಳೆ ಬಂದರಂತೂ ನಗರದ ಸ್ಥಿತಿ ಗಂಭೀರವಾಗಲಿದೆ. ಚರಂಡಿಗಳು ತುಂಬಿ, ರಸ್ತೆಗಳಲ್ಲಿಯೇ ಕೊಳಚೆ ನೀರು ಹರಿಯುತ್ತದೆ. ಇದುವರೆಗೆ ಮಳೆಗಾಗಿ ಕಾಯುತ್ತಿರುವ ಜನರೇ, ಮಳೆ ಏಕಾದರೂ ಬಂತೋ ಎನ್ನುವಂತಾಗುತ್ತದೆ. ಕಳೆದ ವರ್ಷದ ಮಳೆಗಾಲದಲ್ಲಿ ಇಂಥದ್ದೇ ಸ್ಥಿತಿಯನ್ನು ನಗರದ ನಾಗರಿಕರು ಅನುಭವಿಸಿದ್ದರು.<br /> <br /> ಕೆರೆಯಾಗುವ ಕಾಲೇಜು ಆವರಣ: ಇದುವರೆಗೆ ಸರ್ಕಾರಿ ಸಮಾರಂಭಗಳಿಗೆ ವೇದಿಕೆಯಾಗುತ್ತಲೇ ಬಂದಿರುವ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೈದಾನದ ಬಗ್ಗೆ ಯಾರಿಗೂ ಕಾಳಜಿ ಇದ್ದಂತೆ ಕಾಣುವುದಿಲ್ಲ. ಸಮಾರಂಭಗಳ ಸಮಯದಲ್ಲಿ ಮಾತ್ರ ಅಲಂಕಾರಗೊಳ್ಳುವ ಈ ಆವರಣ, ಮಳೆಗಾಲದಲ್ಲಿ ಸಣ್ಣ ಕೆರೆಯಾಗಿ ಪರಿವರ್ತನೆ ಆಗುತ್ತದೆ.<br /> <br /> ಪಕ್ಕದಲ್ಲಿಯೇ ನಗರಸಭೆ ಕಾರ್ಯಾಲಯವಿದ್ದರೂ, ಇದುವರೆಗೆ ಯಾರೊಬ್ಬರಿಗೂ ಇತ್ತ ಗಮನಹರಿಸಿಲ್ಲ. ಈ ವರ್ಷವಾದರೂ ಹರಿದು ಬರುವ ನೀರನ್ನು ತಡೆಯುವ ವ್ಯವಸ್ಥೆ ಮಾಡಬೇಕು ಎನ್ನುವುದು ವಿದ್ಯಾರ್ಥಿಗಳ ಆಗ್ರಹ.<br /> <br /> ಹ್ವಾದ ವರ್ಷ ಮಳಿ ಬಂದಾಗ, ಈ ಗ್ರೌಂಡ್ನ್ಯಾಗ ಕಾಲ ಎಲ್ಲಿ ಇಡೋದು ಅನ್ನೂದ ತಿಳಿದ್ಹಂಗ ಆಗಿತ್ರಿ. ಮಧ್ಯಾಹ್ನದಾಗ ಕಾಲೇಜ ಬಿಟ್ರು, ಸಂಜಿ ಮಟ ಕಾ ಲೇಜನ್ಯಾಗ ಇರುಹಂಗ ಆಗಿತ್ರಿ. ಹೊ ರ ಗ ಹ್ವಾದ್ರ ಮಣಕಾಲ ಮಟ ನೀರ ನಿಂ ತಿದ್ದು. ಈ ವರ್ಷರೇ ಗಟಾರ್ ನೀರ ಬರದ್ಹಂಗ ಮಾಡಿದ್ರ ಭಾಳ ಛೋಲೋ ಆ ಕ್ಕೇತ್ರಿ ಎನ್ನುತ್ತಾರೆ ವಿದ್ಯಾರ್ಥಿ ಸಿದ್ಧಪ್ಪ.<br /> <br /> ಇಂತಹ ಸಮಸ್ಯೆಗಳ ನಿವಾರಣೆಗೆ ಪ್ರಮುಖ ಚರಂಡಿಗಳ ಹೂಳು ತೆಗೆಯುವ ಕೆಲಸ ಅವಶ್ಯಕವಾಗಿದೆ. ಅದರಲ್ಲಿಯೂ ತರಕಾರಿ ಮಾರುಕಟ್ಟೆಯ ಅಕ್ಕಪಕ್ಕದ ಚರಂಡಿಗಳಲ್ಲಿ ಹೂಳಿನ ಪ್ರಮಾಣ ಇನ್ನಷ್ಟು ಹೆಚ್ಚಾಗಿದೆ.<br /> <br /> ಈ ಹಿನ್ನೆಲೆಯಲ್ಲಿ ನಗರದಲ್ಲಿರುವ ಪ್ರಮುಖ ಚರಂಡಿಗಳ ಹೂಳು ತೆಗೆಯು ವ ಕಾರ್ಯವನ್ನು ಆರಂಭಿಸಲಾಗಿದೆ.<br /> ಆಡಳಿತಾಧಿಕಾರಿಯ ಮುತುವರ್ಜಿ: ನಗರಸಭೆಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಆಗದೇ ಇರುವ ಹಿನ್ನೆಲೆಯಲ್ಲಿ ಸದ್ಯದ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ ಅವರೇ, ನಗರಸಭೆಯ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.<br /> <br /> ನಗರದ ಬಡಾವಣೆಗಳಲ್ಲಿ ಚರಂಡಿಗಳ ದುಸ್ಥಿತಿ ನೋಡಿರುವ ಜಿಲ್ಲಾಧಿಕಾರಿಗಳು, ಈ ಬಾರಿ ಮಳೆಗಾಲದಲ್ಲಿ ಹೆಚ್ಚಿನ ಅನಾಹುತ ಆಗದಂತೆ ಮುನ್ನೆಚ್ಚರಿಕೆ ವಹಿಸಿದ್ದಾ ರೆ. ಅದರ ಪರಿಣಾಮವಾಗಿ ನಗರಸಭೆ ಆಯುಕ್ತ ಮಹ್ಮದ್ ಮುನೀರ್ ನೇತೃತ್ವದಲ್ಲಿ ನಗರದಲ್ಲಿರುವ ಚರಂಡಿಗಳ ಹೂಳು ತೆಗೆಯುವ ಕಾರ್ಯವೂ ಆರಂಭವಾಗಿದೆ.<br /> <br /> ಮೊದಲೇ ನಗರಸಭೆ ಎಚ್ಚೆತ್ತುಕೊಂಡಿರುವುದು ಸಂತೋಷ. ಆದರೂ ಮಳೆ ಬಂದು ಹೋದ ಮೇಲೆಯೇ ನಗರದ ಚ ರಂಡಿಗಳು ಎಷ್ಟು ಸ್ವಚ್ಛವಾಗಿವೆ ಎಂಬು ದು ತಿಳಿಯಲಿದೆ ಎನ್ನುತ್ತಿದ್ದಾರೆ ನಗರದ ನಿವಾಸಿಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><span style="font-size: 26px;"><strong>ಯಾದಗಿರಿ:</strong> ಬಿಸಿಲು ನಾಡಿನಲ್ಲಿ ಈಗ ಎಲ್ಲರಿಗೂ ಮಳೆಯದ್ದೇ ನಿರೀಕ್ಷೆ. ಬೇಸಿಗೆಯ ಬಿಸಿಲಿಗೆ ತತ್ತರಿಸಿರುವ ಜನರು, ತಂಪಾದ ವಾತಾವರಣಕ್ಕಾಗಿ ಹಾತೊರೆಯುತ್ತಿದ್ದಾರೆ. ಆಗಸದಲ್ಲಿ ಮೋಡ ಕವಿದರೂ, ಹನಿಗಳಾಗಿ ಧರೆಗೆ ಬೀಳುತ್ತಿಲ್ಲ. ಈಗಲೂ ಬೆವರಿನ ಹನಿಗಳನ್ನು ಒರೆಸಿಕೊಳ್ಳುತ್ತಲೇ ಕಾಲ ಕಳೆಯುತ್ತಿದ್ದಾರೆ.</span><br /> <br /> ಇದೆಲ್ಲರ ಮಧ್ಯೆ ಮಳೆಯಿಂದ ಆಗಬಹುದಾದ ತೊಂದರೆಗಳ ನಿವಾರಣೆಗೆ ನಗರಸಭೆ ಮುಂದಾಗಿದೆ. ತುಂಬಿರುವ ಚರಂಡಿಗಳ ಸ್ವಚ್ಛತೆ, ಕಸದ ರಾಶಿಗಳ ವಿಲೇವಾರಿ ಕಾರ್ಯವನ್ನು ಕೈಗೆತ್ತಿಕೊಂಡಿದೆ.<br /> <br /> ನಗರಸಭೆಗೆ ಚುನಾವಣೆ ನಡೆದು ಮೂರು ತಿಂಗಳಾದರೂ, ಇನ್ನೂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಾಗಿಲ್ಲ. ಆಯ್ಕೆಯಾಗಿರುವ ನಗರಸಭೆಯ 31 ಸದಸ್ಯರು ಇನ್ನೂ ಅಧಿಕಾರ ವಹಿಸಿಕೊಂಡಿಲ್ಲ. ಅದರಲ್ಲೂ ನಗರದ ಪ್ರಮುಖ ಸಮಸ್ಯೆಯಾಗಿರುವ ಚರಂಡಿ ವ್ಯವಸ್ಥೆಯ ಸುಧಾರಣೆಗೆ ಯಾವುದೇ ಕ್ರಮಗಳನ್ನೂ ಕೈಗೊಳ್ಳಲು ಆಗುತ್ತಿಲ್ಲ.<br /> <br /> ಇಂತಹ ಸಂದರ್ಭದಲ್ಲಿ ಮಳೆ ಬಂದರಂತೂ ನಗರದ ಸ್ಥಿತಿ ಗಂಭೀರವಾಗಲಿದೆ. ಚರಂಡಿಗಳು ತುಂಬಿ, ರಸ್ತೆಗಳಲ್ಲಿಯೇ ಕೊಳಚೆ ನೀರು ಹರಿಯುತ್ತದೆ. ಇದುವರೆಗೆ ಮಳೆಗಾಗಿ ಕಾಯುತ್ತಿರುವ ಜನರೇ, ಮಳೆ ಏಕಾದರೂ ಬಂತೋ ಎನ್ನುವಂತಾಗುತ್ತದೆ. ಕಳೆದ ವರ್ಷದ ಮಳೆಗಾಲದಲ್ಲಿ ಇಂಥದ್ದೇ ಸ್ಥಿತಿಯನ್ನು ನಗರದ ನಾಗರಿಕರು ಅನುಭವಿಸಿದ್ದರು.<br /> <br /> ಕೆರೆಯಾಗುವ ಕಾಲೇಜು ಆವರಣ: ಇದುವರೆಗೆ ಸರ್ಕಾರಿ ಸಮಾರಂಭಗಳಿಗೆ ವೇದಿಕೆಯಾಗುತ್ತಲೇ ಬಂದಿರುವ ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನ ಮೈದಾನದ ಬಗ್ಗೆ ಯಾರಿಗೂ ಕಾಳಜಿ ಇದ್ದಂತೆ ಕಾಣುವುದಿಲ್ಲ. ಸಮಾರಂಭಗಳ ಸಮಯದಲ್ಲಿ ಮಾತ್ರ ಅಲಂಕಾರಗೊಳ್ಳುವ ಈ ಆವರಣ, ಮಳೆಗಾಲದಲ್ಲಿ ಸಣ್ಣ ಕೆರೆಯಾಗಿ ಪರಿವರ್ತನೆ ಆಗುತ್ತದೆ.<br /> <br /> ಪಕ್ಕದಲ್ಲಿಯೇ ನಗರಸಭೆ ಕಾರ್ಯಾಲಯವಿದ್ದರೂ, ಇದುವರೆಗೆ ಯಾರೊಬ್ಬರಿಗೂ ಇತ್ತ ಗಮನಹರಿಸಿಲ್ಲ. ಈ ವರ್ಷವಾದರೂ ಹರಿದು ಬರುವ ನೀರನ್ನು ತಡೆಯುವ ವ್ಯವಸ್ಥೆ ಮಾಡಬೇಕು ಎನ್ನುವುದು ವಿದ್ಯಾರ್ಥಿಗಳ ಆಗ್ರಹ.<br /> <br /> ಹ್ವಾದ ವರ್ಷ ಮಳಿ ಬಂದಾಗ, ಈ ಗ್ರೌಂಡ್ನ್ಯಾಗ ಕಾಲ ಎಲ್ಲಿ ಇಡೋದು ಅನ್ನೂದ ತಿಳಿದ್ಹಂಗ ಆಗಿತ್ರಿ. ಮಧ್ಯಾಹ್ನದಾಗ ಕಾಲೇಜ ಬಿಟ್ರು, ಸಂಜಿ ಮಟ ಕಾ ಲೇಜನ್ಯಾಗ ಇರುಹಂಗ ಆಗಿತ್ರಿ. ಹೊ ರ ಗ ಹ್ವಾದ್ರ ಮಣಕಾಲ ಮಟ ನೀರ ನಿಂ ತಿದ್ದು. ಈ ವರ್ಷರೇ ಗಟಾರ್ ನೀರ ಬರದ್ಹಂಗ ಮಾಡಿದ್ರ ಭಾಳ ಛೋಲೋ ಆ ಕ್ಕೇತ್ರಿ ಎನ್ನುತ್ತಾರೆ ವಿದ್ಯಾರ್ಥಿ ಸಿದ್ಧಪ್ಪ.<br /> <br /> ಇಂತಹ ಸಮಸ್ಯೆಗಳ ನಿವಾರಣೆಗೆ ಪ್ರಮುಖ ಚರಂಡಿಗಳ ಹೂಳು ತೆಗೆಯುವ ಕೆಲಸ ಅವಶ್ಯಕವಾಗಿದೆ. ಅದರಲ್ಲಿಯೂ ತರಕಾರಿ ಮಾರುಕಟ್ಟೆಯ ಅಕ್ಕಪಕ್ಕದ ಚರಂಡಿಗಳಲ್ಲಿ ಹೂಳಿನ ಪ್ರಮಾಣ ಇನ್ನಷ್ಟು ಹೆಚ್ಚಾಗಿದೆ.<br /> <br /> ಈ ಹಿನ್ನೆಲೆಯಲ್ಲಿ ನಗರದಲ್ಲಿರುವ ಪ್ರಮುಖ ಚರಂಡಿಗಳ ಹೂಳು ತೆಗೆಯು ವ ಕಾರ್ಯವನ್ನು ಆರಂಭಿಸಲಾಗಿದೆ.<br /> ಆಡಳಿತಾಧಿಕಾರಿಯ ಮುತುವರ್ಜಿ: ನಗರಸಭೆಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಆಗದೇ ಇರುವ ಹಿನ್ನೆಲೆಯಲ್ಲಿ ಸದ್ಯದ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ ಅವರೇ, ನಗರಸಭೆಯ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.<br /> <br /> ನಗರದ ಬಡಾವಣೆಗಳಲ್ಲಿ ಚರಂಡಿಗಳ ದುಸ್ಥಿತಿ ನೋಡಿರುವ ಜಿಲ್ಲಾಧಿಕಾರಿಗಳು, ಈ ಬಾರಿ ಮಳೆಗಾಲದಲ್ಲಿ ಹೆಚ್ಚಿನ ಅನಾಹುತ ಆಗದಂತೆ ಮುನ್ನೆಚ್ಚರಿಕೆ ವಹಿಸಿದ್ದಾ ರೆ. ಅದರ ಪರಿಣಾಮವಾಗಿ ನಗರಸಭೆ ಆಯುಕ್ತ ಮಹ್ಮದ್ ಮುನೀರ್ ನೇತೃತ್ವದಲ್ಲಿ ನಗರದಲ್ಲಿರುವ ಚರಂಡಿಗಳ ಹೂಳು ತೆಗೆಯುವ ಕಾರ್ಯವೂ ಆರಂಭವಾಗಿದೆ.<br /> <br /> ಮೊದಲೇ ನಗರಸಭೆ ಎಚ್ಚೆತ್ತುಕೊಂಡಿರುವುದು ಸಂತೋಷ. ಆದರೂ ಮಳೆ ಬಂದು ಹೋದ ಮೇಲೆಯೇ ನಗರದ ಚ ರಂಡಿಗಳು ಎಷ್ಟು ಸ್ವಚ್ಛವಾಗಿವೆ ಎಂಬು ದು ತಿಳಿಯಲಿದೆ ಎನ್ನುತ್ತಿದ್ದಾರೆ ನಗರದ ನಿವಾಸಿಗಳು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>